ಮಳೆ ಪ್ರಮಾಣ ತಗ್ಗಲು ನಾವೇ ಕಾರಣ: ಅಂತರ್ಜಲ ಹೆಚ್ಚಿಸಲು ಬೆಂಬಲಿಸೋಣ


Team Udayavani, Apr 28, 2017, 3:43 PM IST

28-mng-5.jpg

ಮಹಾನಗರ: ಮಳೆಯ ಪ್ರಮಾಣ ಕಡಿಮೆಯಾಗುತ್ತಿರುವುದರಿಂದಲೇ ಪ್ರಸ್ತುತ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಅದಕ್ಕೆ ನಾವೇ ಕಾರಣರಾಗುತ್ತಿದ್ದೇವೆ.

ಇದು ಸುಳ್ಳಲ್ಲ ; ಅನುಭವ ಸತ್ಯ. ಈ ಕುರಿತು ಮಂಗಳೂರು ವಿಶ್ವವಿದ್ಯಾನಿಲಯದ ಸಾಗರ ಭೂ ವಿಜ್ಞಾನ ವಿಭಾಗದ ಅಧ್ಯಕ್ಷ ಡಾ | ಬಿ.ಆರ್‌. ಮಂಜುನಾಥ್‌ ಪತ್ರಿಕೆ ಜತೆ ಮಾತನಾಡುತ್ತಾ, ಹಿಂದಿನ ಅಂಕಿ ಅಂಶಗಳನ್ನು ನೋಡಿದಾಗ 20 ವರ್ಷಗಳಿಗೊಮ್ಮೆ ಮಳೆಯ ಪ್ರಮಾಣದಲ್ಲಿ ಏರುಪೇರಾಗಿದೆ. ಹೀಗಾಗಿ 2025-27ರ ವರೆಗೆ ಇಲ್ಲಿ ಮಳೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದರು.

ಬೆಂಕಿಯ ಹೊಗೆ
ಕಸ ಕಡ್ಡಿಗಳಿಗೆ ಬೆಂಕಿ ಹಚ್ಚುತ್ತೇವೆ. ಅದು ಉಂಟು ಮಾಡುತ್ತಿರುವ ಪರಿಣಾಮ ಗೊತ್ತಿದೆಯೇ ? ಮಳೆಯ ಪ್ರಮಾಣ ಕಡಿಮೆಯಾಗಲು ಮುಖ್ಯ ಕಾರಣ ವಾಯುಮಾಲಿನ್ಯ. ಸಾಮಾನ್ಯವಾಗಿ ಮಂಗಳೂರಿನಂತಹ ನಗರಗಳಲ್ಲಿ ಅಥವಾ ಒಟ್ಟು ದ.ಕ.ಜಿಲ್ಲೆಯಲ್ಲಿ ಕಸ ಕಡ್ಡಿಗಳಿಗೆ ಬೆಂಕಿ ಹಾಕುತ್ತೇವೆ. ಇದರಿಂದ ನಮಗೆ ಆ ಕ್ಷಣಕ್ಕೆ ಶುಚಿಯಾಗಿ ಕಂಡರೂ ಇದು ನೇರವಾಗಿ ಪರಿಸರದ ಮೇಲೆ ಪರಿಣಾಮ ಬೀರುತ್ತದೆ. ಇದರ ಹೊಗೆಯ ಕಣಗಳು ಪರಿಸರವನ್ನು ಸೇರಿ ಮೋಡವನ್ನು ಬೆಳೆಯಲು ಬಿಡವು. ಇಂತಹ ಕಣಗಳಿಂದ ಮೋಡದ ಸಾಂದ್ರತೆ ಕಡಿಮೆಯಾಗಿ ಕರಗದೇ ಬೇರ್ಪಡುತ್ತವೆ. ಇದನ್ನು ಟೂಮಿ ಎಫೆಕ್ಟ್ ಎಂದು ಕರೆಯಲಾಗುತ್ತದೆ. ಜತೆಗೆ ವಾಹನಗಳ ಹೊಗೆಯಿಂದಲೂ ಈ ಪರಿಣಾಮ ಸ್ಪಷ್ಟ. ಅದರಲ್ಲೂ ಡೀಸೆಲ್‌ನ ಹೊಗೆ ಪರಿಸರಕ್ಕೆ ಹೆಚ್ಚು ಮಾರಕ. ಹೀಗಾಗಿ ಸಂಬಂಧಪಟ್ಟ ಆಡಳಿತ ವ್ಯವಸ್ಥೆ ಇದನ್ನು ಗಂಭೀರವಾಗಿ ಪರಿಗಣಿಸಿ ಸ್ಮೋಕ್‌ ಎಮಿಶನ್‌ ಟೆಸ್ಟ್‌ ಗಳನ್ನು ಸಮರ್ಪಕವಾಗಿ ಮಾಡಿಸಿ, ಹೆಚ್ಚು ಹೊಗೆ ಬೀರುವ ವಾಹನಗಳನ್ನು ರಸ್ತೆಗಳಿಗೆ ಇಳಿಯದಂತೆ ಕ್ರಮ ಕೈಗೊಳ್ಳಬೇಕು. ಇದರ ಪರಿಣಾಮ ಎಷ್ಟಿದೆ ಎಂದರೆ ಹಿಮಾಲಯದ ಮೇಲೂ ಪರಿಣಾಮ ಬೀರುವಂತಿದೆ.

