ಪ. ಘಟ್ಟದಲ್ಲಿ ಕಾಳ್ಗಿಚ್ಚಿನ ಸವಾಲು: ಡಿಸೆಂಬರ್‌ಗೆ ಆರಂಭವಾಗಿದೆ ಕಿಚ್ಚಿಡುವ ಚಾಳಿ!


Team Udayavani, Jan 8, 2023, 8:20 AM IST

ಪ. ಘಟ್ಟದಲ್ಲಿ ಕಾಳ್ಗಿಚ್ಚಿನ ಸವಾಲು: ಡಿಸೆಂಬರ್‌ಗೆ ಆರಂಭವಾಗಿದೆ ಕಿಚ್ಚಿಡುವ ಚಾಳಿ!

ಮಂಗಳೂರು: ಬೇಸಗೆ ಇನ್ನೂ ದೂರ ಇದೆ. ಚಳಿಗಾಲದ ಮಧ್ಯೆ ಇರುವಾಗಲೇ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಬೆಂಕಿ ಕಾಣಿಸಿಕೊಳ್ಳಲಾರಂಭಿಸಿದೆ.

ಸಾಮಾನ್ಯವಾಗಿ ಜನ ವರಿಯ ಬಳಿಕ ಕಾಣಿಸಿ ಕೊಳ್ಳುವ ಕಾಳ್ಗಿಚ್ಚು ಈ ಬಾರಿ ಡಿಸೆಂಬರ್‌ನಲ್ಲೇ ಚಾರ್ಮಾಡಿ ಭಾಗದಲ್ಲಿ ಕಂಡುಬಂದಿದೆ. ಬಹುತೇಕ ಪ್ರಕರಣಗಳು ಮಾನವ ನಿಂದಲೇ ಆಗುವಂಥವೇ ವಿನಾ ಸಹಜವಾಗಿ ಉಂಟಾಗುವ ಬೆಂಕಿಯಲ್ಲ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ತಾಗಿ ಕೊಂಡಂತೆ ಪಶ್ಚಿಮ ಘಟ್ಟದ ದಟ್ಟಾರಣ್ಯ, ಶೋಲಾ ಹುಲ್ಲುಗಾವಲು ಸಾಕಷ್ಟಿದೆ. ಸುಳ್ಯ, ಬೆಳ್ತಂಗಡಿಯ ಭಾಗಗಳು, ಕಾರ್ಕಳ, ಹೆಬ್ರಿ ಮುಂತಾದೆಡೆ ಇರುವ ಅರಣ್ಯ ಪರಿಸರ ಸೂಕ್ಷ್ಮ ಪ್ರದೇಶಗಳಿವೆ. ಜಿಲ್ಲೆಯಾದ್ಯಂತ ಅಲ್ಲಲ್ಲಿ ಇತರ ಕಾಡುಗಳೂ ಡೀಮ್ಡ್ ಅರಣ್ಯಗಳೂ ಇವೆ. ಇಂತಹ ಕಡೆ ಬೆಂಕಿ ಬೀಳುವುದು ಪರಿಸರದ ಅಸಮತೋಲನಕ್ಕೂ ಕಾರಣವಾಗುತ್ತದೆ.

ಕಾರಣಗಳೇನು?
ಮುಖ್ಯವಾಗಿ ಕಾಡಿನಂಚಿನ ಕೆಲವು ಎಸ್ಟೇಟ್‌ನವರು ತಮ್ಮ ಜಮೀನಿಗೆ ಬೆಂಕಿ ಹರಡಬಾರದು ಎಂಬ ಉದ್ದೇಶದಿಂದ ಸಮೀಪದ ಹುಲ್ಲುಗಾವಲಿಗೆ ಬೆಂಕಿ ಹಾಕುತ್ತಾರೆ. ಅದು ನಿಯಂತ್ರಣ ತಪ್ಪಿ ಕಾಡಿಗೆ ವ್ಯಾಪಿಸಿಕೊಳ್ಳುತ್ತದೆ. ಇನ್ನೊಂದು ಮುಖ್ಯ ಕಾರಣ ಹಳ್ಳಿಯವರು ಜಾನುವಾರುಗಳ ಮೇವಿಗೆ ಈ ಹುಲ್ಲು ಗಾವಲುಗಳನ್ನು ಅವಲಂಬಿಸಿರುವುದು. ಒಣಗಿದ ಹುಲ್ಲಿÉಗೆ ಬೆಂಕಿ ಹಾಕಿದಾಗ ಅಲ್ಲಿ ಕೆಲವೇ ದಿನಗಳಲ್ಲಿ ಹೊಸ ಹುಲ್ಲು ಚಿಗುರುತ್ತದೆ ಎಂಬುದು ಅವರ ದೂರಾ ಲೋಚನೆ. ಇದರ ಹೊರತಾಗಿ ಅರಣ್ಯ ಇಲಾಖೆಯವರ ಮೇಲೆ ಸೇಡಿನ ಭಾವದಿಂದ ಕಿಡಿಗೇಡಿಗಳು ಬೆಂಕಿ ಕೊಡುವುದೂ ಇದೆ ಎನ್ನುತ್ತಾರೆ ಮಂಗಳೂರು ವಿಭಾಗದ ಅರಣ್ಯ ಅಧಿಕಾರಿಗಳು.

