ಗ್ರಾಪಂ ಮೀಸಲಾತಿ ನಿಗದಿಗೆ ಕ್ಷಣಗಣನೆ
ಇಂದಿನಿಂದಲೇ ಮೀಸಲಾತಿ ಪ್ರಕ್ರಿಯೆ ಆರಂಭ
Team Udayavani, Jan 27, 2021, 3:51 PM IST
ದಾವಣಗೆರೆ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದಿರುವ ಸದಸ್ಯರ ಚಿತ್ತ ಈಗ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾ ನಗಳಿಗೆ ಯಾವ ಮೀಸಲಾತಿ ನಿಗದಿಯಾಗಲಿದೆ ಎಂಬುದರ ಮೇಲೆ ನೆಟ್ಟಿದ್ದು ಇಂದಿನಿಂದಲೇ (ಜ. 27ರಿಂದ) ಜಿಲ್ಲೆಯ ವಿವಿಧ ತಾಲೂಕುಗಳ ಮೀಸಲಾತಿ ನಿಗದಿ ಸಭೆಗಳು ಶುರುವಾಗಲಿದೆ. ಗ್ರಾಪಂ ಗದ್ದುಗೆ ಆಕಾಂಕ್ಷಿಗಳಲ್ಲಿ ಮೀಸಲಾತಿ ನಿಗದಿ ಭಾರಿ ಕುತೂಹಲ ಕೆರಳಿಸಿದೆ.
ಚುನಾವಣಾ ಆಯೋಗವು ತಾಲೂಕಾವಾರು ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ವರ್ಗೀಕರಿಸಿ ಈಗಾಗಲೇ ಆದೇಶ ಹೊರಡಿಸಿದ್ದು ಜಿಲ್ಲೆಯ 195ಗ್ರಾಪಂಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಲಾಗುತ್ತಿದೆ. ಇತ್ತೀಚೆಗಷ್ಟೇ ಚುನಾವಣೆಯಲ್ಲಿ ಗೆದ್ದಿರುವ ಸದಸ್ಯರು, ಈ ಹಿಂದಿನ ಅವಧಿಯಲ್ಲಿ ತಮ್ಮ ಪಂಚಾಯಿತಿಗೆ ಯಾವ ಮೀಸಲಾತಿ ಬಂದಿತ್ತು. ಈ ಬಾರಿ ಯಾವುದು ಬರಬಹುದು ಎಂಬ
ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಆಯೋಗದ ಮೀಸಲಾತಿ ವರ್ಗೀಕರಣದಲ್ಲಿ ಜಿಲ್ಲೆಯ 195ಗ್ರಾಪಂಗಳಲ್ಲಿ 99ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದ್ದರೆ, 96ಸ್ಥಾನಗಳು ಸಾಮಾನ್ಯವಾಗಿವೆ. 41ಪಂಚಾಯಿತಿಗಳು ಎಸ್ಸಿ ವರ್ಗಕ್ಕೆ ಮೀಸಲಾಗಿದ್ದು ಇದರಲ್ಲಿ 22ಸ್ಥಾನಗಳು ಮಹಿಳೆಯರಿಗೆ ಮೀಸಲಿವೆ. ಎಸ್ಟಿ ವರ್ಗಕ್ಕೆ 24ಸ್ಥಾನಗಳಿದ್ದು ಮಹಿಳೆಯರಿಗೆ 13ಸ್ಥಾನಗಳು ಮೀಸಲಿವೆ. ಹಿಂದುಳಿದ ಅ ವರ್ಗಕ್ಕೆ 27ಸ್ಥಾನಗಳು ಮೀಸಲಿದ್ದು ಇದರಲ್ಲಿ 14ಸ್ಥಾನಗಳು ಮಹಿಳೆಯರಿಗೆ ಮೀಸಲಿವೆ. ಹಿಂದುಳಿದ ಬ ವರ್ಗದಲ್ಲಿ ಆರು ಸ್ಥಾನಗಳಿದ್ದು ಇದರಲ್ಲಿ ನಾಲ್ಕು ಸ್ಥಾನಗಳು ಮಹಿಳೆಯರಿಗೆ ಮೀಸಲಿವೆ. ಸಾಮಾನ್ಯ ವರ್ಗಕ್ಕೆ ಮೀಸಲಿರುವ 97ಸ್ಥಾನಗಳಲ್ಲಿ 46ಸ್ಥಾನಗಳು ಮಹಿಳೆಯರಿಗೆ ಮೀಸಲಿವೆ.
