ಹೂವು-ಹಣ್ಣು ಬೆಳೆಗಾರರಿಗೆ ಸಿಕ್ಕೀತೆ ಪರಿಹಾರ?


Team Udayavani, May 15, 2021, 4:21 PM IST

ಹೂವು-ಹಣ್ಣು ಬೆಳೆಗಾರರಿಗೆ ಸಿಕ್ಕೀತೆ ಪರಿಹಾರ?

ದಾವಣಗೆರೆ: ಕಳೆದ ವರ್ಷ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಜನತಾ ಕರ್ಫ್ಯೂ ವೇಳೆ ಬೆಳೆ ಮಾರಾಟ ಮಾಡಲಾಗದೆ ನಷ್ಟ ಅನುಭವಿಸಿದ ಹಣ್ಣು, ಹೂ ಹಾಗೂ ತರಕಾರಿ ಬೆಳೆಗಾರರಿಗೆ ಸರ್ಕಾರ ಪರಿಹಾರ ನೀಡಿತ್ತು. ಈ ವರ್ಷ ರಾಜ್ಯ ಸರ್ಕಾರ ಕೊರೊನಾ ಕರ್ಫ್ಯೂ ಘೋಷಿಸಿರುವುದರಿಂದ ಬೆಳೆಗಾರರು ಮತ್ತೆ ಸರ್ಕಾರ ಪರಿಹಾರ ಘೋಷಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಕಳೆದ ವರ್ಷದ ಜನತಾ ಕರ್ಫ್ಯೂ ವೇಳೆ ಹಣ್ಣು ಮತ್ತು ತರಕಾರಿ ಹಾನಿಗೆ ಹೆಕ್ಕೇರ್‌ಗೆ 15 ಸಾವಿರ ರೂ. ಹಾಗೂ ಹೂವು ಹಾನಿಗೆ ಹೆಕ್ಕೇರ್‌ಗೆ 25 ಸಾವಿರ ರೂ.ನಂತೆ ಪರಿಹಾರ ಘೋಷಿಸಲಾಗಿತ್ತು. ಜಿಲ್ಲೆಯಲ್ಲಿ 5836 ರೈತರಿಗೆ ಸಂಬಂಧಿಸಿ 3681 ಹೆಕ್ಕೇರ್‌ ಪ್ರದೇಶದ 5.61 ಕೋಟಿ ರೂ. ಗಳಷ್ಟು ಹಣ್ಣು, ಹೂವು ಮತ್ತು ತರಕಾರಿ ಬೆಳೆ ಹಾನಿಯಾಗಿತ್ತು. ಸರ್ಕಾರದಿಂದ 5.28 ಕೋಟಿ ರೂ. ಪರಿಹಾರ ಬಿಡುಗಡೆಯಾಗಿದ್ದು, ಇದರಲ್ಲಿ 4.15 ಕೋಟಿ ರೂ. ಪರಿಹಾರವನ್ನು ಹಂತ ಹಂತವಾಗಿ 4436 ರೈತರಿಗೆ ವಿತರಣೆ ಮಾಡಲಾಗಿದೆ.

ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ ಮಾಡದ, ಹಿಸ್ಸೆ ಮಾಲೀಕರ ಸಮಸ್ಯೆ ಇರುವ ರೈತರಿಗೆ ಪಾವತಿಯಾಗುವುದು ಬಾಕಿ ಇದೆ. ಹಣ್ಣು, ಹೂವು ಹಾಗೂ ತರಕಾರಿ ಬೆಳೆಗಾರರಿಗೆ ನೀಡಿದ ಪರಿಹಾರ ಜಗಳೂರು ತಾಲೂಕಿನ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ದೊರಕಿತ್ತು. ಜಗಳೂರು ತಾಲೂಕಿನ 2116 ರೈತರಿಗೆ ಸಂಬಂಧಿಸಿದ 1443 ಹೆಕ್ಕೇರ್‌ ಬೆಳೆ ಹಾನಿಗಾಗಿ 2.17 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. ಉಳಿದಂತೆ ದಾವಣಗೆರೆ ತಾಲೂಕಿನ 711 ರೈತರಿಗೆ 64 ಲಕ್ಷ ರೂ., ಚನ್ನಗಿರಿ ತಾಲೂಕಿನ 605 ರೈತರಿಗೆ 49 ಲಕ್ಷ ರೂ., ಹೊನ್ನಾಳಿ ತಾಲೂಕಿನ 758 ರೈತರಿಗೆ 65 ಲಕ್ಷ ರೂ., ಹರಿಹರ ತಾಲೂಕಿನ 246 ರೈತರಿಗೆ 18.82 ಲಕ್ಷ ರೂ. ಪರಿಹಾರ ಮೊತ್ತ ಪಾವತಿಸಲಾಗಿದೆ.

