ಕೋವಿಡ್‌ ಪತ್ರದ ಚಿಕ್ಕ ಕಾರ್ಡ್‌ಗೆ ಡಿಮ್ಯಾಂಡ್‌


Team Udayavani, Dec 9, 2021, 1:50 PM IST

covid news

ದಾವಣಗೆರೆ: ನಿಮ್ಮ ಕಿಸೆ ಇಲ್ಲವೇ ಬ್ಯಾಗ್‌ನಲ್ಲಿ ಎಟಿಎಂಕಾರ್ಡ್‌, ಆಧಾರ್‌ ಕಾರ್ಡ್‌, ಪ್ಯಾನ್‌ಕಾರ್ಡ್‌, ಓಟರ್‌ಕಾರ್ಡ್‌, ಐಡೆಂಟಿಟಿ ಕಾರ್ಡ್‌ ಸೇರಿದಂತೆ ಇನ್ನಿತರ ಅಗತ್ಯಕಾರ್ಡ್‌ಗಳಿದ್ದರೆ ಅವುಗಳ ಜತೆಗೆ ಇನ್ನು ಮುಂದೆ ಕೋವಿಡ್‌ಕಾರ್ಡನ್ನೂ ಇಟ್ಟುಕೊಳ್ಳಿ!ಹೌದು, ಈಗ ಎಲ್ಲ ಅತ್ಯವಶ್ಯಕ ಕಾರ್ಡ್‌ಗಳ(ಗುರುತಿನಚೀಟಿ) ಜತೆಗೆ ಕೋವಿಡ್‌ ಕಾರ್ಡ್‌ಗೂ (ಕೋವಿಡ್‌ಲಸಿಕೆ ಪ್ರಮಾಣಪತ್ರ) ಬೇಡಿಕೆ ಬಂದಿದೆ. ಇದು ಸಹಅತ್ಯವಶ್ಯಕ ದಾಖಲೆಗಳ ಸಾಲಿಗೆ ಈಗಷ್ಟೇ ಸೇರಿಕೊಳ್ಳುತ್ತಿದೆ.

ಈದಾಖಲೆಯೂ ಈಗ ಚಿಕ್ಕ ಕಾರ್ಡ್‌ ಸ್ವರೂಪ ಪಡೆದುಕೊಂಡುಎಲ್ಲರಿಗೂ ಹೆಚ್ಚು ಆಪ್ತವಾಗುತ್ತಿರುವುದು ವಿಶೇಷ.ದೇಶದ ನಾಗರಿಕರೆಲ್ಲರೂ ಕೊರೊನಾ ವೈರಸ್‌ನಿಂದರಕ್ಷಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಕೋವಿಡ್‌ ಲಸಿಕೆಎರಡು ಡೋಸ್‌ ಪಡೆಯುವುದನ್ನು ಹಾಗೂ ಸಾರ್ವಜನಿಕವಲಯದಲ್ಲಿ ಹಲವು ವ್ಯವಹಾರ, ಪ್ರವೇಶಕ್ಕೆ ಕೋವಿಡ್‌ಲಸಿಕಾ ಪ್ರಮಾಣಪತ್ರ ಪ್ರದರ್ಶಿಸುವುದನ್ನು ಸರ್ಕಾರಕಡ್ಡಾಯಗೊಳಿಸಿದೆ.

ಹೀಗಾಗಿ ಜನರು ಈಗ ಕೋವಿಡ್‌ಲಸಿಕಾ ಪ್ರಮಾಣಪತ್ರವನ್ನು ಚಿಕ್ಕ ಕಾರ್ಡ್‌ ರೂಪದಲ್ಲಿಸುಲಭವಾಗಿ ಇಟ್ಟುಕೊಳ್ಳಲು ಮುಂದಾಗಿದ್ದರಿಂದಲಸಿಕಾಕರಣ ಪ್ರಮಾಣಪತ್ರದ ಚಿಕ್ಕ ಕಾರ್ಡ್‌ಗೆ ಭಾರೀಬೇಡಿಕೆ ಬಂದಿದೆ.ಪ್ರಸ್ತುತ ಅನೇಕರು ತಾವು ಕೋವಿಡ್‌ ಲಸಿಕೆ ಪಡೆದಪ್ರಮಾಣಪತ್ರವನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್‌ಮಾಡಿಕೊಂಡು ಕಾಗದದ ಮುದ್ರಣ ಪ್ರತಿ ಇಟ್ಟುಕೊಂಡುಓಡಾಡುತ್ತಿದ್ದಾರೆ. ಈ ಕಾಗದದ ಪ್ರತಿ ಜೇಬಲ್ಲಿ, ಬ್ಯಾಗಲ್ಲಿ ಮಡಚಿಇಟ್ಟುಕೊಂಡರೆ ಎರಡೂ¾ರು ದಿನಗಳಲ್ಲಿ ಹರಿದುಹೋಗುತ್ತದೆ.ನೀರು ಬಿದ್ದರಂತೂ ಹರಿದೇ ಹೋಗುತ್ತದೆ.

