15 ವರ್ಷಗಳ ಬಳಿಕ ಕಾಣಿಸಿದೆ ನೀರಿನ ಸಮಸ್ಯೆ

ಸರಕಾರಿ ಬಾವಿ ಸ್ವಚ್ಛಗೊಳಿಸಿದ ಸ್ಥಳೀಯರು

Team Udayavani, Apr 22, 2019, 6:00 AM IST

2104BAJ

ಬಜಪೆ: ನಗರ ಪ್ರದೇಶದ ಜತೆಗೆ ಗ್ರಾಮೀಣ ಪ್ರದೇಶದಲ್ಲೂ ಈಗ ನೀರಿನ ಸಮಸ್ಯೆ ಕಾಣಿಸಲಾರಂಭಿಸಿದೆ. ಕಂದಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಅದ್ಯಪಾಡಿ ದೇವಸ್ಥಾನದ ಬಳಿ ಇರುವ ಸರಕಾರಿ ಬಾವಿಯ ನೀರಿನ ಮಟ್ಟ 15 ವರ್ಷಗಳ ಬಳಿಕ ಅಳಕ್ಕೆ ಇಳಿದಿದೆ.ಇದರಿಂದ ಈ ಪ್ರದೇಶ ಈಗ ನೀರಿನ ಕೊರತೆ ಕಾಡತೊಡಗಿದೆ.

ಅದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನದ ಬಳಿ ಇರುವ ಸರಕಾರಿ ಬಾವಿಯಿಂದ ಸುಮಾರು 50 ಮನೆಗಳಿಗೆನೀರು ಸರಬರಾಜು ಮಾಡಲಾಗುತ್ತಿದೆ. ಅದ್ಯಪಾಡಿ, ಅರ್ಬಿ,ಕೊಲ್ಲೊಟ್ಟು, ಸಂಕೇಶ ಹಾಗೂ ದೇವಸ್ಥಾನದ ಪರಿಸರದ ಮನೆಗಳು ಈ ಬಾವಿಯ ನೀರನ್ನೇ ಅವಲಂಬಿಸಿದೆ.

ಸುಮಾರು 35 ರಿಂದ 40 ಅಡಿ ಅಳದ ಈ ಬಾವಿಯಲ್ಲಿ ನೀರಿನ ಮಟ್ಟ ಅಳಕ್ಕೆ ಇಳಿದ ಕಾರಣ 30 ಮನೆಗಳಿಗೆ ನೀರಿನ ಅಭಾವ ಕಾಡತೊಡಗಿದೆ.ಇದರಿಂದ ಸಂಕಷ್ಟ ಎದುರಾಗಿದೆ.

ಬಾವಿಯ ಕೆಸರು ತೆಗೆಯದೆ 15 ವರ್ಷ
15 ವರ್ಷಗಳ ಹಿಂದೆ ಈ ಸರಕಾರಿ ಬಾವಿಯನ್ನು ಕೊರೆಯಲಾಗಿತ್ತು. ನೀರಿನ ಸಮಸ್ಯೆ ಇಲ್ಲದ ಕಾರಣ ಈ ಬಾವಿಯ ಕೆಸರನ್ನೇ 15 ವರ್ಷಗಳಿಂದ ತೆಗೆದಿಲ್ಲ. ಇದರಿಂದ ಸುಮಾರು 4 ಅಡಿಗಳಷ್ಟು ಬಾವಿಯಲ್ಲಿ ಕೆಸರು ತುಂಬಿದ್ದು, ಇಲ್ಲಿನ ಜನರಿಗೆ ನೀರಿನ ಅಭಾವ ಕಂಡು ಬಂದ ಕಾರಣ ಕೆಸರು ತೆಗೆಯುವ ಅನಿವಾರ್ಯತೆ ಎದುರಾಯಿತು.

ತಾ. ಪಂ. ಮಾಜಿ ಸದಸ್ಯ ಶಿವಪ್ಪ ಬಂಗೇರ ಹಾಗೂ ಬಜರಂಗದಳದ ಭುಜಂಗ ಕುಲಾಲ್‌ ಅವರ ನೇತೃತ್ವದಲ್ಲಿ ರವಿವಾರ ಬಾವಿಯ ಕೆಸರು ತೆಗೆ ಯಲು ಸುಮಾರು 16 ಮಂದಿ ಒಗ್ಗೂಡಿದರು.40 ಅಡಿ ಅಳದ ಈ ಬಾವಿಗೆ ಇಳಿಯುವುದೇ ಒಂದು ಸಾಹಸವಾಗಿತ್ತು. ಬಾವಿಯಲ್ಲಿ ತುಂಬಿದ್ದ ಕೆಸರನ್ನು ತೆಗೆಯ ಲಾಯಿತು. ಕೆಸರು ತೆಗೆದ ಕಾರಣ ನೀರಿನ ಮಟ್ಟ ಏರತೊಡಗಿದ್ದು, ಪಂಪ್‌ನ ಮೂಲಕ ಟ್ಯಾಂಕ್‌ಗೆ ನೀರು ಸರಬರಾಜು ಮಾಡಿ ಪರಿಸರದ ಜನರಿಗೆ ಒದಗಿಸಲು ಸಹಕಾರಿಯಾಗಲಿದೆ.

ಅಂತರ್ಜಲ ಕುಸಿತ ಕಾರಣ
ಗುರುಪುರ ನದಿ ಕೇವಲ 200 ಮೀಟರ್‌ ದೂರದಲ್ಲಿ ಹರಿಯುತ್ತಿದೆ. ಅದರೂ ಕೂಡ ನೀರಿನ ಮಟ್ಟ ಅಳಕ್ಕೆ ಇಳಿದಿ ರುವುದು ಅಂತರ್ಜಲ ಮಟ್ಟದ ಕುಸಿತದ ಪರಿಣಾಮ ವಾಗಿದೆ. ಈ ಬಾವಿಯ ಕೆಸರನ್ನು ತೆಗೆದುದ್ದರಿಂದ ನೀರಿನ ಅಭಾವ ಕೊಂಚ ಮಟ್ಟಿಗೆ ಸುಧಾರಿಸಲಿದೆ.

 ನೀರಿನ ಸಮಸ್ಯೆ
ಆದ್ಯ ಪಾಡಿ ಭಾಗದಲ್ಲಿ ಈ ಬಾರಿ ಇಲ್ಲಿ ನೀರಿನ ಸಮಸ್ಯೆ ಎದು ರಾಗಿದೆ. ಬಾವಿಯ ಕೆಸರು ತೆಗೆಯದೇ 15 ವರ್ಷಗಳಾಗಿತ್ತು. ಹೀಗಾಗಿ ಈ ಬಾರಿ ಕೆಸರು ತೆಗೆಸಿ ಸ್ವಚ್ಛ ಗೊಳಿಸಲಾಯಿತು.
 - ಶಿವಪ್ಪ ಬಂಗೇರ,
ಮಾಜಿ ಸದಸ್ಯ, ತಾಲೂಕು ಪಂಚಾಯತ್‌

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.