ಸಿದ್ದರಾಮಯ್ಯ ಅಪ್ಪಟ ಢೋಂಗಿವಾದಿ


Team Udayavani, Jul 29, 2017, 9:49 AM IST

29-DV-5.jpg

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಜವಾದಿಯೂ ಅಲ್ಲ. ಲೋಹಿಯವಾದಿಯೂ ಅಲ್ಲ. ಅಪ್ಪಟ ಢೋಂಗಿವಾದಿ ಎಂದು ಜೆಡಿಎಸ್‌ ಮುಖಂಡ ಎಚ್‌. ವಿಶ್ವನಾಥ್‌ ಲೇವಡಿ ಮಾಡಿದ್ದಾರೆ. 

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಈ ಹಿಂದೆ ಮೈಸೂರಿಗೆ ಸಮಾಜವಾದಿ ಮುಖಂಡರಾದ ಜೆ.ಎಚ್‌. ಪಟೇಲ್‌, ಶಾಂತವೇರಿ ಗೋಪಾಲಗೌಡರನ್ನು ಕರೆದುಕೊಂಡು ಬಂದವನು. ಸಮಾಜವಾದಿ ಪಕ್ಷದ ಬಾವುಟ ಹಿಡಿದು ಓಡಾಡಿದವನು. ಒಮ್ಮೆಯೂ ಸಿದ್ದರಾಮಯ್ಯ ಸಮಾಜವಾದಿ ಬಾವುಟ ಹಿಡಿದಿದ್ದಾಗಲಿ, ಚಳವಳಿಯಲ್ಲಿ ಭಾಗವಹಿಸಿದ್ದಾಗಲಿ ನೋಡಿಯೇ ಇಲ್ಲ. ಅವರು ಸಮಾಜವಾದಿಯೂ ಅಲ್ಲ. ಲೋಹಿಯವಾದಿಯೂ ಅಲ್ಲ ಢೋಂಗಿವಾದಿ ಎಂದು ಮೂದಲಿಸಿದರು.

ಸಮಾಜವಾದಿಯಾಗಿದ್ದರೆ ಅಧಿಕಾರ ಕೊಟ್ಟಂತಹ ಜನರಿಗೆ ಮೋಸ ಮಾಡುವುದಿಲ್ಲ. ಸಮಾಜವಾದಿ ತತ್ವದ ಮುಖವೂ ಮುಗುಚಿ ಬೀಳುವುದಿಲ್ಲ. ಸಿದ್ದರಾಮಯ್ಯರನ್ನು ಮಂತ್ರಿ, ಉಪ ಮುಖ್ಯಮಂತ್ರಿ, ಜೆಡಿಎಸ್‌ ಅಧ್ಯಕ್ಷ ಮಾಡಿದ್ದು ದೇವೇಗೌಡರು. ಅಂತವರಿಗೆ ಮೋಸ ಮಾಡಿದರು. ಹಾಗಾಗಿ ನನಗೂ ಪ್ರಾರಂಭದಲ್ಲಿ ಸಿದ್ದರಾಮಯ್ಯ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ಅದಕ್ಕಾಗಿಯೇ ನಾನು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರೋಮಾಂಚನಗೊಂಡಿದ್ದೆ. ಈಗ ಅವರು ಏನು ಎಂಬುದು ಗೊತ್ತಾಗಿದೆ. ಈಗ ಅವರದ್ದು ಅಧಿಕಾರದ ಕೊನೆಯ ದಿನಗಳು ಎಂದು ಪ್ರಶ್ನೆಯೊಂದಕ್ಕೆ
ಉತ್ತರಿಸಿದರು. 