ಅಣೆಕಟ್ಟುಗಳನ್ನು ಬೆಂಬಲಿಸಿ
ಅಣೆಕಟ್ಟುಗಳನ್ನು ನಿರ್ಮಿಸುತ್ತಾರೆ ಎಂಬ ಪ್ರಸ್ತಾವಗಳು ಬಂದಾಗ ಜನರು ಸಾರಾಸಗಟಾಗಿ ಇಂತಹ ಯೋಜನೆ ಗಳನ್ನು ವಿರೋಧಿಸುತ್ತಾರೆ. ಆದರೆ ಈ ಬಗ್ಗೆ ಕೊಂಚ ಆಲೋಚಿಸಿದರೆ ಅದರಿಂದ ಹೆಚ್ಚು ಲಾಭ. ನದಿಪಾತ್ರದ ಜನ ಅಣೆಕಟ್ಟು ವಿರೋಧಿಗಳಾಗಿರುತ್ತಾರೆ. ಆದರೆ ಇದರಿಂದ ನದಿಪಾತ್ರದ ಜನರಿಗೇ ಹೆಚ್ಚು ಲಾಭ. ನದಿಯಲ್ಲಿ ವರ್ಷವಿಡೀ ನೀರು ತುಂಬಿದ್ದರೆ ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ ಸಮೃದ್ಧವಾಗಿರುತ್ತದೆ. ಹೀಗಾಗಿ ಇಂತಹ ಯೋಜನೆಗಳಿಗೆ ಕೊಂಚ ಬೆಂಬಲ ಸೂಚಿಸಿದರೆ ಉತ್ತಮ ಎನ್ನುತ್ತಾರೆ ಅವರು. ನಮ್ಮ ಕರಾವಳಿ ಭಾಗಗಳಲ್ಲಿ ಮಳೆಕೊಯ್ಲು ವಿಧಾನಗಳನ್ನು ಅಳವಡಿಸುವುದಾದರೆ ಆಗಸ್ಟ್‌ ಕೊನೆಯ ಭಾಗದಲ್ಲಿ ಅಳವಡಿಸಿದರೆ ಉತ್ತಮ. ಅಂದರೆ ಜೂನ್‌-ಜುಲೈ ತಿಂಗಳಿನಲ್ಲಿ ಈ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಮಳೆ ನೀರು ಕೊಯ್ಲಿನಿಂದ ಹೆಚ್ಚು ಪರಿಣಾಮ ಇರದು. 

