ಭಾವೈಕ್ಯತೆಯೇ ನಿಜ ಯೋಗ: ಬಸವಪ್ರಭು ಶ್ರೀ
Team Udayavani, Jun 22, 2022, 6:58 PM IST
ದಾವಣಗೆರೆ: ಸಮಾಜದಲ್ಲಿ ಎಲ್ಲರೂ ಒಂದಾಗಿಬಾಳುವುದೇ ನಿಜವಾದ ಯೋಗವಾಗಿದೆ. ಯೋಗಎಂದರೆ ಕೂಡುವುದು ಎಂದರ್ಥ. ಎಲ್ಲರೂಕೂಡಿಕೊಂಡು ಒಂದಾಗಿ ಬಾಳಿದಾಗ ಮಾತ್ರ ಭಾವೈಕ್ಯತೆನೆಲೆಸುತ್ತದೆ ಎಂದು ವಿರಕ್ತಮಠದ ಶ್ರೀ ಬಸವಪ್ರಭುಸ್ವಾಮೀಜಿ ಹೇಳಿದರು.ಮಂಗಳವಾರ ಶಿವಯೋಗಾಶ್ರಮದಲ್ಲಿಜಯದೇವ ಯೋಗ ಕೇಂದ್ರದ ವತಿಯಿಂದಏರ್ಪಡಿಸಿದ್ದ ಎಂಟನೇ ಅಂತಾರಾಷ್ಟ್ರೀಯ ಯೋಗದಿನಾಚರಣೆಯಲ್ಲಿ ಮಾತನಾಡಿದ ಅವರು, ಯೋಗಎಂದರೆ ಕೇವಲ ಯೋಗಾಸನ ಮಾಡುವುದುಎಂದರ್ಥವಲ್ಲ.
ನಮ್ಮ ಮನಸ್ಸು ಪರಮಾತ್ಮನಲ್ಲಿಧ್ಯಾನದ ಮುಖಾಂತರ ಕೂಡುವುದಾಗಿದೆ ಎಂದರು.ಯೋಗ ನಮ್ಮ ಅಂತರಂಗವನ್ನು ಸ್ವತ್ಛಗೊಳಿಸುವಸಾಧನ. ಮಾನವನಲ್ಲಿರುವ ಮೆದುಳನ್ನು ಶುದ್ಧೀಕರಣಅಂದರೆ ಆಲೋಚನೆಗಳ ಶುದ್ಧೀಕರಣ ಮಾಡುತ್ತದೆ.ಆಲೋಚನೆಗಳು ಶುದ್ಧವಾದಾಗ ಸತ್ಕಾರ್ಯಗಳನ್ನುಮಾಡಲು ಸಾಧ್ಯ. ಸತ್ಕಾರ್ಯದಿಂದ ಒಳ್ಳೆಯವ್ಯಕ್ತಿಯಾಗುತ್ತಾನೆ. ಆ ಒಳ್ಳೆಯ ವ್ಯಕ್ತಿಯೇ ಪ್ರಸಿದ್ಧವ್ಯಕ್ತಿಗಳಾಗುತ್ತಾರೆ.
ನಿತ್ಯ ಶಿವಯೋಗ ಮಾಡಿದರೆಜಂಜಾಟದ ಬದುಕಿನಿಂದ ಹೊರಬರಲು ಸಾಧ್ಯ.ಆಧುನಿಕ ಜೀವನಶೈಲಿ ಎಲ್ಲರಿಗೂ ಅವಸರದ ಬದುಕನ್ನುಕಲಿಸಿಕೊಟ್ಟಿದೆ. ಅತಿಯಾದ ಅವಸರ ಮಾನವನಿಗೆಆತಂಕ ಉಂಟುಮಾಡುತ್ತದೆ. ಅವಸರ, ಆತಂಕದಿಂದಹೊರಬರುವ ಮಾರ್ಗವೇ ಯೋಗವಾಗಿದೆ.ಪ್ರತಿಯೊಬ್ಬರೂ ದಿನ ನಿತ್ಯ ಯೋಗವನ್ನು ಮಾಡಿದರೆಶಾಂತಿ, ನೆಮ್ಮದಿಯ ಬದುಕು ಸಾಗಿಸಬಹುದು ಎಂದುಅಭಿಪ್ರಾಯಪಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Davanagere: ಮತದಾನ ಜಾಗೃತಿ ಲಾಂಛನದಲ್ಲಿ ಅಪರೂಪದ ಪ್ರಾಣಿ ಚಿತ್ರ ಬಳಕೆ
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