ನಾಯಕನಹಟ್ಟಿ ಜಾತ್ರೆ ಆದಾಯ ಹೆಚ್ಚಳ


Team Udayavani, Mar 28, 2019, 2:13 PM IST

dvg-2
ನಾಯಕನಹಟ್ಟಿ: ಇಲ್ಲಿನ ಗುರು ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಕಳೆದ ವರ್ಷದ ಜಾತ್ರೆಗಿಂತ 5.63 ಲಕ್ಷ ರೂ. ಅಧಿಕ ಆದಾಯ ದೊರೆತಿದೆ. ಬುಧವಾರ ದೇವಾಲಯದಲ್ಲಿ ಜಾತ್ರೆಯ ಹುಂಡಿಗಳ ಹಣದ ಎಣಿಕಾ ಕಾರ್ಯಜರುಗಿತು. ತಿಪ್ಪೇರುದ್ರಸ್ವಾಮಿ ಜಾತ್ರೆ ಅವಧಿಯಲ್ಲಿ ಹುಂಡಿಯಲ್ಲಿನ ಹಣ ಹಾಗೂ ನಾನಾ ಸೇವೆಗಳಿಂದ ದೇವಾಲಯಕ್ಕೆ ಒಟ್ಟು 97.83 ಲಕ್ಷ ರೂ. ಸಂಗ್ರಹವಾಗಿದೆ.
ಒಳಮಠದ ಹುಂಡಿಗಳಲ್ಲಿ 26,18,402 ರೂ. ಹಾಗೂ ಹೊರಮಠದ ಹುಂಡಿಗಳಲ್ಲಿ 9,96,928 ರೂ. ಸಂಗ್ರಹವಾಗಿದೆ. ಎರಡೂ ದೇವಾಲಯಗಳ ಹುಂಡಿಗಳಿಂದ ಒಟ್ಟಾರೆ 36,15,330 ರೂ. ಕಾಣಿಕೆ ಸಂಗ್ರಹಗೊಂಡಿದೆ. ಇವುಗಳ ಜತೆಗೆ ಜಾತ್ರಾ ಸಮಯದಲ್ಲಿ ದೇವಾಲಯಕ್ಕೆ ದೇಣಿಗೆ, ನೇರ ದರ್ಶನ, ತೀರ್ಥ-ಪ್ರಸಾದ, ಕಟ್ಟಡದ ಹಣ, ಮಂಗಳಾರತಿ ಸೇರಿದಂತೆ ನಾನಾ ಮೂಲಗಳಿಂದ 61,68,396 ರೂ.ಗಳು ಸಂದಾಯವಾಗಿವೆ. ಕಳೆದ ವರ್ಷ ಇದೇ ಅವ ಧಿಯಲ್ಲಿ 92,20,192 ರೂ. ಆದಾಯ ದೊರೆತಿತ್ತು. ಈ ಬಾರಿ ದೇವಾಲಯಕ್ಕೆ 97,83,726 ರೂ. ಹಣವನ್ನು ಭಕ್ತಾದಿಗಳು ನೀಡಿದ್ದಾರೆ. ಒಟ್ಟಾರೆ ದೇವಾಲಯಕ್ಕೆ ಈ ವರ್ಷ 5,63,534 ರೂ. ಹೆಚ್ಚುವರಿ ಹಣವನ್ನು ಭಕ್ತರು ದೇವರಿಗೆ ಕಾಣಿಕೆಯಾಗಿ ಅರ್ಪಿಸಿದ್ದಾರೆ. ದಾವಣಗೆರೆ ಜಿಲ್ಲೆಯ ವೀರಭದ್ರಸ್ವಾಮಿ, ಮಡ್ರಹಳ್ಳಿ ಚೌಡೇಶ್ವರಿ ಜಾತ್ರೆಗಳು ಏಕಕಾಲದಲ್ಲಿ ಜರುಗಿದ್ದರಿಂದ ಈ ಬಾರಿ ಜಾತ್ರೆಯಲ್ಲಿ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು.
