ಇ-ಶೌಚಾಲಯ ಭೂಮಿಪೂಜೆ
Team Udayavani, Jul 23, 2018, 2:56 PM IST
ದಾವಣಗೆರೆ: ಸ್ಮಾರ್ಟ್ಸಿಟಿ ಯೋಜನೆಯಡಿ ಭಾನುವಾರ ವಿದ್ಯಾನಗರದ ಎಸ್.ಎ. ರವೀಂದ್ರನಾಥ್ ಉದ್ಯಾನವನದಲ್ಲಿ ಸಂಸದ ಸಿದ್ದೇಶ್ವರ್, ಶಾಸಕ ರವೀಂದ್ರನಾಥ್, ಮೇಯರ್ ಇ-ಶೌಚಾಲಯ ಭೂಮಿಪೂಜೆ ನೆರವೇರಿಸಿದರು.
ಸ್ಮಾರ್ಟ್ಸಿಟಿ ಯೋಜನೆಯಡಿ ನಿರ್ಮಾಣವಾಗಲಿರುವ ಇ- ಶೌಚಾಲಯಗಳು ಸಾಮಾನ್ಯ ಶೌಚಾಲಯಕ್ಕಿಂತಲೂ ಭಿನ್ನವಾಗಿರುತ್ತವೆ. ಫ್ಲಷ ಮಾಡಲು 1.5 ಲೀಟರ್, ಇಡೀ ಶೌಚಾಲಯದ ಸ್ವತ್ಛತೆಗೆ 4.5 ಲೀಟರ್ ನೀರು ಮಾತ್ರ ಬೇಕಾಗುತ್ತದೆ. ವ್ಯಕ್ತಿಯ ತಾಪಮಾನ ಆಧರಿಸಿ, ಇ-ಶೌಚಾಲಯದಲ್ಲಿನ ಸೆನ್ಸಾರ್ಗಳು ಫ್ಲಷ ಮಾಡುವುದು ವಿಶೇಷ.
ಕೇರಳದ ತಿರುವನಂತಪುರದ ಇರಮ್ ಸೈಂಟಿಫಿಕ್ ಕಂಪನಿ ಮೊದಲ ಹಂತದಲ್ಲಿ ಆಂಜನೇಯ ಬಡಾವಣೆ, ಕಾಸಲ್ ಪಾರ್ಕ್, ದೇವರಾಜ ಅರಸು ಪಾರ್ಕ್, ಮಕ್ಕಳ ಉದ್ಯಾನವನ, ಹಿರಿಯ ನಾಗರಿಕರ ಉದ್ಯಾನವನ, ಜಯನಗರ ಬಿ ಬ್ಲಾಕ್ ಪಾರ್ಕ್, ಶಾಮನೂರು ಬಸವರಾಜಪ್ಪ ಪಾರ್ಕ್, ಗಂಗೂಬಾಯಿ ಹಾನಗಲ್ ಪಾರ್ಕ್ನಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಇ-ಶೌಚಾಲಯ ನಿರ್ಮಿಸಲಿದೆ.
ಸಂಪೂರ್ಣ ಸ್ಟೀಲ್ನಿಂದ ನಿರ್ಮಾಣವಾಗಿರುವ ಇ-ಶೌಚಾಲಯ ತುಕ್ಕು ಹಿಡಿಯುವುದೇ ಇಲ್ಲ. 1, 2, 5 ರೂಪಾಯಿ ಕಾಯಿನ್ ಹಾಕಿದರೆ ಮಾತ್ರ ಬಾಗಿಲು ತೆರೆಯುತ್ತದೆ. 10 ಜನರು ಉಪಯೋಗಿಸಿದ ನಂತರ ತಾನೇ ತಾನಾಗಿ ಸ್ವತ್ಛಗೊಳಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಗುತ್ತಿಗೆದಾರ ಜಿ. ಶ್ರೀಕುಮಾರ್ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Panchamasali ಎಂಬ ಕಾರಣಕ್ಕೆ ಯತ್ನಾಳ್ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
Gayathri Siddeshwar: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಜನ್ಮದಿನ ಆಚರಣೆ
Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