ಕಿರಿಯ ರಾಜಕಾರಣಿಗಳಿಗೆ ಎಸ್ಎಆರ್ ಮಾದರಿ
ಶಾಸಕ ಎಸ್.ಎ. ರವೀಂದ್ರನಾಥ್ ಜನ್ಮದಿನಾಚರಣೆ ನೆಲಕ್ಕೆ ಕಾಲೂರಿ ಬೆಳೆದ ರೈತಪರ ಹೋರಾಟಗಾರ
Team Udayavani, Nov 27, 2019, 11:24 AM IST
ದಾವಣಗೆರೆ: ಎಸ್.ಎ. ರವೀಂದ್ರನಾಥ್ ದಾವಣಗೆರೆಯಂತಹ ಗಂಡುಮೆಟ್ಟಿನ ನೆಲಕ್ಕೆ ಕಾಲೂರಿ ಬೆಳೆದಂತಹ ರೈತ ಪರ ಹೋರಾಟಗಾರ, ನಾಯಕ ಎಂದು ವಿಧಾನ ಪರಿಷತ್ತು ಸದಸ್ಯ ಆಯನೂರು ಮಂಜುನಾಥ್ ಬಣ್ಣಿಸಿದ್ದಾರೆ.
ಮಂಗಳವಾರ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ಶಾಸಕ ಎಸ್.ಎ. ರವೀಂದ್ರನಾಥ್ರವರ 74ನೇ ಜನ್ಮದಿನದ ಸಮಾರಂಭದಲ್ಲಿ ಮಾತನಾಡಿದ ಅವರು, ರವೀಂದ್ರನಾಥ್ ಜನಸಂಘ ಕಾಲದಿಂದಲೂ ಹೋರಾಟ ಮಾಡುತ್ತಲೇ ಬಂದವರು.
ದಾವಣಗೆರೆಯಂತಹ ಜಿಲ್ಲೆಯಲ್ಲಿ ನೆಲಕ್ಕೆ ಕಾಲೂರಿ ಬೆಳೆದಂತಹವರು ಎಂದರು. ಜನಸಂಘ ಎಂದರೆ ಉತ್ತರ ಭಾರತದ ಪಕ್ಷ ಎಂಬ ಭಾವನೆ ಇತ್ತು. ಅನೇಕರು ಬೇರೆ ಬೇರೆ ಪಕ್ಷಕ್ಕೆ ಕರೆದರೂ ರವೀಂದ್ರನಾಥ್ ಹೋಗಲಿಲ್ಲ. ಒಂದೇ ಪಕ್ಷದಲ್ಲಿ ಇದ್ದವರು. ರವೀಂದ್ರನಾಥ್ ನಾಯಕರ ಸುತ್ತ ಓಡಾಡಿದವರು ಅಲ್ಲ. ಪಕ್ಷದ ಸುತ್ತ ಓಡಾಡಿದವರು. ಅವರ ಪಕ್ಷ ನಿಷ್ಠೆ, ಪ್ರಾಮಾಣಿಕತೆ ಮತ್ತು ಬದ್ಧತೆಯ ಕಾರಣಕ್ಕೆ ಹಲವಾರು ಹುದ್ದೆ, ಅಧಿಕಾರ ಅರಸಿ ಬಂದವು. ಕಿರಿಯ ರಾಜಕಾರಣಿಗಳು, ಹೊಸ ಪೀಳಿಗೆಯವರಿಗೆ ಪಕ್ಷಕ್ಕಾಗಿಯೇ ನಿಂತ ಗಟ್ಟಿ ಜೀವವಾಗಿರುವ ರವೀಂದ್ರನಾಥ್ ಮಾದರಿ ಎಂದು ತಿಳಿಸಿದರು.
ಸಾರ್ವಜನಿಕ ಜೀವನದಲ್ಲಿ ಇದ್ದವರು ತಮ್ಮ ಊರಿನ, ಪ್ರದೇಶದ ಜನರು ಅಭಿವೃದ್ಧಿಗೆ ರಕ್ತವನ್ನೇ ಬೆವರಿನಂತೆ ಹರಿಸಿ, ಕೆಲಸ ಮಾಡಿ, ಸಾರ್ಥಕ ಜೀವನ ನಡೆಸಿದಾಗ ಮಾತ್ರ ಸಾರ್ವಜನಿಕವಾಗಿ ಹುಟ್ಟು ಹಬ್ಬ ಆಚರಿಸಿಕೊಳ್ಳ ಬೇಕು. ಆದರೆ, ಈಗ ಅಂತಹ ವಾತಾವರಣವೇ ಇಲ್ಲ. ಕಾರ್ಪೋರೇಟರ್, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಸದಸ್ಯರಾದರೆ ಸಾಕು, ಅದ್ಧೂರಿಯಾಗಿ ಜನ್ಮ ದಿನ ಆಚರಣೆ ಕಂಡು ಬರುತ್ತದೆ ಎಂದರು.
ರವೀಂದ್ರನಾಥ್, ಯಡಿಯೂರಪ್ಪ, ಈಶ್ವರಪ್ಪ , ಶಂಕರಮೂರ್ತಿ ಮುಂತಾದವರು 60 ವರ್ಷದ ನಂತರವೇ ಸಾರ್ವಜನಿಕವಾಗಿ ಜನ್ಮದಿನ ಆಚರಿಕೊಳ್ಳಲಾರಂಭಿಸಿದರು. ಏಕೆಂದರೆ ಅವರಿಗೆ ನಾವು ಹೇಗೆ ಸಾರ್ವಜನಿಕವಾಗಿ ಜನ್ಮದಿನ ಆಚರಿಸಿಕೊಳ್ಳುವುದು ಎಂಬ ಸಾರ್ವಜನಿಕ ಲಜ್ಜೆ, ಮುಜುಗರ ಇತ್ತು. ಹಾಗಾಗಿಯೇ 60 ರ ನಂತರವೇ ಬಹಿರಂಗವಾಗಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.
