ಮಕ್ಕಳು ಸದಾ ಚಟುವಟಿಕೆಯಿಂದಿರಲಿ


Team Udayavani, Jul 1, 2018, 1:35 PM IST

ray-3.jpg

ದಾವಣಗೆರೆ: ವಿದ್ಯಾರ್ಥಿಗಳು ನಿಂತ ನೀರಾಗದೆ ಸದಾ ಒಂದಿಲ್ಲೊಂದು ಚಟುಚಟಿಕೆಯಿಂದ ಕೂಡಿದ್ದರೆ ಉನ್ನತಿ
ಸಾಧಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಬಾಲಮಂದಿರದ ಮಕ್ಕಳಿಗೆ ಕಿವಿಮಾತು ಹೇಳಿದ್ದಾರೆ.

ಶ್ರೀರಾಮ ನಗರದ ಸರ್ಕಾರಿ ಬಾಲಮಂದಿರದಲ್ಲಿ ಶನಿವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ
ಮಕ್ಕಳ ಹಕ್ಕುಗಳ ರಕ್ಷಣಾ ಘಟಕದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಬ್ಯಾಗು ಮತ್ತು ವಾಚು ವಿತರಿಸಿ ಮಾತನಾಡಿದ ಅವರು, ಮಕ್ಕಳು ಸದಾ ಚಟುವಟಿಕೆ‌ಯಿಂದ ಕೂಡಿರಬೇಕು. ಆಡಬೇಕು, ಓದಬೇಕು, ಕುಣಿಯಬೇಕು. ಆಗಲೇ ಭೌತಿಕ, ಬೌದ್ಧಿಕ ಉನ್ನತಿ ಸಾಧ್ಯ ಎಂದರು.

ನಿಮಗೆ ನೀಡಿರುವ ವಾಚ್‌ ನಲ್ಲಿರುವ ಮುಳ್ಳುಗಳು ಹೇಗೆ ಸದಾ ಚಲಿಸುತ್ತಿರುತ್ತವೆಯೋ ಹಾಗೆಯೇ ನೀವೂ ಸದಾ ಚಲನಸ್ಥಿತಿಯಲ್ಲಿರಬೇಕು. ಓದಲು, ಜೀವನದಲ್ಲಿ ಏನನ್ನಾದರೂ ಸಾಧಿಸಲು ಚಲಿಸಬೇಕು. ಚಲಿಸದೇ ಒಂದಡೆ ನಿಂತರೆ
ಅದು ಸತ್ತಂತೆಯೇ ಸರಿ. ಜೀವನ ಅಂದರೆ ಓಡುವುದು, ನಿಂತರೆ ಜೀವನದಲ್ಲಿ ಜಾಗ ಇಲ್ಲ. ನಾವು ನಿಷ್ಕ್ರಿಯರಾದರೆ ಪ್ರಪಂಚ ನಮ್ಮನ್ನು ಹೊರಹಾಕುತ್ತದೆ ಎಂದು ಅವರು ಕಿವಿಮಾತು ಹೇಳಿದರು.

