ಗಂಭೀರ ಸ್ವರೂಪಕ್ಕೆ ಪಚ್ಚನಾಡಿ ‘ತ್ಯಾಜ್ಯ ಕುಸಿತ’

ಮನೆ ಖಾಲಿ ಮಾಡಿದ ನಿವಾಸಿಗಳು; ತೋಟ, ಗುಡಿಗಳು ನೆಲಸಮ

Team Udayavani, Aug 8, 2019, 5:26 AM IST

waste-dumping-yard

ಮುಂದುವರಿಯುತ್ತಿರುವ ತ್ಯಾಜ್ಯ ರಾಶಿ ಗುಡಿಯನ್ನು ಆಪೋಷನ ತೆಗೆದುಕೊಳ್ಳುವ ಸ್ಥಿತಿಯಲ್ಲಿರುವ ಚಿತ್ರ. 

ಮಂಗಳೂರು: ನಗರದ ಹೊರವಲಯದ ಪಚ್ಚನಾಡಿಯ ತ್ಯಾಜ್ಯ ಡಂಪಿಂಗ್‌ ಯಾರ್ಡ್‌ನಲ್ಲಿ ಮಳೆಯಿಂದಾಗಿ ಬೃಹತ್‌ ಕಸದ ರಾಶಿ ಕೆಳಭಾಗಕ್ಕೆ ಜಾರುತ್ತಿದ್ದು, ಆಸುಪಾಸಿನ ಜನರ ಬದುಕು ಅಕ್ಷರಶಃ ಕಸದ ರಾಶಿ ಯೊಳಗೆ ಸಮಾಧಿಯಾಗುವಂತಿದೆ.

ಕುಸಿದಿರುವ ತ್ಯಾಜ್ಯವು ಸಮೀಪದ ಮಂದಾರ ಪರಿಸರದ ಒಂದು ಕಿ.ಮೀ.ನಷ್ಟು ವಿಸ್ತಾರದಲ್ಲಿ ವ್ಯಾಪಿಸಿದ್ದು, ಸುಮಾರು 4 ಎಕರೆಯಷ್ಟು ಕೃಷಿಭೂಮಿಯನ್ನು ಆಪೋಷನ ತೆಗೆದುಕೊಂಡಿದೆ. ಎರಡು ನಾಗಬನ, ಎರಡು ದೈವಸ್ಥಾನ ಮತ್ತು ಒಂದು ಹಳೆಯ ಮನೆ ತ್ಯಾಜ್ಯ ರಾಶಿಯಲ್ಲಿ ಸಂಪೂರ್ಣ ಮುಳುಗಿದ್ದು, 10ರಷ್ಟು ಮನೆಗಳು, ದೈವಸ್ಥಾನಗಳು ಅಪಾಯದಲ್ಲಿವೆ.

ಬೃಹತ್‌ ಬೆಟ್ಟದಂತಿರುವ ತ್ಯಾಜ್ಯ ರಾಶಿಯ ಅವಾಂತರದಿಂದ ಐದಾರು ದಶಕದಿಂದ ಇಲ್ಲಿ ನೆಲೆಸಿರುವ ಕೆಲವುಕುಟುಂಬಗಳು ಊರು ತ್ಯಜಿಸಬೇಕಾದ ಸ್ಥಿತಿಯಲ್ಲಿದ್ದಾರೆ. ಮಳೆ ಜೋರಾದರೆ ತ್ಯಾಜ್ಯದ ರಾಶಿ ಮತ್ತಷ್ಟು ಮನೆ-ತೋಟಗಳನ್ನು ಆಪೋಷನ ಪಡೆಯುವ ಸಾಧ್ಯತೆಯಿದ್ದು, ಜನತೆ ಆತಂಕದಲ್ಲಿದ್ದಾರೆ.

