ದಾವಣಗೆರೆಯಲ್ಲಿ ಮಹಿಳೆಯರ ರಕ್ಷಣೆಗಾಗಿ ದುರ್ಗಾಪಡೆಗೆ ಚಾಲನೆ
Team Udayavani, Oct 2, 2019, 3:02 PM IST
ದಾವಣಗೆರೆ: ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ದುರ್ಗಾಪಡೆ ಗೆ ಚಾಲನೆ ನೀಡಲಾಯಿತು.
ಜಿ.ಪಂ ಅಧ್ಯಕ್ಷೆ ಶೈಲಜಾ ಬಸವರಾಜ್ ಪಡೆಗೆ ಚಾಲನೆ ನೀಡಿದರು.ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ, ತೊಂದರೆಯಲ್ಲಿ ಇದ್ದವರಿಗೆ ತುರ್ತು ನೆರವು, ರೋಡ್ ರೋಮಿಯೋ ನಿಯಂತ್ರಣ ಕ್ರಮ ತೆಗೆದುಕೊಳ್ಳುವ ಉದ್ದೇಶದ ದುರ್ಗಾಪಡೆಯನ್ನ ನಿರ್ಭಯ ಯೋಜನೆಯಡಿ ರಚಿಸಲಾಗಿದೆ.
ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ, ಅಪರ ಡಿಸಿ ನಜ್ಮಾ, ಎಸ್ಪಿ ಹನುಮಂತರಾಯ ಇತರರು ಇದ್ದರು.