ಕೋವಿಡ್ ಪರಿಣಾಮ: ಬಡವಾದ ತುಳು ರಂಗಭೂಮಿ-ತಿರುಗಾಟಕ್ಕೆ ಯಕ್ಷಗಾನ ಮೇಳಗಳು ಸನ್ನದ್ಧ
Team Udayavani, Sep 24, 2021, 10:00 AM IST
ಮಂಗಳೂರು: ಕೊರೊನಾ ಕಾರಣದಿಂದ ಸ್ತಬ್ಧವಾಗಿದ್ದ ಕರಾವಳಿಯ ಗಂಡುಕಲೆ ಯಕ್ಷಗಾನ ಮತ್ತೆ ಆರಂಭಕ್ಕೆ ಮೇಳಗಳು ಸಿದ್ಧತೆ ನಡೆಸುತ್ತಿವೆ. ಸಾಮಾನ್ಯವಾಗಿ ದೀಪಾವಳಿ ಬಳಿಕ ಮೇಳಗಳು ತಿರುಗಾಟ ಹೊರಡುತ್ತವೆಯಾದರೂ ಸಿದ್ಧತೆ ಗಳನ್ನು 2-3 ತಿಂಗಳ ಮೊದಲೇ ಮಾಡಿಕೊಳ್ಳುತ್ತವೆ. ಸದ್ಯ ಕೊರೊನಾ ಕಡಿಮೆಯಾಗುತ್ತಿರುವ ಕಾರಣ ಅನುಮತಿ ದೊರೆಯುವ ನಿರೀಕ್ಷೆ ಮೇಳಗಳದು. ಎರಡೂ ಜಿಲ್ಲೆಗಳ ಮುಂದಿನ ವಿಪತ್ತು ನಿರ್ವಹಣಾ ಸಭೆಯಲ್ಲಿ ಈ ಬಗ್ಗೆ ಮಾರ್ಗಸೂಚಿಗಳ ಆಧಾರದಲ್ಲಿ ಅನುಮತಿ ದೊರೆಯುವ ಸಾಧ್ಯತೆಯಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ಶ್ರೀ ಕ್ಷೇತ್ರ ಕಟೀಲು, ಧರ್ಮಸ್ಥಳ, ಸಾಲಿಗ್ರಾಮ, ಮಂದಾರ್ತಿ, ಪೆರ್ಡೂರು, ಪಾವಂಜೆ, ಬಪ್ಪನಾಡು, ಸಸಿಹಿತ್ಲು, ಹನುಮಗಿರಿ, ಸುಂಕದಕಟ್ಟೆ ಸೇರಿದಂತೆ ಹಲವು ಮೇಳಗಳು ನವೆಂಬರ್ ಮಧ್ಯ ಹಾಗೂ ಕೊನೆಯಲ್ಲಿ ತಿರುಗಾಟ ಆರಂಭದ ಚಿಂತನೆ ನಡೆಸುತ್ತಿದ್ದು, ಅಂತಿಮ ತೀರ್ಮಾನ ಇನ್ನಷ್ಟೇ ಆಗಬೇಕಿದೆ.
ಶ್ರೀ ಕ್ಷೇತ್ರ ಕಟೀಲಿನ ಶ್ರೀ ಹರಿನಾರಾಯಣದಾಸ ಅಸ್ರಣ್ಣ ಅವರ ಪ್ರಕಾರ “ಪ್ರತೀವರ್ಷ ಶ್ರೀ ಕಟೀಲು ಮೇಳದಿಂದ 1 ವರ್ಷದಲ್ಲಿ ಸಾಮಾನ್ಯ ವಾಗಿ 190 ದಿನ ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದರೆ, ಕೊರೊನಾ ನಿರ್ಬಂಧದ ಹಿನ್ನೆಲೆಯಲ್ಲಿ 2019ರಲ್ಲಿ 130 ಹಾಗೂ 2020ರಲ್ಲಿ 160 ದಿನಗಳ ಪ್ರದರ್ಶನ ಮಾತ್ರ ಆಗಿದೆ. ಈ ವರ್ಷದ ಪ್ರದರ್ಶನವನ್ನು ನ. 29ಕ್ಕೆ ಆರಂಭಿಸಲು ತೀರ್ಮಾನಿಸಲಾಗಿದೆ’ ಎಂದರು.