ರವೀಂದ್ರನಾಥ್ ಅದಕ್ಕೆ ಅರ್ಹರು. ಆದರೆ, ನಾನು ಇನ್ನೂ ಆಚರಿಸಿಕೊಂಡಿಲ್ಲ. ಏಕೆಂದರೆ ನಾನು ಅಷ್ಟೊಂದು ದೊಡ್ಡವನಾಗಿಲ್ಲ ಎಂದು ತಿಳಿಸಿದರು. ಈಗಿನ ಕಾರ್ಯಕರ್ತರು ಫೀಲ್ಡ್ಗೆ ಹೋಗುವುದೇ ಇಲ್ಲ. ನಾಯಕರೇ ನಮ್ಮ ದೇವರು, ಅವರ ಸುತ್ತಲೇ ಸುತ್ತುತ್ತಾರೆ. ಅದು ಸರಿಯಲ್ಲ. ಕಾರ್ಯಕರ್ತರು ಫೀಲ್ಡ್ಗೆ ಹೋಗಬೇಕು. ಈಗಲೂ ಫೀಲ್ಡ್ಗೆ ಇಳಿದು ರಾಜಕಾರಣ ಮಾಡುವ ಜೊತೆಗೆ ಕಾರ್ಯಕರ್ತರು, ಜನರಿಗೆ ಬಹಳ ಸುಲಭವಾಗಿ ಸಿಗುವಂತಹ ರವೀಂದ್ರನಾಥ್ ಬಿಜೆಪಿಯ ಆಸ್ತಿ ಎಂದರು.
ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ನಾನು ಜನಸಂಘದಲ್ಲಿ ಇದ್ದಾಗನಿಂದಲೂ ನನ್ನನ್ನು ಹಾದಿ ತಪ್ಪಿಸುವ ಕೆಲಸ ಮಾಡಿದರೂ ನಾನು ಪಕ್ಷ ಬಿಟ್ಟು ಹೋಗಲಿಲ್ಲ. ಪಕ್ಷ ಏನು ಕೆಲಸ ಕೊಡುತ್ತದೆಯೋ ಅದನ್ನ ಪ್ರಾಮಾಣಿಕವಾಗಿ ಮಾಡಿಕೊಂಡು ಬಂದವನು. ಸಮ್ಮಿಶ್ರ ಸರ್ಕಾರದಲ್ಲಿ ಶಾಸಕರಿಗೆ ಅನುದಾನ ಕೊಡುವ ಮಾತೇ ಇರಲಿಲ್ಲ. ಯಡಿಯೂರಪ್ಪನವರು ಸಾಕಷ್ಟು ಅನುದಾನ ಕೊಡುತ್ತಿದ್ದಾರೆ. ಅದರಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಮಾಡಲಾಗುವುದು. ಹೊಸ ಕಾರ್ಪೋರೇಟರ್ ಗಳು ಏನೇನೋ ಸಿಂಗಾಪುರ್ ಮಾಡುತ್ತೇವೆ ಅಂದುಕೊಳ್ಳಲಿಕ್ಕೆ ಹೋಗಬೇಡಿ. ಜನರು ಏನು ಹೇಳುತ್ತಾರೋ ಅದನ್ನ ತಪ್ಪದೇ ಮಾಡಿ ಎಂದು ಸಲಹೆ ನೀಡಿದರು.
ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೆ ರವೀಂದ್ರನಾಥ್ ಅವರನ್ನ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು.
ಶಾಸಕರಾದ ಮಾಡಾಳ್ ವಿರುಪಾಕ್ಷಪ್ಪ, ಎಸ್.ವಿ. ರಾಮಚಂದ್ರ, ಪ್ರೊ| ಎನ್. ಲಿಂಗಣ್ಣ, ಮಾಜಿ ಶಾಸಕ ಡಾ| ಎ.ಎಚ್. ಶಿವಯೋಗಿಸ್ವಾಮಿ, ಪ್ರೊ. ಸಿ. ನರಸಿಂಹಪ್ಪ ಮಾತನಾಡಿದರು.
ದಾವಣಗೆರೆ ಉತ್ತರ ಬಿಜೆಪಿ ಅಧ್ಯಕ್ಷ ಬಿ.ಜಿ. ಸಂಗಜ್ಜಗೌಡ್ರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಮಾಜಿ ಅಧ್ಯಕ್ಷರಾದ ಶೈಲಜಾ ಬಸವರಾಜ್, ಸಹನಾ ರವಿ, ಮಂಜುಳಾ ಟಿ.ವಿ. ರಾಜು, ಎಸ್.ಎಂ. ವೀರೇಶ್, ತಾಪಂ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ಹಾಗೂ ರತ್ನಮ್ಮ ರವೀಂದ್ರನಾಥ್ ಇತರರು ಇದ್ದರು. ಬಿಜೆಪಿಯ ಹಿರಿಯ ಮುಖಂಡರು, ನಗರಪಾಲಿಕೆಯ ನೂತನ ಸದಸ್ಯರನ್ನ ಅಭಿನಂದಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