ತುಂಗಭದ್ರೆ ತಟವೀಗ ನಿರ್ಮಲ ತಾಣ

ಮಾಲಿನ್ಯ ಮುಕ್ತ-ಶುಭ್ರವಾಗಿ ಹರಿಯುತ್ತಿದೆ

Team Udayavani, Apr 11, 2020, 11:25 AM IST

11-April-04

ಹರಿಹರ: ಲಾಕ್‌ಡೌನ್‌ ನಂತರ ನದಿಗೆ ಹರಿದು ಬರುವ ಕಲುಷಿತ ನೀರು ಬಂದ್‌ ಆಗಿರುವುದು

ಹರಿಹರ:  ಕೋವಿಡ್ ರೋಗಾಣು ಹರಡುವಿಕೆ ನಿಯಂತ್ರಿಸಲು ಕಳೆದ 15 ದಿನಗಳ ಲಾಕ್‌ಡೌನ್‌ ನಿಂದ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಜೀವನದಿ ತುಂಗಭದ್ರೆಯೂ ಸಹ ಬಹುತೇಕ ಮಾಲಿನ್ಯ ಮುಕ್ತವಾಗಿ ಶುಭ್ರವಾಗಿ ಹರಿಯುತ್ತಿದೆ. ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನಿಸಿ ಶಿವಮೊಗ್ಗ, ದಾವಣಗೆರೆ, ಹಾವೇರಿ, ಗದಗ, ಬಳ್ಳಾರಿ, ಕೊಪ್ಪಳ, ರಾಯಚೂರು ನಂತರ ಆಂಧ್ರದ ಮಂತ್ರಾಲಯ, ಕರ್ನೂಲಲ್ಲಿ ಕೃಷ್ಣ ನದಿ ಸೇರಿ ತೆಲಂಗಾಣ ಪ್ರವೇಶಿಸುವ ತುಂಗಭದ್ರೆ ಅಂದಾಜು 700 ಕಿ.ಮೀ. ಸಾಗಿ ಬಂಗಾಳ ಕೊಲ್ಲಿ ಸೇರುತ್ತದೆ.

ರಾಜ್ಯದ ಆರು ಜಿಲ್ಲೆಗಳ ನೂರಾರು ಕಾರ್ಖಾನೆ, ಉದ್ಯಮಗಳ ಲಕ್ಷಾಂತರ ಲೀ. ಕಲುಷಿತ ನೀರು ದಿನವಿಡೀ ಈ ನದಿಗೆ ಸೇರುತ್ತಿತ್ತು. ತಾಲೂಕಿನ ಮಟ್ಟಿಗೆ ಹೇಳುವುದಾದರೆ ಕಾರ್ಖಾನೆಗಳ ಕಲುಷಿತ ನೀರು ನಿತ್ಯ ಈ ನದಿಯ ಒಡಲು ತುಂಬುತ್ತಿತ್ತು. ಆದರೆ ಲಾಕ್‌ಡೌನ್‌ನಿಂದ ಎಲ್ಲಾ ಕಾರ್ಖಾನೆಗಳು ಮಾ.25ರಿಂದ ಬಂದ್‌ ಆಗಿದ್ದು, ರಾಸಾಯನಿಕ ಯುಕ್ತ, ಕಲುಷಿತ ನೀರು ನದಿಗೆ ಸೇರುವುದು ನಿಂತಿದೆ. ಪರಿಣಾಮ ನಗರದಲ್ಲಿ ಹರಿಯುತ್ತಿರುವ ತುಂಗಭದ್ರೆ ದಿನೇ ದಿನೇ ಶುದ್ಧಗೊಳ್ಳುತ್ತಿದೆ.

