ನೇತ್ರದಾನ ಘೋಷಿಸಿದ 100ಕ್ಕೂ ಹೆಚ್ಚು  ಜನ


Team Udayavani, Nov 10, 2021, 4:04 PM IST

davanagere news

ದಾವಣಗೆರೆ: ಅಭಿಮಾನ ಎಂದರೆ ಹೇಗಿರುತ್ತೆನೋಡಿ. ಅಕಾಲಿಕವಾಗಿ ನಿಧನರಾದ ಪವರ್‌ ಸ್ಟಾರ್‌ಪುನೀತ್‌ ರಾಜ್‌ಕುಮಾರ್‌ರವರ ನೇತ್ರದಾನದಿಂದಪ್ರೇರಣಗೊಂಡ 100ಕ್ಕೂ ಹೆಚ್ಚು ಜನರು ನೇತ್ರದಾನಕ್ಕೆಮುಂದಾಗುವ ಮೂಲಕ ಅಪ್ಪು ಮೇಲಿನ ಅಭಿಮಾನತೋರ್ಪಡಿಸಿ ಮಾದರಿಯಾಗಿದ್ದಾರೆ.

ದಾವಣಗೆರೆ ತಾಲೂಕಿನ ಚಟ್ಟೋಬನಹಳ್ಳಿಯಹಿರಿಯರು, ಮಹಿಳೆಯರು ಒಳಗೊಂಡಂತೆ 100ಕ್ಕೂಹೆಚ್ಚು ಜನರು ನೇತ್ರದಾನದಂತಹ ಶ್ರೇಷ್ಠ ದಾನಕ್ಕೆ ಒಪ್ಪಿಗೆಸೂಚಿಸಿದ್ದಾರೆ. ಆ ಮೂಲಕ ತಮ್ಮ ನೆಚ್ಚಿನ ನಟ ಪುನೀತ್‌ರಾಜ್‌ಕುಮಾರ್‌ ಸಾಗಿದ ದಾರಿಯಲ್ಲಿ ಹೆಜ್ಜೆ ಇಟ್ಟಿದ್ದಾರೆ.

ಜಿಲ್ಲಾ ಕೇಂದ್ರ ದಾವಣಗೆರೆಗೆ ಸಮೀಪದಲ್ಲಿರುವಚಟ್ಟೋಬನಹಳ್ಳಿಯಲ್ಲಿ 120-125 ಮನೆಗಳಿವೆ.ಮನೆಗೆ ಒಬ್ಬರಂತೆ ನೇತ್ರದಾನಕ್ಕೆ ಒಪ್ಪಿದ್ದಾರೆ. ಅದಕ್ಕೆಮೂಲ ಕಾರಣ ಪುನೀತ್‌ ರಾಜ್‌ಕುಮಾರ್‌. ತೀವ್ರಹೃದಯಾಘಾತದಿಂದ ಅಕಾಲಿಕ ಮರಣಕ್ಕೆ ತುತ್ತಾದಪುನೀತ್‌ ರಾಜ್‌ಕುಮಾರ್‌ ಅವರ ಕಣ್ಣುಗಳು ನಾಲ್ವರುಅಂಧರ ಬಾಳಲ್ಲಿ ಬೆಳಕು ತಂದಿದ್ದನ್ನು ತಿಳಿದ ಗ್ರಾಮದಅನೇಕರು ಪುನೀತ್‌ ರಾಜ್‌ಕುಮಾರ್‌ ಅವರಂತೆಯೇತಮ್ಮ ಕಣ್ಣುಗಳು ಬೇರೆಯವರಿಗೆ ಬೆಳಕಾಗಬೇಕು,ಅತ್ಯಮೂಲ್ಯ ಕಣ್ಣುಗಳು ಮಣ್ಣಲ್ಲಿ ಮಣ್ಣಾಗಿಹೋಗಬಾರದು ಎಂದು ತಮ್ಮ ಮರಣದ ನಂತರಕಣ್ಣುಗಳ ದಾನ ಮಾಡಲು ನಿರ್ಧರಿಸಿದ್ದಾರೆ.ನಮ್ಮ ಊರಿನ ಜನರಿಗೆ ಪುನೀತ್‌ ರಾಜ್‌ಕುಮಾರ್‌ ಎಂದರೆ ಪಂಚಪ್ರಾಣ.

