ಅಡಕೆ ಬೆಳೆಗಾರರಿಗಿಲ್ಲ ಬೆಲೆ ಏರಿಕೆ ಲಾಭ


Team Udayavani, Sep 8, 2021, 2:26 PM IST

Areca nut growers benefit from price increases

ಪ್ರಾತಿನಿಧಿಕ ಚಿತ್ರ

„ಎಚ್‌.ಕೆ. ನಟರಾಜ

ದಾವಣಗೆರೆ : ಅಡಕೆ ದರ ದಿನದಿಂದ ದಿನಕ್ಕೆ ಗಗನಮುಖೀಯಾಗುತ್ತಿರುವುದು ಬಯಲುಸೀಮೆಯ ಅಡಕೆ ಬೆಳೆಗಾರರಲ್ಲಿಖುಷಿಮೂಡಿಸಿದೆಯಾದರೂಮಾರಾಟ ಮಾಡಲು ರೈತರ ಬಳಿ ಸಾಕಷ್ಟು ಅಡಕೆಯೇ ಇಲ್ಲ. ಹೀಗಾಗಿ ಗಗನಮುಖೀ ದರ ಬಹುತೇಕ ರೈತರ ಪಾಲಿಗೆ ದೊರಕದಂತಾಗಿದೆ.

ಜಿಲ್ಲೆಯ 50,000 ಎಕರೆ ಇಳುವರಿ ಪ್ರದೇಶ ಸೇರಿದಂತೆ ಒಟ್ಟು 75,000 ಎಕರೆ ಅಡಕೆ ಬೆಳೆಯುವ ಪ್ರದೇಶವಿದೆ. ಪ್ರಸ್ತುತ ಹಂಗಾಮು ಇಲ್ಲದ ಸಮಯ ಇದಾಗಿದ್ದು, ಹಳೆ ಅಡಕೆ ದಾಸ್ತಾನು ಎಲ್ಲ ರೈತರ ಬಳಿ ಇಲ್ಲ. ಕೆಲವೇ ಕೆಲವು ದೊಡ್ಡ ರೈತರ ಬಳಿ ಮಾತ್ರ ಒಂದಿಷ್ಟು ಹಳೆ ಅಡಕೆಯಿದ್ದು ಈ ಸಮಯದಲ್ಲಿ ಹಳೆ ರಾಶಿ ಅಡಕೆ ಕ್ವಿಂಟಲ್‌ಗೆ ಗರಿಷ್ಠ 60,500 ರೂ.ಗೆ ಮಾರಾಟವಾಗಿದೆ. ಹೊಸ ಅಡಕೆ ದೊಡ್ಡ ಪ್ರಮಾಣದಲ್ಲಿ ಇನ್ನೂ ಮಾರುಕಟ್ಟೆ ಪ್ರವೇಶಿಸಿಲ್ಲ. ಮಾರುಕಟ್ಟೆಗೆ ಒಂದಿಷ್ಟು ಹೊಸ ಅಡಕೆ ಬಂದಿದೆಯಾದರೂ ಅದರ ಪ್ರಮಾಣ ತೀರಾ ನಗಣ್ಯ. ಬಂದಿರುವ ಒಂದಿಷ್ಟು ಹೊಸ ಅಡಕೆ ಕ್ವಿಂಟಲ್‌ಗೆ ಗರಿಷ್ಠ 59 ಸಾವಿರ ರೂ. ವರೆಗೂ ಮಾರಾಟವಾಗಿದೆ.

