ದ್ವಿಪಥ ರಸ್ತೆ ಕಾಮಗಾರಿಗೆ ಚಾಲನೆ
7.30 ಕೋಟಿ ವೆಚ್ಚದಲ್ಲಿ 1.40 ಕಿ.ಮೀ ರಸ್ತೆ ಸಹಕಾರಕ್ಕೆ ಕರೆ
Team Udayavani, Feb 29, 2020, 11:06 AM IST
ಮಾಯಕೊಂಡ: ಗ್ರಾಮದ ಜನರ ಬಹು ದಿನಗಳ ಬೇಡಿಕೆ ದ್ವಿಪಥ ರಸ್ತೆ ಕಾಮಗಾರಿಗೆ ಚಾಲನೆ ದೊರಕಿರುವುದು ತುಂಬ ಸಂತಸ ತಂದಿದೆ ಎಂದು ಸಂಸದ ಜಿ.ಎಂ ಸಿದ್ದೇಶ್ವರ ಹೇಳಿದರು.
ಮಾಯಕೊಂಡ ಗ್ರಾಮದಲ್ಲಿ 7.30 ಕೋಟಿ ವೆಚ್ಚದ 1.40 ಕಿ.ಮೀ ದ್ವಿಪಥ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮಾಜಿ ಸಚಿವ ರೇವಣ್ಣ ಅವರ ಕಾಲದಲ್ಲಿ ಯೋಜನೆ ಮಂಜೂರಾದರು ಸರ್ಕಾರ ಬದಲಾದ ಕಾರಣಕ್ಕೆ ತಡವಾಗಿದ್ದು, ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಹಣ ಬಿಡುಗಡೆ ಮಾಡಿಸಲಾಗಿದೆ. ಕಾಮಗಾರಿಯನ್ನು ಉತ್ತಮ ರೀತಿಯಲ್ಲಿ ಯಾವುದೆ ಸಬೂಬು ಹೇಳದೆ ಮಾಡಬೇಕು ಎಂದು ಗುತ್ತಿಗೆದಾರನಿಗೆ ತಾಕೀತು ಮಾಡಿದರು.
ರಸ್ತೆ ಮಾಡುವಾಗ ಮನೆ ಕಳೆದುಕೊಳ್ಳುವ ಬಡವರನ್ನು ಬೀದಿಗೆ ನಿಲ್ಲಿಸಬಾರದು. ಮನೆಗಳಿಗೆ ತೊಂದರೆ ಅದರೆ ಅವರಿಗೆ ಗ್ರಾಂಪ ಯವರು ಸರ್ಕಾರದಿಂದ ಜಾಗ ಮತ್ತು ಮನೆಯನ್ನು ನಿರ್ಮಾಣ ಮಾಡಿ ಕೊಡಬೇಕು. ಅಂಥವರಿಗೆ ವಸತಿ ಸಚಿವರ ಬಳಿ ಅತಿ ಶೀಘ್ರದಲ್ಲಿ ಮನೆಗಳನ್ನು ಮಂಜೂರು ಮಾಡಿಸುತ್ತೇನೆ. ಕಳೆದುಕೊಳ್ಳುವ ಜಾಗಕ್ಕೆ ಉತ್ತಮ ಬೆಲೆ ನೀಡಲಾಗುವುದು ಎಂದರು.