ಪ್ರತಿಯೊಬ್ಬರೂಅವರ ಅಭಿಮಾನಿಗಳು. ಪುನೀತ್‌ ರಾಜ್‌ಕುಮಾರ್‌ನಿಧನರಾದ ದಿನವಂತೂ ಗ್ರಾಮದಲ್ಲಿ ಮೌನ ಕವಿದಿತ್ತು.ಅವರ ಸಾವನ್ನು ಈ ಕ್ಷಣಕ್ಕೂ ಅರಗಿಸಿಕೊಳ್ಳಲಾರದವರುಅನೇಕರು ಇದ್ದಾರೆ ಎಂದು ಎಸ್‌ಬಿಐ ಉದ್ಯೋಗಿಯೂಆಗಿರುವ ಎಸ್‌. ಅಣ್ಣಪ್ಪ ತಿಳಿಸಿದರು.

ಪುನೀತ್‌ ರಾಜ್‌ಕುಮಾರ್‌ರವರ ನಿಧನದ ನಂತರಅವರು ನೇತ್ರದಾನ ಮಾಡಿದ್ದು, ಅವರ ಕಣ್ಣುಗಳನ್ನಪಡೆದು ಇತರೆ ನಾಲ್ವರಿಗೆ ಜೋಡಣೆ ಮಾಡಿದ್ದು,ಅವರು ಪ್ರಪಂಚವನ್ನೆಲ್ಲ ನೋಡುವಂತಾಗಿದ್ದುಗ್ರಾಮಸ್ಥರ ಮೇಲೆ ಭಾರೀ ಪರಿಣಾಮ ಉಂಟುಮಾಡಿತು.

ತಮ್ಮ ನೆಚ್ಚಿನ ನಟನಂತೆ ನಾವೂ ಕಣ್ಣುಗಳದಾನ ಮಾಡಬೇಕು, ನಾವು ಸತ್ತ ನಂತರವೂ ಇತರರಿಗೆಬೆಳಕಾಗಬೇಕು. ಮರಣದ ನಂತರವೂ ಪ್ರಪಂಚನೋಡುವಂತಾಗಬೇಕು. ಹಾಗಾಗಿ ಕಣ್ಣುಗಳದಾನ ಮಾಡಬೇಕು ಎಂದು ಗೆಳೆಯರು ವಿಷಯಪ್ರಸ್ತಾಪಿಸಿದರು. ಸಭೆ ನಡೆಸಿ ನೇತ್ರದಾನದ ಮಹತ್ವಮನವರಿಕೆ ಮಾಡಿದಾಗ 100ಕ್ಕೂ ಹೆಚ್ಚು ಜನರುಒಪ್ಪಿಕೊಂಡಿದ್ದಾರೆ. ನ. 6 ರಂದು ಗ್ರಾಮದಲ್ಲಿ ಕನ್ನಡರಾಜ್ಯೋತ್ಸವ, ಶ್ರೀ ಸೇವಾಲಾಲ್‌ ಸಂಘದ ಉದ್ಘಾಟನೆಜೊತೆಗೆ ನೇತ್ರದಾನ ಶಿಬಿರವನ್ನೂ ಕೈ ಗೊಳ್ಳಲಾಗಿತ್ತು.

ಆಸಂದರ್ಭದಲ್ಲಿ 100ಕ್ಕೂ ಹೆಚ್ಚು ಜನರು ನೇತ್ರದಾನದನಿರ್ಧಾರ ಪ್ರಕಟಿಸಿದರು ಎಂದು ಮಾಹಿತಿ ನೀಡಿದರು.45 ವರ್ಷ ಮೇಲ್ಪಟ್ಟಿರುವ ಎಲ್‌. ತಿಪ್ಪೇಶ್‌ ನಾಯ್ಕ,ಮಲ್ಲೇಶ್‌ ನಾಯ್ಕ, ರುದ್ರಾ ನಾಯ್ಕ ಸೇರಿದಂತೆನಾಲ್ವರು ಕಣ್ಣುಗಳ ದಾನಕ್ಕೆ ಒಪ್ಪಿದ್ದಾರೆ. 18 ರಿಂದ 45ವರ್ಷದೊಳಗಿನವರು ಸೇರಿಕೊಂಡು 100 ಜನರುನೇತ್ರದಾನ ಮಾಡುತ್ತಿದ್ದಾರೆ. ನನ್ನ ಜೊತೆಗೆ ನನ್ನ ತಮ್ಮಅನಿಲ್‌ ನಾಯ್ಕ ಸಹ ಕಣ್ಣು ದಾನ ಮಾಡುತ್ತಿದ್ದೇವೆಎಂದು ತಿಳಿಸಿದರು.

