ಸಹನೆ -ತಾಳ್ಮೆಯಿಂದ ದಾಂಪತ್ಯಜೀವನ ಸುಗಮ: ಸ್ವಾಮೀಜಿ
ಸರ್ವ ಧರ್ಮೀಯರ ಸಾಮೂಹಿಕ ವಿವಾಹ ಮಹೋತ್ಸವವನ್ನು ಮಠಾಧೀಶರು ಹಾಗೂ ಗಣ್ಯರು ಉದ್ಘಾಟಿಸಿದರು.
Team Udayavani, Feb 25, 2021, 3:44 PM IST
ಹರಿಹರ: ನವ ದಂಪತಿಗಳು ಪರಸ್ಪರ ಸಹನೆ, ತಾಳ್ಮೆಯಿಂದ ನಡೆದುಕೊಂಡರೆ ಮುಂದಿನ ದಾಂಪತ್ಯ ಜೀವನ ಹಸನಾಗುತ್ತದೆ ಎಂದು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ಕರುನಾಡ ಕದಂಬ ರಕ್ಷಣಾ ವೇದಿಕೆ ಕನ್ನಡ ರಾಜ್ಯೋತ್ಸವ ನಿಮಿತ್ತ ನಗರದಲ್ಲಿ ಬುಧವಾರ ಆಯೋಜಿಸಿದ್ದ ಸರ್ವ ಧರ್ಮೀಯರ ಉಚಿತ ಸಾಮೂಹಿಕ ವಿವಾಹ ಮಹೋತ್ಸವದ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಓದಿ : ಡಿಜಿಟಲ್ ಮಾಧ್ಯಮ, ಸಾಮಾಜಿಕ ಜಾಲತಾಣ, ಒಟಿಟಿ ಗಳಿಗೆ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ
ಭಿನ್ನ ಪರಿಸರದಲ್ಲಿ ಬೆಳೆದ ಎರಡು ಜೀವಗಳು ವಿಭಿನ್ನ ಅಭಿರುಚಿ, ಆಸಕ್ತಿ ಹೊಂದಿರುವುದು ಸಹಜ. ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಪರಸ್ಪರ ಗೌರವಿಸುತ್ತಾ ಬಾಳ ಬಂಡಿ ನಡೆಸಬೇಕು. ಮನುಷ್ಯನಿಗೆ ಎರಡು ಕಣ್ಣು, ಎರಡು ಕಿವಿ ಇದ್ದರೂ ವೀಕ್ಷಣೆ ಹಾಗೂ ಆಲಿಕೆಯಲ್ಲಿ ವ್ಯತ್ಯಾಸವಾಗದು. ಇದು ದಾಂಪತ್ಯ ಜೀವನಕ್ಕೂ ಮಾದರಿಯಾಗಿದೆ. ಎರಡು ದೇಹ ಒಂದು ಮನಸ್ಸಾಗಿ ಬದುಕಿದರೆ ದಾಂಪತ್ಯ ಜೀವನ ಹಸನಾಗುತ್ತದೆ ಎಂದರು.
ಬೆಂಗಳೂರು ಕಾಳಿಕಾಮಠದ ಋಷಿಕುಮಾರ ಸ್ವಾಮೀಜಿ ಮಾತನಾಡಿ, ಜನಸಾಮಾನ್ಯರನ್ನು ಆರ್ಥಿಕ ಹೊರೆಯಿಂದ ಉಳಿಸುವ ಸಾಮೂಹಿಕ ವಿವಾಹಗಳಿಗೆ ಎಲ್ಲರೂ ಆದ್ಯತೆ ನೀಡಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಮಾತನಾಡಿ, ಸಾಮೂಹಿಕ ವಿವಾಹಗಳು ಸಮಾಜಮುಖೀಯಾಗಿವೆ. ನಮ್ಮ ತಂದೆ ಮಾಜಿ ಸಚಿವ ಎಚ್. ಶಿವಪ್ಪ ಅವರ ಸ್ಮರಣಾರ್ಥ ಹಲವು ಬಾರಿ
ಸಾಮೂಹಿಕ ವಿವಾಹ ನಡೆಸಲಾಗಿದೆ ಎಂದು ತಿಳಿಸಿದರು.
ಹರಪನಹಳ್ಳಿ ಎಂ.ಪಿ.ಪ್ರಕಾಶ್ ಪ್ರತಿಷ್ಠಾನದ ಅಧ್ಯಕ್ಷೆ ಎಂ.ಪಿ. ವೀಣಾ ಮಹಾಂತೇಶ್ ಮಾತನಾಡಿ, ಸಾಧುವಿಗೆ ಸಾಧುವಾಗಿ, ವಿರೋ ಧಿಗೆ ವಿರೋ ಧಿಯಾಗಿರುವುದು ಕನ್ನಡಿಗರ ಸ್ವಭಾವವಾಗಿದೆ. ನಾಡು-ನುಡಿ ಸಂರಕ್ಷಣೆಗೆ ಕನ್ನಡ ಪರ ಸಂಘಟನೆಗಳು ಮುಂಜೂಣಿಯಲ್ಲಿರಬೇಕು. ಆದರೆ ಇತ್ತೀಚಿಗೆ ರಚನಾತ್ಮಕ ಚಳವಳಿಗಳು ಕಡಿಮೆಯಾಗುತ್ತಿವೆ ಎಂದರು.
ವೇದಿಕೆ ಅಧ್ಯಕ್ಷ ಎಚ್. ಸುಧಾಕರ ಮಾತನಾಡಿ, ನಮ್ಮ ತಾಯಿಯವರ ಆಶಯದಂತೆ ಸಾಮೂಹಿಕ ವಿವಾಹಗಳನ್ನು ನಡೆಸಲಾಗುತ್ತಿದೆ. ಈ ಬಾರಿ 12 ಜೋಡಿ ವಿವಾಹಗಳನ್ನು ನಡೆಸಲಾಗಿದೆ ಎಂದರು. ಕೊರೊನಾ ವಾರಿಯರ್ ಪೊಲೀಸ್ ಸಿಬ್ಬಂದಿ, ಪ್ರವಾಸಿ ಮಂದಿರ ಪರಿಚಾರಕ ಖಾಜಾ ಸಾಬ್ ಸೇರಿದಂತೆ ಹಲವರನ್ನು ಸತ್ಕರಿಸಲಾಯಿತು. ನವೀನ್ ಹಾಗೂ ಸಂಗಡಿಗರು ನೃತ್ಯ ಪದರ್ಶಿಸಿದರು. ಚಿತ್ರದುರ್ಗ ಬಂಜಾರ ಗುರುಪೀಠದ
ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಕವಲತ್ತು ಬಸ ಕೇಂದ್ರದ ಶರಣೆ ಮುಕ್ತಾಯಕ್ಕ, ತುಮ್ಮಿನಕಟ್ಟೆ ಪದ್ಮಶಾಲಿ ಗುರುಪೀಠದ ಪ್ರಭುಲಿಂಗ ಶ್ರೀಗಳು, ಜುಬೇರ್ ಅಹ್ಮದ್ ಮೌಲಾನಾ, ಅಶ್ರಫ್ ಸಖಾಫ್, ಜಿಪಂ ಮಾಜಿ ಸದಸ್ಯ ಎಂ. ನಾಗೇಂದ್ರಪ್ಪ, ಜಿ. ಪ್ರಭುಗೌಡ್ರು, ಹರಪನಹಳ್ಳಿ ಸುರೇಶ್ ಮಂಡಕ್ಕಿ, ನಂದಿಗಾವಿ ಶ್ರೀನಿವಾಸ್, ಸಿ.ಎನ್. ಹುಲಿಗೇಶ್, ಶಶಿ ನಾಯ್ಕ, ವಿಷ್ಣು ಪೂಜಾರ್, ಸುಚಿತ್ ಡಿ. ಪೂಜಾರ್, ಸೈಯದ್ ಹಜರತ್ ಅಲಿ, ಪ್ರಶಾಂತ್ ಮೆಹರವಾಡೆ, ಮೊಹ್ಮದ್ ಹಾಷೀಮ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Panchamasali ಎಂಬ ಕಾರಣಕ್ಕೆ ಯತ್ನಾಳ್ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