ರಂಗುರಂಗಾ¨ ದೇವನಗರಿ


Team Udayavani, Mar 22, 2019, 6:14 AM IST

dvg-1.jpg

ದಾವಣಗೆರೆ: ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಿಡೀ ಗುರುವಾರ ಬಣ್ಣಗಳಲ್ಲಿ ಮುಳುಗಿ ಹೋಗಿತ್ತು!.
ಹೋಳಿ ಹಿನ್ನೆಲೆಯಲ್ಲಿ ದಾವಣಗೆರೆಯ ಪ್ರತಿಯೊಂದು ಪ್ರಮುಖ ರಸ್ತೆ, ವೃತ್ತ, ಮನೆ, ವಠಾರ, ಗಲ್ಲಿ, ಬಯಲು… ಹೀಗೆ ಎಲ್ಲಿ ನೋಡಿದರೂ ಬಣ್ಣ ಬಣ್ಣ. ಮಧ್ಯಾಹ್ನ 1 ಗಂಟೆಯ ನಂತರ ಅಬ್ಬರದ ಬಣ್ಣದ ಎರೆಚಾಟ, ಕೊರಚಾಟ, ಕಿರಿಚಾಟ, ಕೇಕೆ, ಡ್ಯಾನ್ಸ್‌ ಎಲ್ಲ ನಿಂತ ನಂತರವೂ ರಸ್ತೆಗಳಿಗೆ ಏನಾದರೂ ಬಣ್ಣ ಬಳೆಯಲಾಗಿದೆಯೇ ಎನ್ನುವಂತೆ ಕಣ್ಣಿಗೆ ಕಾಣಿಸುವಷ್ಟು ದೂರವೂ ಬಣ್ಣ ಕಂಡು ಬಂದಿದ್ದು ಹೋಳಿ ಹಬ್ಬದ ಬಣ್ಣದಾಟಕ್ಕೆ ಸಾಕ್ಷಿಯಾಗಿತ್ತು. 

ಬುಧವಾರ ಗಲ್ಲಿ ಗಲ್ಲಿಯಲ್ಲಿ ಕಾಮದಹನ ನಡೆಯಿತು. ಕಾಮಣ್ಣನ ಮಕ್ಕಳು…. ಎಂಬ ಕೂಗು ಎಲ್ಲಾ ಕಡೆ ಮಾರ್ದನಿಸಿದ್ದು ಸಾಮಾನ್ಯವಾಗಿತ್ತು. ಈಗಿನ ಕಾಲದಲ್ಲೂ ಕಾಮಣ್ಣನ ಸುಡುವಾಗ ಬೆಂಕಿ ಕದಿಯುವುದು ನಿಂತಿಲ್ಲ ಎನ್ನುವುದಕ್ಕೆ ರಾಂ ಆ್ಯಂಡ್‌ ಕೋ ವೃತ್ತ, ವಿನೋಬ ನಗರ ಇತರೆ ಭಾಗದಲ್ಲಿ ಕಂಡು ಬಂದ ಯುವಕರ ಗುಂಪುಗಳ ನಡುವಿನ ಪೈಪೋಟಿ ಸಾಕ್ಷಿಯಾಗಿತ್ತು. 