ಕಲುಷಿತ ನೀರು ಸೇರಿ ಸದಾ ಕೊಚ್ಚೆಯಂತೆ ಕಾಣುತ್ತಿದ್ದ ನದಿಯ ಸ್ಥಳದಲ್ಲೀಗ ನೀರನ್ನು ಬೊಗಸೆಯಲ್ಲಿ ಹಿಡಿದು ನೋಡಿದರೆ ಅದರ ಶುಭ್ರತೆ ಕಂಡು ಆನಂದವಾಗುತ್ತದೆ. ನದಿ ದಡದಲ್ಲಿ ನಿಂತರೆ 2-3 ಅಡಿಗಳ ಆಳದವರೆಗೂ ನೀರಡಿಯ ನೆಲಹಾಸು, ಅಲ್ಲಿ ಆಡವಾಡುತ್ತಿರುವ ಚಿಕ್ಕ ಚಿಕ್ಕ ಮೀನುಗಳ ಲವಲವಿಕೆ ಕಾಣಿಸುವುದು ಅಪ್ಯಾಯಮಾನವಾಗಿದೆ. ಕಾರ್ಖಾನೆಗಳ ಹತ್ತಾರು ಚಿಮಣಿಗಳಿಂದ ಹೊರಚಿಮ್ಮುತ್ತಿದ್ದ ವಿಷಕಾರಿ, ಗೊಮ್ಮೆನ್ನುವ ಅನಿಲಕ್ಕೂ ಈಗ ಬ್ರೇಕ್‌ ಬಿದ್ದಿದ್ದು, ನೂರಾರು ಕಿ.ಮೀ ವ್ಯಾಪ್ತಿಯ ನಾಗರಿಕರು ದುರ್ವಾಸನೆಯಿಲ್ಲದ ಗಾಳಿಯಲ್ಲಿ ಮೂಗರಳಿಸಿ ಉಸಿರಾಡುವಂತಾಗಿದೆ. ಜೊತೆಗೆ ಹಗಲು-ರಾತ್ರಿ ಎನ್ನದೆ ಹೊರಹೊಮ್ಮುತ್ತಿದ್ದ ಕಿವಿಗಡಚಿಕ್ಕುವ, ಕೆಲವೊಮ್ಮೆ ಬೆಚ್ಚಿಬೀಳಿಸುತ್ತಿದ್ದ ಕರ್ಕಶ ಶಬ್ದವೂ ಇಲ್ಲದೆ ಸುತ್ತಮುತ್ತಲ ವಸತಿ ಪ್ರದೇಶಗಳ ಜನರು ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದಾರೆ. ಒಟ್ಟಾರೆ ಲಾಕ್‌ ಡೌನ್‌ನ ಆರ್ಥಿಕ ಪರಿಣಾಮಗಳೇನೆ ಇರಲಿ, ಪರಿಸರದ ದೃಷ್ಟಿಯಿಂದ ಮಾತ್ರ ಇದೊಂದು ಅತ್ಯುತ್ತಮ, ಅದ್ಬುತ ಸನ್ನಿವೇಶವಾಗಿದೆ ಎಂದು ಪರಿಸರ ಪ್ರೇಮಿಗಳು ಹರ್ಷಪಡುತ್ತಿರುವುದು ಸುಳ್ಳಲ್ಲ.

ಕಾರ್ಖಾನೆಗಳು ಶುರು ಇದ್ದಾಗ ಈ ಭಾಗದ ಜನ ದುರ್ವಾಸನೆಯಿಂದ ಮೂಗು ಮುಚ್ಚಿಕೊಳ್ಳಬೇಕಿತ್ತು. ಈಗ ಸಹಜವಾದ ಗಾಳಿ ಸೇವನೆ ಮಾಡುತ್ತಿದ್ದೇವೆ. ಶಬ್ದ ಮಾಲಿನ್ಯವೂ ಇಲ್ಲದ್ದರಿಂದ ರಾತ್ರಿ ನೆಮ್ಮದಿಯಿಂದ ನಿದ್ದೆ ಮಾಡುತ್ತೇವೆ.
ಅಬ್ದುಲ್‌ ರಹೀಂ,
ಕೊಡಿಯಾಲ ಗ್ರಾಮ ವಾಸಿ.

ಐವತ್ತು ವರ್ಷಗಳ ಹಿಂದೆ ಈ ನದಿ ನೀರು ಹೀಗೆಯ ಶುಭ್ರವಾಗಿತ್ತು. ಈಗ ನದಿ ಯಲ್ಲಿನ ಶುಭ್ರ ಹಾಗೂ ತಿಳಿ ನೀರನ್ನು ನೋಡಿ ನನ್ನ ಬಾಲ್ಯದ ದಿನಗಳ ನೆನಪಾಗುತ್ತಿದೆ. ಈ ಪರಿಸರದಲ್ಲಿ ಹಕ್ಕಿಗಳ ಕಲರವವೂ ಹೆಚ್ಚಾಗಿದೆ.
ಕೊಟ್ರೇಶಪ್ಪ,
ಕುಮಾರಪಟ್ಟಣಂ ವಾಸಿ

ಟಾಪ್ ನ್ಯೂಸ್

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.