ಜನಜಾಗೃತಿ ಮೂಡಿಸುವುದೊಂದೇ ಜಲ ಸಂರಕ್ಷಣೆಯ ದಾರಿ

ಜಲಮರುಪೂರಣ, ಮಳೆಕೊಯ್ಲಿಗೆ ಊರು ಸಿದ್ಧಗೊಳ್ಳಬೇಕು: ನಟ ರಿಷಭ್‌ ಶೆಟ್ಟಿ

Team Udayavani, Jul 22, 2019, 5:00 AM IST

JALA

ಸುಳ್ಯ: ರಿಷಭ್‌ ಶೆಟ್ಟಿ ಕನ್ನಡ ಚಿತ್ರರಂಗದ ಭರವಸೆಯ ನಟ, ನಿರ್ದೇಶಕ. ಕನ್ನಡ ಚಿತ್ರರಂಗಕ್ಕೆ ಹಿಟ್‌ ಚಿತ್ರಗಳನ್ನು ಕೊಟ್ಟ ಕರಾವಳಿ ಮೂಲದ ಪ್ರತಿಭೆ. ಇನ್ನೂ ಸಾಕಷ್ಟು ಸಿನೆಮಾಗಳು ಅವರ ಕೈಯಲ್ಲಿವೆ. 2020ರೊಳಗೆ ಏಳು ಕನ್ನಡ ಸಿನೆಮಾದ ಕೆಲಸಗಳನ್ನು ಮುಗಿಸಬೇಕಾಗಿದ್ದು, ಸಾಕಷ್ಟು ಬ್ಯುಸಿ ಇದ್ದಾರೆ. ನಟನೆ, ನಿರ್ದೇಶನದ ಒತ್ತಡದ ಮಧ್ಯೆ ಸುಳ್ಯ ತಾಲೂಕಿನ ಕನಕಮಜಲು ಮಕ್ಕಳ ಚಿತ್ರೋತ್ಸವದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು “ಉದಯವಾಣಿ’ಗೆ ನೀಡಿದ ಸಂದರ್ಶನ ಇಲ್ಲಿದೆ.

ನೀರಿನ ಸಮೃದ್ಧ ನೆಲೆಯಾಗಿದ್ದ ಕರಾವಳಿ ಇತ್ತೀಚೆಗೆ ಬರಿದಾಗಿದೆ. ಎಚ್ಚರ ವಹಿಸುವ ಬಗ್ಗೆ ನಿಮ್ಮ ಸಲಹೆ ಏನು?
ಮಳೆ ನಿರೀಕ್ಷೆಗಿಂತ ಕಡಿಮೆ ಸುರಿಯು ತ್ತಿರುವುದು ನಿಜ. ಮಳೆಗಾಲದಲ್ಲೇ ಬೇಸಗೆ ಕಾಲದ ಸ್ಥಿತಿ ಇದೆ. ಇದು ಗಂಭೀರ ಸಂಗತಿ. ಈ ಸಮಸ್ಯೆ ಎದುರಿಸಲು ಪ್ರತಿಯೊಬ್ಬರೂ ಜವಾ ಬ್ದಾರಿ ಹೊರಬೇಕು. ಜನರು ಸ್ವತಃ ಜಾಗೃತಿ ಗೊಳ್ಳುವುದು ನೀರಿನ ಸಂರಕ್ಷಣೆಗೆ ಇರುವ ಏಕೈಕ ಹಾದಿ. ರಾಜಕಾರಣಿ ಗಳು, ನಾಯಕರು ನಮ್ಮನ್ನು ಉದ್ಧಾರ ಮಾಡಬಹುದು ಎಂಬಭ್ರಮೆಯಿಂದ ಹೊರಬಂದು, ನಾವೇ ಸೃಷ್ಟಿಸಿದ ಸಮಸ್ಯೆಯ ಪರಿಹಾರಕ್ಕೆ ನಾವೇ ದಾರಿ ಕಂಡುಕೊಳ್ಳುವುದು ಅತ್ಯುತ್ತಮ ಮಾರ್ಗ.