ದೇಶದಲ್ಲಿ ಶೇ. 85 ಮಳೆ
ದೇಶದಲ್ಲಿ 1871ರಿಂದ 2016ರ ವರೆಗೆ ಬಿದ್ದ ಮಳೆಯನ್ನು ಆಧರಿಸಿ ಇಲ್ಲಿ ಶೇ. 85 ಮಳೆಯಾಗುತ್ತದೆ ಎನ್ನಲಾಗುತ್ತಿದೆ. ಅದು ಶೇ. 10 ಕಡಿಮೆಯಾದರೂ ಬರಗಾಲದ ಸ್ಥಿತಿ. ಜತೆಗೆ ಶೇ. 95 ಮಳೆಯಾದರೆ ಅತಿವೃಷ್ಟಿ.   ಜಿಲ್ಲೆಗೂ ಇದೇ ಸ್ಥಿತಿ ಉಂಟಾಗುತ್ತದೆ. 
ಜಿಲ್ಲೆಯಲ್ಲಿ 1979, 87, 2002, 04, 09, 14-15, 17ರಲ್ಲಿ ಬರಗಾಲ ಸ್ಥಿತಿ ಉಂಟಾಗಿತ್ತು. ಅದೇ ರೀತಿ 1975, 83, 88, 94, 2010ರಲ್ಲಿ ಹೆಚ್ಚಿನ ಮಳೆಯಾಗಿತ್ತು. ಹೀಗಾಗಿ ನಾವು ಒಂದು ವರ್ಷ ಮಳೆಯಾಗಿಲ್ಲ ಎಂದು ದೊಡ್ಡ ತಲೆಬಿಸಿ ಮಾಡುವುದು ಸರಿಯಲ್ಲ. 2009ರಲ್ಲಿ ಕಡಿಮೆ ಮಳೆಯಾದರೆ 10ರಲ್ಲಿ ಧಾರಾಕಾರ ಮಳೆಯಾಗಿತ್ತು. ದಕ್ಷಿಣ ಅಮೆರಿಕದ ಪಶ್ಚಿಮ ಕರಾವಳಿ ಯಲ್ಲಿ ಬಿಸಿಗಾಳಿ ಬೀಸಿ ಮಳೆಯ ಪ್ರಮಾಣ ಕಡಿಮೆಯಾಗುತ್ತದೆ. ಇದು ಇಡೀ ಪ್ರಪಂಚದ ಮೇಲೆ ಪ್ರಭಾವ ಬೀರುತ್ತಿದ್ದು, ಇದನ್ನು ಎಲಿ°ನೊ ಎಂದು ಕರೆಯಲಾಗುತ್ತದೆ. ಜತೆಗೆ ಹೆಚ್ಚು ಮಳೆ ಬರುವುದನ್ನು ಲಾನಿನಾ ಎಂದು ಕರೆಯಲಾಗುತ್ತದೆ. ಇದರಿಂದಲೂ ಜಿಲ್ಲೆಯ ಮಳೆಯ ಪ್ರಮಾಣ ಹೆಚ್ಚು ಕಡಿಮೆಯಾಗುತ್ತದೆ. 

