ಉಸ್ತುವಾರಿ ಬಿಟ್ಟುಕೊಡಲು ಸಿದ್ದ
Team Udayavani, Nov 24, 2021, 3:27 PM IST
ಬಳ್ಳಾರಿ: ನಗರ ಶಾಸಕ ಸೋಮಶೇಖರರೆಡ್ಡಿ ಇಚ್ಛೆಯಂತೆ ವಿಭಜಿತ ಬಳ್ಳಾರಿ ಜಿಲ್ಲಾಉಸ್ತುವಾರಿಯನ್ನು ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರಿಗೆ ನೀಡುವಂತೆಸಿಎಂ ಬಸವರಾಜ ಬೊಮ್ಮಾಯಿ ಅವರಿಗೆಈಗಾಗಲೇ ಹೇಳಿದ್ದೇನೆ ಎಂದು ಜಿಲ್ಲಾಉಸ್ತುವಾರಿ, ಪ್ರವಾಸೋದ್ಯಮ ಸಚಿವಆನಂದ್ಸಿಂಗ್ ಹೇಳಿದರು.
ನಗರದ ಡೀಸಿ ಕಚೇರಿಆವರಣದಲ್ಲಿ ವಿಧಾನಪರಿಷತ್ ಚುನಾವಣೆ ನಿಮಿತ್ತಬಿಜೆಪಿ ಅಭ್ಯರ್ಥಿ ಸತೀಶ್ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ದೃಷ್ಟಿಯಿಂದಅವಿಭಜಿತ ಬಳ್ಳಾರಿ ಜಿಲ್ಲೆಯನ್ನು ವಿಭಜನೆಮಾಡಲಾಗಿದೆ. ಹೀಗಾಗಿ ಎರಡುಜಿಲ್ಲೆಗಳು, ಇಬ್ಬರು ಜಿಲ್ಲಾ ಧಿಕಾರಿಗಳುಇರುವುದರಿಂದ ಸಹಜವಾಗಿ ಒಂದಷ್ಟುಒತ್ತಡ ಇದ್ದೇ ಇರುತ್ತದೆ.
ಹಾಗಾಗಿ ಬಳ್ಳಾರಿ ಜಿಲ್ಲೆ ಉಸ್ತುವಾರಿ ಬಿಟ್ಟು ಕೊಡಲುಸಿದ್ಧನಿದ್ದು, ಈಗಾಗಲೇ ಸಿಎಂ ಗಮನಕ್ಕೆತಂದಿದ್ದೇನೆ. ಆದರೆ ಕೆಲ ತಾಂತ್ರಿಕ ಕಾರಣಗಳಿಂದ ವಿಳಂಬವಾಗುತ್ತಿದೆ. ಎರಡೂಜಿಲ್ಲೆಗಳ ಉಸ್ತುವಾರಿ ಸಚಿವನಾಗಿ ನನ್ನಕೆಲಸ ನಾನು ಮಾಡುತ್ತಿದ್ದೇನೆ.ಕೇವಲ ಬಳ್ಳಾರಿಗೆ ಬಂದುಸಭೆಗಳನ್ನು ಮಾಡಿದರಷ್ಟೇ ಜಿಲ್ಲೆಅಭಿವೃದ್ಧಿ ಬಗ್ಗೆ ಆಸಕ್ತಿಯಿದೆಎಂದಲ್ಲ.
ಜಿಲ್ಲೆಯ ಸಮಸ್ಯೆಗಳಬಗ್ಗೆ ಅಧಿ ಕಾರಿಗಳೊಂದಿಗೆಸದಾ ಸಂಪರ್ಕದಲ್ಲಿದ್ದೇನೆ.ರಾಜ್ಯಾ ದ್ಯಂತ ಮಳೆಯಾಗಿ ಬೆಳೆ ನಷ್ಟವಾಗಿದೆ. ಸಿಎಂ ವಿಡಿಯೋ ಕಾನ್#ರೆನ್ಸ್ಮೂಲಕ ಜಿಲ್ಲಾಧಿ ಕಾರಿಗಳಿಗೆ ಅಗತ್ಯಸೂಚನೆಗಳನ್ನು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
Gayathri Siddeshwar: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಜನ್ಮದಿನ ಆಚರಣೆ
Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ
Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು
ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