ರಂಗದಲ್ಲೇ ಚಿರನಿದ್ರೆಗೆ ಜಾರಿದ ಯಕ್ಷಕಲಾವಿದ ಗೇರುಕಟ್ಟೆ ಗಂಗಯ್ಯಶೆಟ್ಟಿ


Team Udayavani, Mar 24, 2017, 8:43 AM IST

Gangayya-shetty-24-3.jpg

ಬೆಳ್ತಂಗಡಿ: ಯಕ್ಷರಂಗದ ಮಹಿಷಾಖ್ಯನೆಂದೇ ಅಭಿಮಾನಿಗಳಿಂದ ಗುರುತಿಸಿಕೊಂಡಿದ್ದ, ಮಹಿಷಾಸುರ ವೇಷಕ್ಕೆ ಒಂದು ನೆಗಳ್ತೆಯನ್ನು ತಂದಿದ್ದ ಗೇರುಕಟ್ಟೆ ಗಂಗಯ್ಯ ಶೆಟ್ಟಿ (63) ಕಲಾಮಾತೆಯ ಮಡಿಲಲ್ಲಿ ಚಿರನಿದ್ರೆಗೆ ಜಾರಿದ್ದಾರೆ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಯಕ್ಷಾಭಿಮಾನಿಗಳಿಗೆ ಕಷ್ಟವಾಗುತ್ತಿದೆ. ಕಟೀಲು ಸಮೀಪದ ಎಕ್ಕಾರಿನಲ್ಲಿ ಕಟೀಲು ಕ್ಷೇತ್ರ ಮಹಾತ್ಮೆಯ ತನ್ನ ಪ್ರೀತಿಯ ಪಾತ್ರವಾದ ಅರುಣಾಸುರ ಪಾತ್ರದಲ್ಲಿದ್ದಾಗಲೇ ಶೆಟ್ಟರು ರಂಗಸ್ಥಳದಲ್ಲಿ ಕುಸಿದು ಬಿದ್ದು ಕಲಾಲೀನರಾಗಿದ್ದಾರೆ.

ಕುರಿಯ ವಿಠ್ಠಲ ಶಾಸ್ತ್ರಿ ಅವರು 1965ರಲ್ಲಿ ಶಿವತಾಂಡವ ಪ್ರಸಂಗದ ತಾಂಡವನೃತ್ಯದ ಕೊನೆಯ ದೃಶ್ಯದ ಸಂದರ್ಭ ರಂಗದಲ್ಲಿ ಕುಸಿದು ಬಿದ್ದಿದ್ದರೂ ಆ ವೇಳೆ ಮಣಿಪಾಲದ ವೈದ್ಯರೊಬ್ಬರು ಘಟನಾ ಸ್ಥಳದಲ್ಲಿದ್ದ ಕಾರಣ ಅವರ ಜೀವ ಉಳಿದಿತ್ತು. ಅಂದು ರಂಗಕ್ಕೆ ಶಾಶ್ವತ ವಿದಾಯ ಹೇಳಿದ್ದ ಅವರು 1972ರಲ್ಲಿ ನಿಧನ ಹೊಂದಿದರು. ಮುಂಬಯಿಯಲ್ಲಿ ದಾಮೋದರ ಮಂಡೆಚ್ಚ ಭಾಗವತರು ಪಂಚವಟಿ ಪ್ರಸಂಗದ ಭಾಗವತಿಕೆ ಮಾಡುತ್ತಿರುವಾಗಲೇ ವಿಧಿವಶರಾಗಿದ್ದರು. ‘ಬನ್ನಿ ಪೋಗುವ ಮುನಿಪನೆಡೆಗೆ…’ ಎಂದು ಭಾಗವತರು ಎತ್ತುಗಡೆ ಮಾಡಿದಲ್ಲಿಗೆ ಕೆರೆಮನೆ ಶಂಭು ಹೆಗಡೆ ಅವರ ರಾಮ ನಿರ್ಯಾಣದ ರಾಮ ರಂಗದಲ್ಲಿ ಕಲಾಯಾನ ಮುಗಿಸಿದ್ದರು. ಶಿರಿಯಾರ ಮಂಜು ನಾಯ್ಕ ಅವರು ರಂಗದಿಂದ ನಿರ್ಗಮಿಸುವ ಪರಶುರಾಮನಾಗಿ ‘ಪರಮ ಶಿಷ್ಯನೇ ನಿನ್ನ ಧುರಕಾನು ಮೆಚ್ಚಿದೆ…’ ಎಂದು ಮಹೇಂದ್ರಾಚಲಕ್ಕೆ ತಪಸ್ಸಿಗೆ ಹೋಗುವೆ ಎಂದು ಹೇಳಿದಲ್ಲಿಗೆ ಕುಸಿದು ಬಿದ್ದಿದ್ದರು. ಬೆಂಗಳೂರಿನಲ್ಲಿ ಚೆಂಡೆ ಬಡಿಯುತ್ತಿದ್ದಾಗಲೇ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ವಿಧಿವಶರಾಗಿದ್ದರು. ಅರುವ ನಾರಾಯಣ ಶೆಟ್ಟರು ಸುಭದ್ರೆಯ ಜತೆಗಿನ ಸಂಭಾಷಣೆ ಸಂದರ್ಭ ರಂಗದಲ್ಲಿ ಕುಸಿದು ಬಿದ್ದು ಕಾಲಲೀನರಾದರು. ಅಂತೆಯೇ ಅರುಣಾಸುರನಾಗಿ ಅಂತ್ಯವಾಗುವ ಸನ್ನಿವೇಶದ ಸಂದರ್ಭವೇ ಗಂಗಯ್ಯ ಶೆಟ್ಟರು ರಂಗದಲ್ಲಿ ಕುಸಿದುಬಿದ್ದು ತಮ್ಮ ಕಲಾಸೇವೆಗೆ ಕೊನೆಯ ಚುಕ್ಕಿ ಇಟ್ಟರು.


