ಕೂಲಿ ಹಣ ಪಾವತಿಗೆ ರೈತರ ಆಗ್ರಹ
ಜಲಾನಯನ ಯೋಜನೆಯಡಿ ಬದು ನಿರ್ಮಾಣ ಕೂಲಿ ಪಾವತಿಸಿದರೆ ಬೀಜ ಖರೀದಿಗೆ ಅನುಕೂಲ
Team Udayavani, Jun 11, 2019, 8:32 AM IST
ಜಗಳೂರು: ಕೂಲಿ ಹಣ ಪಾವತಿಗೆ ಸಹಾಯಕ ಕೃಷಿ ನಿರ್ದೇಶಕರನ್ನು ರೈತರು ಆಗ್ರಹಿಸಿದರು.
ಜಗಳೂರು: ಕೃಷಿ ಇಲಾಖೆಯ ಜಲಾನಯನ ಯೋಜನೆಯಡಿ ಜಮಿನುಗಳಲ್ಲಿ ಬದು ನಿರ್ಮಾಣ ಮಾಡಿಕೊಂಡ ರೈತರ ಖಾತೆಗಳಿಗೆ ಕೂಲಿ ಹಣ ಪಾವತಿಗೆ ಆಗ್ರಹಿಸಿ ರೈತರು ಸಹಾಯಕ ಕೃಷಿ ನಿರ್ದೇಶಕರನ್ನು ತರಾಟೆ ತೆಗೆದುಕೊಂಡ ಪ್ರಸಂಗ ಸೋಮವಾರ ಇಂದಿಲ್ಲಿ ಜರುಗಿದೆ.
ಸೋಮವಾರ ಬೆಳಗ್ಗೆ ತಾಲೂಕಿನ ಸೊಕ್ಕೆ ಗ್ರಾಮದ ನಲ್ವತ್ತಕ್ಕೂ ಅಧಿಕ ಗ್ರಾಮಸ್ಥರು ಕೃಷಿ ಇಲಾಖೆಗೆ ಆಗಮಿಸಿ ಸಹಾಯಕ ಕೃಷಿ ನಿರ್ದೇಶಕ ಕೆ.ಟಿ.ಬಸಣ್ಣ ಅವರಿಗೆ, ಕೆಲಸ ಮಾಡಿ 2 ತಿಂಗಳು ಕಳೆದರೂ ಕೂಲಿ ಹಣ ಪಾವತಿಯಾಗಿಲ್ಲ. ನಾವು ಬಡ ರೈತರು. ನಮ್ಮ ಭಾಗದಲ್ಲಿ ಮಳೆಯಾಗಿದ್ದು, ಬಿತ್ತನೆ ಬೀಜ ಕೊಂಡುಕೊಳ್ಳುವ ಸಮಯವಾಗಿದೆ. ಕೂಲಿ ಹಣ ಪಾವತಿಸಿದರೆ ಅನುಕೂಲವಾಗುತ್ತದೆ ಎಂದು ಹಂಪಣ್ಣ, ಕಾಡಪ್ಪ ಸೇರಿದಂತೆ ಇತರರು ತಮ್ಮ ನೋವನ್ನು ತೊಡಿಕೊಂಡರು.
ಈಗಾಗಲೇ ನಿಮ್ಮ ಖಾತೆಗಳಿಗೆ ಹಣ ಜಮಾ ಮಾಡಲಾಗಿದೆ. ಸರಕಾರಿ ರಜೆ ಇರುವುದರಿಂದ ವಿಳಂಬವಾಗಿರಬಹುದು ಎಂದು ಸಹಾಯಕ ಕೃಷಿ ನಿರ್ದೇಶಕರು ಸಮಾಜಾಯಿಷಿ ನೀಡಿದಾಗ, ಕೆಲಸ ಮಾಡಿ ಎರಡು ತಿಂಗಳಾದರೂ ಸಹ ಹಣ ಪಾವತಿಗೆ ವಿಳಂಬ ಮಾಡುತ್ತೀರಿ. ಜೆಸಿಬಿ ಯಂತ್ರದಲ್ಲಿ ಕೆಲಸ ಮಾಡಿದವರಿಗೆ ಮಾತ್ರ ಸಕಾಲಕ್ಕೆ ಹಣ ತಲುಪುತ್ತದೆ. ಗುಂಡಿ ತೆಗೆದರೆ 750 ರೂ. ಎಂದು ಹೇಳುತ್ತಿರಿ. ನಮಗೆ 500 ರೂ. ಮಾತ್ರ ಪಾವತಿಸುತ್ತೀರಿ. ಕಷ್ಟಪಟ್ಟು ಕೆಲಸ ಮಾಡುವವರಿಗೆ ಈ ರೀತಿ ಅನ್ಯಾಯ ಮಾಡಬಾರದು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಬದು ಮತ್ತು ಕಂದ ನಿರ್ಮಾಣ ಮಾಡುವ ಸಂದರ್ಭದಲ್ಲಿ 15 ದಿನಗಳಿಗೊಮ್ಮೆ ಹಣ ಪಾವತಿ ಭರವಸೆ ನೀಡಲಾಗಿತ್ತು. ಈಗಾಗಲೇ ನಾವು ಸುಮಾರು 1000 ಗುಂಡಿಗಳನ್ನು ತೆಗೆದಿದ್ದೇವೆ. ಈಗ ನೋಡಿದರೆ ನಿಮ್ಮ ಖಾತೆಗೆ ಜಮಾ ಮಾಡಿದ್ದೇವೆ ಎಂದು ಸುಳ್ಳು ಹೇಳುತ್ತೀರಿ. ನಮ್ಮ ಖಾತೆಗೆ ಎಂದು ಹಣ ಜಮಾ ಮಾಡುತ್ತೀರೆಂದು ತಿಳಿಸಿದರೆ ಅಂದೇ ಬರುತ್ತೇವೆ ಎಂದು ರೈತರು ಒತ್ತಾಯಿಸಿದಾಗ, ಬುಧವಾರ ವೇಳೆಗೆ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ ಎಂದು ಸಹಾಯಕ ನಿರ್ದೇಶಕರು ತಿಳಿಸಿದರು.
ಈ ಸಂದರ್ಭದಲ್ಲಿ ರೈತರಾದ ಈರಜ್ಜ, ಮಂಜಣ್ಣ, ಕಾಡಪ್ಪ, ಕೊಟ್ರಪ್ಪ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Davanagere: ಮತದಾನ ಜಾಗೃತಿ ಲಾಂಛನದಲ್ಲಿ ಅಪರೂಪದ ಪ್ರಾಣಿ ಚಿತ್ರ ಬಳಕೆ
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