ಹಣ್ಣು ಪರಿಹಾರ: ಜನತಾ ಕರ್ಫ್ಯೂ ಕಾರಣದಿಂದ ಜಿಲ್ಲೆಯಲ್ಲಿ ಕಳೆದ ವರ್ಷ 2023 ರೈತರಿಗೆ ಸಂಬಂಧಿಸಿದಂತೆ 1280 ಹೆಕ್ಕೇರ್‌ ಪ್ರದೇಶದ ಹಣ್ಣು ಹಾನಿಯಾಗಿತ್ತು. ಇದಕ್ಕಾಗಿ 1.29 ಕೋಟಿ ರೂ. ಪರಿಹಾರ ಬಿಡುಗಡೆಯಾಗಿದೆ. ದಾವಣಗೆರೆ ತಾಲೂಕಿನ 345 ರೈತರಿಗೆ 29 ಲಕ್ಷ ರೂ., ಚನ್ನಗಿರಿ ತಾಲೂಕಿನ 567 ರೈತರಿಗೆ 46 ಲಕ್ಷ ರೂ., ಹೊನ್ನಾಳಿ ತಾಲೂಕಿನ 310 ರೈತರಿಗೆ 30ಲಕ್ಷ ರೂ., ಹರಿಹರ ತಾಲೂಕಿನ 124 ರೈತರಿಗೆ 10ಲಕ್ಷ ರೂ., ಜಗಳೂರು ತಾಲೂಕಿನ 111 ರೈತರಿಗೆ 12ಲಕ್ಷ ರೂ. ಪರಿಹಾರ ಪಾವತಿಸಲಾಗಿದೆ.

ತರಕಾರಿ ಪರಿಹಾರ: ಜನತಾ ಕರ್ಫ್ಯೂ ಕಾರಣದಿಂದ ಜಿಲ್ಲೆಯಲ್ಲಿ ಕಳೆದ ವರ್ಷ 3536 ರೈತರಿಗೆ ಸಂಬಂಧಿಸಿದಂತೆ 2308 ಹೆಕ್ಕೇರ್‌ ಪ್ರದೇಶದ ತರಕಾರಿ ಹಾನಿಯಾಗಿತ್ತು. ಇದಕ್ಕಾಗಿ 3.78 ಕೋಟಿ ರೂ. ಬಿಡುಗಡೆಯಾಗಿದೆ. ಇದರಲ್ಲಿ 2.65 ಕೋಟಿ ರೂ. ಪರಿಹಾರ ರೈತರಿಗೆ ಪಾವತಿಸಲಾಗಿದೆ. ದಾವಣಗೆರೆ ತಾಲೂಕಿನ 332ರೈತರಿಗೆ 30 ಲಕ್ಷ ರೂ., ಚನ್ನಗಿರಿ ತಾಲೂಕಿನ 29 ರೈತರಿಗೆ, 2.51 ಲಕ್ಷ ರೂ., ಹೊನ್ನಾಳಿ ತಾಲೂಕಿನ 339 ರೈತರಿಗೆ 25 ಲಕ್ಷ ರೂ., ಹರಿಹರ ತಾಲೂಕಿನ 45 ರೈತರಿಗೆ 3.5 ಲಕ್ಷ ರೂ., ಜಗಳೂರು ತಾಲೂಕಿನ 1987 ರೈತರಿಗೆ 2.02 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. 280 ರೈತರಿಗೆ ಪರಿಹಾರ ವಿತರಿಸುವುದು ಬಾಕಿ ಇದೆ.