15 ವರ್ಷಗಳ ಹಿಂದೆ ಶೆಟ್ಟರಿಗೆ ಹೃದಯಾಘಾತವಾದುದು ಇದೇ ಅರುಣಾಸುರನ ಪಾತ್ರದಲ್ಲಿದ್ದಾಗಲೇ. ಅವರ ಊರಿಗೆ ಸಮೀಪದ ತಾರೆಮಾರು ಎಂಬಲ್ಲಿ ಕೆಲವು ದಶಕಗಳಿಂದ ಗಂಗಯ್ಯ ಶೆಟ್ಟರಿರುವ ಮೇಳವೇ ಕಲಾಪ್ರದರ್ಶನ ನಡೆಸುತ್ತಿತ್ತು. ಆದರೆ ಈ ವರ್ಷ ಮಾ. 22ರಂದು ಕಟೀಲು ಮೂರನೇ ಮೇಳದ ಪ್ರದರ್ಶನ ನಡೆದಿತ್ತು. ಗಂಗಯ್ಯ ಶೆಟ್ಟರ ಮೇಳ ಕಟೀಲಿಗೆ ಸಂಬಂಧಪಟ್ಟ ಕಟೀಲಿಗೆ ಸಮೀಪದ ಎಕ್ಕಾರಿನಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿತ್ತು. ಕಲಾಮಾತೆ ಭ್ರಾಮರಿ ಅವರನ್ನು ತನ್ನತ್ತ ಸೆಳೆದುಕೊಂಡಿದ್ದರೇ ಎಂದು ಕಲಾಭಿಮಾನಿಗಳು ಭಾವುಕರಾಗಿ ಕೇಳುತ್ತಾರೆ. ಕಲಾಮಾತೆಯ ಮಡಿಲಲ್ಲಿ ಚಿರನಿದ್ರೆಗೆ ಹೋದ ಆದರ್ಶ ಮರಣ ಪಡೆದ ಗಂಗಯ್ಯರು. ಅವರ ಅಗಲುವಿಕೆ ಯಕ್ಷಗಾನ ಕ್ಷೇತ್ರಕ್ಕೆ ದೊಡ್ಡ ನಷ್ಟ.

ಬಣ್ಣದ ವೇಷಕ್ಕೆ ಸಾಂಪ್ರದಾಯಿಕ‌ ಆವರಣ ಕೊಟ್ಟ ಬಣ್ಣದ ವೇಷಧಾರಿ ಬಣ್ಣದ ಮಾಲಿಂಗ, ಬಣ್ಣದ ಕುಟ್ಯಪುವಿನ ಜತೆಗೆ ನಾಟಕೀಯ ಪಾತ್ರಗಳಿಗೆ ಜೀವ ತುಂಬಿದ ಕಲಾವಿದ ಗಂಗಯ್ಯ ಶೆಟ್ಟರು ದಾರಕಾಸುರ, ಜಲಂಧರ, ಅರುಣಾಸುರ ಇತ್ಯಾದಿ ಬಣ್ಣದ ವೇಷಗಳಿಗೆ ನಾಟಕೀಯವಾಗಿ ಮಾಡುವ ಪಾತ್ರಗಳಲ್ಲಿ ಎತ್ತಿದ ಕೈ. ನಾಟಕೀಯ ವೇಷಗಳಲ್ಲಿ ಬಣ್ಣದ ವೇಷದ ಛಾಯೆಯನ್ನು ತರುತ್ತಿದ್ದ ಅಪೂರ್ವ ಕಲಾವಿದ. ಕೇವಲ ಬಣ್ಣದ ವೇಷಧಾರಿಯಲ್ಲ. ದಮಯಂತಿ ಪುನಃಸ್ವಯಂವರದ ಋತುಪರ್ಣ, ದೇವಿ ಮಹಾತ್ಮೆಯ ರಕ್ತಬೀಜ, ಕಂಸವಧೆಯ ಕಂಸನಂತಹ ಭಾವುಕ ಪಾತ್ರಗಳಲ್ಲಿ ಭಾವಾಭಿವ್ಯಕ್ತಿ ಪ್ರಕಟ ಮಾಡುತ್ತಿದ್ದ ವೇಷಧಾರಿ. ಅವರು ಮಂಡಿಸುತ್ತಿದ್ದ ವಿಚಾರಗಳಲ್ಲಿ ಭಾವನೆಯ ಆವರಣವಿತ್ತು.


