‘ಬೇಲಿಂಗ್ ಯುನಿಟ್’ ಮಾದರಿ ತ್ಯಾಜ್ಯ ವಿಲೇವಾರಿ
Team Udayavani, Aug 21, 2019, 5:46 AM IST
ಮಹಾನಗರ: ಕುಡುಪು ಸಮೀಪದ ಮಂದಾರದಲ್ಲಿ ವ್ಯಾಪಕವಾಗಿ ಬಿದ್ದಿರುವ ಪಚ್ಚನಾಡಿಯ ತ್ಯಾಜ್ಯ ರಾಶಿಯನ್ನು ‘ಬೇಲಿಂಗ್ ಯುನಿಟ್’ ಸಹಾಯದಿಂದ ತಲಾ ಒಂದೊಂದು ಟನ್ ಗಾತ್ರದ ಬಾಕ್ಸ್ ಮಾದರಿಯಲ್ಲಿ ಹಾಕಿ ಅದನ್ನು ಕಂಪ್ರಸ್ ಯಂತ್ರದ ಮೂಲಕ ಪುಡಿ ಮಾಡಿ ಮತ್ತೆ ಡಂಪಿಂಗ್ ಯಾರ್ಡ್ ಗೆ ಕೇಬಲ್ ಮಾದರಿಯಲ್ಲಿ ಎಳೆದು ತರುವ ವಿನೂತನ ಪ್ರಯೋಗದ ಬಗ್ಗೆ ಕೊಯಮತ್ತೂರಿನ ಸುಧೀರ್ ಜೈಸ್ವಾಲ್ ನೇತೃತ್ವದ ಅಧ್ಯಯನ ತಂಡ ಯೋಜನ ವರದಿಯನ್ನು ದ.ಕ. ಜಿಲ್ಲಾಡಳಿತ/ಮಂಗಳೂರು ಪಾಲಿಕೆಗೆ ಮಂಗಳವಾರ ನೀಡಿದೆ.
ಪಚ್ಚನಾಡಿಯ ಡಂಪಿಂಗ್ಯಾರ್ಡ್ ನಿಂದ ಮಂದಾರಕ್ಕೆ ಜಾರಿರುವ ತ್ಯಾಜ್ಯರಾಶಿಯನ್ನು ತೆರವುಗೊಳಿಸುವ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಲು ಕೊಯಮುತ್ತೂರಿನ ಅಧ್ಯಯನ ತಂಡ ಮಂಗಳವಾರ ಮಂದಾರಕ್ಕೆ ಆಗಮಿಸಿತ್ತು. ಮನಪಾ ಆಯುಕ್ತ ಮೊಹಮ್ಮದ್ ನಝೀರ್, ಪರಿಸರ ಎಂಜಿನಿಯರ್ ಮಧು, ಮಾಜಿ ಮೇಯರ್ ಭಾಸ್ಕರ್ ಕೆ. ಮೊದಲಾದವರು ಉಪಸ್ಥಿತರಿದ್ದರು.
ಊಟಿ ಸೇರಿದಂತೆ ವಿವಿಧ ಭಾಗಗಳಲ್ಲಿ ಕಾಫಿ ತೋಟದಿಂದ ಮನೆಗೆ ಕಾಫಿಯನ್ನು ಕೇಬಲ್ ಸಹಾಯದಿಂದ ತರುವ ಶೈಲಿಯಲ್ಲಿಯೇ, ಒಂದೊಂದು ಟನ್ ಸಾಮರ್ಥಯದ ಬಾಕ್ಸ್ನಲ್ಲಿ ತ್ಯಾಜ್ಯವನ್ನು ತುಂಬಿ ಪಚ್ಚನಾಡಿ ಡಂಪಿಂಗ್ ಯಾರ್ಡ್ಗೆ ‘ವಿಂಚ್ ಮಾದರಿ’ ಎಳೆದುತರುವುದು ಈ ಯೋಜನೆಯ ಉದ್ದೇಶ. ಇದಕ್ಕಾಗಿ ಪ್ರತ್ಯೇಕ ಟಿಪ್ಪರ್ಗಳನ್ನು ಬಳಸುವ ಅಥವಾ ರಸ್ತೆ ಮಾರ್ಗ ಉಪಯೋಗಿಸುವ ಅಗತ್ಯವಿಲ್ಲ. ಬದಲಾಗಿ, ತ್ಯಾಜ್ಯ ರಾಶಿ ಯಲ್ಲಿ ಬಾಕ್ಸ್ ಗೆ ತ್ಯಾಜ್ಯ ತುಂಬಲು ಬುಲ್ಡೋಜರ್ ಹಾಗೂ ತ್ಯಾಜ್ಯ ‘ಕಂಪ್ರಸ್’ ಮಾಡುವ ಯಂತ್ರಗಳಿದ್ದರೆ ಸಾಕು ಎಂಬುದು ಸುಧೀರ್ ಜೈಸ್ವಾಲ್ ತಂಡದ ಅಭಿಪ್ರಾಯ.
ಇದೇ ಮಾದರಿಯಲ್ಲಿ ಕೊಲ್ಕತ್ತ ಸೇರಿದಂತೆ ವಿವಿಧ ಭಾಗಗಳಲ್ಲಿ ತ್ಯಾಜ್ಯ ನಿರ್ವಹಣೆಯನ್ನು ಮಾಡಿರುವ ಈ ತಂಡ ಮಂದಾರಕ್ಕೂ ಇದೇ ಸೂತ್ರ ಸುಲಭವಾಗಲಿದೆ ಎಂದು ವರದಿಯಲ್ಲಿ ತಿಳಿಸಿದೆ. 2-3 ಬುಲ್ಡೋಜರ್, 25ರಷ್ಟು ಕಾರ್ಮಿಕರು ಹಾಗೂ ಯಂತ್ರೋಪ ಕರಣವಿದ್ದರೆ ತ್ಯಾಜ್ಯವನ್ನು ತೆಗೆಯಲು ಸಾಧ್ಯ. ಗಂಟೆಗೆ 10 ಟನ್ನಂತೆ ದಿನಕ್ಕೆ 100 ಟನ್ ತ್ಯಾಜ್ಯವನ್ನು ಕ್ಲೀಯರ್ ಮಾಡಬಹುದು. ಎರಡು ತಿಂಗಳೊಳಗೆ ಪೂರ್ಣವಾಗಿ ತ್ಯಾಜ್ಯವನ್ನು ಇದೇ ಮಾದರಿಯಲ್ಲಿ ತೆಗೆಯಬಹುದು ಎಂದು ವರದಿ ನೀಡಿರುವ ಸುಧೀರ್ ಜೈಸ್ವಾಲ್ ನೇತೃತ್ವದ ಅಧ್ಯಯನ ತಂಡ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