ಜಿಲ್ಲೆಯ ಬಹುತೇಕ ರೈತರು ಬೆಳೆದ ಅಡಕೆ ಇನ್ನೂ ತೋಟದಲ್ಲಿಯೇ ಇದೆ. ಮಳೆ-ತಂಪು ವಾತಾವರಣ ಮುಂದುವರೆದಿರುವುದರಿಂದ ಅಡಕೆ ಮಾರುಕಟ್ಟೆಗೆ ಬರಲು ಇನ್ನೂ ಒಂದರಿಂದ ಒಂದೂವರೆ ತಿಂಗಳಾದರೂ ಬೇಕು. ಇನ್ನು ಹೆಚ್ಚಿನ ದರದ ಆಸೆಗೆ ಬಿದ್ದು ಹಸಿ ಬಿಸಿ ಕಟಾವು ಮಾಡಿ ಮಾರುಕಟ್ಟೆಗೆ ತಂದರೆ ಗುಣಮಟ್ಟ ಇಲ್ಲದ ಕಾರಣಕ್ಕೆ ತಿರಸ್ಕಾರಗೊಳ್ಳುವ ಭಯವೂ ರೈತರನ್ನು ಕಾಡುತ್ತಿದೆ. ಅಡಕೆ ಇಲ್ಲದ ಸಮಯದಲ್ಲಿ ಹೆಚ್ಚಾಗಿರುವ ಈ ದರ ಮುಂದೆ ಮಾರುಕಟ್ಟೆಗೆ ಅಡಕೆ ಬಂದಾಗ ಇನ್ನಷ್ಟು ಏರಿಕೆಯಾಗುತ್ತದೆಯೋ ಇಳಿಕೆಯಾಗುತ್ತದೆಯೋ ಎಂಬ ಆತಂಕ ಬೆಳೆಗಾರರಲ್ಲಿ ಸೃಷ್ಟಿಯಾಗಿದೆ.

ದರ ಏರಿಕೆ ಹಾದಿ: ಕೆಲ ವರ್ಷಗಳ ಕಾಲ ಅಡಕೆ ದರದಲ್ಲಿ ಸ್ಥಿರತೆ ಕಾಯ್ದುಕೊಂಡು ಬರಲಾಗಿತ್ತು. ಕಳೆ‌ದ ಎರಡೂವರೆ ತಿಂಗಳಿಂದ ಅಡಕೆ ದರ ಏರಿಕೆಯತ್ತ ಸಾಗಿದೆ. 35 ರಿಂದ 38 ಸಾವಿರ ಗಡಿಯಲ್ಲಿದ್ದ ಅಡಕೆ ದರ ಒಮ್ಮೆಲೆ 43,000 ರೂ., 45,000 ರೂ., 47,000 ರೂ., 49,000 ರೂ., 51,000 ರೂ., 56,000 ರೂ., 57,000ರೂ., 59,000 ರೂ. ಹೀಗೆ ಏರುತ್ತ ಸಾಗಿ ಈಗ 60,500 ರೂ. ಆಗಿದೆ. ಈ ದರ ದಾಖಲೆಯ ದರವಂತೂ ಅಲ್ಲ. ಏಕೆಂದರೆ 2013ರಲ್ಲಿ ಅಡಕೆ ದರ ಕ್ವಿಂಟಲ್‌ಗೆ 80,000 ರೂ.ಗೆ ಏರಿತ್ತು. ಆದರೆ ಈ ರೀತಿಯ ದಿಢೀರ್‌ ದರ ಏರಿಕೆ ಹೆಚ್ಚು ರೈತರಿಗೆ ಲಾಭ ತಂದುಕೊಡುವುದಿಲ್ಲ. ಈ ರೀತಿಯ ಏರಿಕೆ ಒಮ್ಮೆಲೆ ಇಳಿಕೆಗೂ ಕಾರಣವಾಗಬಹುದು. ಆಗ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುತ್ತಾರೆ. ಆದ್ದರಿಂದ ಅಡಕೆ ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಪ್ರಯತ್ನಿಸಬೇಕು ಎಂಬುದು ಅನುಭವಿ ರೈತರ ಅಭಿಪ್ರಾಯ.

