ಹಾಲಿವಾಣ: ಮೋದಿ ರಥಯಾತ್ರೆಗೆ ಸ್ವಾಗತ
Team Udayavani, Feb 10, 2019, 6:11 AM IST
ಮಲೇಬೆನ್ನೂರು: ಮೋದಿ ಅವರು ಪ್ರಧಾನಿ ಹುದ್ದೆಗೆ ಏರಿದ ಕ್ಷಣದಿಂದಲೂ ರಾಷ್ಟ್ರವು ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನ ಕಂಪನ್ನು ಬೀರಿ ವಿಶ್ವಗುರುವಾಗುವತ್ತ ಸಾಗಿದೆ. ಆದ್ದರಿಂದ ಭಾರತೀಯರೆಲ್ಲರೂ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿಯನ್ನಾಗಿಸಲು ಕೈಜೋಡಿಸಬೇಕೆಂದು ಹಾಲಿವಾಣ ಗ್ರಾಮದ ಟೀಮ್ ಮೋದಿ ಸಂಚಾಲಕ ಚೇತನ್ ಕುಮಾರ್ ಕರೆ ನೀಡಿದರು.
ಚಕ್ರವರ್ತಿ ಸೂಲಿಬೇಲೆ ಸಾರಥ್ಯದ ಟೀಮ್ ಮೋದಿ ಕಾರ್ಯಕ್ರಮದ ಅಂಗವಾಗಿ ಪ್ರಧಾನ ಸೇವಕನ ರಥಯಾತ್ರೆ ಪಟ್ಟಣ ಮತ್ತು ಸಮೀಪದ ಹಾಲಿವಾಣ ಗ್ರಾಮಗಳಲ್ಲಿ ಸಂಚರಿಸಿತು. ಯಾತ್ರೆಯು ಪಟ್ಟಣಕ್ಕೆ ಆಗಮಿಸಿದಾಗ ವಾಹನವನ್ನು ಪುಷ್ಪವೃಷ್ಟಿ ಮಾಡಿ ಸ್ವಾಗತಿಸಲಾಯಿತು. ರಥಯಾತ್ರೆಯ ಎಲ್.ಇ.ಡಿ. ಸ್ಕ್ರಿನ್ ಮೂಲಕ ಪ್ರಧಾನಿ ಮೋದಿ ಅವರ ಜನಪರ ಯೋಜನೆಗಳ ಕುರಿತ 30 ನಿಮಿಷಗಳ ವಿಡಿಯೋ ಪ್ರದರ್ಶನ ನಡೆಯಿತು. ಟೀಮ್ ಮೋದಿ ಸಂಚಾಲಕಿ ಶಾರದ, ಕಾರ್ತಿಕ್ ಮೋದಿ, ಜಿ.ಪಂ ಸದಸ್ಯ ಬಿ.ಎಂ. ವಾಗೀಶ್ ಸ್ವಾಮಿ. ತಾ.ಪಂ ಮಾಜಿ ಸದಸ್ಯ ಐರಣಿ ಅಣ್ಣಪ್ಪ, ಕಜ್ಜರಿ ಹರೀಶ್, ರಾಜು ಪೂಜಾರ್, ಕೆ.ಎಸ್. ಮನೋಜ್ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