ವಿಶ್ವಕಪ್‌ ಹಾಕಿಗೆ ಕರಾವಳಿಯ ಬೆಳಕಿನ ಮೆರುಗು!


Team Udayavani, Dec 17, 2018, 10:05 AM IST

hcky.jpg

ಮಂಗಳೂರು: ಒಡಿಶಾದ ಭುವನೇಶ್ವರದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಹಾಕಿ ಪಂದ್ಯಾಟ ಈಗಾಗಲೇ ದೇಶ ವಿದೇಶಗಳ ಲಕ್ಷಾಂತರ ಹಾಕಿ ಪ್ರೇಮಿಗಳ ಮನಸೂರೆಗೊಂಡಿದೆ. ಕಳಿಂಗ ಸ್ಟೇಡಿಯಂ ಹೊರಾಂಗಣದ ಸುತ್ತ ಅಳವಡಿಸಿರುವ ವಿದ್ಯುತ್‌ ದೀಪಾಲಂಕಾರ ಕೂಡ ಅದಕ್ಕೆ ಪ್ರಮುಖ ಕಾರಣ. ವಿಶೇಷ ಅಂದರೆ, ಈ ದೀಪಾಲಂಕಾರ ವ್ಯವಸ್ಥೆ ವಹಿಸಿಕೊಂ ಡಿರುವುದು ನಮ್ಮ ಕರಾವಳಿಯವರು!

ಮೂಡುಬಿದಿರೆಯ ಕುದ್ರಿಪದವಿನಲ್ಲಿರುವ ಲೆಕ್ಸಾ ಲೈಟಿಂಗ್‌ ಟೆಕ್ನಾಲಜಿ ಈ ಅವಕಾಶ ಪಡೆದ ಸಂಸ್ಥೆ. ಈ ಸಂಸ್ಥೆಯು ಕ್ರೀಡಾಂಗಣದ ಹೊರಭಾಗಕ್ಕೆ ವಿಶೇಷ ತಂತ್ರಜ್ಞಾನದಿಂದ ಕೂಡಿದ ವಿದ್ಯುತ್‌ ದೀಪ ಅಳವಡಿಸಿ ವಿಶ್ವ ಮಟ್ಟದಲ್ಲಿ ನಡೆಯುವ ಹಾಕಿ ಪಂದ್ಯಾಟವನ್ನು ಮತ್ತಷ್ಟು ರಂಗೇರಿಸುವಂತೆ ಮಾಡಿದೆ.

ಕಳಿಂಗ ಹಾಕಿ ಕ್ರೀಡಾಂಗಣದಲ್ಲಿ ವಿಶ್ವಕಪ್‌ ಹಾಕಿಯ ಎಲ್ಲ ಪಂದ್ಯಗಳು ನಡೆಯುತ್ತಿವೆ. ಅಂತಾರಾಷ್ಟ್ರೀಯ ಟೂರ್ನಿ ಅಂದಮೇಲೆ ಸಾವಿರಾರು ಮಂದಿ ವಿದೇಶಿಗರು ಕೂಡ ವೀಕ್ಷಿಸಲು ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರಾರಂಭದ ದಿನದಿಂದಲೂ ಕ್ರೀಡಾಂಗಣದ ನಾಲ್ಕು ದ್ವಾರಗಳ ಸಹಿತ ಹೊರಾಂಗಣದ ಸುತ್ತಲಿನ ಪ್ರದೇಶಗಳನ್ನು ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ 700 ಲೈಟ್‌ಗಳಿಂದ ಸಿಂಗರಿಸಲಾಗಿದೆ. ಇದರ ಪೂರ್ಣ ಜವಾಬ್ದಾರಿಯನ್ನು ವಹಿಸಿ ಕೊಂಡಿರುವುದು ಕರಾವಳಿ ಮೂಲದ ಸಂಸ್ಥೆ ಎನ್ನುವುದು ವಿಶೇಷ.