ಮಳೆ ನೀರಿನ ಸಂರಕ್ಷಣೆ ಸಾಧ್ಯವಿರುವ ದಾರಿಗಳಾವು?
ಮಳೆಕೊಯ್ಲು, ಜಲಮರುಪೂರಣ ಘಟಕ ನಿರ್ಮಾಣಕ್ಕೆ ಒತ್ತು ನೀಡಬೇಕಾದ ಅಗತ್ಯ ಇಂದಿದೆ. ಗದ್ದೆ ಬಳಕೆ, ಹಸರು ಸಂಪತ್ತು ರಕ್ಷಣೆಗೆ ಗಮನ ಹರಿಸಬೇಕು. ಸರಕಾರದ ಕೆಲವು ಯೋಜನೆ ಗಳು ದುಡ್ಡು ಲೂಟಿಗೆ ಸೀಮಿತ. ಉದಾ ಹರಣೆಗೆ, ಕರಾವಳಿ ನದಿ ನೀರನ್ನು ಇನ್ನೆಲ್ಲೋ ಕೊಂಡೊಯ್ಯುವ ಪ್ರಯತ್ನ. ಇದರಿಂದ ಜನರಿಗೆ ಲಾಭವಾಗದು. ನೀರು ಕೊಂಡೊಯ್ಯವ ಊರಲ್ಲಿ ಹಣದ ಆಸೆಗಾಗಿ ಕೆರೆ, ನದಿಗಳನ್ನು ಮುಚ್ಚಿ ಬಹು ಮಹಡಿ ಕಟ್ಟಡ ಕಟ್ಟುವುದಕ್ಕೆ ಅವಕಾಶ ನೀಡಿರುವುದೇ ನೀರಿನ ಮೂಲ ಬತ್ತಲು ಕಾರಣ. ಕರಾವಳಿ ನದಿಯಿಂದ ನೀರು ಕೊಂಡೊಯ್ದರೆ ಇಲ್ಲಿನ ಜನರು ಅಂತಹುದೇ ಸಮಸ್ಯೆಗೆ ಈಡಾಗಬಹುದು. ಹೀಗಾಗಿ ನೈಸರ್ಗಿಕ ನೀರಿನ ಮೂಲಗಳನ್ನು ಅದರ ಪಾಡಿಗೆ ಬಿಟ್ಟು, ಅಂತರ್ಜಲ ಸಂರಕ್ಷಿಸಲು ಸಾಧ್ಯವಿರುವ ಕ್ರಮಗಳಿಗೆ ಆದ್ಯತೆ ನೀಡಬೇಕು.

ಸಿನೆಮಾ ಮೂಲಕ ಜಲ ಸಂರಕ್ಷಣೆಯ ಜಾಗೃತಿ ಮೂಡಿಸಲು ಸಾಧ್ಯವೇ? ನೀವು ಪ್ರಯುತ್ನ ಪಡುತ್ತೀರಾ?
ಎಲ್ಲೂ ಒಂದು ಶೇಕಡಾ ಬದಲಾ ವಣೆ ಆದರೂ ಅದು ದೊಡ್ಡ ಸಾಧನೆ. ಉದಾಹರಣೆಗೆ, “ಸರಕಾರಿ ಹಿ.ಪ್ರಾ. ಶಾಲೆ ಕಾಸರಗೋಡು’ ಚಿತ್ರದಿಂದ ಕೆಲವು ಸರಕಾರಿ ಶಾಲೆಗಳಲ್ಲಿ ಶೇ. 1ರಷ್ಟು ಬದಲಾವಣೆ ಆಗಿರಬಹುದು. ಎಷ್ಟೋ ಶಿಕ್ಷಕರು, ಹೆತ್ತವರು ಈ ಬಗ್ಗೆ ಮಾತನಾಡಿದ್ದನ್ನು ನೋಡಿದ್ದೇನೆ, ಕೇಳಿದ್ದೇನೆ. ಆದರೆ ಈ ಶೇ. 1 ಸಂಪೂರ್ಣ ಬದಲಾವಣೆ ಅನ್ನುವುದು ಅಸಾಧ್ಯ. ಒಂದು ಸಿನೆಮಾದಿಂದ ಬಹುದೊಡ್ಡ ಪರಿಣಾಮ ನಿರೀಕ್ಷಿಸು ವುದು ಸುಲಭವಲ್ಲ. ನೀರಿನ ಸಂರಕ್ಷಣೆ ನಿಟ್ಟಿನಲ್ಲಿ ಜನ ಜಾಗೃತಿಗೊಂಡು ಊರಿಗೆ ಊರೇ ಕೈ ಜೋಡಿಸುವುದೇ ಸಿನೆಮಾಕ್ಕಿಂತಲೂ ಉತ್ತಮ ಮಾರ್ಗ.

