ಮತಾಂತರ ನಿಷೇಧ ಮಸೂದೆ ವಿರೋಧಿಸಿ ಪ್ರತಿಭಟನೆ
Team Udayavani, Nov 24, 2021, 3:13 PM IST
ದಾವಣಗೆರೆ: ರಾಜ್ಯ ಸರ್ಕಾರ ಮಂಡಿಸಲುಹೊರಟಿರುವ ಮತಾಂತರ ನಿಷೇಧಮಸೂದೆ ವಿರೋಧಿಸಿ ಮಂಗಳವಾರ ಜಿಲ್ಲಾಕ್ರಿಶ್ಚಿಯನ್ ವೆಲ್ಫೇರ್ ಅಸೋಸಿಯೇಷನ್ನೇತೃತ್ವದಲ್ಲಿ ಧಾರ್ಮಿಕ ಮುಖಂಡರು, ಕ್ರೈಸ್ತಸಮುದಾಯದವರು ನಗರದ ಜಿಲ್ಲಾಧಿಕಾರಿಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಮತಾಂತರ ನಿಷೇಧಮಸೂದೆ ಮಂಡಿಸಿ ಕಾನೂನು ಜಾರಿಮಾಡಲು ಹೊರಟಿರುವುದು ಮುಂದಿನದಿನಗಳಲ್ಲಿ ಕ್ರೈಸ್ತ ಸಮುದಾಯದ ಮೇಲೆಪರಿಣಾಮ ಉಂಟು ಮಾಡಲಿದ್ದು,ಅನಾಹುತಕ್ಕೂ ಕಾರಣವಾಗಲಿದೆ. ಹಾಗಾಗಿರಾಜ್ಯ ಸರ್ಕಾರದ ಪ್ರಸ್ತಾಪಿತ ಮತಾಂತರನಿಷೇಧ ಕಾಯ್ದೆಗೆ ತೀವ್ರ ವಿರೋಧ ಇದೆ.
ಯಾವುದೇ ಕಾರಣಕ್ಕೂ ಮತಾಂತರ ನಿಷೇಧಮಸೂದೆಯನ್ನಾಗಲಿ, ಕಾಯ್ದೆಯನ್ನಾಗಿಜಾರಿಗೊಳಿಸಲೇಬಾರದು ಎಂದುಒತ್ತಾಯಿಸಿದರು.ವಿಧಾನಸಭೆ ಅಧಿವೇಶನದಲ್ಲಿಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್,ಕ್ರೈಸ್ತ ಮಿಷನರಿಗಳು ವ್ಯಾಪಕವಾಗಿ ಮತಾಂತರನಡೆಸುತ್ತಿರುವುದನ್ನು ತಡೆಯಲು ಹೋದವರವಿರುದ್ಧ ಜಾತಿ ನಿಂದನೆ, ಅತ್ಯಾಚಾರ ಪ್ರಕರಣದಾಖಲಿಸುತ್ತಿದ್ದಾರೆ ಎಂದು ಬೇಜವಾಬ್ದಾರಿಹೇಳಿಕೆ ನೀಡಿರುವುದು ಸಮುದಾಯದಬಾಂಧವರಿಗೆ ಅಘಾತ ಉಂಟು ಮಾಡಿದೆ.ಶಾಸಕರು ಈ ರೀತಿ ಹೇಳಿಕೆ ನೀಡಿ ರಾಜ್ಯದಲ್ಲಿಕೋಮುಗಲಭೆಗೆ ಪ್ರಚೋದನೆ ನೀಡಿ ಶಾಂತಿಕದಡಲು ಪ್ರಯತ್ನಿಸಿರುವುದು ಅತ್ಯಂತಖಂಡನೀಯ ಎಂದು ದೂರಿದರು.
ಶಾಂತಿಪ್ರಿಯರಾದ ಕ್ರೈಸ್ತರು ಯಾರನ್ನೂಬಲವಂತವಾಗಿ ಮತಾಂತರ ಮಾಡಿಲ್ಲ.ನೆಲದ ಕಾನೂನಿನಂತೆ ಬದುಕುತ್ತಿರುವಕ್ರೈಸ್ತರು ಯಾವುದೇ ಅನ್ಯ ಧರ್ಮಿಯರಮೇಲೆ ದಾಳಿ ನಡೆಸಿರುವ ಪುರಾವೆಗಳಿಲ್ಲ.ಆದರೂ ಕೆಲವರು ಅನಗತ್ಯವಾಗಿ ಸುಳ್ಳುಆಪಾದನೆ ಮಾಡುತ್ತಿರುವುದು ಸರಿಯಲ್ಲ.ರಾಜ್ಯ ಸರ್ಕಾರ ಅಧಿಕೃತ, ಅನಧಿಕೃತ ಚಚ್ìಗಳ ದಾಖಲೆಗಳನ್ನು ಸರ್ವೆà ಮಾಡಲುಸಮಿತಿ ರಚಿಸಿರುವುದು ಸರಿಯಾದಕ್ರಮ ಅಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ಅವೈಜ್ಞಾನಿಕಅದೇಶವನ್ನು ನೆಪವಾಗಿಸಿಕೊಂಡು ಕೆಲಸಂಘಟನೆಗಳು ಉದ್ದೇಶಪೂರ್ವಕವಾಗಿಯೇಸಮುದಾಯದ ಪ್ರಾರ್ಥನಾ ಮಂದಿರಮತ್ತು ಪಾದ್ರಿಗಳ ಮೇಲೆ ಹಲ್ಲೆ ಮಾಡಿಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿವೆ.ರಾಜ್ಯ ಸರ್ಕಾರ ಸದನದಲ್ಲಿ ಮತಾಂತರನಿಷೇಧ ಮಸೂದೆ ಮಂಡಿಸಿ ಕಾನೂನುಜಾರಿಗೊಳಿಸಬಾರದು ಮತ್ತು ಚರ್ಚ್ಗಳಿಗೆಅಕ್ರಮವಾಗಿ ಪ್ರವೇಶ ಮಾಡಿ ಪುಂಡಾಟಿಕೆಮಾಡುವಂತಹ ಸಂಘಟನೆಗಳಿಗೆ ಕಡಿವಾಣಹಾಕಬೇಕು ಎಂದು ಒತ್ತಾಯಿಸಿದರು.ಫಾ| ಡಾ. ಅಂತೋಣಿ ಪೀಟರ್,ಫಾ| ಪ್ರೇಮ್ಕುಮಾರ್, ರಾಜಶೇಖರ್,ಇಮ್ಯಾನುವೆಲ್, ಕರುಣಾಕರನ್,ಜೈಕುಮಾರ್, ಚಂದ್ರು ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ
ಕರ್ತವ್ಯ ಲೋಪ: ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕ ರಿಯಾಜ್ ಅಹಮ್ಮದ್ ಅಮಾನತು
Election Campaign: ಮೋದಿಯವರಿಂದ ಮಹಿಳಾ ಶಕ್ತಿಗೆ ಮುನ್ನುಡಿ
Davanagere: ಬಿಜೆಪಿ ಅಸಮಾಧಾನ ತಣಿಸಿದ ಬಿಎಸ್ ವೈ; ರವೀಂದ್ರನಾಥ್ ಗೆ ಚುನಾವಣೆ ಹೊಣೆ
Gayatri Siddeshwar: ಮೋದಿ ಕೈ ಬಲಪಡಿಸಲು ಬಿಜೆಪಿ ಗೆಲ್ಲಿಸಿ; ಗಾಯತ್ರಿ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