ಕರಾವಳಿ ಮೂಲದ ಸುಮಾರು 40ಕ್ಕೂ ಹೆಚ್ಚು ಮಂದಿ ನಿರ್ವಹಣೆಯ ಕಾರ್ಯದಲ್ಲಿ ನಿರತರಾಗಿದ್ದಾರೆ. ಕ್ರೀಡಾಂಗಣದ ನಾಲ್ಕು ಬದಿಗಳಲ್ಲಿ, ಹೊರಾಂಗಣ ಪ್ಯಾನೆಲ್‌ಗ‌ಳನ್ನು ವಿವಿಧ ಬಗೆಯ ದೀಪಗಳಿಂದ ಅಲಂಕರಿಸಿರುವುದು ಪ್ರೇಕ್ಷಕರನ್ನು ಸೆಳೆಯುತ್ತಿದೆ. ದ್ವಾರಗಳಿಗೆ ಹೆಚ್ಚಿನ ಮೆರುಗು ನೀಡುವ ಉದ್ದೇಶದಿಂದ ಕೆಂಪು, ಹಸಿರು, ನೀಲಿ, ಬಿಳಿ ಬಣ್ಣದ ದೀಪಗಳಿಂದ ಅಲಂಕರಿಸಲಾಗಿದೆ. ಹೊರಾಂಗಣ ಅಲಂಕಾರಕ್ಕೆಂದು ಸ್ಪೆಕ್‌
ಲೈಟ್‌, ಲೀನಿಯರ್‌ ವಾಶ್‌ ಲೈಟ್‌, ಸ್ಪಾಟ್‌ಲೆಟ್‌, ಆರ್‌ಜಿಬಿಡಬ್ಲೂ ಸ್ಪಾಟ್‌ಲೆçಟ್‌ಗಳನ್ನು ಬಳಕೆ ಮಾಡಲಾಗಿದೆ.

ಒಂದೆಡೆ ನಿಯಂತ್ರಣ
ಸ್ಟೇಡಿಯಂನ ಹೊರಾಂಗಣ ಲೈಟಿಂಗ್‌ ನಿರ್ವಹಣೆಯನ್ನು ಒಂದೇ ಕಂಟ್ರೋಲ್‌ ರೂಂನಿಂದ ನಿರ್ವಹಿಸಲಾಗುತ್ತಿದೆ. ಡಿಎಂಎಕ್ಸ್‌ ಸಿಗ್ನಲ್‌ ಕಂಟ್ರೋಲ್‌ ಬೋರ್ಡ್‌ ನಿಂದ ಎಲ್ಲ ಎಲ್‌ಇಡಿ ಲೈಟ್‌ಗಳನ್ನು ನಿಯಂತ್ರಣ ಮಾಡಲಾಗುತ್ತಿದೆ. ಅಳವಡಿಸಿರುವ ದೀಪಗಳಲ್ಲಿ ಬಣ್ಣ ಬದಲಾಗುವ ತಂತ್ರಜ್ಞಾನ ಅಳವಡಿಸಲಾಗಿದೆ. ಮಳೆ ಬಂದರೆ ತೊಂದರೆಯಾಗದಂತೆ ಎಲ್ಲ ಕಡೆ ಗಳಲ್ಲಿಯೂ ಎಲ್‌ಇಡಿ ಚಿಪ್‌ಗ್ಳನ್ನು ಬಳಕೆ ಮಾಡಲಾಗಿದೆ. 

ವಿನ್ಯಾಸಕ್ಕೆ ಅವಕಾಶ
ಹೊರಾಂಗಣ ದೀಪಾಲಂಕಾರ ವಿನ್ಯಾಸಕ್ಕೆ ಒರಿಸ್ಸಾ ಸರಕಾರವು ಟೆಂಡರ್‌ ಆಹ್ವಾನಿಸಿತ್ತು. ಟೆಂಡರ್‌ ಸಲ್ಲಿಸಿದ್ದ ಮೂಡುಬಿದಿರೆಯ ಲೆಕ್ಸಾ ಲೈಟಿಂಗ್‌ ಟೆಕ್ನಾಲಜಿ ಸಂಸ್ಥೆಯ ವೈವಿಧ್ಯ, ವಿನ್ಯಾಸವನ್ನು ಗುರುತಿಸಿ ಒರಿಸ್ಸಾ ಸರಕಾರ ಅವಕಾಶವನ್ನು ಲೆಕ್ಸಾ ಸಂಸ್ಥೆಗೆ ನೀಡಿತ್ತು. 

ಈವರೆಗೆ ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಾರ್ಯಕ್ರಮಗಳು, ವೇದಿಕೆಗಳು, ಸಿನೆಮಾ, ಧಾರಾವಾಹಿಗಳು ಸೇರಿದಂತೆ ಇನ್ನಿತರ ಸೆಟ್‌ಗಳಲ್ಲಿ ಲೈಟಿಂಗ್‌ ಕೆಲಸಗಳನ್ನು ಮಾಡುತ್ತಿದ್ದೇವೆ. ಆದರೆ ಅಂತಾರಾಷ್ಟ್ರೀಯ ಕ್ರೀಡಾಕೂಟದ ಬೆಳಕಿನ ನಿರ್ವಹಣೆಯ ಅವಕಾಶ ಒದಗಿದ್ದು ಇದೇ ಮೊದಲು.
ರೊನಾಲ್ಡ್‌ ಸಿಲ್ವನ್‌ ಡಿ’ಸೋಜಾ, ಲೆಕ್ಸಾ ಸಂಸ್ಥೆ ಸಿಇಒ

ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

15-fusion

Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು

1-adsad

Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ

14-fusion

Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.