ಪುಷ್ಪ ಪರಿಹಾರ: ಜನತಾ ಕರ್ಫ್ಯೂ ಕಾರಣದಿಂದ ಜಿಲ್ಲೆಯಲ್ಲಿ ಕಳೆದ ವರ್ಷ 277 ರೈತರಿಗೆ ಸಂಬಂಧಿಸಿ 92.78 ಹೆಕ್ಕೇರ್‌ ಪ್ರದೇಶದ ಹೂವು ಹಾನಿಯಾಗಿತ್ತು. ಇದಕ್ಕಾಗಿ 20.86 ಲಕ್ಷ ರೂ. ಬಿಡುಗಡೆಯಾಗಿದೆ. ಎಲ್ಲ ರೈತರಿಗೆ ಪರಿಹಾರ ಪಾವತಿಸಲಾಗಿದೆ. ದಾವಣಗೆರೆ ತಾಲೂಕಿನ 34 ರೈತರಿಗೆ 3.92 ಲಕ್ಷ ರೂ., ಚನ್ನಗಿರಿ ತಾಲೂಕಿನ 9 ರೈತರಿಗೆ 78,224 ರೂ., ಹೊನ್ನಾಳಿ ತಾಲೂಕಿನ 109 ರೈತರಿಗೆ 10ಲಕ್ಷ ರೂ., ಹರಿಹರ ತಾಲೂಕಿನ 77 ರೈತರಿಗೆ 4.5 ಲಕ್ಷ ರೂ., ಜಗಳೂರು ತಾಲೂಕಿನ 18 ರೈತರಿಗೆ 6.17 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಹಣ್ಣು, ಹೂವು ಹಾಗೂ ತರಕಾರಿ ಬೆಳೆಗಾರರಿಗೆ ಸರ್ಕಾರ ನೀಡಿದ ಪರಿಹಾರಧನ ಕನಿಷ್ಠವಾಗಿದ್ದರೂ ಇಷ್ಟಾದರೂ ರೈತರಿಗೆ ತಲುಪಿತು ಎಂಬ ಸಮಾಧಾನ ರೈತರದ್ದಾಗಿದೆ. ಈ ವರ್ಷವೂ ಸರ್ಕಾರ ಒಂದಿಷ್ಟು ಪರಿಹಾರ ಘೋಷಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಕರ್ಫ್ಯೂ ವೇಳೆ ಕೃಷಿ, ತೋಟಗಾರಿಕೆ ಉತ್ಪನ್ನ ಮಾರಾಟಕ್ಕೆ ಅವಧಿ ವಿಸ್ತರಣೆ ಜತೆಗೆ ಸಾಗಾಟಕ್ಕೆ ಅಡ್ಡಿ ಇಲ್ಲದಿದ್ದರೂ ಕರ್ಫ್ಯೂ ಕಾರಣದಿಂದ ಬೇಡಿಕೆ ಬಹಳಷ್ಟು ಕುಸಿದಿದೆ. ಇದರಿಂದಾಗಿ ಉತ್ಪನ್ನಗಳ ಬೆಲೆಯೂ ಕುಸಿದಿದೆ.

ಕೆಲವೊಂದು ಬೆಳೆಗಳ ಬೆಲೆ ಸಾಗಾಟ ಮಾಡುವ ವೆಚ್ಚವೂ ಭರಿಸದಷ್ಟು ಇಳಿದಿದ್ದು ಬೆಳೆ ಜಮೀನಿನಲ್ಲಿಯೇ ಕೊಳೆಯುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ಈ ವರ್ಷವೂ ಪರಿಹಾರ ಘೋಷಿಸುವುದು ಸೂಕ್ತ. ಇ. ಶ್ರೀನಿವಾಸ್‌, ರೈತ ಮುಖಂಡ

ಹೂವು, ಹಣ್ಣು, ತರಕಾರಿ ಬೆಳೆ ಪರಿಹಾರವಾಗಿ 4.15 ಕೋಟಿ ರೂ. ಪರಿಹಾರವನ್ನು 4436 ರೈತರಿಗೆ ವಿತರಣೆ ಮಾಡಲಾಗಿದೆ. ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ ಮಾಡದ, ಹಿಸ್ಸೆ ಮಾಲೀಕರ ಸಮಸ್ಯೆ ಇರುವ ಕೆಲವು ರೈತರಿಗೆ ಪಾವತಿಯಾಗುವುದು ಬಾಕಿ ಇದೆ. ಈ ವರ್ಷ ರಾಜ್ಯದಲ್ಲಿ ಕರ್ಫ್ಯೂ ಜಾರಿಯಲ್ಲಿದೆಯಾದರೂ ಕೃಷಿ, ತೋಟಗಾರಿಕೆ ಉತ್ಪನ್ನ ಮಾರಾಟಕ್ಕೆ ಹೆಚ್ಚಿನ ಅಡ್ಡಿಯಾಗಿಲ್ಲ. ಲಕ್ಷ್ಮೀಕಾಂತ್‌ ಬೊಮ್ಮನ್ನಾರ್‌, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ

ಎಚ್‌.ಕೆ. ನಟರಾಜ

ಟಾಪ್ ನ್ಯೂಸ್

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gayathri Siddeshwar: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಜನ್ಮದಿನ ಆಚರಣೆ

Gayathri Siddeshwar: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಜನ್ಮದಿನ ಆಚರಣೆ

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

Davanagere: ನಾಮಪತ್ರ ಸಲ್ಲಿಸಿದ ಬಿಜೆಪಿ- ಕಾಂಗ್ರೆಸ್ ಅಭ್ಯರ್ಥಿಗಳು

Davanagere: ನಾಮಪತ್ರ ಸಲ್ಲಿಸಿದ ಬಿಜೆಪಿ- ಕಾಂಗ್ರೆಸ್ ಅಭ್ಯರ್ಥಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.