ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಸಮಸ್ಯೆ ಇತ್ಯರ್ಥ
Team Udayavani, Jun 12, 2021, 11:32 AM IST
ಹರಿಹರ: ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿದ್ದ ಕ್ಷೌರಿಕನ ವರ್ತನೆ ಖಂಡಿಸಿ ದಲಿತರು ಕ್ಷೌರಿಕನ ಜತೆ ವಾಗ್ವಾದ ನಡೆಸಿದ ಘಟನೆ ತಾಲೂಕಿನ ಧೂಳೆಹೊಳೆ ಗ್ರಾಮದಲ್ಲಿ ಶುಕ್ರವಾರ ನಡೆಯಿತು.
ಸಾಮಾನ್ಯವಾಗಿ ಹರಿಹರದಲ್ಲೆ ಕ್ಷೌರ ಮಾಡಿಸುತ್ತಿದ್ದ ಗ್ರಾಮದ ದಲಿತರು ಲಾಕ್ಡೌನ್ ಕಾರಣಕ್ಕೆ ನಗರಕ್ಕೆ ಬರಲಾಗದೆ ಶುಕ್ರವಾರ ಬೆಳಗ್ಗೆ ಸ್ಥಳೀಯ ಅಂಗಡಿಗೆ ತೆರಳಿದ್ದು, ಕ್ಷೌರಿಕ ಅಣ್ಣಪ್ಪ, ನಿಮಗೆ ಕ್ಷೌರ ಮಾಡಿದರೆ ಇತರೆ ಜನಾಂಗದವರು ನನ್ನ ಬಳಿ ಕ್ಷೌರಕ್ಕೆ ಬರುವುದಿಲ್ಲ, ಆದ ಕಾರಣ ನಿಮಗೆ ಕ್ಷೌರ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಇದರಿಂದ ಕೆರಳಿದ ದಲಿತರು ನಮಗೆ ಏಕೆ ಕ್ಷೌರ ಮಾಡಲ್ಲ, ನಾವು ಹರಿಹರಕ್ಕೆ ಹೋಗಿ ಬರಲು ಇನ್ನೂರು ರೂ. ಖರ್ಚಾಗುತ್ತದೆ. ಅಲ್ಲದೆ ಈಗ ಲಾಕ್ಡೌನ್ ಬೇರೆ, ನಾವು ಹಣ ನೀಡಿದರೂ ನೀನೇಕೆ ಕ್ಷೌರ ಮಾಡಲ್ಲ ಎಂದು ವಾಗ್ವಾದ ನಡೆಸಿದ್ದಾರೆ. ಆದರೂ ಕ್ಷೌರಿಕ ಒಪ್ಪದಿದ್ದಾಗ ದಲಿತ ಸಮಾಜದ ಯುವಕರು ಸಮಾಜ ಕಲ್ಯಾಣಾಧಿಕಾರಿಗಳಿಗೆ ಫೋನ್ ಮಾಡಿ ಸ್ಥಳಕ್ಕೆ ಬರುವಂತೆ ಆಗ್ರಹಿಸಿದ್ದಾರೆ.
ಕೂಡಲೆ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಸೈಯದ್ ನಾಸಿರುದ್ದೀನ್ ಪೊಲೀಸರೊಂದಿಗೆ ಗ್ರಾಮಕ್ಕೆ ತೆರಳಿ ಕ್ಷೌರಿಕನಿಗೆ, ಜಾತಿ, ಜನಾಂಗ ಆಧರಿಸಿ ಕ್ಷೌರ ಮಾಡುವುದಿಲ್ಲ ಎಂದರೆ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯಡಿ ನಿನ್ನ ವಿರುದ್ಧ ಕ್ರಿಮಿನಲ್ ಕೇಸ್ ಹಾಕಬೇಕಾಗುತ್ತೆ. ಅವರಿವರ ಮಾತು ಕೇಳಬೇಡ, ದೂರು ದಾಖಲಾದರೆ ನಿನ್ನ ಸಹಾಯಕ್ಕೆ ಯಾರೂ ಬರುವುದಿಲ್ಲ ಎಂದು ತಿಳಿಸಿದರು.
