ನಾಳೆ ಪುನೀತ್ ರಾಜ್ಕುಮಾರ್ಗೆ ಗೀತ ನುಡಿನಮನ
Team Udayavani, Jun 25, 2022, 5:22 PM IST
ದಾವಣಗೆರೆ: ಕರ್ನಾಟಕ ರತ್ನ ಡಾ|ಪುನೀತ್ ರಾಜ್ಕುಮಾರ್ ಅವರಿಗೆಗೀತ ನುಡಿನಮನ ಮತ್ತು ಸುಗಮಸಂಗೀತ ಕಾರ್ಯಕ್ರಮವನ್ನು ಜೂ.26ರಂದುದಾವಣಗೆರೆಯ ಕುವೆಂಪು ಕನ್ನಡಭವನದಲ್ಲಿ ಆಯೋಜಿಸಲಾಗಿದೆ ಎಂದುಗಾನಸುಧೆ ಕಲಾ ಬಳಗದ ಗೌರವ ಅಧ್ಯಕ್ಷಚಿಂದೋಡಿ ಶಂಭುಲಿಂಗಪ್ಪ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈವಿಷಯ ತಿಳಿಸಿದ ಅವರು, ಕನ್ನಡ ಚಲನಚಿತ್ರರಂಗಕ್ಕೆ ಅಪಾರ ಕೊಡಗೆ ನೀಡಿರುವಪುನೀತ್ ರಾಜ್ಕುಮಾರ್ ಅವರೊಟ್ಟಿಗೆದಾವಣಗೆರೆಯ ಪರಮೇಶ್ವರಪ್ಪ,ರಂಗಭೂಮಿ ಕಲಾವಿದೆಯರಾದಮಂಜುಳಾ ಮತ್ತು ಗೀತಾ ಅವರಿಗೂನುಡಿನಮನ ಸಲ್ಲಿಸಲಾಗುವುದುಎಂದರು.ಭಾನುವಾರ ಮಧ್ಯಾಹ್ನ 3ಕ್ಕೆ ನಡೆಯುವಕಾರ್ಯಕ್ರಮವನ್ನು ಮಾಜಿ ಮೇಯರ್ ಬಿ.ಜಿ.ಅಜಯ್ಕುಮಾರ್ ಉದ್ಘಾಟಿಸುವರು.ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿಸಾನ್ನಿಧ್ಯ, ಬಸವರಾಜ ಸಾಗರ್ ಅಧ್ಯಕ್ಷತೆವಹಿಸುವರು.
ಮಾಜಿ ಶಾಸಕ ಎಚ್.ಎಸ್.ಶಿವಶಂಕರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷಶ್ರೀನಿವಾಸ್ ದಾಸಕರಿಯಪ್ಪ,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತುಅಧ್ಯಕ್ಷ ಬಿ. ವಾಮದೇವಪ್ಪ, ಕನ್ನಡ ಮತ್ತುಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರವಿಚಂದ್ರ, ಖ್ಯಾತ ಕಲಾವಿದ ಪಾಪಣ್ಣಇತರರು ಭಾಗವಹಿಸುವರು.
ಮಹಾನಗರಪಾಲಿಕೆ ಸದಸ್ಯ ಆರ್.ಎಲ್. ಶಿವಪ್ರಕಾಶ್ಕಲಾವಿದರಿಗೆ ಗುರುತಿನ ಚೀಟಿ ವಿತರಣೆಮಾಡುವರು ಎಂದು ತಿಳಿಸಿದರು.ದಾವಣಗೆರೆ ಸೇರಿದಂತೆ ಇತರೆ16 ಜಿಲ್ಲೆಯಲ್ಲಿ ಶಿಕ್ಷಣ, ಸಾಹಿತ್ಯ,ರಂಗಭೂಮಿ, ಕಲೆ ಮುಂತಾದ ಕ್ಷೇತ್ರದಲ್ಲಿಗಣನೀಯ ಸೇವೆ ಸಲ್ಲಿಸಿರುವ 31ಕ್ಕೂಹೆಚ್ಚು ಕಲಾವಿದರಿಗೆ ಆಯಾಯ ಕ್ಷೇತ್ರಕ್ಕೆಸಂಬಂಧಿಸಿದ ಬಿರುದುನೊಂದಿಗೆಸನ್ಮಾನ ಮಾಡಲಾಗುವುದು. ವೇದಿಕೆಕಾರ್ಯಕ್ರಮದ ನಂತರ ದಾವಣಗೆರೆಯಸಿ. ರೂಪಾ ತಂಡದವರಿಂದಸುಗಮ ಸಂಗೀತ, ಜ್ಯೂನಿಯರ್ಪುನೀತ್ ರಾಜ್ಕುಮಾರ್ ಖ್ಯಾತಿಯಸಕಲೇಶಪುರದ ಬಾಬು, ಜ್ಯೂನಿಯರ್ಶಂಕರ್ನಾಗ್ ಅವರಿಂದ ವಿಶೇಷಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದುತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