ಹೊಸ ವರ್ಷಕ್ಕೆ ಅದ್ಧೂರಿ ಸ್ವಾಗತ


Team Udayavani, Jan 1, 2019, 10:39 AM IST

dvg-1.jpg

ದಾವಣಗೆರೆ: ಹೊಸ ಕ್ಯಾಲೆಂಡರ್‌ ವರ್ಷ ಬಂತೆಂದರೆ ಸಾಕು ಎಲ್ಲೆಡೆ ಮೋಜು ಮಸ್ತಿ ಸಾಮಾನ್ಯ. ಯುವಕ-ಯುವತಿಯರು, ಸ್ನೇಹಿತರೆಲ್ಲಾ ಒಂದುಗೂಡಿ ಕೇಕ್‌ ಕತ್ತರಿಸಿ ಕುಣಿದು-ಕುಪ್ಪಳಿಸಿ ಸಂಭ್ರಮಿಸುವುದು ವರ್ಷಾಚರಣೆ ವಿಶೇಷ. ಇನ್ನು ಹೊಸ ವರ್ಷ ಸ್ವಾಗತಿಸುವ ಸಂಭ್ರಮಕ್ಕೆ ನಗರದ ವಿವಿಧ ಬೇಕರಿಗಳಲ್ಲಿ ಗ್ರಾಹಕರ ಬೇಡಿಕೆ, ಅಪೇಕ್ಷೆ, ಅಭಿರುಚಿಯಂತೆ ಅತ್ಯಾಕರ್ಷಕ, ವೈವಿಧ್ಯಮಯ ಕೇಕ್‌ಗಳು, ಬಗೆ ಬಗೆಯ ಸಿಹಿ
ತಿನಿಸುಗಳನ್ನು ತಯಾರಿಸುವುದು ದೇವನಗರಿ ವಿಶೇಷ.

ಪ್ರತಿವರ್ಷವೂ ಆಹಾರ್‌-2000ನ ಬೇಕರಿಯಲ್ಲಿ ಒಂದಲ್ಲ ಒಂದು ರೀತಿ ವಿಶೇಷ ಕೇಕ್‌ ಪ್ರದರ್ಶನ ಮತ್ತು ಮಾರಾಟ ಮುಂದುವರಿಸಿಕೊಂಡು ಬರಲಾಗುತ್ತಿದೆ. ಕಳೆದ ಬಾರಿ ಲಂಡನ್‌ ಟವರ್‌ ಮಾದರಿ ಕೇಕ್‌ ಮೆಚ್ಚುಗೆಗೆ ಪಡೆದಿತ್ತು. ಈ ಬಾರಿ ಜಗತ್ತಿನ ಎರಡನೇ ಎತ್ತರದ ಮೆಲೇಷಿಯಾ ಟ್ವಿನ್‌
ಟವರ್‌, ಗುಂಡಿ ಮಹಾದೇವಪ್ಪ ವೃತ್ತ, ಭಾರತದಲ್ಲೆ ನಾಲ್ಕನೇ ಉದ್ದದ ಅಸ್ಸಾಂನ ಸೇತುವೆ ಮಾದರಿಯ ಕೇಕ್‌ ಸಿದ್ದಪಡಿಸಿ, ಪ್ರದರ್ಶನಕ್ಕಿಡಲಾಗಿದೆ. 

ಬೇಕರಿ ನುರಿತ ಕೇಕ್‌ ತಯಾರಕರು 20 ದಿನಗಳಲ್ಲಿ ಅದ್ಭುತ ಕಲಾಕೃತಿಗಳನ್ನು ಥರ್ಮಕೋಲ್‌, ಕೇಕ್‌ ಬಳಸಿ ವಿಶೇಷವಾಗಿ ಟವರ್‌, ವೃತ್ತ, ಸೇತುವೆ ತಯಾರಿಸಿದ್ದಾರೆ.

ಮೆಲೇಷಿಯಾ ಟ್ವಿನ್‌ ಟವರ್‌ ಐದೂವರೆ ಅಡಿ ಅಗಲ, ಆರೂವರೆ ಅಡಿ ಎತ್ತರವಿದ್ದರೆ, ಸೇತುವೆ ಆರೂವರೆ ಅಡಿ ಅಗಲ, 2 ಅಡಿ ಎತ್ತರವಿದೆ. ಈ ಕೇಕ್‌ ಪ್ರದರ್ಶನವು ಸೋಮವಾರದಿಂದ ಬುಧವಾರದ ವರೆಗೆ ಸಾರ್ವಜನಿಕರ ವೀಕ್ಷಣೆ ಅವಕಾಶ ಕಲ್ಪಿಸಲಾಗಿದೆ ಎಂದು ಬೇಕರಿ ಮಾಲೀಕ
ರಮೇಶ್‌ ಮಾಹಿತಿ ನೀಡಿದರು. 