ಪದೇ ಪದೇಪ್ರಮಾಣಪತ್ರ ಮುದ್ರಿಸಿಕೊಟ್ಟುಕೊಳ್ಳಬೇಕಾಗುತ್ತದೆ. ಈಸಮಸ್ಯೆಗೆ ಪರಿಹಾರವೆಂಬಂತೆ ಅನೇಕ ಸೈಬರ್‌ ಸೆಂಟರ್‌ಗಳು, ಸಾಮಾನ್ಯ ಸೇವಾ ಕೇಂದ್ರದವರು ಕೋವಿಡ್‌ ಲಸಿಕಾಪ್ರಮಾಣಪತ್ರಗಳನ್ನು ಚಿಕ್ಕ ಕಾರ್ಡ್‌ಗಳನ್ನಾಗಿ ಮಾಡಿಕೊಡುವಹೊಸ ಉದ್ಯೋಗ ಹುಡುಕಿಕೊಂಡಿದ್ದು ಅವರ ವ್ಯಾಪಾರಕ್ಕೆಹೊಸ ಉತ್ತೇಜನ ಸಿಕ್ಕಂತಾಗಿದೆ.ಕಾರ್ಡ್‌ ಹೇಗೆ ಮಾಡುತ್ತಾರೆ?: ಸಾಮಾನ್ಯವಾಗಿ ಮತದಾರರಚೀಟಿ, ಆಧಾರ್‌ ಚೀಟಿಗಳನ್ನು ಸಣ್ಣ ಕಾರ್ಡ್‌ ರೀತಿಯಲ್ಲಿಮಾಡಿಕೊಳ್ಳಲು ಸಾರ್ವಜನಿಕರಿಗೆ ಅನುಕೂಲವಾಗುವಂತೆಆಯಾ ಅಧಿಕೃತ ಸಂಸ್ಥೆ, ಇಲಾಖೆಗಳಿಂದಲೇ ಚಿಕ್ಕದಾದಮಾಹಿತಿ ಪತ್ರವನ್ನೂ ನೀಡಿವೆ. ಅದನ್ನು ಕತ್ತರಿಸಿ ಇಲ್ಲವೇಇನ್ನೊಮ್ಮೆ ಮುದ್ರಿಸಿಕೊಂಡು ಲ್ಯಾಮಿನೇಶನ್‌ ಅಥವಾಪ್ಲಾಸ್ಟಿಕ್‌ ಕಾರ್ಡ್‌ಗಳನ್ನಾಗಿ ಮಾಡಿಕೊಂಡು ಇಟ್ಟುಕೊಳ್ಳಲು ಅನುಕೂಲವಾಗಿದೆ.

ಆದರೆ ಕೋವಿಡ್‌ ಲಸಿಕಾಪ್ರಮಾಣಪತ್ರದಲ್ಲಿ ಗುರುತಿನ ಕಾರ್ಡ್‌ ಮಾದರಿಯಲ್ಲಿವಿವರ ನೀಡುವ ಅವಕಾಶವನ್ನು ಕೇಂದ್ರ ಆರೋಗ್ಯ ಇಲಾಖೆಮಾಡಿಕೊಟ್ಟಿಲ್ಲ. ಇಡೀ ಪ್ರಮಾಣಪತ್ರವನ್ನು ಲ್ಯಾಮಿನೇಶನ್‌ಮಾಡಿದರೆ ಅದೊಂದು ದೊಡ್ಡ ಎ*4 ಅಳತೆಯ ಕಾರ್ಡ್‌ಆಗುತ್ತದೆ. ಅದನ್ನು ಎಲ್ಲೆಂದರಲ್ಲಿ ಸುಲಭವಾಗಿ ಇಟ್ಟುಕೊಂಡುಓಡಾಡಲು ಆಗದು. ಈ ಸಮಸ್ಯೆಗೆ ಪರಿಹಾರವಾಗಿಸೈಬರ್‌, ಸಾಮಾನ್ಯ ಸೇವಾ ಕೇಂದ್ರದವರು ಕೋವಿಡ್‌ಪ್ರಮಾಣಪತ್ರದಲ್ಲಿರುವ ಎಲ್ಲ ಮಾಹಿತಿ ನಕಲು ಮಾಡಿಟ್ಟುಚಿಕ್ಕ ಕಾರ್ಡ್‌ ಗಾತ್ರದಲ್ಲಿ ಕೋವಿಡ್‌ ಲಸಿಕಾ ಪ್ರಮಾಣಪತ್ರಮಾಡಿಕೊಡಲು ಮುಂದಾಗಿದ್ದು ಈ ಕಾರ್ಡ್‌ಗಳು ಹೆಚ್ಚುಜನರನ್ನು ಸೆಳೆಯುತ್ತಿವೆ.

ಚಿಕ್ಕ ಕಾರ್ಡ್‌ ದೊಡ್ಡ ಲಾಭ: ಸೈಬರ್‌, ಸಾಮಾನ್ಯ ಸೇವಾಕೇಂದ್ರದವರು ಮಾಡಿಕೊಡುವ ಈ ಚಿಕ್ಕ ಗಾತ್ರದ ಕೋವಿಡ್‌ಕಾರ್ಡ್‌ ಅನ್ನು ಕೋವಿಡ್‌ ಲಸಿಕಾ ಪ್ರಮಾಣಪತ್ರದ ದೊಡ್ಡಪತ್ರದ ಬದಲಾಗಿ ಅಗತ್ಯವಿರುವಲ್ಲಿ ಬಳಸಬಹುದಾಗಿದೆ.ಇದರಲ್ಲಿ ಕೋವಿಡ್‌ ಪ್ರಮಾಣ ಪತ್ರದಲ್ಲಿರುವಂತೆ ಎಲ್ಲ ಮಾಹಿತಿಅಂದರೆ ಹೆಸರು, ಜನ್ಮದಿನಾಂಕ, ಲಸಿಕೆ ಯಾವುದು, ಯಾವಾಗಹಾಕಿಸಿಕೊಂಡಿದ್ದಾರೆ ಎಂಬ ವಿವರವನ್ನು ಯಥಾವತ್ತಾಗಿಮುದ್ರಿಸುವ ಜತೆಗೆ ಕೋವಿಡ್‌ ಪ್ರಮಾಣ ಪತ್ರದಲ್ಲಿರುವಕ್ಯೂಆರ್‌ ಕೋಡ್‌ ಕಡ್ಡಾಯವಾಗಿ ಮುದ್ರಿಸಲೇಬೇಕಾಗಿದೆ.ಯಾವುದೇ ಸ್ಥಳದಲ್ಲಿ ಈ ಕಾರ್ಡ್‌ ತೋರಿಸಿದಾಗ ಅವರುಸಂಶಯ ಬಂದರೆ ಕ್ಯೂಆರ್‌ ಕೋಡ್‌ ಸ್ಕಾÂನ್‌ ಮಾಡಿಪ್ರಮಾಣಪತ್ರವನ್ನು ಖಚಿತಪಡಿಸಿಕೊಳ್ಳಬಹುದಾಗಿದೆ.ಒಟ್ಟಾರೆ ಹತ್ತು ಹಲವು ಅವಶ್ಯಕ ದಾಖಲೆಗಳ ಕಾರ್ಡ್‌ಗಳಸಾಲಿಗೆ ಈಗ ಕೋವಿಡ್‌ ಕಾರ್ಡ್‌ ಸಹ ಸೇರಿದೆ. ಹಾಗಾಗಿ ಈಕಾರ್ಡ್‌ ಮಾಡಿಸಲು ಎಲ್ಲೆಡೆ ಎಲ್ಲಿಲ್ಲದ ಬೇಡಿಕೆ ಬಂದಿದೆ.

ಎಚ್‌.ಕೆ. ನಟರಾಜ

ಟಾಪ್ ನ್ಯೂಸ್

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

kejriwal 2

Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

Gayathri Siddeshwar: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಜನ್ಮದಿನ ಆಚರಣೆ

Gayathri Siddeshwar: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಜನ್ಮದಿನ ಆಚರಣೆ

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

19-rcb

RCB: ಈ  ಸಲ ಕಪ್‌ ನಮ್ಮದು…

18

Honesty: ಪ್ರಾಮಾಣಿಕರಿಗಿದು ಕಾಲವಲ್ಲ…

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

17

Sirsi: ಶಿರಸಿ ಮಾರಿಕಾಂಬೆ ವೈಭವದ ಜಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.