ಒಂದು ಗುಂಪಿನವರು ಕಾಮಣ್ಣನ ಸುಡುವ ಬೆಂಕಿಯನ್ನ ಕಟ್ಟಿಗೆಯೊಂದಕ್ಕೆ ಹೊತ್ತಿಸಿಕೊಂಡು ಮತ್ತೂಂದು ಕಡೆ ಕಾಮಣ್ಣನ ಸುಡುವುದಕ್ಕೆ ಇನ್ನಿಲ್ಲದ ಕಸರತ್ತು ನಡೆಸುವುದು ಕಂಡು ಬಂದಿತು. ಹೇಗಾದರೂ ಸರಿಯೇ ಬೆಂಕಿ ತೆಗೆದುಕೊಂಡು ಹೋಗಬೇಕು ಎಂದು ಕೆಲವರು, ಬೆಂಕಿ ತೆಗೆದುಕೊಂಡು ಹೋಗಲಿಕ್ಕೆ ಬಿಡಲೇಬಾರದು ಎಂದು ಇನ್ನು ಕೆಲವರು ಹವಣಿಸುತ್ತಿದ್ದರು.ಆ ನಡುವೆಯೂ ಬೆಂಕಿ ತೆಗೆದುಕೊಂಡು ಬೈಕ್‌ಗಳಲ್ಲಿ ರೊಯ್ಯನೆ… ಜೀವಭಯವೂ ಇಲ್ಲದೆ ಅತಿಯಾದ ವೇಗದಿಂದ ಹೋಗಿ ಬೆಂಕಿ ಹಚ್ಚಿ, ಕಾಮಣ್ಣನ ಸುಟ್ಟು ಖುಷಿ ಪಡುವುದು ಕಂಡು ಬಂದಿತು.

ಗುರುವಾರ ಬೆಳಗ್ಗೆಯಿಂದಲೇ ಬಣ್ಣದ ಎರೆಚಾಟ ಪ್ರಾರಂಭವಾಗಿತ್ತು. ಸಣ್ಣ ಮಕ್ಕಳು, ವಯಸ್ಕರು, ಬಾಲಕಿಯರು, ಯುವತಿಯರು, ಮಹಿಳೆಯರು, ವಯೋವೃದ್ಧರು… ಹೀಗೆ ಪ್ರತಿಯೊಬ್ಬರು ಬಣ್ಣ ಹಚ್ಚುತ್ತಾ, ಹ್ಯಾಪ್ಪಿ ಹೋಳಿ… ಎಂದು ಶುಭಾಶಯ ಹೇಳುತ್ತಾ, ಸಂಭ್ರಮಿಸಿದರು.

ಪೊಲೀಸ್‌ ಇಲಾಖೆಯು ಮೊಟ್ಟೆ ಒಡೆಯುವುದು, ಸೈಲೆನ್ಸರ್‌ ತೆಗೆದು ಬೈಕ್‌ ರೈಡಿಂಗ್‌, ಮೂವರು ಸವಾರಿ ಮಾಡುವುದು, ಅಸಭ್ಯವಾಗಿ ವರ್ತಿಸುವುದನ್ನ ನಿರ್ಬಂಧಿಸಿತ್ತಾದರೂ ಅವು ಎಲ್ಲವೂ ಯಾವುದೇ ಮುಲಾಜಿಲ್ಲದೆ ನಡೆದವು. ಭಾರೀ ಹಾರ್ನ್ ಮಾಡುತ್ತಾ, ಮೂವರು, ನಾಲ್ವರು ಒಂದೇ ಬೈಕ್‌ನಲ್ಲಿ ಸಂಚಾರ ಮಾಡುತ್ತಾ, ಹ್ಯಾಪಿ ಹೋಳಿ ಎಂದು ಕೂಗುವುದು, ಪೀಪಿ ಊದುವುದು, ಭಯ ಹುಟ್ಟುವಂತೆ ವರ್ತಿಸುವುದು ಸಾಮಾನ್ಯವಾಗಿತ್ತು. 

ಅರುಣಾ ಚಿತ್ರಮಂದಿರ ವೃತ್ತ ಇತರೆಡೆ 41 ಬೈಕ್‌, 1 ಜೀಪ್‌ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಯಿತು ಹೋಳಿ ಹಬ್ಬದ ಪ್ರಮುಖ ಐಕಾನ್‌ ರಾಂ ಆ್ಯಂಡ್‌ ಕೋ ವೃತ್ತದಲ್ಲಿ ಜನಸಾಗರವೇ ಕಂಡು ಬಂದಿತು. ಬಣ್ಣ ಹಾಕುತ್ತಾ,ಹೆಜ್ಜೆ ಹಾಕುತ್ತಿದ್ದ ಸಾವಿರಾರು ಸಂಖ್ಯೆಯಲ್ಲಿ ಯುವಕರ ಸಂಭ್ರಮ ಮೇರೆ ಮೀರಿತ್ತು. ಮೈ ಮೇಲಿನ ಅಂಗಿ, ಬನಿಯನ್‌ ಕಿತ್ತು ವಿದ್ಯುತ್‌ ತಂತಿಗಳಿಗೆ ಎಸೆಯುವ ಮೂಲಕ ಖುಷಿ ಪಟ್ಟರು.
 
