ಅನುಮಾನಾಸ್ಪದ ಸಾವು ಪ್ರಕರಣ ಸಿಬಿಐಗೆ ವಹಿಸಿ
Team Udayavani, Dec 8, 2021, 12:31 PM IST
ದಾವಣಗೆರೆ: ವಂಚನೆ ಪ್ರಕರಣಕ್ಕೆಸಂಬಂಧಿಸಿದಂತೆ ಪೊಲೀಸರ ವಶದಲ್ಲಿದ್ದವ್ಯಕ್ತಿಯ ಅನುಮಾನಸ್ಪದ ಸಾವಿನಪ್ರಕರಣದ ತನಿಖೆಯನ್ನ ಸಿಬಿಐ ಅಥವಾಹೈಕೋರ್ಟ್ನ ಹಾಲಿ ನ್ಯಾಯಾಧೀಶರಿಗೆವಹಿಸಬೇಕು ಎಂದು ಕರ್ನಾಟಕ ರಾಷ್ಟ್ರಸಮಿತಿ ಒತ್ತಾಯಿಸಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಸಮಿತಿ ಜಿಲ್ಲಾಧ್ಯಕ್ಷ ಮಂಜುನಾಥ್ ವಿ. ಹಳ್ಳಿಕೇರಿ, ವಂಚನೆಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರವಶದಲ್ಲಿದ್ದ ಚಿತ್ರದುರ್ಗ ತಾಲೂಕಿನಬಹದ್ದೂರುಘಟ್ಟದ ಕುಮಾರ್ ಸಾವಿನಪ್ರಕರಣದ ತನಿಖೆಯನ್ನ ಸಿಐಡಿಗೆಒಪ್ಪಿಸಲಾಗಿದೆ. ನ್ಯಾಯ ದೊರಕುವುದುಎಂಬ ನಂಬಿಕೆ ಇಲ್ಲ. ಹಾಗಾಗಿ ಪ್ರಕರಣದತನಿಖೆಯನ್ನು ಸಿಬಿಐ ಅಥವಾ ಹೈಕೋಟ್ìನ ಹಾಲಿ ನ್ಯಾಯಾಧೀಶರಿಗೆ ವಹಿಸಬೇಕುಎಂದು ಒತ್ತಾಯಿಸಿದರು.
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆಪೊಲೀಸರ ವಶದಲ್ಲಿದ್ದ ಚಿತ್ರದುರ್ಗತಾಲೂಕಿನ ಬಹದ್ದೂರ್ಘಟ್ಟದ ಕುಮಾರ್ಸಾವಿನ ಬಗ್ಗೆ ಅನುಮಾನಗಳಿವೆ. ಕುಮಾರ್ನನ್ನು ಬಂಧಿಸಲು ವಾರೆಂಟ್ ಇತ್ತೇ,ಬಂಧಿಸಿದ್ದರೆ ನ್ಯಾಯಾಧೀಶರ ಮುಂದೆತನಿಖೆಗೆ ಹಾಜರುಪಡಿಸಲಾಗಿತ್ತಾ,ಯಾವ ಕಾರಣಕ್ಕಾಗಿ ವಸತಿಗೃಹದಲ್ಲಿಇರಿಸಲಾಗಿತ್ತು ಎಂಬ ಸಂಶಯಗಳಿವೆ.
ಸಿಬಿಐ ಅಥವಾ ಹೈಕೋರ್ಟ್ನ ಹಾಲಿನ್ಯಾಯಾಧೀಶರ ತನಿಖೆಯಿಂದಲೇಸತ್ಯಾಂಶ ಹೊರ ಬರಲಿದೆ. ಕೂಡಲೇಪ್ರಕರಣದ ತನಿಖೆಯನ್ನು ಸಿಬಿಐ ಅಥವಾಹೈಕೋರ್ಟ್ನ ಹಾಲಿ ನ್ಯಾಯಾಧೀಶರಿಗೆವಹಿಸಬೇಕು. ತಪ್ಪಿತಸ್ಥರನ್ನ ಬಂಧಿಸಿ, ಸೂಕ್ತಕ್ರಮ ತೆಗೆದುಕೊಳ್ಳಬೇಕು ಎಂದರು.ಯುವ ಘಟಕದ ಜಿಲ್ಲಾಧ್ಯಕ್ಷ ಡಿ.ಜಿ.ಮಾಲತೇಶ್ ಮಾತನಾಡಿ, ಮೃತಕುಮಾರ್ನ ಕುಟುಂಬಕ್ಕೆ ಸಾಮಾಜಿಕನ್ಯಾಯ ದೊರೆಯಬೇಕು.