ದರ ಏರಿಕೆ ತಾತ್ಕಾಲಿಕ: ಈಗ ಏರಿಕೆ ಕಂಡಿರುವ ಅಡಕೆ ದರ ತಾತ್ಕಾಲಿಕ ಹಾಗೂ ಕೃತಕ ಎಂಬುದು ಹಲವು ಮಾರುಕಟ್ಟೆ ಪರಿಣತ ರೈತರ ಅಭಿಪ್ರಾಯವಾಗಿದೆ. ಮಾರುಕಟ್ಟೆಯಲ್ಲಿ ಇಳುವರಿ ಕೊರತೆ ಇದ್ದಾಗ ಹಾಗೂ ಭಾರೀ ಬೇಡಿಕೆಯಿದ್ದಾಗ ದರ ಏರಿಕೆ ಸಾಮಾನ್ಯ. ಆದರೆ ಪ್ರಸ್ತುತ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಟ್ರೇಡಸ್‌ ìಗಳಿಂದ ದೊಡ್ಡ ಪ್ರಮಾಣದ ಬೇಡಿಕೆಯೇ ಇಲ್ಲ. ಹೀಗಿದ್ದಾಗ್ಯೂ ದರ ಏರಿಕೆ ಕಂಡಿದೆ ಎಂದರೆ ಇದರ ಹಿಂದೆ ಬೇರೆನೋ ಷಡ್ಯಂತ್ರ ಇರಬಹುದು. ಖರೀದಿದಾರರು ತಮ್ಮಲ್ಲಿ ದಾಸ್ತಾನು ಇರುವ ಅಡಕೆಗೆ ಹೆಚ್ಚಿನ ದರ ಪಡೆಯುವ ಹುನ್ನಾರ ಅಡಗಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎನ್ನುತ್ತಾರೆ ಮಾರುಕಟ್ಟೆಯ ನಾಡಿಮಿಡಿತ ಬಲ್ಲ ಪರಿಣತರು.

ಗೇಣಿ ಕೊಟ್ಟವರಲ್ಲಿ ತಳಮಳ: ಬಯಲುಸೀಮೆ ಭಾಗದಲ್ಲಿ ಹೆಚ್ಚಿನ ರೈತರು ತಮ್ಮ ಅಡಕೆ ತೋಟವನ್ನು ಗೇಣಿ, ಗುತ್ತಿಗೆಗೆ ಕೊಡುತ್ತಾರೆ. ಗೇಣಿ ಅಥವಾ ಗುತ್ತಿಗೆ ಕೊಡುವಾಗ ಅಡಕೆ ದರ35 ಸಾವಿರ ರೂ.ಗಳ ಆಸುಪಾಸು ಇತ್ತು.ಈಗದರಹೆಚ್ಚಾಗಿದ್ದರಿಂದ ತೋಟದ ಮಾಲೀಕರು ಗೇಣಿ, ಗುತ್ತಿಗೆ ಪಡೆದವರಿಂದ ಹೆಚ್ಚಿನ ಹಣ ನಿರೀಕ್ಷಿಸುತ್ತಿದ್ದಾರೆ. ಇತ್ತ ಗೇಣಿ, ಗುತ್ತಿಗೆ ಪಡೆದವರು ದರ ಇಳಿಕೆಯಾಗಿದ್ದರೆ ತೋಟದ ಮಾಲೀಕರು ತಮಗಾಗುವ ನಷ್ಟ ಭರಿಸುತ್ತಿದ್ದರೇ ಎಂದು ವಾದಕ್ಕಿಳಿದಿದ್ದಾರೆ.

ಟಾಪ್ ನ್ಯೂಸ್

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ

ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ

ಕರ್ತವ್ಯ ಲೋಪ: ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕ ರಿಯಾಜ್ ಅಹಮದ್ ಅಮಾನತು

ಕರ್ತವ್ಯ ಲೋಪ: ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕ ರಿಯಾಜ್ ಅಹಮ್ಮದ್ ಅಮಾನತು

1-dvg

Election Campaign: ಮೋದಿಯವರಿಂದ ಮಹಿಳಾ ಶಕ್ತಿಗೆ ಮುನ್ನುಡಿ

Davanagere: ಬಿಜೆಪಿ ಅಸಮಾಧಾನ ತಣಿಸಿದ ಬಿಎಸ್ ವೈ; ರವೀಂದ್ರನಾಥ್ ಗೆ ಚುನಾವಣೆ ಹೊಣೆ

Davanagere: ಬಿಜೆಪಿ ಅಸಮಾಧಾನ ತಣಿಸಿದ ಬಿಎಸ್ ವೈ; ರವೀಂದ್ರನಾಥ್ ಗೆ ಚುನಾವಣೆ ಹೊಣೆ

Gayatri Siddeshwar: ಮೋದಿ ಕೈ ಬಲಪಡಿಸಲು ಬಿಜೆಪಿ ಗೆಲ್ಲಿಸಿ; ಗಾಯತ್ರಿ

Gayatri Siddeshwar: ಮೋದಿ ಕೈ ಬಲಪಡಿಸಲು ಬಿಜೆಪಿ ಗೆಲ್ಲಿಸಿ; ಗಾಯತ್ರಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.