ತುಳು ಸಿನೆಮಾ ರಂಗದ ಬಗ್ಗೆ ಏನು ಹೇಳ್ತೀರಾ?
ಸಿನೆಮಾಕ್ಕೆ ಭಾಷೆಯ ಬೇಲಿ ಇಲ್ಲ. ಒಳ್ಳೆಯದನ್ನು ಎಲ್ಲರೂ ಒಪ್ಪಿಕೊಳ್ಳು ತ್ತಾರೆ. ಉತ್ತಮ ನಿರ್ದೇಶಕರು, ನಟರು ಇಲ್ಲಿದ್ದಾರೆ. ತುಳು ಸಿನೆಮಾಕ್ಕೆ ರಾಷ್ಟ್ರಪ್ರಶಸ್ತಿ ಸಿಕ್ಕಿರುವುದು ಅದಕ್ಕೆ ಉದಾಹರಣೆ. ತುಳು ಚಿತ್ರರಂಗ ಇನ್ನಷ್ಟು ಬೆಳವಣಿಗೆ ಕಾಣುವ ನಿಟ್ಟಿನಲ್ಲಿ ತುಳು ಸಂಸ್ಕೃತಿಯನ್ನು ಸಿನೆಮಾದ ಮೂಲಕ ಪ್ರಚುರಪಡಿಸುವ ಅಗತ್ಯತೆ ಇದೆ. ಇದು ಬಹಳ ಆಸಕ್ತಿಕರ ವಿಚಾರ. ನಾನು ಗಮನಿಸಿದ ಹಾಗೆ ಕೆಲವು ವಿಭಾಗದಲ್ಲಿ ಗುಣಮಟ್ಟ ಸುಧಾರಣೆಯ ಅಗತ್ಯ ಇದೆ. ಆ ಬಗ್ಗೆ ಚಿತ್ರರಂಗ ಹೆಚ್ಚು ಗಮನ ನೀಡಬೇಕು.

“ಸರಕಾರಿ ಹಿ.ಪ್ರಾ. ಶಾಲೆ ಕಾಸರಗೋಡು’ ಬಿಡುಗಡೆ ಬಳಿಕ ಟೀಕೆ-ಟಿಪ್ಪಣಿ, ವಿರೋಧಗಳು ಬಂತಾ?
ಕಾಸರಗೋಡು, ಕೇರಳ ಕಡೆಯಿಂದ ಯಾವುದೇ ಟೀಕೆ-ಟಿಪ್ಪಣಿ, ವಿರೋಧ ಬಂದಿಲ್ಲ. ಕಾಸರಗೋಡಿನಲ್ಲಿ ಸಿನೆಮಾ 100 ದಿವಸ ಪ್ರದರ್ಶನ ಕಂಡಿದೆ.

ಮಲೆಯಾಳಿಗಳು ತಪ್ಪು, ಕನ್ನಡದವರು ಸರಿ ಎಂದು ಮಾಡಿದ ಸಿನೆಮಾ ಇದು ಅಲ್ಲ. ಯಾವುದೇ ಪ್ರದೇಶದ ಜನರಿಗೆ ಅಲ್ಲಿನ ಜನಜೀವನ ಮುಖ್ಯ ಆಗುತ್ತದೆಯೇ ವಿನಾ ಜಾತಿ, ಧರ್ಮ, ಭಾಷೆಯ ವಿವಾದದ ಅಗತ್ಯ ಇಲ್ಲ. ಸಿನೆಮಾ ಪ್ರದರ್ಶನ ಕಂಡ ಬಳಿಕ ಮಲೆಯಾಳಿಗಳು, ಕನ್ನಡದವರು ನನ್ನನ್ನು ಅಭಿನಂದಿಸಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಸುಖಾಸುಮ್ಮನೆ ಟೀಕೆ ಮಾಡುವವರು ಇದ್ದೇ ಇರುತ್ತಾರೆ. ಅವರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.

ರಿಷಭ್‌ ಶೆಟ್ಟಿಗೆ ರಾಜಕೀಯ ಪ್ರವೇಶಿಸುವ ಒಲವು ಇದೆಯಂತೆ, ಹೌದಾ?
ನನ್ನಲ್ಲಿ ಸಾಕಷ್ಟು ಕಥೆಗಳಿವೆ. ಅದನ್ನು ಜನರಿಗೆ ತಲುಪಿಸಬೇಕು. ದೀರ್ಘ‌ ಪಯಣದ ಒಂದು ಹಂತದಲ್ಲಿ ನನ್ನ ಸಿನೆಮಾ, ಕಥೆ ಜನರಿಗೆ ಇಷ್ಟಾಗುವುದು ನಿಲ್ಲುತ್ತದೆ. ಆಗ ಬಿಡುವು ಸಿಗುತ್ತದೆ. ಆ ಕಾಲಕ್ಕೆ ರಾಜಕೀಯಕ್ಕೆ ಹೋದರೂ ಹೋಗಬಹುದು. ಆದರೆ ಒಂದಂತೂ ಸತ್ಯ. ನಾನು ಮೌನಿ ಅಲ್ಲ. ಕ್ರಿಯೆಗೆ ಪ್ರತಿಕ್ರಿಯೆ ಕೊಡುವ ಸ್ವಭಾವದವನು. ಹಾಗಾಗಿ ಯಾವುದೇ ಪಕ್ಷಕ್ಕೆ ಹೋದರೂ ಅವರಿಗೆ ಕಷ್ಟವೇ.

-ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

CAR-D

Sullia: ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಕಂಟೈನರ್‌ ಢಿಕ್ಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.