ಹಾಗಾಗಿಪ್ರಕರಣದ ತನಿಖೆಯನ್ನ ಸಿಬಿಐ ಅಥವಾಹೈಕೋರ್ಟ್ನ ಹಾಲಿ ನ್ಯಾಯಾಧೀಶರಿಗೆವಹಿಸಬೇಕು. ನಮಗೆ ಸಿಐಡಿ ತನಿಖೆ ಬಗ್ಗೆನಂಬಿಕೆ ಇಲ್ಲ. ದೇಶದಲ್ಲಿ ನಡೆದಿರುವಂತಹ1888 ಲಾಕಪ್ಡೆತ್ ಪ್ರಕರಣಗಳಲ್ಲಿ ಕೇವಲ26 ಪ್ರಕರಣಗಳಲ್ಲಿ ಮಾತ್ರ ಪೊಲೀಸರಿಗೆಶಿಕ್ಷೆಯಾಗಿದೆ. ಕುಮಾರ್ನ ಕುಟುಂಬಕ್ಕೆಸರ್ಕಾರಿ ಹುದ್ದೆ ಒಳಗೊಂಡಂತೆ ಅಗತ್ಯಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಕುಮಾರ್ ಸಾವಿನಪ್ರಕರಣದ ಬಗ್ಗೆ ಮಾನವ ಹಕ್ಕುಗಳಆಯೋಗ, ಎಸ್ಸಿ-ಎಸ್ಟಿ ಆಯೋಗಕ್ಕೆದೂರು ಸಲ್ಲಿಸಲಾ ಗುವುದು. ಸಾಮಾಜಿಕನ್ಯಾಯ ದೊರೆಯುವಂತಾಗಬೇಕು.ಇಲ್ಲವಾದಲ್ಲಿ ರಾಜ್ಯದ್ಯಾಂತ ತೀವ್ರಸ್ವರೂಪದ ಹೋರಾಟ ನಡೆಸಲಾಗುವುದುಎಂದು ಎಚ್ಚರಿಸಿದರು. ಕರ್ನಾಟಕ ರಾಷ್ಟ್ರ ಸಮಿತಿಯಸಂಘಟನಾ ಕಾರ್ಯದರ್ಶಿ ಎಂ.ಎಚ್.ರಾಜು, ಎಸ್. ಅಭಿಷೇಕ್, ನಟರಾಜ್ಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ
ಕರ್ತವ್ಯ ಲೋಪ: ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕ ರಿಯಾಜ್ ಅಹಮ್ಮದ್ ಅಮಾನತು
Election Campaign: ಮೋದಿಯವರಿಂದ ಮಹಿಳಾ ಶಕ್ತಿಗೆ ಮುನ್ನುಡಿ
Davanagere: ಬಿಜೆಪಿ ಅಸಮಾಧಾನ ತಣಿಸಿದ ಬಿಎಸ್ ವೈ; ರವೀಂದ್ರನಾಥ್ ಗೆ ಚುನಾವಣೆ ಹೊಣೆ
Gayatri Siddeshwar: ಮೋದಿ ಕೈ ಬಲಪಡಿಸಲು ಬಿಜೆಪಿ ಗೆಲ್ಲಿಸಿ; ಗಾಯತ್ರಿ
MUST WATCH
ಹೊಸ ಸೇರ್ಪಡೆ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