ಅವೈಜ್ಞಾನಿಕ ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ನಲ್ಲಿ ಕಸದ ನಿರ್ವಹಣೆಯೂ ಸಮರ್ಪಕವಾಗಿ ನಡೆಯದೆ ತ್ಯಾಜ್ಯ ರಾಶಿ ಮಿತಿಮೀರಿದ ಎತ್ತರಕ್ಕೆ ಬೆಳೆದಿದೆ. ಭಾರೀ ಮಳೆಯಿಂದಾಗಿ ಒದ್ದೆಯಾಗಿ ತನ್ನ ಭಾರಕ್ಕೆ ತಾನೇ ಕುಸಿದು ಜಾರುತ್ತಿದೆ. ಸುಮಾರು 5-6 ಮನೆಗಳ ಜನರು ಸ್ಥಳಾಂತರಗೊಂಡಿದ್ದಾರೆ. 10ರಷ್ಟು ವಿದ್ಯುತ್‌ ಕಂಬಗಳು ತ್ಯಾಜ್ಯರಾಶಿ ಯೊಳಗೆ ಹುದುಗಿದ್ದು, ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.

ಅಪಾಯದಲ್ಲಿ ಮನೆಗಳು
ತ್ಯಾಜ್ಯ ರಾಶಿ ಸುಮಾರು 50 ಮೀ. ಅಗಲದಲ್ಲಿ ತೋಟಗಳನ್ನು ನೆಲಸಮ ಮಾಡಿ ಮುನ್ನುಗ್ಗಿದ್ದು, ಹಲವು ಮನೆಗಳು ಅಪಾಯದಲ್ಲಿವೆ.

ಸಾವಿರಾರು ಅಡಿಕೆ ಮರಗಳ ಕುರುಹಿಲ್ಲ!
ಮಂಗಳವಾರ ರಾತ್ರಿಯಿಂದಲೇ ತ್ಯಾಜ್ಯ ರಾಶಿ ಹರಡಿದ ಪರಿಣಾಮ 2,000ಕ್ಕೂ ಅಧಿಕ ಅಡಿಕೆ ಮರಗಳುತ್ಯಾಜ್ಯ ರಾಶಿಯೊಂದಿಗೆ ನೆಲಸಮವಾಗಿವೆ. ಜತೆಗೆ ಸುಮಾರು 150ಕ್ಕೂ ಅಧಿಕ ತೆಂಗು, 70ಕ್ಕೂ ಅಧಿಕ ಹಲಸು, ಮಾವು ಸಹಿತ ಹಲವು ಮರಗಳು ನೆಲಕ್ಕುರುಳಿವೆ. ತ್ಯಾಜ್ಯ ರಾಶಿ ನುಗ್ಗುತ್ತಿರುವ ಕಾರಣಮರಗಳು ಅರ್ಧ ನಿಮಿಷಕ್ಕೊಂದರಂತೆ ನೆಲಕ್ಕುರುಳುತ್ತಿವೆ.

ಮಂದಾರ-ಕಂಜಿರಾಡಿ ರಸ್ತೆ ಬಂದ್‌
ಸ್ಥಳೀಯ ಸುಮಾರು 50ರಷ್ಟು ಮನೆಗಳಿಗೆ ಸಂಪರ್ಕ ಕಲ್ಪಿಸುವ ಮಂದಾರ-ಕಂಜಿರಾಡಿ ರಸ್ತೆ ಸಂಪೂರ್ಣ ಬಂದ್‌ ಆಗಿದೆ. ರಸ್ತೆಯ ಸುಮಾರು 50 ಮೀ. ಭಾಗದಲ್ಲಿ ತ್ಯಾಜ್ಯವೇ ಹರಡಿದೆ.

ಮಡಿಕೇರಿ ಘಟನೆಯ ನೆನಪು!
ಉದಯ್‌ ಕುಮಾರ್‌ ಕುಡುಪು ‘ಉದಯವಾಣಿ’ ಜತೆಗೆ ಮಾತನಾಡಿ, ಇಂತಹ ಘಟನೆಯನ್ನು ಹಿಂದೆಂದೂ ನೋಡಿರಲಿಲ್ಲ. ಕಳೆದ ವರ್ಷ ಮಡಿಕೇರಿಯಲ್ಲಿ ಗುಡ್ಡ ಕುಸಿದದೃಶ್ಯಗಳನ್ನು ನೆನಪಿಸುವ ರೀತಿ ಪಚ್ಚನಾಡಿ ತ್ಯಾಜ್ಯ ಗುಡ್ಡೆ ಕುಸಿದಿದೆ ಎಂದರು. ಮಾಜಿ ಮೇಯರ್‌ಭಾಸ್ಕರ್‌, ಆಯುಕ್ತ ಮೊಹಮ್ಮದ್‌ ನಝೀರ್‌ ಸಹಿತ ಪಾಲಿಕೆ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.