ತಮ್ಮ ನೆಚ್ಚಿನ ಗೆಳೆಯರ ಅಂಗಿ, ಬನಿಯನ್‌ ಕಿತ್ತೆಸೆದು, ಕರೆಂಟ್‌ ಲೈನ್‌ಗೆ ಜೋತು ಬೀಳುವಂತೆ ಹಾಕಿ, ಸಂತೋಷ ಪಡುವಲ್ಲಿ ಪೈಪೋಟಿಗೆ ಬಿದ್ದರು. ತಪ್ಪಿಸಿಕೊಂಡು ಓಡಿ ಹೋದರೂ ಬೆನ್ನಟ್ಟಿ ಹಿಡಿದು, ಅಂಗಿ, ಬನಿಯನ್‌ ಕಿತ್ತು ಹಾಕುವ ಮೂಲಕ ಸಂತೋಷಪಟ್ಟರು. ಗುಂಪು ಗುಂಪಾಗಿ ಹೆಜ್ಜೆ ಹಾಕುತ್ತಿದ್ದವರು ಏಕಾಏಕಿ ಯಾರನ್ನಾದರೂ ಒಬ್ಬರನ್ನ ಮೇಲಕ್ಕೆ ತೂರಿ, ಅವರನ್ನ ಹಿಡಿದುಕೊಳ್ಳುವುದು ಕಂಡು ಬಂದಿತು. ಅದೇ ರೀತಿ ಪ್ರಯತ್ನದಲ್ಲಿ ಯುವಕನೊಬ್ಬ ಕ್ಷಣಾರ್ಧದಲ್ಲಿ ಅಪಾಯಕ್ಕೆ ತುತ್ತಾಗುವುದರಿಂದ ಬಚಾವ್‌ ಆದ. ಬ್ಯಾರಿಕೇಡ್‌ ಮೇಲೆ ನಿಂತು ಡ್ಯಾನ್ಸ್‌ ಮಾಡಿದರು. ಆಯೋಜಕರು ಪರಿ ಪರಿಯಾಗಿ ಬೇಡಿಕೊಂಡರೂ ಜಪ್ಪಯ್ಯ… ಎನ್ನುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ರಾಂ ಆ್ಯಂಡ್‌ ಕೋ ವೃತ್ತದ ಗೆಳೆಯರ ಸಂಘದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿನಿಮಾವೊಂದರ ಆಡಿಯೋ ಸಹ ಬಿಡುಗಡೆಗೊಳಿಸಲಾಯಿತು.