ಹುಚ್ಚವನಹಳ್ಳಿ ಕೆರೆಗೆ ಅಳವಡಿಸಿರುವ ಸಾಸ್ವೆಹಳ್ಳಿ ಏತ ನೀರಾವರಿಯ ಪೈಪ್ಲೈನ್ ಆಳವಡಿಕೆಯಲ್ಲಿ ಲೋಪವಾಗಿದೆ ಎಂದು ದೂರಿದಾಗ ಸಂಬಂಧಿತ ಇಂಜಿನೀಯರ್ ಅವರನ್ನು ಕಚೇರಿಗೆ ಕರೆತನ್ನಿ. ನಾವು ಚರ್ಚಿಸುತ್ತೇವೆ. ರೈತರ ಖಾತೆಗೆ ಕೃಷಿ ಸಮ್ಮಾನ್ ಯೋಜನೆಯ ಆರು ಸಾವಿರ ಹಣ ಜಮೆಯಾಗಿದೆ. ಮೆಕ್ಕೆಜೋಳ ದರ ಕುಸಿತದಿಂದ ರಾಜ್ಯ ಬಜೆಟ್ನಲ್ಲಿ ಆವರ್ತ ನಿಧಿ ತೆರೆಯಲಾಗುತ್ತಿದೆ ಎಂದರು.
ಶಾಸಕ ಪ್ರೊ| ಎನ್. ಲಿಂಗಣ್ಣ ಮಾತನಾಡಿ, ನಿಮ್ಮೆಲ್ಲರ ಆಸೆಯಂತೆ ಈಗ ರಸ್ತೆ ಆಗಲೀಕರಣ ಕೆಲಸ ನಡೆಯುತ್ತಿದೆ. ಎಲ್ಲರು ಸಹಕರಿಸಬೇಕು ಎಂದರು.
ಗಾಯತ್ರಿ ಗ್ರಾಮೀಣ ಸಂಸ್ಥೆಯ ಕೆ.ಪಿ. ಮರಿಯಚಾರ್, ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಹೆದ್ನೆ ಮುರುಗೇಂದ್ರಪ್ಪ, ಮುಖಂಡ ಪುಟ್ಟರಂಗಾಸ್ವಾಮಿ ಮಾತನಾಡಿದರು. ಜಿಪಂ ಸದಸ್ಯ ನಟರಾಜ್, ತಾಪಂ ಸದಸ್ಯ ನಾಗರಾಜು ಉಮೇಶ್ನಾಯ್ಕ, ಗ್ರಾಪಂ ಸದಸ್ಯೆ ರೂಪ ರಾಘುರಾಮ್, ಸದಸ್ಯರಾದ ಮಲ್ಲಿಕಾರ್ಜುನ, ರುದ್ರೇಶ್ ರಾಜಶೇಖರ್, ದ್ರಾಕ್ಷಯಣಮ್ಮ, ಗಿರಿಜ, ಕೃಷಿ ಪತ್ತಿನ ಸಂಘದ ಸದಸ್ಯ ಮೋಹನ್ ಪೂಜಾರ್, ಮುಖಂಡರಾದ ಹೆಬ್ಟಾಳು ಮಹೇಂದ್ರ, ಮುರಿಗೇಂದ್ರಪ್ಪ, ಹನುಮಂತನಾಯ್ಕ, ಬಸವಪೂರ ರಮೇಶ್, ಹೆದೆ° ದಿವಾಕರ ಶ್ರೀನಿವಾಸ, ಗೋಪಾಲ ಪೂಜರ್, ಅಶೋಕ್, ಮಹಾಂತೇಶ್, ಗೌಡ್ರ ಅಶೋಕ, ನಿಂಗಪ್ಪ, ಬಾಲರಾಜು, ಸಿ.ಪಿ.ಐ ಗುರು ಬಸವರಾಜು, ಪಿ.ಎಸ್.ಐ ವೀರಭದ್ರಪ್ಪ ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panchamasali ಎಂಬ ಕಾರಣಕ್ಕೆ ಯತ್ನಾಳ್ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
Gayathri Siddeshwar: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಜನ್ಮದಿನ ಆಚರಣೆ
Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ
Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು
MUST WATCH
ಹೊಸ ಸೇರ್ಪಡೆ
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
Election Commission: ಪ್ರಿಯಾಂಕ್ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು
Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ
Congress party: ಮಾಲೀಕಯ್ಯ ಗುತ್ತೇದಾರ್ ಇಂದು ಕಾಂಗ್ರೆಸ್ ಸೇರ್ಪಡೆ
Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