ನಗರದೆಲ್ಲೆಡೆ ಗುರುಪೌರ್ಣಿಮೆ ಸಂಭ್ರಮ-ವಿವಿಧ ಕಾರ್ಯಕ್ರಮ
Team Udayavani, Jul 28, 2018, 10:59 AM IST
ದಾವಣಗೆರೆ: ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ ಶುಕ್ರವಾರ ಹೋಮ, ಹವನ, ಉಪನ್ಯಾಸ, ಅನ್ನ ಸಂತರ್ಪಣೆ… ವಿವಿಧ ರಚನಾತ್ಮಕ ಕಾರ್ಯಕ್ರಮದ ಮೂಲಕ ಗುರುಪೌರ್ಣಿಮೆಯನ್ನು ಶ್ರದ್ಧಾಪೂರ್ವಕವಾಗಿ ಆಚರಿಸಲಾಯಿತು.
ಶ್ರೀ ಶಿರಡಿ ಸಾಯಿಬಾಬಾ ಸೇವಾ ಕಲ್ಯಾಣ ಟ್ರಸ್ಟ್ನಿಂದ ತೊಗಟವೀರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಗುರುಪೌರ್ಣಿಮೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಬಾಳೆಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮಿಜಿ, ನವಗ್ರಹಗಳಲ್ಲಿ ಅತಿ ದೊಡ್ಡದಾದ ಗ್ರಹ ಗುರು. ಅಂತೆಯೇ ಲೌಕಿಕ ಬದುಕಿನಲ್ಲಿ ಗುರುವಿನ ಸ್ಥಾನ ಅತ್ಯಂತ ಪ್ರಮುಖ. ಗುರುವಿನ ಒಲುಮೆಯ ಪಡೆಯಲು ಸಾಕಷ್ಟು ಪರಿಶ್ರಮ
ಪಡಬೇಕಾಗುತ್ತದೆ. ಹರ ಮುನಿದರೂ ಗುರು ಕಾಯುವನು… ಎನ್ನುವ ಮಾತಿನಂತೆ ಗುರು ನಮ್ಮನ್ನು ಸದಾ ಕಾಪಾಡುತ್ತಾನೆ. ಅಂತಹ ಗುರುವಿನ ಕೃಪೆಗೆ ಎಲ್ಲರೂ ಪಾತ್ರರಾಗಬೇಕು ಎಂದು ತಿಳಿಸಿದರು.
ತಂದೆ-ತಾಯಿ ಸಹ ನಮಗೆ ಗುರುಗಳು. ತಾಯಿ ಮೊದಲ ಗುರು. ಗುರುವಿನ ಮೂಲಕ ಲೌಕಿಕ ಮಾತ್ರವಲ್ಲ ಆಧ್ಯಾತ್ಮಿಕ ಶಿಕ್ಷಣ ಪಡೆಯಬಹುದು. ಜಗತ್ತಿನಲ್ಲಿ ಆಧ್ಯಾತ್ಮಿಕ ಸಂಪತ್ತು ನೀಡುವಂತಹ ನೆಮ್ಮದಿಯನ್ನು ಬೇರೆ ಯಾವ ಸಂಪತ್ತಿನಿಂದಲೂ ಪಡೆಯಲಿಕ್ಕೆ ಸಾಧ್ಯ ಇಲ್ಲ. ಅನೇಕರು ಹಣದ ಸಂಪತ್ತಿನ ಮೂಲಕ ನೆಮ್ಮದಿ ಪಡೆಯಬಹುದು ಅಂದುಕೊಂಡಿದ್ದಾರೆ. ಹಣದ ಬಲದಿಂದ ಪಡೆಯುವ ನೆಮ್ಮದಿ ಕ್ಷಣಿಕ. ಆಧ್ಯಾತ್ಮಿಕ ಸಂಪತ್ತು ಶಾಶ್ವತ. ಅಂತಹ ಸಂಪತ್ತು ದೊರೆಯುವುದು ಗುರುವಿನ ಮೂಲಕ. ನಾವೆಲ್ಲರೂ ಗುರುವಿಗೆ
ತಲೆಬಾಗಬೇಕು ಎಂದು ತಿಳಿಸಿದರು.