ಯಾವುದೇ ಜೀವಂತ ವಸ್ತು ಚಲಿಸುತ್ತಿರಬೇಕು. ಬಿತ್ತಿದ ಬೀಜ ಮೊಳಕೆ ಬರುತ್ತಿದೆ ಅಂದರೆ ಅದು ಜೀವಂತವಾಗಿದೆ
ಎಂದರ್ಥ. ಮೊಳಕೆ ಚಿಗುರಬೇಕು, ಹೂವಾಗಬೇಕು. ಹೂ, ಹಣ್ಣು ಬಿಟ್ಟರೆ ಗಿಡದ ಶೋಭೆ ನೋಡಲು ಅಂದವಾಗಿರುತ್ತದೆ.  ಹಾಗೇ ಮಕ್ಕಳು ನಗುವ ಗಿಡಗಳಾಗಿರಬೇಕು. ಗಿಡಮರಗಳಂತೆ ಬೆಳೆಯಬೇಕು. ಸುವಾಸನೆ ಬೀರಬೇಕು ಹಾಗಾ ಗಬೇಕಾದರೆ, ಕಾಲವನ್ನು ಹೊಂದಿಸಿಕೊಳ್ಳಬೇಕು. ಸರಿದ ಕಾಲ ಮತ್ತೂಮ್ಮೆ ದೊರೆಯುವುದಿಲ್ಲ. ನಿಮಗೆ ನೀಡಿರುವ ವಾಚ್‌ನಲ್ಲಿರುವ ಮುಳ್ಳುಗಳು ಎಂದಿಗೂ ಹಿಂದೆ ಓಡುವುದಿಲ್ಲ. ಹಾಗೆ ನಾವುಗಳು ಜೀವನದಲ್ಲಿ ಹಿಂದೋಗದೆ ಮುಂದೆ ಸಾಗಬೇಕು ಎಂದು ಅವರು ಕಿವಿಮಾತು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌, ಬಾಲಮಂದಿರದಲ್ಲಿರುವ ಮಕ್ಕಳು ನಾನಾ ಕಾರಣಗಳಿಂದ ಇಲ್ಲಿಗೆ ಬಂದು ದಾಖಲಾಗಿರುತ್ತಾರೆ. ಅವರು ಶ್ರದ್ಧೆಯಿಂದ ಅಭ್ಯಾಸ ಮಾಡಿ ಉತ್ತಮ ಜೀವನ ರೂಪಿಸಿಕೊಳ್ಳಬೇಕಿದೆ ಎಂದರು. 

ವಾರ್ತಾಧಿಕಾರಿ ಡಿ.ಅಶೋಕ್‌ಕುಮಾರ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಾಲ್ಲೂಕು ಸಿಡಿಪಿಓಗಳಾದ
ಮೈತ್ರಾದೇವಿ, ಭಾರತಿ ಬಣಕಾರ್‌, ಶಿವಲಿಂಗಪ್ಪ, ಸದಾನಂದ, ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ಶೋಭಾ
ಟಿ.ಆರ್‌. ವೇದಿಕೆಯಲ್ಲಿದ್ದರು. 

ನಿಮಗೆ ನೀಡಿರುವ ವಾಚ್‌ನಲ್ಲಿರುವ ಮುಳ್ಳುಗಳು ಹೇಗೆ ಸದಾ ಚಲಿಸುತ್ತಿರುತ್ತವೆಯೋ ಹಾಗೆಯೇ ನೀವೂ ಸದಾ
ಚಲನಸ್ಥಿತಿಯಲ್ಲಿರಬೇಕು. ಓದಲು, ಜೀವನದಲ್ಲಿ ಏನನ್ನಾದರೂ ಸಾಧಿಸಲು ಚಲಿಸಬೇಕು. ಚಲಿಸದೇ ಒಂದಡೆ ನಿಂತರೆ ಅದು ಸತ್ತಂತೆಯೇ ಸರಿ. ಜೀವನ ಅಂದರೆ ಓಡುವುದು, ನಿಂತರೆ ಜೀವನದಲ್ಲಿ ಜಾಗ ಇಲ್ಲ. ನಾವು ನಿಷ್ಕ್ರಿಯರಾದರೆ ಪ್ರಪಂಚ ನಮ್ಮನ್ನು ಹೊರಹಾಕುತ್ತದೆ. 
 ಡಿ.ಎಸ್‌.ರಮೇಶ್‌, ಜಿಲ್ಲಾಧಿಕಾರಿ.

ಟಾಪ್ ನ್ಯೂಸ್

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

1-wqeqwe

Davanagere: ಮತದಾನ ಜಾಗೃತಿ ಲಾಂಛನದಲ್ಲಿ ಅಪರೂಪದ ಪ್ರಾಣಿ ಚಿತ್ರ ಬಳಕೆ

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.