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಕಾಸು ನೋಡಿದ ಮೇಲೆಯೇ ಕೆಟ್ಟಿದ್ದು. ನಾನೇ ಒಮ್ಮೆ ಸಿದ್ದರಾಮಯನ್ನನ್ನೇ, ಎಲ್ಲಿ ಹೋದ ಆ ಡಿಸಿಎಂ ಆಗಿದ್ದ ಆ ಸಿದ್ದರಾಮಯ್ಯ… ಎಂದು ಕೇಳಿದ್ದೆ, ಸೋನಿಯಾ ಗಾಂಧಿ ಬಿಲ್‌ಕುಲ್‌ ಬೇಡ ಎಂದಾಗ ನಾನೇ ಅವರಿಗೆ ಮನವರಿಕೆ ಮಾಡಿ, ಕಾಂಗ್ರೆಸ್‌ಗೆ ಸೇರಿಸಿದೆ, ಮುಖ್ಯಮಂತ್ರಿಯಾಗಲು ಸಾಕಷ್ಟು ಪ್ರಯತ್ನವೂ ಪಟ್ಟೆ. ಆದರೆ, ಬೇಡವೆಂದರೂ ಕಾಂಗ್ರೆಸ್‌ಗೆ ಕರೆ ತಂದು, ಮುಖ್ಯಮಂತ್ರಿಯನ್ನಾಗಿ ಮಾಡಿದ್ದೆನೋ ಆತನಿಂದಲೇ ಕಾಂಗ್ರೆಸ್‌ ಬಿಡುವಂತಾಗಿದ್ದು ರಾಜಕೀಯ ಜೀವನದ ಅತ್ಯಂತ ನೋವಿನ ಮತ್ತು ಮಹತ್ತರ ತಿರುವಿನ ವಿಚಾರ ಎಂದು ಹೇಳಿದರು.

40 ವರ್ಷಗಳ ಕಾಲ ಕಾಂಗ್ರೆಸ್‌ ನನ್ನ ತಾಯಿ ಎಂದು ಹೇಳುತ್ತಾ ಆ ಪಕ್ಷದ ಪಥದಲ್ಲಿ ಸಾಗಿ ಬಂದವನು. ಎಂದಿಗೂ ಕಾಂಗ್ರೆಸ್‌ಗೆ ಸಣ್ಣ ದ್ರೋಹವನ್ನೂ ಮಾಡಿದವನಲ್ಲ. ಅಂತಹವನು ಪಕ್ಷ ಬಿಡಬೇಕಾಗಿ ಬಂದಿದ್ದು ಮನಸ್ಸಿಗೆ ಎಷ್ಟು ನೋವು ಉಂಟು ಮಾಡಿರಬಹುದು ಎಂದು ಜನರೇ ಯೋಚಿಸಬೇಕು ಎಂದು ಹೇಳಿದರು.  ಕಾಂಗ್ರೆಸ್‌ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಸಂದರ್ಭದಲ್ಲಿ ಮಾಧ್ಯಮದವರು ನನ್ನನ್ನು ಭೇಟಿ ಮಾಡಿ ಮೈಸೂರಿನಲ್ಲಿ ಸರ್ಕಾರಿ ಕಟ್ಟಡ ಕಟ್ಟಲು, ಜನರು ಮನೆ ಕಟ್ಟಿಕೊಳ್ಳಲೂ ಮರಳು ಸಿಗುತ್ತಿಲ್ಲವಲ್ಲ ಎಂಬ ಪ್ರಶ್ನೆಗೆ ನೀವು ಹೇಳಿದ್ದರಲ್ಲಿ ತಪ್ಪೇನು ಇಲ್ಲ… ಎಂಬ ಉತ್ತರ ನೀಡಿದ್ದೆ. ಅದನ್ನು ಯಾರೋ ಸಿದ್ದರಾಮಯ್ಯಗೆ ತಿಳಿಸಿದರು. ಹಿತ್ತಾಳೆ ಕಿವಿಯವರು ಎಲ್ಲಾ ಕೇಳಿದರು.  ಅಲ್ಲಿಂದಲೇ ನಮ್ಮಿಬ್ಬರ ಗೆಳೆತನದಲ್ಲಿ ಬಿರುಕು ಆರಂಭವಾಗಿ, ಕೊನೆಗೆ ಪಕ್ಷವನ್ನೇ ಬಿಡಬೇಕಾಯಿತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾಂಗ್ರೆಸ್‌ ಬಿಟ್ಟ ನಂತರ ಖುದ್ದು ಯಡಿಯೂರಪ್ಪನವರೇ ಬಿಜೆಪಿ ಸೇರುವಂತೆ ಹೇಳಿದ್ದರು. ಹೈಕಮಾಂಡ್‌ನಿಂದಲೂ ಒತ್ತಡ ಇತ್ತು. ನಾನು ಅರಸುರವರ ಜೊತೆಗಿದ್ದ ಕಾಲದಿಂದಲೂ ಜಾತ್ಯತೀಯ ಮನೋಭಾವ ರೂಢಿಸಿಕೊಂಡು ಬಂದವನು. ಹಾಗಾಗಿಯೇ ಬಿಜೆಪಿಗೆ ಸೇರಲಿಲ್ಲ. ಜಾತ್ಯತೀತ ಮನೋಭಾವದ ಜೆಡಿಎಸ್‌ ಸೇರಿ, ಕಾಂಗ್ರೆಸ್‌ ಪಥ ಬಿಟ್ಟು ಈಗ ಕುಮಾರಪಥದಲ್ಲಿ ಸಾಗುತ್ತಿದ್ದೇನೆ ಎಂದು ತಿಳಿಸಿದರು.

