ಹೈಟೆನ್ಷನ್ ವಿದ್ಯುತ್ ಗೋಪುರಕ್ಕೆ ಗುದ್ದಿದ ಲಾರಿ
Team Udayavani, Nov 23, 2018, 1:07 PM IST
ದಾವಣಗೆರೆ: ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಲಾರಿಗಳ ಮಧ್ಯೆ ಡಿಕ್ಕಿಯಿಂದಾಗಿ ಒಂದು ಲಾರಿ ಹೈಟೆನ್ಷನ್ ವಿದ್ಯುತ್ ಟವರ್ಗೆ ಗುದ್ದಿದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ನಗರದ ಹೊರಹೊಲಯದ ಮಾಡ್ರನ್ ಸ್ಕೂಲ್ ಬಳಿ ಈ ಘಟನೆ ಸಂಭವಿಸಿದೆ. ಕಬ್ಬು ತುಂಬಿದ ಲಾರಿಗೆ ಹರಿಹರ ಕಡೆಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಆಗ ಕಬ್ಬಿನ ಲಾರಿ ವಿದ್ಯುತ್ ಟವರ್ ಗೆ ಗುದ್ದಿದೆ. ಘಟನೆಯಲ್ಲಿ ಚಾಲಕ ಗಾಯಗೊಂಡಿದ್ದಾನೆ.
ಕಬ್ಬಿನ ಲಾರಿ ಸರ್ವಿಸ್ ರಸ್ತೆಯ ಬದಿಯಲ್ಲಿದ್ದ 66 ಕೆ.ವಿಯ ದಾವಣಗೆರೆ-ಹರಿಹರ-ಹೊಸಪೇಟೆ ಮತ್ತು ದಾವಣಗೆರೆ ಗುತ್ತೂರು ಇಂಡಸ್ಟ್ರೀಯಲ್ ಪ್ರಸರಣ ಮಾರ್ಗದ ಗೋಪುರಕ್ಕೆ ಗುದ್ದಿದ ಪರಿಣಾಮ ಗೋಪುರ ಹಾನಿಗೊಳಗಾಗಿದೆ ಎಂದು ದೂರು ನೀಡಲಾಗಿದೆ.
ನಾಲ್ಕು ಬಂಗಾರ ಬಳೆ ಕಳ್ಳತನ
ದಾವಣಗೆರೆ: ಮನೆಯ ಹೆಂಚು ತೆಗೆದು ಒಳಗೆ ನುಗ್ಗಿರುವ ಕಳ್ಳರು, ಬೀರುವಿನಲ್ಲಿದ್ದ 2 ಲಕ್ಷ ರೂ. ಮೌಲ್ಯದ 80 ಗ್ರಾಂ 4 ಬಳೆಗಳನ್ನು ದೋಚಿರುವ ಘಟನೆ ಕೆಟಿಜೆ ನಗರದ 6 ನೇ ಕ್ರಾಸ್ನಲ್ಲಿ ಬುಧವಾರ ನಡೆದಿದೆ. ಮನೆ ಕೆಲಸದಿಂದ ಜೀವನ ಸಾಗಿಸುತ್ತಿರುವ ಹಾಲಮ್ಮ, ತನ್ನ ಅಕ್ಕ ಕೊಟ್ಟು ಹೋಗಿದ್ದ ಚಿನ್ನದ 4 ಬಳೆಗಳನ್ನು ಬೀರುವಿನಲ್ಲಿ ಇಟ್ಟು ಯಲ್ಲಮ್ಮನಗುಡ್ಡಕ್ಕೆ ಮಂಗಳವಾರ ಹೋಗಿದ್ದಾರೆ. ಅಲ್ಲಿಂದ ಬಂದು ನೋಡಿದಾಗ ಮನೆಯ ಮೇಲಿನ ಹೆಂಚು ತೆಗೆದು ಕಳ್ಳರು ಒಳಪ್ರವೇಶಿಸಿ, ಬೀರುವಿನ ಬಾಗಿಲು ಮುರಿದು, ಬಳೆ ದೋಚಿರುವುದು ಕಂಡು ಬಂದಿದೆ. ಪ್ರಕರಣ ಕೆಟಿಜೆ ನಗರ ಠಾಣೆಯಲ್ಲಿ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
MUST WATCH
ಹೊಸ ಸೇರ್ಪಡೆ
Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ
Neha ಹತ್ಯೆ ಪ್ರಕರಣ; ಎನ್ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್ಪಿ ಆಗ್ರಹ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?