ನದಿಗಳ ಮೂಲ ಒಣಗುವ ಭೀತಿ
ಒಂದೆಡೆ ಪ್ರಕೃತಿಯಲ್ಲಿನ ಬದ ಲಾವಣೆಗಳು ಕಾಳ್ಗಿಚ್ಚಿಗೆ ಪೂರಕ ವಾಗಿವೆ. ಕೆಲವು ವರ್ಷಗಳಿಂದ ಮಳೆ ಗಾಲದಲ್ಲಿ ಪಶ್ಚಿಮ ಘಟ್ಟದ ವಿವಿಧೆಡೆ ಆಗಿರುವ ಭೂಕುಸಿತದಿಂದಾಗಿ ಅಪಾರ ಪ್ರಮಾಣದ ಅರಣ್ಯ ನಾಶ ವಾಗಿರುವುದು ಪರೋಕ್ಷವಾಗಿ ಕಾಡು ಹಾಗೂ ಅದರ ಪರಿಸರ ಬೇಗನೆ ಒಣಗುವುದಕ್ಕೆ ಕಾರಣವಾಗುತ್ತಿದೆ. ಆಗ ಕಿಡಿಗೇಡಿಗಳು ಸೇದಿದ ಸಿಗರೇಟ್‌ ಎಸೆದರೂ ಬೆಂಕಿ ಹತ್ತಿಕೊಳ್ಳುತ್ತದೆ. ಪದೇ ಪದೆ ಕಾಳ್ಗಿಚ್ಚು ಒಂದೆಡೆ ಬಿದ್ದರೆ ಕ್ರಮೇಣ ಆ ನೆಲ ಬರಡಾಡುತ್ತದೆ. ಇದರಿಂದ ಅನೇಕ ನದಿಗಳ ಮೂಲ ಒಣಗುವ ಭೀತಿಯೂ ಇದೆ ಎನ್ನುತ್ತಾರೆ ಪರಿಸರ ಪ್ರೇಮಿಗಳು.

ಕಾಳ್ಗಿಚ್ಚು ಕಾಣಿಸಿಕೊಂಡಾಗ ಕೆಲವು ಸಲ ಅದು ನಮ್ಮ ವ್ಯಾಪ್ತಿಯಲ್ಲ, ಬೇರೆ ರೇಂಜ್‌ ಎನ್ನುತ್ತಾರೆ. ಜನರು ಕೂಡ ಸಕಾಲದಲ್ಲಿ ಸಹಕಾರ, ಮಾಹಿತಿ ನೀಡದೆ ಸಮಸ್ಯೆಯಾಗುತ್ತದೆ. ಕಾಡಿನೊಳಗೆ ಕಾಲಿಡುವ ಕಾಡುತ್ಪತ್ತಿ ಸಂಗ್ರಾಹಕರು, ಚಾರಣಿಗರ ಮೇಲೆ ಇಲಾಖೆ ಸೂಕ್ತ ನಿಗಾ ಇರಿಸಬೇಕು, ಹಾಗಿದ್ದರೆ ಕಾಳ್ಗಿಚ್ಚು ತಪ್ಪಿಸಲು ಸಾಧ್ಯ.
– ದಿನೇಶ್‌ ಹೊಳ್ಳ, ಸಹ್ಯಾದ್ರಿ ಸಂಚಯ

ನಮ್ಮಲ್ಲಿ ಹುಲ್ಲಿಗೆ ಬೆಂಕಿ ಬೀಳುವುದು ಜಾಸ್ತಿ. ಆದರೆ ಅರಣ್ಯ ನಾಶ ಪ್ರಮಾಣ ಕಡಿಮೆ. ಈಗಾಗಲೇ ನಾವು ಸಿಬಂದಿಗೆ ಫೈರ್‌ಲೈನ್‌ (ಬೆಂಕಿ ರೇಖೆ) ಹಾಕುವಂತೆ, ಕಳೆ ನಾಶ ಮೂಡುವಂತೆ, ಸೂಚಿಸಿದ್ದೇವೆ.
-ಡಾ| ದಿನೇಶ್‌ ಕುಮಾರ್‌, ಡಿಸಿಎಫ್‌, ಮಂಗಳೂರು ವಿಭಾಗ

– ವೇಣುವಿನೋದ್‌ ಕೆ.ಎಸ್‌.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Pilikula: “ಫ್ಯಾನ್‌-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!

Pilikula: “ಫ್ಯಾನ್‌-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.