ಹಿಂದಿ ಜನರು ಇರುವ ಎರಡು ರಾಷ್ಟ್ರೀಯ ಪಕ್ಷಗಳ ಹೈಕಮಾಂಡ್‌ ಇಲ್ಲಿನವರನ್ನ ಊಳಿಗದವರಂತೆ ನಡೆಸಿಕೊಂಡಿವೆ. ಇಲ್ಲಿನ ಪರಿಸ್ಥಿತಿಗೆ ತಕ್ಕಂತೆ ಆಡಳಿತ ನೀಡಲು ಬಿಡುವುದೇ ಇಲ್ಲ ಆ ಕಾರಣಕ್ಕೆ ರಾಜ್ಯದ ಭಾಷೆ, ನದಿ, ಗಡಿ ಉಳಿಸಿಕೊಳ್ಳಲು ಪ್ರಾದೇಶಿಕ ಪಕ್ಷಗಳು ಬಲಿಷ್ಟವಾಗಬೇಕು ಎಂದು ಜೆಡಿಎಸ್‌ ಸೇರಿದ್ದೇನೆ. ಪ್ರಾದೇಶಿಕ ಪಕ್ಷಗಳ ಏಕೆ ಬಲಿಷ್ಟವಾಗಬೇಕು ಎಂಬ ವಿಚಾರವನ್ನು ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ರಾಜ್ಯ ಪರ್ಯಟನೆ ಪ್ರಾರಂಭಿಸಿದ್ದೇನೆ ಎಂದ ಅವರು ಹುಣಸೂರು ಕ್ಷೇತ್ರದಿಂದ ಕಣಕ್ಕೆ ಇಳಿಯುವೆ ಎಂದು ತಿಳಿಸಿದರು.

ಮಾಜಿ ಶಾಸಕ ಎಂ. ಬಸವರಾಜ್‌, ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಬಿ. ಚಿದಾನಂದಪ್ಪ, ಜಿಲ್ಲಾ ಪಂಚಾಯತ್‌ ಸದಸ್ಯೆ ಹೇಮಾವತಿ, ಯುವ ಜೆಡಿಎಸ್‌ ಅಧ್ಯಕ್ಷ ಜೆ. ಅಮಾನುಲ್ಲಾಖಾನ್‌, ಟಿ. ದಾಸಕರಿಯಪ್ಪ, ಎಚ್‌.ಸಿ. ಗುಡ್ಡಪ್ಪ, ಗಣೇಶ್‌ ದಾಸಕರಿಯಪ್ಪ, ಕಡತಿ ತಿಪ್ಪೇಸ್ವಾಮಿ, ಟಿ. ಅಸರ್‌, ಶೀಲಾಕುಮಾರಿ, ಶ್ವೇತಾ ರಾಘವೇಂದ್ರ ಇದ್ದರು. 

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

1-wqeqwe

Davanagere: ಮತದಾನ ಜಾಗೃತಿ ಲಾಂಛನದಲ್ಲಿ ಅಪರೂಪದ ಪ್ರಾಣಿ ಚಿತ್ರ ಬಳಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.