ಖೋ ಖೋ ಕ್ರೀಡಾಪಟು ಶ್ರೀನಿವಾಸ್ಗೆ ಸನ್ಮಾನ
: ರಾಜ್ಯ ಖೋ ಖೋ ಸಂಸ್ಥೆ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದ ಓ. ಶ್ರೀನಿವಾಸ್ ಅವರನ್ನು ಅಶೋಕ ನ್ಪೋರ್ಟ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
Team Udayavani, Feb 25, 2021, 3:58 PM IST
ಚಳ್ಳಕೆರೆ: ನಗರದ ಅಶೋಕ ನ್ಪೋರ್ಟ್ಸ್ ಕ್ಲಬ್ನ ಖೋ ಖೋ ತಂಡದ ಆಟಗಾರ ಒ. ಶ್ರೀನಿವಾಸ್ ಅವರು ರಾಜ್ಯ ಖೋ ಖೋ ಸಂಸ್ಥೆಯ ಜಂಟಿ
ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಶೋಕ ನ್ಪೋರ್ಟ್ಸ್ ಕ್ಲಬ್ ವತಿಯಿಂದ ಶ್ರೀನಿವಾಸ್ ಅವರನ್ನು
ಅಭಿನಂದಿಸಿ ಸನ್ಮಾನಿಸಲಾಯಿತು.
ನೂತನ ಜವಾಬ್ದಾರಿಯಲ್ಲಿ ಇನ್ನೂ ಉತ್ತಮವಾಗಿ ಕಾರ್ಯ ನಿರ್ವಹಿಸಿ ಖ್ಯಾತಿ ಗಳಿಸುವಂತೆ ಕ್ಲಬ್ ಕಾರ್ಯದರ್ಶಿ ನಾರಾಯಣರಾವ್ ಮೋಹಿತೆ ಆಶಿಸಿದರು. ಅಶೋಕ ನ್ಪೋರ್ಟ್ಸ್ ಕ್ಲಬ್ ಕಳೆದ ಹಲವಾರು ವರ್ಷಗಳಿಂದ ಯುವ ಆಟಗಾರರನ್ನು ಗುರುತಿಸಿ ಪ್ರೋತ್ಸಾಹಿಸುತ್ತ ಬಂದಿದೆ. ಹಲವಾರು ಆಟಗಾರರು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದ ಓ. ಶ್ರೀನಿವಾಸ್ ಖೋ ಖೋ ಪಂದ್ಯಾವಳಿಯನ್ನು ಹೆಚ್ಚೆಚ್ಚು ಆಯೋಜಿಸಿ ಆಟಗಾರರಿಗೆ ಉತ್ತೇಜನ ನೀಡಬೇಕೆಂದರು. ರಾಜ್ಯ ಖೋ ಖೋ ಸಂಸ್ಥೆಯ
ಜಂಟಿ ಕಾರ್ಯದರ್ಶಿ ಓ. ಶ್ರೀನಿವಾಸ್ ಮಾತನಾಡಿ, ನಾನು ಈ ಮಟ್ಟಕ್ಕೆ ಬೆಳೆಯಲು ಅಶೋಕ ನ್ಪೋರ್ಟ್ಸ್ ಕ್ಲಬ್ ಪ್ರಮುಖ ಕಾರಣ.
ನಾರಾಯಣರಾವ್ ಅವರ ಮಾರ್ಗದರ್ಶನದಲ್ಲಿ ನಾನು ಈ ಸಾಧನೆ ಮಾಡಿದ್ದೇನೆ. ಮುಂಬರುವ ದಿನಗಳಲ್ಲಿ ಖೋ ಖೋ ಪಂದ್ಯಾವಳಿಯನ್ನು ಹೆಚ್ಚೆಚ್ಚು ಆಯೋಜಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕೆ.ಎಂ. ಯತೀಶ್, ಪಾಪಣ್ಣ, ಮಂಜುನಾಥ, ಮರವಾಯಿ ಶ್ರೀನಿವಾಸ್, ಶ್ರೀಧರ್, ಅನಿಲ್ ಕುಮಾರ್, ರಾಜೇಶ್, ಸಿದ್ದೇಶ್, ನಾಗರಾಜು, ಶಿವಕುಮಾರ್, ವಿ. ವೀರೇಶ್, ತಿಮ್ಮಣ್ಣ ಮತ್ತಿತರರು ಉಪಸ್ಥಿತರಿದ್ದರು.
ಓದಿ : ವಿಟ್ಲದಲ್ಲಿ ಬೈಕ್- ಲಾರಿ ನಡುವೆ ಭೀಕರ ಅಪಘಾತ: ಓರ್ವ ಸಾವು, ಮತ್ತೋರ್ವ ಗಂಭೀರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