ರುದ್ರಭೀಮ, ಮೈರಾವಣ, ಮಹಿಷಾಸುರ, ಪುರುಷಾಮೃಗ ಅವರ ಅಚ್ಚುಮೆಚ್ಚಿನ ಅದ್ಭುತ ಸೃಷ್ಟಿಯ ಪಾತ್ರಗಳು. ವೇಷಗಾರಿಕೆಯಲ್ಲಿ ಈವರೆಗೆ ಮುಖವಾಡ ಬಳಸಿಲ್ಲ ಎನ್ನುವುದು ಅವರ ಹೆಗ್ಗಳಿಕೆ. ವೀರ ರೌದ್ರ ರಸಗಳ ಅಭಿವ್ಯಕ್ತಿಯಲ್ಲಿ ಸಿದ್ಧಹಸ್ತರು. ಕಿರಾತಾರ್ಜುನದ ಕಿರಾತ, ದುಶ್ಯಾಸನ ವಧೆ, ಪುರುಷಾಮೃಗ ಅಲ್ಲದೇ ಬಣ್ಣದ ವೇಷಗಳೇ ಪ್ರಧಾನವಾಗಿರುವ ಪ್ರಸಂಗಗಳಲ್ಲಿ ಸಮಗ್ರ ಮಾಹಿತಿ ಹೊಂದಿ ಹಿಮ್ಮೇಳ ಮುಮ್ಮೇಳ ಸಾಂಗತ್ಯದ ಆಕರ ಕಲಾವಿದರಾಗಿದ್ದರು. ತೆಂಕುತಿಟ್ಟಿನ ಸಾಂಪ್ರದಾಯಿಕ ರಂಗಭೂಮಿಯ ಕಲಾವಿಭಾಗದ ಪ್ರಾತಿನಿಧಿಕ ಕಲಾವಿದರಾಗಿದ್ದರು ಎಂದು ಕಲಾವಿದ ಉಜಿರೆ ಅಶೋಕ ಭಟ್ಟರು ನೆನಪಿಸಿಕೊಳ್ಳುತ್ತಾರೆ.

ಬಣ್ಣದ ವೇಷದ ವಿಭಾಗದಲ್ಲಿ ಸಹಕಲಾವಿದರು ಹಾಗೂ ಕಿರಿಯರಿಗೆ ಮಾರ್ಗದರ್ಶಿಯಾಗಿದ್ದರು. ಕಲಾವಿದರಿಗೆ ಹೇಳಿಕೊಟ್ಟು ತಿದ್ದಿದ ಕಲಾವಿದ. ಅತ್ಯಂತ ಸಣ್ಣ ಪ್ರಾಯದಲ್ಲಿ ಬಣ್ಣದ ವೇಷಕ್ಕೆ ಬಂದ ಕಲಾವಿದ. 18ನೇ ವಯಸ್ಸಿನಲ್ಲಿ ಮಹಿಷಾಸುರ ಪಾತ್ರ ಮಾಡಿದ ಕೀರ್ತಿ. ಸಭೆಯ ಮೂಲಕ ಪ್ರವೇಷ, ದೊಂದಿಯ ಬಳಕೆ, ರಂಗದಲ್ಲಿ ನಡೆ ಕುಟ್ಯಪ್ಪುವಿನ ಅನಂತರದಲ್ಲಿ ರಂಗದಲ್ಲಿ ಕಾಣಿಸಿಕೊಂಡ ಕಲಾವಿದ. ಕುರಿಯ ಗಣಪತಿ ಶಾಸ್ತ್ರಿ, ನೆಡ್ಲೆ ನರಸಿಂಹ ಭಟ್‌, ಪದ್ಯಾಣ ಶಂಕರ ನಾರಾಯಣ ಭಟ್ಟರು ಇವರ ಪ್ರತಿಭೆಯನ್ನು ಅನಾವರಣಗೊಳಿಸಿದ ಖ್ಯಾತಿಯ ಹಿಮ್ಮೇಳ. ಕಲಾಮಾತೆಯಲ್ಲಿ ತಮ್ಮ ಆತ್ಮ ಲೀನವಾಗಿಸಿಕೊಂಡ ಗಂಗಯ್ಯ ಶೆಟ್ಟರು ಯಕ್ಷಗಾನದ ಕೊಂಡಿಯಂತಿದ್ದರು.

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.