ಹೋಳಿ ಬಣ್ಣಗಳಂತೆ ಎಲ್ಲರ ಬದುಕು ವರ್ಣರಂಜಿತವಾಗಲಿ: ಶ್ರೀ
Team Udayavani, Mar 22, 2019, 6:21 AM IST
ದಾವಣಗೆರೆ: ಕಾಮದಹನ ಎಂದರೆ ಕೇವಲ ಪ್ರತಿಮೆ ಸುಟ್ಟುಹಾಕುವುದಲ್ಲ. ನಮ್ಮಲ್ಲಿರುವ ಎಲ್ಲಾ ಕೆಟ್ಟಗುಣಗಳನ್ನು ಸುಟ್ಟುಹಾಕುವ ಸಂಕೇತ ಎಂದು ಅವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ವಿಶ್ಲೇಷಿಸಿದ್ದಾರೆ.
ಗುರುವಾರ ಬಾಡಾ ಕ್ರಾಸ್ನಲ್ಲಿರುವ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಆಯೋಜಿಸಲಾಗಿದ್ದ 220ನೇ ಹೋಳಿ ಹುಣ್ಣಿಮೆಯ ಶಿವಾನುಭವಗೋಷ್ಠಿ ಮತ್ತು ಸಂಗೀತ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಹೋಳಿ ಓಕಳಿ ಬಣ್ಣಗಳನ್ನು ಎರಚುವ ವರ್ಣರಂಜಿತ ಹಬ್ಬ. ನಮ್ಮೆಲ್ಲರ ಬದುಕು ಸಹ ಹಾಗೆಯೇ ವರ್ಣರಂಜಿತವಾಗಿರಲಿ ಎಂದು ಆಶಿಸಿದರು.
ಇಂದಿನ ವಿಭಿನ್ನ ವಾತಾವರಣದಲ್ಲಿ ಎಲ್ಲಾ ಜಂಜಾಟಗಳನ್ನು ಬದಿಗಿರಿಸಿ ಉತ್ತಮ ಬದುಕು ಸಾಗಿಸಬೇಕಿದೆ. ನೆಮ್ಮದಿ, ಸಹಬಾಳ್ವೆ, ಸೌಹಾರ್ದತೆ ಜೊತೆ ಆದರ್ಶವಾದ ಬದುಕನ್ನು ನಡೆಸುವ ಮೂಲಕ ದೇವರು ನೀಡಿದ ಬದುಕನ್ನು ಉತ್ತಮ ರೀತಿಯಲ್ಲಿ ಸಾಗಿಸಬೇಕು ಎಂದು ತಿಳಿಸಿದರು.
ವರ್ಣಮಯ ದೃಷ್ಟಿಯಿಂದ ನೋಡಿದಾಗ ಮಾತ್ರ ಬದುಕು ವರ್ಣರಂಜಿತವಾಗುವ ಮೂಲಕ ಎಲ್ಲರ ಹಿತವನ್ನು ಬಯಸುತ್ತದೆ. ಮಾತ್ರವಲ್ಲ ಆಧ್ಯಾತ್ಮಿಕ ಚಿಂತನೆಯ ನೆಲಗಟ್ಟಿನಲ್ಲಿ ಚಿಂತಿಸುವ ದೃಷ್ಟಿಕೋನದಲ್ಲಿ ಸಾಗಬೇಕಿದೆ ಎಂದು ಹೇಳಿದರು.
ಪುಟ್ಟರಾಜ ಗವಾಯಿಗಳು ಇಂದು ಇಲ್ಲದಿದ್ದರೂ ಅವರ ಚೇತನ ಗದ್ದುಗೆ ರೂಪದಲ್ಲಿ ಇಲ್ಲಿದೆ. ಆವರ ಪ್ರೇರಣೆ ಇಲ್ಲದೇ ಯಾವುದೇ ಒಂದು ಕಡ್ಡಿ ಅಲುಗಾಡಲು ಸಾಧ್ಯವಿಲ್ಲ. ಅವರ ಆಶಿರ್ವಾದವೇ ಇಂತಹ ಎಲ್ಲಾ ಕಾರ್ಯಕ್ರಮಗಳಿಗೆ ಕಾರಣ ಎಂದರು.