ಸ್ಥಳದಲ್ಲಿದ್ದ ಇತರೆ ಜನಾಂಗದವರಿಗೂ ಕೂಡ, ಗ್ರಾಮದಲ್ಲಿ ಎಲ್ಲಾ ಜಾತಿ, ಜನಾಂಗದವರೂ ಇರುತ್ತಾರೆ. ಈ ರೀತಿ ಕ್ಷೌರದ ವಿಷಯದಲ್ಲಿಯೂ ತಾರತಮ್ಯ ಮಾಡುವುದು ಬೇಡ. ನಿಮ್ಮ ಒತ್ತಡದಿಂದಾಗಿ ಕ್ಷೌರಿಕ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ, ನೀವೂ ತಪ್ಪಿತಸ್ಥರಾಗುತ್ತೀರಿ ಎಂದು ಎಚ್ಚರಿಸಿದರು.
ಆಗ ಕ್ಷೌರಿಕ ಅಣ್ಣಪ್ಪ ಹಾಗೂ ಗ್ರಾಮಸ್ಥರು ಇಂತಹ ಘಟನೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದಾಗ ಪ್ರಕರಣ ಸುಖಾಂತ್ಯ ಕಂಡಿತು. ಲಾಕ್ಡೌನ್ ಮುಗಿದ ನಂತರ ಗ್ರಾಮದಲ್ಲಿ ಶಾಂತಿ ಸಭೆ ನಡೆಸಲಾಗುವುದು ಎಂದು ನಾಸಿರುದ್ದೀನ್ ಗ್ರಾಮಸ್ಥರಿಗೆ ತಿಳಿಸಿದರು.
ದಸಂಸ ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್, ಪಿಡಿಒ ಮೌನೇಶಾಚಾರ್,ಗ್ರಾಪಂ ಸದಸ್ಯರಾದ ಶಿಲ್ಪಾ ಹುಚ್ಚೆಂಗೆಪ್ಪ, ಮಾಜಿ ಸದಸ್ಯ ಎ.ಪರಶುರಾಮ, ಮಲ್ಲಪ್ಪ ಕೆ., ಮಂಜಪ್ಪಎ., ಶ್ರೀನಿವಾಸ್, ಕಟ್ಟೆಪ್ಪ, ನಿಂಗರಾಜ್, ಅಣ್ಣಪ್ಪ, ಹವಳೆಪ್ಪ, ರೇವಣಪ್ಪ, ಬಸಪ್ಪ, ಕೋಟೆಪ್ಪ ಇತರರು ಇದ್ದರು.
ಕೋವಿಡ್ ಸಂಕಷ್ಟದಲ್ಲೂ ಕೆಲವರು ಮಾನವೀಯತೆ ಮರೆತು, ಜಾತಿ, ಮತಗಳ ಎತ್ತಿಕಟ್ಟಿ ತಾರತಮ್ಯ ಮಾಡುತ್ತಿದ್ದಾರೆ. ಬಹುತೇಕ ಗ್ರಾಮಗಳಲ್ಲಿ ಇಂದಿಗೂ ದೇವಸ್ಥಾನ, ಹೋಟೆಲ್, ಕ್ಷೌರದಂಗಡಿ ದಲಿತರಿಗೆ ನಿಷಿದ್ಧ. ಅಧಿಕಾರಿಗಳು, ಮಠಾ ಧೀಶರು, ಜನಪ್ರತಿನಿಧಿ ಗಳು, ಸಮಾಜ ಸುಧಾರಕರು ಒಟ್ಟಾಗಿ ಅಸ್ಪೃಶ್ಯತೆಗೆ ಕೊನೆ ಹಾಡಬೇಕಿದೆ.– ಪಿ.ಜೆ.ಮಹಾಂತೇಶ್, ದಸಂಸ ತಾಲೂಕು ಸಂಚಾಲಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Davanagere: ಮತದಾನ ಜಾಗೃತಿ ಲಾಂಛನದಲ್ಲಿ ಅಪರೂಪದ ಪ್ರಾಣಿ ಚಿತ್ರ ಬಳಕೆ
MUST WATCH
ಹೊಸ ಸೇರ್ಪಡೆ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು