ಕೋವಿಡ್ ಕಡೆಗಣಿಸಿದರೆ ಅಪಾಯ
Team Udayavani, May 21, 2020, 11:27 AM IST
ಹರಿಹರ: ಕೋವಿಡ್ ಕಡೆಗಣಿಸಿದರೆ ಅಪಾಯ ಕಡೆಗಣಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಎಚ್ಚರಿಸಿದರು.
10ನೇ ವಾರ್ಡ್ನ ಗಾಂಧಿನಗರದಲ್ಲಿ ಬುಧವಾರ ನಗರಸಭಾ ಸದಸ್ಯ ಎಂ. ಮುಜಮ್ಮಿಲ್ ಬಿಲ್ಲು ಯೋಜಿಸಿದ್ದ ಆಹಾರ ಕಿಟ್ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಚೀನಾದ ವುಹಾನ್ನಿಂದ ದಾವಣಗೆರೆವರೆಗೆ ಬಂದಿರುವ ಈ ಕಾಯಿಲೆ ಇತರೆಡೆಗೂ ಹರಡುವುದು ತಡವಾಗುವುದಿಲ್ಲ ಎಂದರು. ಜಾಲಿನಗರದಲ್ಲಿ ಓರ್ವ ವ್ಯಕ್ತಿಯಲ್ಲಿ ಕಂಡು ಬಂದ ಕೋವಿಡ್, ಆತನಿಂದ ನೆರೆಹೊರೆಯ 30 ಜನರಿಗೆ ಅಂಟಿದೆ ಎಂದರೆ ಇದರ ಅಪಾಯವನ್ನು ಅಂದಾಜಿಸಬಹುದು. ದಾವಣಗೆರೆಯಲ್ಲಿ ಹೆಚ್ಚು ಪ್ರಕರಣಗಳಿದ್ದರೂ ಹರಿಹರದಲ್ಲಿ ಒಂದೂ ಪ್ರಕರಣ ಇಲ್ಲದಿರುವುದಕ್ಕೆ ಇಲ್ಲಿನ ಜನರ ಮುಂಜಾಗ್ರತೆಯೇ ಕಾರಣ ಎಂದರು.
ನಗರಸಭಾ ಸದಸ್ಯ ಮುಜಮ್ಮಿಲ್ ಬಿಲ್ಲು ಮಾತನಾಡಿ, ಇದುವರೆಗೆ 500 ಜನ ಬಡ ಫಲಾನುಭವಿಗಳ ಪಟ್ಟಿ ಮಾಡಿದ್ದು ಅವರೆಲ್ಲರಿಗೂ ಕಿಟ್ ವಿತರಣೆ ಮಾಡಲಾಗುವುದೆಂದರು. ಎಸ್ಪಿ ಹನುಮಂತರಾಯ ಹಾಗೂ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಮಾತನಾಡಿದರು. ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಪೌರಾಯುಕ್ತೆ ಎಸ್. ಲಕ್ಷ್ಮೀ, ಎಇಇ ಎಸ್.ಎಸ್. ಬಿರಾದಾರ್, ನಗರಸಭಾ ಸದಸ್ಯ ಪಿ.ಎನ್. ವಿರುಪಾಕ್ಷಿ, ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
MUST WATCH
ಹೊಸ ಸೇರ್ಪಡೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