ಮಹಾನಗರ ಪಾಲಿಕೆ ಸದಸ್ಯ ಎಚ್.ಜಿ. ಉಮೇಶ್ ಮಾತನಾಡಿ, ಧರ್ಮಕಾರ್ಯಗಳಲ್ಲಿ ಪುಟ್ಟರಾಜಗವಾಯಿ ಮಠ ವಿಶ್ವ ಖ್ಯಾತಿ ಹೊಂದಿದೆ. ನಮ್ಮ ಭಾಗದಲ್ಲಿ ಶಾಖೆ ಇರುವುದು. ಅದರಲ್ಲೂ ಸಂಗೀತ ಸೇವೆ ನೀಡುವ ಮೂಲಕ ಅಂಧರನ್ನು ಸಮಾಜದ ಮುಖ್ಯವಾಹಿನಿಗೆ ತರುತ್ತಿರುವುದು ಶ್ಲಾಘನೀಯ ಕಾರ್ಯ. ಇಂತಹ ಸ್ಥಳ ಪ್ರವಾಸೋದ್ಯಮ ತಾಣವಾಗಬೇಕಿದೆ. ರಾಷ್ಟ್ರಿಯ ಹೆದ್ದಾರಿ ಸಮೀಪದಲ್ಲೇ ಇರುವ ಆಶ್ರಮ ಪ್ರಯಾಣಿಕರಿಗೆ ಆಶ್ರಯತಾಣವಾಗಲಿ. ಅದೇ ರೀತಿ ಪ್ರಯಾಣಿಕರು ಮಠದ ಅಭಿವೃದ್ಧಿ ಗೆ ಶ್ರಮಿಸಲಿ ಎಂದರು.
ನೂತನ ಶಿಲಾಮಂಟಪದ ತುಲಾಭಾರ ದಾನಿಗಳಾದ ಆರ್. ಲಲಿತಮ್ಮ, ರುದ್ರಯ್ಯ, ಆರ್. ರಾಜಶೇಖರ್, ಮಂಜುಳಮ್ಮ, ಜನತಾ ವಿದ್ಯಾಲಯದ ಉಮೇಶ್, ಟಿ.ಕೆ. ಕರಿಬಸಪ್ಪ, ವಸಂತಮ್ಮ, ಟಿ.ಕೆ. ವೀರಣ್ಣ, ಉಮಾ, ನಂದಿನಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ
ಕರ್ತವ್ಯ ಲೋಪ: ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕ ರಿಯಾಜ್ ಅಹಮ್ಮದ್ ಅಮಾನತು
Election Campaign: ಮೋದಿಯವರಿಂದ ಮಹಿಳಾ ಶಕ್ತಿಗೆ ಮುನ್ನುಡಿ
Davanagere: ಬಿಜೆಪಿ ಅಸಮಾಧಾನ ತಣಿಸಿದ ಬಿಎಸ್ ವೈ; ರವೀಂದ್ರನಾಥ್ ಗೆ ಚುನಾವಣೆ ಹೊಣೆ
Gayatri Siddeshwar: ಮೋದಿ ಕೈ ಬಲಪಡಿಸಲು ಬಿಜೆಪಿ ಗೆಲ್ಲಿಸಿ; ಗಾಯತ್ರಿ
MUST WATCH
ಹೊಸ ಸೇರ್ಪಡೆ
Bullet train ಮೊದಲ ಬಾರಿಗೆ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್: ರೈಲ್ವೇ ಸಚಿವ ವೈಷ್ಣವ್
Mumbai Indians: ಸೂರ್ಯಕುಮಾರ್ ಶೀಘ್ರ ಚೇತರಿಕೆ ಸಾಧ್ಯತೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್