ಹೊನ್ನಾಳಿ ತಾಲೂಕಿನಾದ್ಯಂತ ಸಂಭ್ರಮದ ಭೂಮಿ ಹುಣ್ಣಿಮೆ
Team Udayavani, Oct 21, 2021, 2:57 PM IST
ಹೊನ್ನಾಳಿ: ತಾಲೂಕಿನಾದ್ಯಂತ ಭೂತಾಯಿಗೆಪೂಜೆ ಸಲ್ಲಿಸುವ ಮೂಲಕ ಮಣ್ಣಿನ ಮಕ್ಕಳುಬುಧವಾರ ಭೂಮಿಹುಣ್ಣಿಮೆ ಹಬ್ಬವನ್ನುಸಡಗರ-ಸಂಭ್ರಮದಿಂದ ಆಚರಿಸಿದರು.
ಹೊಲದಲ್ಲಿ ಬೆಳೆದು ನಿಂತಿರುವ ಫಸಲಿಗೆಪೂಜೆ ಸಲ್ಲಿಸಿದ ಅನ್ನದಾತರು, ತಮ್ಮ ಬದುಕುಹಸನಾಗಲಿ ಎಂದು ಭೂತಾಯಿಯಲ್ಲಿಪ್ರಾರ್ಥಿಸಿದರು.
ಭೂಮಿಹುಣ್ಣಿಮೆ ಆಚರಣೆಹೊನ್ನಾಳಿ ತಾಲೂಕಿನ ಹಳ್ಳಿಗಳ ಗ್ರಾಮಸ್ಥರಿಗೆವಿಶೇಷ ಹಬ್ಬ. ಅದರಲ್ಲೂ ಗದ್ದೆ, ತೋಟಹೊಂದಿರುವವರಿಗೆ ಈ ದಿನ ಸಡಗರದತರುತ್ತದೆ. ಬೆಳಗಿನ ಜಾವದಿಂದಲೇ ಹಬ್ಬದಸಿದ್ಧತೆ ಆರಂಭವಾಗುತ್ತದೆ.
ಭೂಮಿತಾಯಿಗೆ ವಿವಿಧ ಭಕ್ಷéಭೋಜ್ಯಗಳನ್ನು ಮಹಿಳೆಯರುತಯಾರಿಸಿದರು. ಪುರುಷರು ತಮ್ಮಜಮೀನುಗಳಲ್ಲಿ ಪೂಜೆ ಮಾಡುವಸ್ಥಳಗಳಲ್ಲಿ ಸ್ವತ್ಛತೆ ಮಾಡಿ ಚಪ್ಪರ ಹಾಕಿತಳಿರು ತೋರಣಗಳನ್ನು ಕಟ್ಟಿ ಸಿದ್ಧತೆಮಾಡಿಕೊಂಡರು.ಅನ್ನ ನೀಡುವ ಭೂತಾಯಿಯನ್ನುಪೂಜಿಸಿದರೆ ಒಳ್ಳೆಯದಾಗುತ್ತದೆ ಎಂಬ ಪ್ರತೀತಿ ಇದೆ.
ಈ ಸಂದರ್ಭದಲ್ಲಿ ಗರ್ಭಿಣಿಯಾದಭೂತಾಯಿಯ ಬಯಕೆಯನ್ನುತೀರಿಸಬೆಕೇಂಬುದುದು ಈಭಾಗದ ಜನರ ನಂಬಿಕೆ. ಅದರಂತೆಭೂಮಿಹುಣ್ಣಿಮೆಯ ದಿನ ಹೊಲ-ಗದ್ದೆಗಳಲ್ಲಿವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಭತ್ತ,ಮೆಕ್ಕೆಜೋಳ, ಅಡಿಕೆ ತೆಂಗು ಮತ್ತು ಬಾಳೆತೋಟಗಳಿಗೆ ಸೀರೆ, ಕುಪ್ಪಸ ತೊಡಿಸಿ ವಿಶೇಷಅಲಂಕಾರ ಮಾಡಲಾಗಿತ್ತು. ಜೊತೆಗೆಮನೆಯಿಂದ ಸಿದ್ಧಪಡಿಸಿಕೊಂಡು ತಂದಿದ್ದಬಗೆ ಬಗೆಯ ತಿನಿಸುಗಳನ್ನುಟ್ಟು ನೈವೇದ್ಯಮಾಡಿ ಕುಟುಂಬಗಳ ಸದಸ್ಯರೆಲ್ಲರೂ ವಿಶೇಷಪೂಜೆ ಸಲ್ಲಿಸಿದರು.ಭೂತಾಯಿಗೆ ನೈವೇದ್ಯ ಮಾಡಿದ ಒಂದುಎಡೆಯನ್ನು ಭೂಮಿಯೊಳೊಳಗಿಟ್ಟುಮುಚ್ಚಲಾಯಿತು.
ಭೂತಾಯಿ ಈ ಎಡೆಯನ್ನುಸೇವಿಸುತ್ತಾಳೆ ಎಂಬ ನಂಬಿಕೆ ರೈತರದು.ಇನ್ನೊಂದು ಎಡೆಯನ್ನು ಜಮೀನನಲ್ಲಿ ಚರಗಚೆಲ್ಲಿ ಭಕ್ತಿ ಸರ್ಮಪಣೆ ಮಾಡಿದರು. ನಂತರಕುಟಂಬ ಸದಸ್ಯರು ಹಾಗೂ ಆಪೆ¤àಷ್ಟರೊಂದಿಗೆಸಿಹಿ ಭೋಜನ ಸವಿಯುವ ಮೂಲಕಹಬ್ಬವನ್ನು ಸ್ಮರಣೀಯವಾಗಿಸಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Davanagere: ಮತದಾನ ಜಾಗೃತಿ ಲಾಂಛನದಲ್ಲಿ ಅಪರೂಪದ ಪ್ರಾಣಿ ಚಿತ್ರ ಬಳಕೆ
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