ನಾಗಬನ ನೆಲಸಮ -ದೈವಸ್ಥಾನಕ್ಕೂ ತ್ಯಾಜ್ಯ

ತ್ಯಾಜ್ಯ ರಾಶಿ ಮುಂದುವರಿಯುತ್ತಿರುವುದರ ಪರಿಣಾಮ ಎರಡು ನಾಗಬನ, ಎರಡು ದೈವಸ್ಥಾನಗಳು ಮುಚ್ಚಿಹೋಗಿವೆ. ಮುಂದೆ ಇನ್ನೂ ಎರಡು ನಾಗಬನ-ದೈವಸ್ಥಾನಗಳು ಆಹುತಿಯಾಗುವ ಅಪಾಯವಿದೆ. 3 ಕೆರೆ, ಎರಡು ಪಂಪ್‌ಸೆಟ್‌ಗಳು ನೆಲಸಮವಾಗಿವೆ.

ಎಕರೆಗಟ್ಟಲೆ ಜಾಗದಲ್ಲಿ 10 ವರ್ಷಗಳ ಕಸ!

ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ನಲ್ಲಿ ಸುಮಾರು 77.93 ಎಕರೆ ಜಾಗವಿದೆ. 10 ಎಕರೆಯಲ್ಲಿ ಕಸ ತುಂಬಿಸಿ ಮಣ್ಣು ಹಾಕಿ ಸಮತಟ್ಟು ಮಾಡಲಾಗಿದೆ. ಸನಿಹದ ಸುಮಾರು 12 ಎಕರೆ ಜಾಗದಲ್ಲಿ 8-10 ವರ್ಷಗಳಿಂದ ತ್ಯಾಜ್ಯ ಸುರಿಯಲಾಗುತ್ತಿದೆ. ಮಂಗಳೂರು ನಗರ ವ್ಯಾಪ್ತಿಯಿಂದ ನಿತ್ಯ 250ರಿಂದ 300 ಟನ್‌ ಕಸ ಸಂಗ್ರಹಿಸಿ, ತ್ಯಾಜ್ಯ ಸಂಸ್ಕರಣ ಘಟಕಕ್ಕೆ ತಂದು ಸಂಸ್ಕರಿಸಿ, ಉಳಿಯುವ ಸುಮಾರು 50 ಟನ್‌ನಷ್ಟು ತ್ಯಾಜ್ಯವನ್ನು ಇಲ್ಲಿ ಡಂಪ್‌ ಮಾಡಲಾಗುತ್ತದೆ. ಉಳ್ಳಾಲ ಮತ್ತು ಬಂಟ್ವಾಳದಿಂದಲೂ ಪ್ರತೀದಿನ ಸುಮಾರು 50 ಟನ್‌ನಷ್ಟು ಕಸ ಇಲ್ಲಿ ಸುರಿಯಲಾಗುತ್ತಿದೆ. ಲಕ್ಷಗಟ್ಟಲೆ ಟನ್‌ ಕಸ ಯಾರ್ಡ್‌ನಲ್ಲಿದೆ.
ಮುಂದೇನು – ಗೊತ್ತಿಲ್ಲ!

