ಬಂದ್ಗೆ ವರ್ತಕರ ಅಸಹಕಾರ
ಲಾಕ್ಡೌನ್ ಕಾರಣ ಬಾಡಿಗೆ ಹೊರೆ-ಹಳ್ಳಿಗರಿಗೆ ಸಮಸ್ಯೆ ಎಂಬ ವಾದ
Team Udayavani, Jun 26, 2020, 5:51 PM IST
ಹರಿಹರ: ಮಧ್ಯಾಹ್ನದ ನಂತರ ಅಂಗಡಿ ಬಂದ್ ಮಾಡಬೇಕೆಂಬ ನಿರ್ಣಯಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಗುರುವಾರ ನಗರದಲ್ಲಿ ಎಂದಿನಂತೆ ವ್ಯಾಪಾರ-ವಹಿವಾಟು ನಡೆಯಿತು.
ಹರಿಹರ: ನಗರದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ನಿಮಿತ್ತ ಮಧ್ಯಾಹ್ನದ ನಂತರ ಅಂಗಡಿ ಬಂದ್ ಮಾಡಬೇಕೆಂಬ ನಿರ್ಣಯಕ್ಕೆ ಬಹುತೇಕ ವರ್ತಕರು ಅಸಹಕಾರ ತೋರಿದ್ದು, ಗುರುವಾರ ಎಂದಿನಂತೆ ವ್ಯಾಪಾರ-ವಹಿವಾಟು ನಡೆದವು.
ಕೆಲವೇ ಕೆಲವು ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಅಂಗಡಿ ಬಂದ್ ಮಾಡಿಕೊಂಡು ತೆರಳಿದರೆ, ಬಹುತೇಕ ವ್ಯಾಪಾರಸ್ಥರು ಮಧ್ಯಾಹ್ನದ ನಂತರವೂ ತಮ್ಮ ವ್ಯಾಪಾರ- ವಹಿವಾಟು ನಡೆಸಿದರು. ಅಂಗಡಿ ಬಂದ್ ಮಾಡಿದರೆ ಬಾಡಿಗೆ ಕಟ್ಟುವುದು ತಪ್ಪುವುದಿಲ್ಲ, ಹಿಂದೆ 2 ತಿಂಗಳ ಲಾಕ್ ಡೌನ್ನ ಆರ್ಥಿಕ ಭಾರದಿಂದ ಇನ್ನೂ ಹೊರ ಬಂದಿಲ್ಲ. ಹೀಗಿದ್ದಾಗ ಮತ್ತೆ ಅಂಗಡಿ ಮುಚ್ಚಿದರೆ ಬಾಡಿಗೆ ಕಟ್ಟಲು ಸಾಲ ಮಾಡಬೇಕಾಗುತ್ತದೆ ಎಂಬುದು ಕೆಲವು ವ್ಯಾಪಾರಿಗಳ ವಾದ. ಮತ್ತೆ ಕೆಲವರು ಹಳ್ಳಿಗಾಡಿನ ಜನರಿಗೆ ಮೊದಲೇ ಸರಿಯಾಗಿ ಬಸ್ ಸೌಕರ್ಯವಿಲ್ಲ, ಮಧ್ಯಾಹ್ನದ ನಂತರ ಮಾಡಿದರೆ ಅವರಿಗೆ ತೊಂದರೆಯಾಗುತ್ತದೆ ಎಂಬ ವಾದ ಮುಂದಿಟ್ಟರು.
ಮಾಹಿತಿ ಇಲ್ಲ: ಶಾಸಕ ಎಸ್. ರಾಮಪ್ಪ ನೇತೃತ್ವದಲ್ಲಿ ಬುಧವಾರ ಚೇಂಬರ್ ಆಫ್ ಕಾಮರ್ಸ್ ಪದಾಧಿಕಾರಿಗಳು, ವರ್ತಕರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಧ್ಯಾಹ್ನ 2 ಗಂಟೆಯ ನಂತರ ಸ್ವಯಂಪ್ರೇರಿತವಾಗಿ ವ್ಯಾಪಾರ ಬಂದ್ ಮಾಡಲು ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಈ ಸಭೆಗೆ ನಗರದ ಎಲ್ಲಾ ವರ್ತಕ ಸಂಘಟನೆಗಳನ್ನು ಆಹ್ವಾನಿಸಿಲ್ಲ, ಬಹುತೇಕ ವರ್ತಕರಿಗೆ ನಿರ್ಣಯದ ಬಗ್ಗೆ ಮಾಹಿತಿಯೇ ಇಲ್ಲ. ಎಲ್ಲಾ ವರ್ತಕರ ಸಂಘದವರ ವಿಶ್ವಾಸ ಪಡೆದು ಪೂರ್ವಸಿದ್ಧತೆ ಮಾಡಿದ್ದರೆ ಉತ್ತಮ ಸ್ಪಂದನೆ ಸಿಗುತ್ತಿತ್ತು ಎಂದು ಹೋಟೆಲ್ ಮತ್ತು ಬೇಕರಿ ಮಾಲೀಕರ ಸಂಘದ ಅಧ್ಯಕ್ಷ ರಾಘವೇಂದ್ರ ಉಪಾಧ್ಯ ಪ್ರತಿಕ್ರಿಯಿಸಿದರು. ಒಟ್ಟಿನಲ್ಲಿ ನಗರದಲ್ಲಿ ಪಾಸಿಟಿವ್ ಕೇಸ್ಗಳು ಪತ್ತೆಯಾದ ನಂತರ ಗ್ರಾಮೀಣ ಭಾಗದ ಬಹುತೇಕ ಜನರು ನಗರದ ಕಡೆಗೆ ಸುಳಿಯುತ್ತಿಲ್ಲ. ಇದರಿಂದಾಗಿ ನಗರದ ವ್ಯಾಪಾರ-ವಹಿವಾಟು ಕ್ಷೀಣಿಸಿದೆ ಎನ್ನಲಾಗುತ್ತಿದೆ.
2 ತಿಂಗಳ ಲಾಕ್ಡೌನ್ನ ಆರ್ಥಿಕ ಭಾರದಿಂದ ಇನ್ನೂ ಹೊರಬಂದಿಲ್ಲ. ಮಳಿಗೆಗಳ ಬಾಡಿಗೆ ಕಟ್ಟಲು ಸಾಲ ಮಾಡಿದ್ದೇವೆ. ಲಾಕ್ಡೌನ್ ತೆರವುಗೊಂಡ ನಂತರ ಚೇತರಿಸಿಕೊಳ್ಳುತ್ತಿದ್ದೇವೆ. ಸಣ್ಣ,ಪುಟ್ಟ ವ್ಯಾಪಾರಿಗಳ ಕಷ್ಟವನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು.
ಹೆಸರು ಹೇಳಲಿಚ್ಛಿಸದ ವ್ಯಾಪಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