ಶ್ರೀ ಶಿರಡಿ ಸಾಯಿಬಾಬಾ ಸೇವಾ ಕಲ್ಯಾಣ ಟ್ರಸ್ಟ್ನಿಂದ ಪ್ರಥಮ ಬಾರಿಗೆ ಗುರುಪೌರ್ಣಿಮೆ ನಡೆಸುತ್ತಿರುವುದು ಸಂತೋಷದ ವಿಚಾರ. ಸಂಘ-ಸಂಸ್ಥೆಗಳು ನೀ-ನಾ ಎನ್ನುವುದು ಬಿಟ್ಟು ನಾವು ಎಂಬ ಮನೋಭಾವನೆಯೊಂದಿಗೆ ಸಾಮಾಜಿಕ, ಧಾರ್ಮಿಕ ಸೇವಾ ಕಾರ್ಯದಲ್ಲಿ ತೊಡಗಬೇಕು ಎಂದು ತಿಳಿಸಿದರು.
ಟ್ರಸ್ಟ್ ಅಧ್ಯಕ್ಷ ಶಿವಮೂರ್ತಿ ಇಟ್ಟಿಗುಡಿ, ಉಪಾಧ್ಯಕ್ಷರಾದ ಸರ್ಫರಾಜ್ ಅಲಿಖಾನ್, ಎಸ್.ಬಿ. ಜಿನದತ್ತ, ಪ್ರಧಾನ ಕಾರ್ಯದರ್ಶಿ ಕೆ.ಸಿ. ಲಿಂಗರಾಜ್, ಸೂರಜ್, ಜಿ. ಬಸವರಾಜ್ ಇತರರು ಇದ್ದರು.
ಶ್ರೀ ಶಿರಡಿ ಸಾಯಿ ಭಿಕ್ಷಾ ಕೇಂದ್ರದ ದಾವಣಗೆರೆ ಶಾಖೆಯಿಂದ ಆರ್.ಎಚ್. ಮಿನಿ ಛತ್ರದಲ್ಲಿ ಮುದ್ರಾ ಶಿರೋಮಣಿ ಎಂದೇ
ಖ್ಯಾತರಾಗಿರುವ ಶ್ರೀ ಲಕ್ಷ್ಮೀ ಶ್ರೀನಿವಾಸ ಗುರೂಜಿ ಸಾನ್ನಿಧ್ಯದಲ್ಲಿ ದತ್ತಾತ್ರೇಯ ಹೋಮ, ಸನ್ಮಾನ, ಅನ್ನ ಸಂತರ್ಪಣೆ ನಡೆಯಿತು. ಎಂಸಿಸಿ ಬಿ ಬ್ಲಾಕ್ನಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಶ್ರೀ ಶಿರಡಿ ಸಾಯಿಬಾಬಾ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಪಾಲಕಿ ಉತ್ಸವ, ಧುನಿ ಪೂಜೆ, ಶೇಜಾರತಿ, ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಶಿವಾಜಿ ನಗರದ ಐರಣಿ ಶಾಖಾ ಮಠದಲ್ಲಿ ಉಪನ್ಯಾಸ ನಡೆಯಿತು.
ಹಳೆ ಪಿಬಿ ರಸ್ತೆಯ ಕರೂರು ಕ್ರಾಸ್ನಲ್ಲಿರುವ ಶ್ರೀ ಮಾತಾ ಮಾಣಿಕ್ಯೇಶ್ವರಿ ಸುಖಾಶ್ರಮದಲ್ಲಿ ಗುರುಪೌರ್ಣಿಮೆ, ಅಮ್ಮನವರ 85ನೇ ಜಯಂತ್ಯುತ್ಸವ ನಡೆಯಿತು. ಶ್ರೀ ಅಕ್ಕಮಹಾದೇವಿ ಸಮಾಜ. ಬಾಡ ಕ್ರಾಸ್ ಶ್ರೀ ವೀರೇಶ್ವರ ಪುಣ್ಯಾಶ್ರಮ. ಜಯದೇವ ವೃತ್ತದದ ದತ್ತ ಮಂದಿರ, ದೇವರಾಜ ಅರಸು ಬಡಾವಣೆಯ ಸಿ ಬ್ಲಾಕ್ನಲ್ಲಿರುವ ಆದರ್ಶ ಯೋಗ ಪ್ರತಿಷ್ಠಾನ, ಕೊಂಡಜ್ಜಿ ರಸ್ತೆಯ ವಿಜಯನಗರ ಬಡಾವಣೆ, ವಿವಿಧ ಶಾಲೆಯಲ್ಲಿ ಗುರುಪೌರ್ಣಿಮೆ ಕಾರ್ಯಕ್ರಮ ನಡೆದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