ಜತೆಗೆ ಸುತ್ತಲಿನ ಪ್ರದೇಶದಲ್ಲಿ ಭಾರೀ ಪ್ರಮಾಣದ ಬರ ಆವರಿಸಿದ್ದರೂ ಜನರು ದೇವರಿಗೆ ಉದಾರವಾಗಿ ಕಾಣಿಕೆ ನೀಡಿದ್ದಾರೆ. ದೇವರ ನೇರ ದರ್ಶನಕ್ಕೆ 50 ರೂ. ನಿಗದಿಪಡಿಸಲಾಗಿತ್ತು. ದೇವರ ನೇರ ದೈನದಿಂದ 4.49 ಲಕ್ಷ ರೂ. ಲಭ್ಯವಾಗಿದ್ದರೆ, ಲಡ್ಡು ಪ್ರಸಾದ ಬಿಡ್ಡಿಂಗ್‌ 1,71,000 ರೂ.ಗಳಿಗೆ ನೀಡಲಾಗಿತ್ತು.  ಕೆನರಾ ಬ್ಯಾಂಕ್‌, ಕಂದಾಯ ಇಲಾಖೆಯ 50ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಸಂಸ್ಕೃತ ಶಾಲೆಯ ವಿದ್ಯಾರ್ಥಿಗಳು ಎಣಿಕಾ ಕಾರ್ಯದಲ್ಲಿ ತೊಡಗಿದ್ದರು. ಎಣಿಕಾ ಕಾರ್ಯವನ್ನು ವೀಡಿಯೋ ಚಿತ್ರೀಕರಣ ಮಾಡಲಾಯಿತು.
ದೇವಾಲಯದ ಇಒ ಎಸ್‌.ಪಿ.ಬಿ. ಮಹೇಶ್‌, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜೆ.ಪಿ. ರವಿಶಂಕರ್‌, ಉಪ ತಹಶೀಲ್ದಾರ್‌ ಟಿ. ಜಗದೀಶ್‌, ಮುಜರಾಯಿ ತಹಶೀಲ್ದಾರ್‌ ಸಮೀವುಲ್ಲಾ, ಮುಜುರಾಯಿ ಇಲಾಖೆ ಸಿಬ್ಬಂದಿ ರಂಗಪ್ಪ, ದೇವಾಲಯ ಸಿಬ್ಬಂದಿ ಸತೀಶ್‌, ಕೆನರಾ ಬ್ಯಾಂಕ್‌ ವ್ಯವಸ್ಥಾಪಕ ಈಶ್ವರಪ್ಪ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಲಲಿತಮ್ಮ, ಹಂಸವೇಣಿ, ಗೋವಿಂದರಾಜ್‌, ರುದ್ರಮುನಿ, ಮುನಿಯಪ್ಪ, ಎಸ್‌.ವಿ.ಟಿ. ರೆಡ್ಡಿ ಮತ್ತಿತರರು ಇದ್ದರು.
ಹುಂಡಿಯಲ್ಲಿ ಸಿಕ್ಕು ಅಮಾನ್ಯಗೊಂಡ ನೋಟು!
ಹಲವಾರು ಭಕ್ತರು ತೊಟ್ಟಿಲು, ಕಣ್ಣು, ಹೂವುಗಳು, ಮುಖಪದ್ಮ, ಉಂಗುರ ಸೇರಿದಂತೆ ನಾನಾ ಬೆಳ್ಳಿ ಹಾಗೂ ಬಂಗಾರದ ಆಭರಣಗಳನ್ನು ಹುಂಡಿಯಲ್ಲಿ ಹಾಕಿದ್ದರು. ಸಾಯಿಬಾಬಾ ಮುಖ ಹೊಂದಿರುವ ಮೂರು ಬೆಳ್ಳಿ ನಾಣ್ಯಗಳು ಹಾಗೂ 6 ಗ್ರಾಂ ತೂಕ ಬಂಗಾರದ ಉಂಗುರ ಗಮನ ಸೆಳೆದವು. ಅಮಾನ್ಯಿಕರಣಗೊಂಡ ಒಂದು ಸಾವಿರ ರೂ. ಮೌಲ್ಯದ ಒಂದು ಹಾಗೂ 500 ರೂ. ಮೌಲ್ಯದ 12 ನೋಟುಗಳೂ ಇದ್ದವು.

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

Gayathri Siddeshwar: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಜನ್ಮದಿನ ಆಚರಣೆ

Gayathri Siddeshwar: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಜನ್ಮದಿನ ಆಚರಣೆ

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.