ಮಹಿಳೆಯರಿಗೆ ಆದ್ಯತೆ: ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ವರ್ಗೀಕರಣ ಒಂದೇ ರೀತಿ ಇರುವುದರಿಂದ ವರ್ಗೀಕರಣ ಗ್ರಾ.ಪಂ.ವಾರು
ಮೊದಲು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ನಿಗದಿಗೊಳಿಸಲಾಗುತ್ತದೆ. ಸಾಧ್ಯವಾದಷ್ಟು ಅಧ್ಯಕ್ಷ ಸ್ಥಾನಕ್ಕೆ ನಿಗದಿಯಾದ ಮೀಸಲಾತಿಯೇ ಉಪಾಧ್ಯಕ್ಷ ಸ್ಥಾನಕ್ಕೆ ಬರದಂತೆ ನೋಡಿಕೊಳ್ಳಲು ಆಯೋಗ ಸೂಚಿಸಿದೆ. ಆಯೋಗದ ಸೂಚನೆಯಂತೆ ಕೆಲವು ವರ್ಗಗಳಲ್ಲಿ ಶೇ.50ಕ್ಕಿಂತ ಕಡಿಮೆ ಇಲ್ಲದಂತೆ ಮಹಿಳೆಯರಿಗೆ ಸ್ಥಾನಗಳನ್ನು ಮೀಸಲಿರಿಸಲೇ ಬೇಕಾಗಿದೆ. ಅಲ್ಪಸ್ಥಾನಗಳಿರುವ ವರ್ಗದಲ್ಲಿ ಬೆಸ ಸಂಖ್ಯೆಯ
ಸ್ಥಾನಗಳಿರುವಲ್ಲಿ ಮಹಿಳೆಯರಿಗೆ ಆದ್ಯತೆ ನೀಡಬೇಕಾಗಿದೆ. ಉದಾಹರಣೆಗೆ ಮೂರು ಸ್ಥಾನಗಳಿದ್ದರೆ ಅಲ್ಲಿ ಎರಡು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಬೇಕಿದೆ. ಈ ವರ್ಗಗಳಲ್ಲಿ ಗ್ರಾಪಂ ಗದ್ದುಗೆ ಏರುವ ಕನಸು ಕಾಣುವ ಪುರುಷರಿಗೆ ನಿರಾಸೆಯಾಗುವುದಂತೂ ಖಚಿತ. ಗ್ರಾಪಂ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿಯನ್ನು ಸದಸ್ಯರ ಸಮ್ಮುಖದಲ್ಲಿಯೇ ನಡೆಸಲಾಗುತ್ತದೆ. ತನ್ಮೂಲಕ ಕಮೀಸಲಾತಿ ನಿಗದಿ
ಪಾರದರ್ಶಕವಾಗಿ ನಡೆಯುವುದರಿಂದ ಯಾವುದೇ ಪಕ್ಷ, ಮುಖಮಡರ ಒತ್ತಡಕ್ಕೆ ಇಲ್ಲಿ ಆಸ್ಪದ ಇಲ್ಲ ಎಂಬುದು ಇಲ್ಲಿ ಗಮನಾರ್ಹ.
ಮನವೊಲಿಕೆಗೆ ತಂತ್ರ
ಕೆಲ ಪ್ರಬಲ ಆಕಾಂಕ್ಷಿಗಳು ತಮಗೆ ಅನುಕೂಲವಾಗುವ ಮೀಸಲಾತಿ ಬಂದರೆ ಬೆಂಬಲಿಸುವಂತೆ ಈಗಾಗಲೇ ಸದಸ್ಯರ ಮನವೊಲಿಸುವ ಕಾರ್ಯ ಮುಂದುವರಿಸಿದ್ದಾರೆ. ಇನ್ನು ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆಲ ಸದಸ್ಯರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವ ಯೋಜನೆಯನ್ನೂ ಹಾಕಿಕೊಂಡಿದ್ದಾರೆ.
ಮೀಸಲಾತಿಗೆ ನಿಗದಿ ಸಭೆ
ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಕ್ರಿಯೆಯು ಗ್ರಾಪಂ ಸದಸ್ಯರ ಸಮಕ್ಷಮ ಜಿಲ್ಲಾಧಿಕಾರಿಗಳ ಕಚೇರಿಯ ತುಂಗಾಭದ್ರ ಸಭಾಂಗಣದಲ್ಲಿ ನಡೆಯಲಿದೆ. ಜ. 27ರಂದು ಬೆಳಗ್ಗೆ 10ಗಂಟೆಗೆ ಹರಿಹರ ತಾಲೂಕು, ಮಧ್ಯಾಹ್ನ 2ಗಂಟೆಗೆ ಹೊನ್ನಾಳಿ ತಾಲೂಕು, ಜ. 28ರಂದು ಬೆಳಗ್ಗೆ 10ಗಂಟೆಗೆ ಜಗಳೂರು ತಾಲೂಕು, ಮಧ್ಯಾಹ್ನ 2 ಗಂಟೆಗೆ ದಾವಣಗೆರೆ ತಾಲೂಕು, ಜ.29ರಂದು ಬೆಳಗ್ಗೆ 10ಗಂಟೆಗೆ ನ್ಯಾಮತಿ ತಾಲೂಕು ಹಾಗೂ ಮಧ್ಯಾಹ್ನ 1ಗಂಟೆಗೆ ಚನ್ನಗಿರಿ ತಾಲೂಕಿನ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹುದ್ದೆಗಳ
ಮೀಸಲಾತಿ ನಿಗದಿ ಸಭೆ ನಡೆಯಲಿದೆ.
ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