ನೇತ್ರದಾನಕ್ಕೆ ಸಂಬಂಧಿಸಿದಂತೆ ದಾವಣಗೆರೆಯಬಾಪೂಜಿ ಆಸ್ಪತ್ರೆಯವರನ್ನು ಸಂಪರ್ಕಿಸಿದ್ದೇವೆ. ಇನ್ನುಎರಡು ದಿನಗಳಲ್ಲಿ ಅರ್ಜಿ ಭರ್ತಿ ಮಾಡಿ ಮುಂದಿನಪ್ರಕ್ರಿಯೆ ಕೈಗೊಳ್ಳಲಾಗುವುದು. ನೇತ್ರದಾನಕ್ಕೆಒಪ್ಪಿರುವವರ ಎಲ್ಲ ಕುಟುಂಬದವರಿಗೆ ಮಾಹಿತಿನೀಡುವ ಜೊತೆಗೆ ಮುಂದೆ ಮಾಡಬೇಕಾದಂತಹಕೆಲಸಗಳ ಬಗ್ಗೆಯೂ ತಿಳಿಸಲಾಗಿದೆ ಎಂದು ಅಣ್ಣಪ್ಪಹೇಳಿದರು.

ಒಬ್ಬ ನಾಯಕ ನಟ ಸಾಗುವ ಹಾದಿ, ಮಾಡುವಂತಹಸಾಮಾಜಿಕ ಸೇವಾ ಕಾರ್ಯಗಳು ಅವರ ಅಭಿಮಾನಿಗಳಮೇಲೆ ಎಂತಹ ಪ್ರಭಾವ, ಪರಿಣಾಮ ಬೀರಬಲ್ಲವು.ಏನೆಲ್ಲ ಸಾಧನೆ ಸಾಧ್ಯ ಎಂಬುದಕ್ಕೆ ಪವರ್‌ ಸ್ಟಾರ್‌ ಪುನೀತ್‌ರಾಜ್‌ಕುಮಾರ್‌ ಹಾಗೂ ಚಟ್ಟೋಬನಹಳ್ಳಿ ಗ್ರಾಮಸ್ಥರೇಸಾಕ್ಷಿ ಎಂದರೆ ಅತಿಶಯೋಕ್ತಿಯಾಗಲಾರದು.
ರಾ. ರವಿಬಾಬು

ಟಾಪ್ ನ್ಯೂಸ್

10

ದ.ಕ: ಬಿಜೆಪಿ ಜತೆಗಿನ ಮೈತ್ರಿಗೆ ವಿರೋಧ: 42 ಮಂದಿ ಜೆಡಿಎಸ್ ಪದಾಧಿಕಾರಿಗಳು ‘ಕೈʼ ಸೇರ್ಪಡೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

Davanagere: ನಾಮಪತ್ರ ಸಲ್ಲಿಸಿದ ಬಿಜೆಪಿ- ಕಾಂಗ್ರೆಸ್ ಅಭ್ಯರ್ಥಿಗಳು

Davanagere: ನಾಮಪತ್ರ ಸಲ್ಲಿಸಿದ ಬಿಜೆಪಿ- ಕಾಂಗ್ರೆಸ್ ಅಭ್ಯರ್ಥಿಗಳು

Lok Sabha Election: ಜಗಳೂರನ್ನು ಬರಪೀಡಿತ ಪಟ್ಟಿಯಿಂದ ಹೊರ ತರುವೆ: ಗಾಯತ್ರಿ ಸಿದ್ದೇಶ್ವರ

Lok Sabha Election: ಜಗಳೂರನ್ನು ಬರಪೀಡಿತ ಪಟ್ಟಿಯಿಂದ ಹೊರ ತರುವೆ: ಗಾಯತ್ರಿ ಸಿದ್ದೇಶ್ವರ

Davanagere; ಕಾಂಗ್ರೆಸ್ ಸಂಧಾನ ವಿಫಲ; ನಾಮಪತ್ರ ಹಿಂಪಡೆಯಲು ವಿನಯ್ ಕುಮಾರ್ ನಕಾರ

Davanagere; ಕಾಂಗ್ರೆಸ್ ಸಂಧಾನ ವಿಫಲ; ನಾಮಪತ್ರ ಹಿಂಪಡೆಯಲು ವಿನಯ್ ಕುಮಾರ್ ನಕಾರ

5-dvg

Davangere: ಹರಪನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮತ ಬೇಟೆ

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

10

ದ.ಕ: ಬಿಜೆಪಿ ಜತೆಗಿನ ಮೈತ್ರಿಗೆ ವಿರೋಧ: 42 ಮಂದಿ ಜೆಡಿಎಸ್ ಪದಾಧಿಕಾರಿಗಳು ‘ಕೈʼ ಸೇರ್ಪಡೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.