ವರ್ಷದಿಂದ ಬಂದೇ ಇಲ್ಲ ಆವಾಸ್ ಯೋಜನೆ ಸಹಾಯಧನ
Team Udayavani, Jun 15, 2020, 5:35 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹರಿಹರ: ನಗರ ಪ್ರದೇಶದ ಬಡವರಿಗೆ ಸೂರು ಕಲ್ಪಿಸುವ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಕಳೆದೊಂದು ವರ್ಷದಿಂದ ಸರಿಯಾಗಿ ಸಹಾಯಧನ ಬಿಡುಗಡೆ ಆಗದ ಕಾರಣ, ಮನೆಗಳ ನಿರ್ಮಾಣ ಅರ್ಧಕ್ಕೆ ನಿಂತಿದ್ದು, ಫಲಾನುಭವಿಗಳು ಪರದಾಡಬೇಕಾಗಿದೆ.
ಆವಾಸ್ ಯೋಜನೆಯಡಿ ಸರ್ಕಾರ ಮನೆ ನಿರ್ಮಾಣದ ವಿವಿಧ ಹಂತಗಳಲ್ಲಿ ತಲಾ 37,000 ರೂಗಳಂತೆ 4 ಕಂತುಗಳಲ್ಲಿ ಒಟ್ಟು 1.5 ಲಕ್ಷ ರೂ. ಸಹಾಯಧನ ನೀಡುತ್ತದೆ. ಆದರೆ ನಗರದಲ್ಲಿ ಕಳೆದ ಸುಮಾರು 1 ವರ್ಷದಿಂದ ಅನುದಾನ ಬಿಡಗಡೆಯಾಗಿಲ್ಲ, ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದು, ಬಿಸಿಲು, ಮಳೆ-ಗಾಳಿಗೆ ಅರ್ಧ ಕಟ್ಟಿದ ಮನೆ ಕರಗಿ ಹೋಗುತ್ತಿವೆ ಎಂದು ಫಲಾನುಭವಿಗಳು ಗೋಳಿಡುತ್ತಿದ್ದಾರೆ. 2019ರಲ್ಲಿ ನಗರಸಭಾ ವ್ಯಾಪ್ತಿಯ ಒಟ್ಟು 232 ಫಲಾನುಭವಿಗಳು ಪಿಎಂ ಆವಾಸ್ ಯೋಜನೆಗೆ ಆಯ್ಕೆಯಾಗಿದ್ದು, ಇವರಲ್ಲಿ 23 ಜನರು ಅಡಿಪಾಯ ಹಾಕಿ, ಉಳಿದವರು ಗೋಡೆ ಹಂತದಲ್ಲಿ ಮನೆ ನಿರ್ಮಿಸಿಕೊಂಡು ಉಳಿದ ಕಾಮಗಾರಿಗೆ ಸರ್ಕಾರದ ಸಹಾಯಧನಕ್ಕೆ ಚಾತಕ ಪಕ್ಷಗಳಂತೆ ಕಾಯುತ್ತಿದ್ದಾರೆ.
ಈಗಾಗಲೇ ಇದ್ದ ಹಳೆ ಮನೆ ಕೆಡವಿಕೊಂಡು, ಕೈಲಿದ್ದ ಹಣವನ್ನೂ ಖಾಲಿ ಮಾಡಿಕೊಂಡು ಬಯಲು ಪಾಲಾಗಿರುವ ಫಲಾನುಭವಿಗಳು ಕಳೆದ 9-10 ತಿಂಗಳಿನಿಂದ ನಿತ್ಯ ನಗರಸಭೆಗೆ ಅಲೆದಾಡುತ್ತಿದ್ದಾರೆ. ಅಷ್ಟರಲ್ಲಿ ಕೋವಿಡ್ ವಕ್ಕರಿಸಿದ್ದು, ಲಾಕ್ಡೌನ್ ಮುಗಿದ ಕೂಡಲೇ ಅನುದಾನ ಬರಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಈಗ ಲಾಕ್ಡೌನ್ ಮುಗಿದು ತಿಂಗಳೇ ಉರುಳಿದರೂ ಹಣ ಬಿಡುಗಡೆಯಾಗಿಲ್ಲ. ಮಳೆಗಾಲ ಬೇರೆ ಆರಂಭವಾಗಿದ್ದು, ಇರುವ ಮನೆಯನ್ನೂ ಕೆಡವಿಕೊಂಡಿರುವ ಬಡ ಜನರು ಮಳೆ-ಗಾಳಿ, ಚಳಿಗೆ ಪರಿತಪಿಸಬೇಕಾಗಿದೆ. ಇದ್ದುದರಲ್ಲೆ ಅನುಕೂಲವಿದ್ದವರು ಬಾಡಿಗೆ ಮನೆ ಹಿಡಿದಿದ್ದಾರಾದರೂ ಬಾಡಿಗೆ ಪಾವತಿಗೂ ಈಗ ಹಣವಿಲ್ಲದಾಗಿ ಪರದಾಡುತ್ತಿದ್ದಾರೆ.
ಲಾಕ್ಡೌನ್ನಿಂದ ವಸತಿ ಇಲಾಖೆಯ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಈಗ ಲಾಕ್ಡೌನ್ ಮುಗಿದಿದ್ದು, ಸಂಬಂಧ ಪಟ್ಟ ಇಲಾಖೆಗೆ ಪತ್ರ ಬರೆದು ಆದಷ್ಟು ಬೇಗನೆ ಹಣ ಬಿಡುಗಡೆ ಮಾಡಲು ಒತ್ತಾಯಿಸಲಾಗಿದೆ.
ಎಸ್.ಲಕ್ಷ್ಮೀ, ಪೌರಾಯುಕ್ತೆ,
ನಗರಸಭೆ. ಹರಿಹರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Davanagere: ಮತದಾನ ಜಾಗೃತಿ ಲಾಂಛನದಲ್ಲಿ ಅಪರೂಪದ ಪ್ರಾಣಿ ಚಿತ್ರ ಬಳಕೆ
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Gayatri Siddeshwar: ಅಡಕೆ ಮೌಲ್ಯವರ್ಧನೆಗೆ ಯೋಜನೆ: ಗಾಯಿತ್ರಿ
MUST WATCH
ಹೊಸ ಸೇರ್ಪಡೆ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