ತಾಪಮಾನ ಏರಿಕೆ
ನಾವು ಸಮುದ್ರದ ಬದಿಯಲ್ಲಿ ರುವುದರಿಂದ ಸಮುದ್ರದ ತಾಪಮಾನ ಏರಿಕೆಯಿಂದಲೂ ಮಳೆ ಕಡಿಮೆಯಾಗುತ್ತದೆ. ದಕ್ಷಿಣ ಅಮೆರಿಕದಲ್ಲಿ ಉಷ್ಣಾಂಶ ಜಾಸ್ತಿಯಾದರೆ ಇಂತಹ ಸಮಸ್ಯೆ ಉಂಟಾಗುತ್ತದೆ. ಇದು ಕಾಳಿಚ್ಚು ಹೆಚ್ಚಲು ಕಾರಣವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಕಾಳಿಚ್ಚು ಆರಿಸಲಾಗದಷ್ಟು ಪರಿಣಾಮ ಕಾರಿಯಾಗಿರುತ್ತದೆ. ಪಶ್ಚಿಮ ಏಷ್ಯಾದಲ್ಲಿ ಮರಳುಗಾಡಿನಲ್ಲಿ ಧೂಳಿನ ಪ್ರಮಾಣ ಹೆಚ್ಚಿದ್ದಾಗ ಅವುಗಳು ಸೂರ್ಯನ ಶಾಖವನ್ನು ಹೀರಿ ಉಷ್ಣಾಂಶ ಜಾಸ್ತಿಯಾಗುತ್ತದೆ. ಇದರಿಂದ ಮಾನ್ಸೂನ್‌ ಮಾರುತಗಳು ವೇಗವಾಗಿ ಚಲಿಸಿ ಮಳೆಯೇ ಬರುವುದಿಲ್ಲ. ಹಿಂದೆ ಜಿಲ್ಲೆಯೂ ಸಹಿತ ವಿವಿಧೆಡೆಗಳಲ್ಲಿ ಜೂನ್‌-ಜುಲೈನಲ್ಲಿ ಬಿಸಿಲೇ ಕಾಣದಂತೆ ಜೋರಾಗಿ ಮಳೆ ಬರುತ್ತಿತ್ತು. ಬಂದರೂ ಒಮ್ಮೆಲೇ ಬಂದು ಮಾಯವಾಗುತ್ತದೆ. ಇದರಿಂದ ಭೂಮಿಗೂ  ಲಾಭವಿಲ್ಲ. 

ಇಂತಹ ಹಲವಾರು ವೈಜ್ಞಾನಿಕ ಕಾರಣಗಳಿಂದ ಮಳೆಯ ಪ್ರಮಾಣ ದಲ್ಲಿ ವ್ಯತ್ಯಯ ಉಂಟಾಗಿ ನೀರಿನ ಸಮಸ್ಯೆ ಎದುರಾಗುತ್ತದೆ. ಮಳೆಯ ಪ್ರಮಾಣ ಹೆಚ್ಚಿಸಲು ಜನರ ಸಹಕಾ ರವೂ ಅತಿ ಅಗತ್ಯ. ಜತೆಗೆ ಅಂತರ್ಜಲ ಮಟ್ಟ ಸುಧಾರಣೆಗೆ ನಾವು ಬೆಂಬಲ ನೀಡಿದಾಗ ನೀರಿನ ದೊಡ್ಡ ಮಟ್ಟದ ತೊಂದರೆ ನಿವಾರಿಸಬಹುದು. ಈ ಕುರಿತು ಪ್ರತಿಯೊಬ್ಬರೂ ಯೋಚಿಸುವುದು  ಅಗತ್ಯ ಎನ್ನುತ್ತಾರೆ ಅವರು.

ಹೀಗೂ ಉಳಿಸಿ
ಟಾಯ್ಲೆಟ್‌ನಲ್ಲಿ ಹೆಚ್ಚಾಗಿ ಫ್ಲಶ್‌ ಲೀಕ್‌ ಆಗುತ್ತದೆ. ಇದನ್ನು ನಾವು ಅಷ್ಟಾಗಿ ಗಮನಿಸೋದಿಲ್ಲ. ಆದರೆ ಒಂದೊಂದು ಹನಿ ನೀರು ವೇಸ್ಟ್‌ ಆಗುವ ಮೂಲಕ ಹೆಚ್ಚು ನೀರು ನಮಗೆ ತಿಳಿಯದೆ ಪೋಲಾಗುತ್ತದೆ. ಆ ಕಡೆಗೆ ನೀವು ಗಮನ ಹರಿಸುವುದು ಅಗತ್ಯ.
 

ಕಿರಣ್‌ ಸರಪಾಡಿ  

ಟಾಪ್ ನ್ಯೂಸ್

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.