ಕೇಕ್‌ ಮಾದರಿ: ಮಾಮೂಲಿ ಕೇಕ್‌ಗಳಿಗಿಂತ ಹಲವು ಬಗೆಯ ವಿನ್ಯಾಸದಲ್ಲಿ ಅಂದರೆ, ಗೊಂಬೆ, ಚೋಟಾ ಭೀಮ್‌, ಮೀನು, ಬೋಟ್‌, ಹೂ ಬುಟ್ಟಿ, ತಬಲ, ಹಲಸು, ಕಲ್ಲಂಗಡಿ ಹಣ್ಣು, ಚಿಟ್ಟೆ, ಹಾರ್ಮೋನಿಯಂ, ಗಿಟಾರ್‌, ಕಾರ್‌, ಹಾರ್ಟ್‌ ಹೀಗೆ ಅನೇಕ ಮಾದರಿ ಕೇಕ್‌ಗಳನ್ನು ಆಹಾರ್‌ -2000 ಪ್ರದರ್ಶನದಲ್ಲಿ ಕಾಣಬಹುದಾಗಿದೆ. 

ಇದಲ್ಲದೇ ನಗರದ ಬಹುತೇಕ ಬೇಕರಿಗಳಲ್ಲಿ ಮಾಮೂಲಿ ಕ್ರೀಮ್‌ಕೇಕ್‌, ಕೋಲ್ಡ್‌ಕೇಕ್‌ಗಳನ್ನೇ ಬಗೆಬಗೆಯ ಚಿತ್ತಾರಗಳಲ್ಲಿ ಪ್ರದರ್ಶನಕ್ಕಿಡಲಾಗಿದೆ. ಜನರು ಹೊಸ ವರ್ಷಾಚರಣೆಯ ಸಂಭ್ರಮದ 2 ರಿಂದ 3 ದಿನಗಳ ಮುಂಚೆಯೇ ಆರ್ಡ್‌ರ್‌ ಕೊಟ್ಟು ಕೇಕ್‌ಗಳನ್ನು ಬುಕ್ಕಿಂಗ್‌ ಮಾಡಿದ್ದಾರೆ. 

ಬೆಣ್ಣೆನಗರಿಯಲ್ಲಿ ಈ ಬಾರಿ ಎಂದೂ ಇಲ್ಲದ ಪೊಲೀಸ್‌ ಬಿಗಿಭದ್ರತೆಯ ನಡುವೆಯೂ ಯುವಕರು ಮೋಜ್‌ ಮಸ್ತಿ ಮಾಡಿ ಸಂಭ್ರಮಿಸಿದರೆ, ಯುವತಿಯರು, ಮಹಿಳೆಯರು, ಮಕ್ಕಳು ತಮ್ಮ ಮನೆಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ಕೇಕ್‌ಗಳನ್ನು ಕತ್ತರಿಸಿ, ಹೊಸ ವರ್ಷ ಸ್ವಾಗತಿಸಿ, ಸಂಭ್ರಮಿಸಿದರು.

ಟಾಪ್ ನ್ಯೂಸ್

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ

ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ

ಕರ್ತವ್ಯ ಲೋಪ: ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕ ರಿಯಾಜ್ ಅಹಮದ್ ಅಮಾನತು

ಕರ್ತವ್ಯ ಲೋಪ: ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕ ರಿಯಾಜ್ ಅಹಮ್ಮದ್ ಅಮಾನತು

1-dvg

Election Campaign: ಮೋದಿಯವರಿಂದ ಮಹಿಳಾ ಶಕ್ತಿಗೆ ಮುನ್ನುಡಿ

Davanagere: ಬಿಜೆಪಿ ಅಸಮಾಧಾನ ತಣಿಸಿದ ಬಿಎಸ್ ವೈ; ರವೀಂದ್ರನಾಥ್ ಗೆ ಚುನಾವಣೆ ಹೊಣೆ

Davanagere: ಬಿಜೆಪಿ ಅಸಮಾಧಾನ ತಣಿಸಿದ ಬಿಎಸ್ ವೈ; ರವೀಂದ್ರನಾಥ್ ಗೆ ಚುನಾವಣೆ ಹೊಣೆ

Gayatri Siddeshwar: ಮೋದಿ ಕೈ ಬಲಪಡಿಸಲು ಬಿಜೆಪಿ ಗೆಲ್ಲಿಸಿ; ಗಾಯತ್ರಿ

Gayatri Siddeshwar: ಮೋದಿ ಕೈ ಬಲಪಡಿಸಲು ಬಿಜೆಪಿ ಗೆಲ್ಲಿಸಿ; ಗಾಯತ್ರಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ 

Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ 

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.