ಶ್ರೀ ಸಾಲಿಗ್ರಾಮ ಮೇಳದ ಸಂಚಾಲಕರಾದ ಪಿ. ಕಿಶನ್ ಹೆಗ್ಡೆ ಅವರ ಪ್ರಕಾರ “ಸಾಲಿಗ್ರಾಮ ಮೇಳದ 54ನೇ ವರ್ಷದ ತಿರುಗಾಟ ಡಿಸೆಂಬರ್ ಪ್ರಥಮ ವಾರದಲ್ಲಿ ಎಂದು ತೀರ್ಮಾನಿಸಿದ್ದೇವೆ ಎನ್ನುತ್ತಾರೆ.
ಸಂಕಷ್ಟದಲ್ಲಿ ಕಲಾವಿದರು:
ಪಾವಂಜೆ ಮೇಳದ ಸಂಚಾಲಕ ಪಟ್ಲ ಸತೀಶ್ ಶೆಟ್ಟಿ ಅವರ ಪ್ರಕಾರ, 2 ವರ್ಷಗಳಲ್ಲಿ ಪೂರ್ಣವಾಗಿ ತಿರುಗಾಟ ಇಲ್ಲದೆ ಯಕ್ಷಗಾನ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಚೌತಿ ಸೇರಿ ದಂತೆ ಶುಭ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವಕಾಶವಿಲ್ಲದೆ ಹವ್ಯಾಸಿ ಕಲಾವಿದರು ಕಷ್ಟದಲ್ಲಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿ ಅನುಮತಿ ನೀಡಿ ಯಕ್ಷಗಾನ, ನಾಟಕಕ್ಕೆ ಅವಕಾಶ ಇಲ್ಲದಿರುವುದು ಯಾವ ನ್ಯಾಯ? ಕಲೆಯನ್ನೇ ನಂಬಿಕೊಂಡಿರುವ ಸಾವಿರಾರು ಕುಟುಂಬಗಳು ಬೇಸರದಲ್ಲಿವೆ ಎನ್ನುತ್ತಾರೆ.
ಬಡವಾದ ತುಳು ರಂಗಭೂಮಿ
ಉಭಯ ಜಿಲ್ಲೆಯಲ್ಲಿ 40ಕ್ಕೂ ಅಧಿಕ ವೃತ್ತಿಪರ ನಾಟಕ ತಂಡಗಳು ಹಾಗೂ ಹವ್ಯಾಸಿ ತಂಡಗಳಿದ್ದು 3000ಕ್ಕೂ ಅಧಿಕ ಕಲಾವಿದರು, ತಂತ್ರಜ್ಞರು ಸೇರಿದಂತೆ ವಿವಿಧ ಪ್ರಕಾರದಲ್ಲಿ ದುಡಿಯುತ್ತಿದ್ದಾರೆ. ಈ ಮೂಲಕ ಶ್ರೀಮಂತ ವಾಗಿದ್ದ ಕರಾವಳಿಯ ತುಳು ರಂಗಭೂಮಿಯ ಮೇಲೂ ಕೊರೊನಾ ಹೊಡೆತ ನೀಡಿದ್ದು, 2 ವರ್ಷದಿಂದ ಬಡವಾಗಿದೆ. ಪರ್ಯಾಯ ಮಾರ್ಗವಿಲ್ಲದೆ ಕಲಾವಿದರು ಚಿಂತಿತರಾಗಿದ್ದಾರೆ. ಅವರು ಕೂಡ ಸರಕಾರದಿಂದ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದಾರೆ.
ಕಲಾ ಚಟುವಟಿಕೆ-ಚರ್ಚಿಸಿ ಅನುಮತಿ:
ದ.ಕ.ದಲ್ಲಿ ಕೊರೊನಾ ಕಡಿಮೆಯಾಗುತ್ತಿರುವ ಕಾರಣ ವಿವಿಧ ವಲಯಗಳಿಗೆ ಅನುಮತಿ ನೀಡಲಾಗಿದೆ. ಯಕ್ಷಗಾನ, ನಾಟಕ ಸೇರಿದಂತೆ ವಿವಿಧ ಕಲಾಪ್ರಕಾರಗಳಿಗೆ ಅನುಮತಿಸುವಂತೆ ಆಗ್ರಹವಿದೆ. ಜನಪ್ರತಿನಿಧಿಗಳು, ಅಧಿಕಾರಿಗಳ ಉಪಸ್ಥಿತಿಯ ಮುಂದಿನ ಜಿಲ್ಲಾ ವಿಪತ್ತು ನಿರ್ವಹಣ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.– ಡಾ| ರಾಜೇಂದ್ರ ಕೆ.ವಿ., ದ.ಕ. ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