ತ್ಯಾಜ್ಯ ರಾಶಿ ಇನ್ನೂ ಮುಂದು ವರಿಯುತ್ತಿದ್ದು, ಮುಂದೇನು ಎಂಬ ಪ್ರಶ್ನೆ ಸ್ಥಳೀಯರದು. ಮಳೆ ನಿಲ್ಲುವವರೆಗೆ ತ್ಯಾಜ್ಯ ತೆರವು ಮಾಡುವಂತಿಲ್ಲ. ತ್ಯಾಜ್ಯ ವಿಲೇವಾರಿಗೆ ಮುಂದಾದರೆ ಸಾಗಿಸಿ ತೆರವು ಮಾಡಲು ಇಲ್ಲಿ ಸಮರ್ಪಕ ರಸ್ತೆಯೂ ಇಲ್ಲ. ಜತೆಗೆ ಮಳೆ ನೀರಿನಿಂದ ಮತ್ತಷ್ಟು ತ್ಯಾಜ್ಯ ವ್ಯಾಪಿಸುವ ಆತಂಕವೂ ಇದೆ. ಸದ್ಯ ಗಲೀಜು ನೀರು ಹತ್ತಿರದ ತೋಡು-ಬಾವಿಗಳಲ್ಲಿ ವ್ಯಾಪಿಸಿದೆ. ಹೀಗಾಗಿ ಸಾಂಕ್ರಾಮಿಕ ರೋಗದ ಅಪಾಯವೂ ಎದುರಾಗಿದೆ.

ಟಾಪ್ ನ್ಯೂಸ್

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

10

ದ.ಕ: ಬಿಜೆಪಿ ಜತೆಗಿನ ಮೈತ್ರಿಗೆ ವಿರೋಧ: 42 ಮಂದಿ ಜೆಡಿಎಸ್ ಪದಾಧಿಕಾರಿಗಳು ‘ಕೈʼ ಸೇರ್ಪಡೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Moodabidri ಮೆದುಳು ಜ್ವರ ಉಲ್ಬಣಿಸಿ ವಿದ್ಯಾರ್ಥಿನಿ ನಿಧನ

Moodabidri ಮೆದುಳು ಜ್ವರ ಉಲ್ಬಣಿಸಿ ವಿದ್ಯಾರ್ಥಿನಿ ನಿಧನ

Dakshina Kannada: ಮನೆಮನೆ ಭೇಟಿ ಮೂಲಕ ಮತದಾನ ಸೌಲಭ್ಯಕ್ಕೆ ಚಾಲನೆ

Dakshina Kannada: ಮನೆಮನೆ ಭೇಟಿ ಮೂಲಕ ಮತದಾನ ಸೌಲಭ್ಯಕ್ಕೆ ಚಾಲನೆ

Hajj Yatra: ಕಂತು ಪಾವತಿಗೆ ಎ. 27ರಂದು ಕೊನೆಯ ದಿನ

Hajj Yatra: ಕಂತು ಪಾವತಿಗೆ ಎ. 27ರಂದು ಕೊನೆಯ ದಿನ

Mangaluru ಪ್ರಧಾನಿಯ ಕೈ ಸೇರಿದ ಕರಾವಳಿ ಕಲಾವಿದನ “ಆಯಿಲ್‌ ಕ್ಯಾನ್ವಾಸ್‌’

Mangaluru ಪ್ರಧಾನಿಯ ಕೈ ಸೇರಿದ ಕರಾವಳಿ ಕಲಾವಿದನ “ಆಯಿಲ್‌ ಕ್ಯಾನ್ವಾಸ್‌’

ರಾಜ್ಯಪ್ರಶಸ್ತಿ ಪುರಸ್ಕೃತ ಕಲಾವಿದೆ ಗಿಡಿಗೆರೆ ರಾಮಕ್ಕ ನಿಧನ

ರಾಜ್ಯಪ್ರಶಸ್ತಿ ಪುರಸ್ಕೃತ ಕಲಾವಿದೆ ಗಿಡಿಗೆರೆ ರಾಮಕ್ಕ ನಿಧನ

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

10

ದ.ಕ: ಬಿಜೆಪಿ ಜತೆಗಿನ ಮೈತ್ರಿಗೆ ವಿರೋಧ: 42 ಮಂದಿ ಜೆಡಿಎಸ್ ಪದಾಧಿಕಾರಿಗಳು ‘ಕೈʼ ಸೇರ್ಪಡೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.