ಯುವತಿಯರು, ಮಹಿಳೆಯರಿಗಾಗಿಯೇ ಬಣ್ಣ ಹಾಕುವುದು, ನೃತ್ಯ ಮಾಡುವುದಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ರಾಂ ಆ್ಯಂಡ್‌ ಕೋ ವೃತ್ತ, ಚರ್ಚ್‌ ಸಮೀಪ, ಯೂನಿಟಿ ಹೆಲ್ತ್‌ ಸೆಂಟರ್‌ ಸಮೀಪ ಸಾಗರೋಪಾದಿಯಲ್ಲಿ ಯುವಕ-ಯುವತಿಯರು ಕಂಡು ಬಂದರು. ರಾಂ ಆ್ಯಂಡ್‌ ಕೋ ವೃತ್ತ, ಅಂಬೇಡ್ಕರ್‌ ವೃತ್ತ, ಲಾಯರ್‌ ರಸ್ತೆ, ಗಾಂಧಿನಗರ, ವಿನೋಬ ನಗರ 2ನೇ ಮುಖ್ಯ ರಸ್ತೆ, 3ನೇ ಮುಖ್ಯ ರಸ್ತೆ, ಕೆಟಿಜೆ ನಗರ, ನಿಟುವಳ್ಳಿ, ವಿದ್ಯಾನಗರ, ಸಿದ್ದವೀರಪ್ಪ ಬಡಾವಣೆ, ಶಾಮನೂರು ರಸ್ತೆ, ಜಯನಗರ, ಮಂಡಿಪೇಟೆ, ಗಡಿಯಾರ ಕಂಬ, ಬಸವರಾಜಪೇಟೆ, ಚೌಕಿಪೇಟೆ… ಹೀಗೆ ಎಲ್ಲಾ ಕಡೆ ಹೋಳಿಯ ಸಂಭ್ರಮ ಕಂಡು ಬಂದಿತು.

ಮೋದಿ…. ಮೋದಿ…
ರಾಂ ಆ್ಯಂಡ್‌ ಕೋ ವೃತ್ತದಲ್ಲಿ ಹೋಳಿ ಸಂಭ್ರಮದ ನಡುವೆಯೇ ನೂರಾರು ಯುವಕರ ಗುಂಪು ಮೋದಿ… ಮೋದಿ… ಎಂದು ಹರ್ಷೋದ್ಘಾರ ಮಾಡಿದರು. ಈ ಬಾರಿ ಮೋದಿ… ಮುಂದೆಯೂ ಮೋದಿ… ಎಂದು ಕೂಗಿದರು. ಜೈ ಘೋಷ ಹಾಕಿದರು.  ಬನಾಯೆಂಗೆ ಮಂದಿರ್‌… ಹಾಡು ಕೇಳಿ ಬಂದಾಗ ಭಾರೀ ಸಂಭ್ರಮದೊಂದಿಗೆ ಹೆಜ್ಜೆ ಹಾಕಿದರು.

ನಾಲೆಯಲ್ಲಿ ಮುಳುಗಿ ಯುವಕ ಸಾವು
ದಾವಣಗೆರೆ: ಹೋಳಿ ಬಣ್ಣದಾಟದ ನಂತರ ಸ್ನಾನಕ್ಕೆಂದು ತೋಳಹುಣಸೆ ಬಳಿ ಭದ್ರಾ ನಾಲೆಗೆ ಇಳಿದಿದ್ದ ಸಂಜಯ ಎಂಬ ಯುವಕ (22) ಕೊಚ್ಚಿಹೋಗಿದ್ದಾನೆ. ಸ್ವಲ್ಪ ದೂರದಲ್ಲಿ ಶವ ಪತ್ತೆಯಾಗಿದೆ. ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

Davanagere: ನಾಮಪತ್ರ ಸಲ್ಲಿಸಿದ ಬಿಜೆಪಿ- ಕಾಂಗ್ರೆಸ್ ಅಭ್ಯರ್ಥಿಗಳು

Davanagere: ನಾಮಪತ್ರ ಸಲ್ಲಿಸಿದ ಬಿಜೆಪಿ- ಕಾಂಗ್ರೆಸ್ ಅಭ್ಯರ್ಥಿಗಳು

Lok Sabha Election: ಜಗಳೂರನ್ನು ಬರಪೀಡಿತ ಪಟ್ಟಿಯಿಂದ ಹೊರ ತರುವೆ: ಗಾಯತ್ರಿ ಸಿದ್ದೇಶ್ವರ

Lok Sabha Election: ಜಗಳೂರನ್ನು ಬರಪೀಡಿತ ಪಟ್ಟಿಯಿಂದ ಹೊರ ತರುವೆ: ಗಾಯತ್ರಿ ಸಿದ್ದೇಶ್ವರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.