ಎಂಎಲ್ಸಿ ಚುನಾವಣೆ ಹಿನ್ನೆಲೆ : ಟೆಂಡರ್ ಹರಾಜು ಪ್ರಕ್ರಿಯೆಗೆ ತಡೆ
Team Udayavani, Dec 8, 2021, 12:36 PM IST
ಚನ್ನಗಿರಿ: ತಾಲೂಕಿನ ಮೀನುಗಾರಿಕೆ ಇಲಾಖೆಯಿಂದ ಜಲಸಂಪನ್ಮೂಲಗಳ ಮೀನುಪಾಶುವಾರು ಹಕ್ಕನ್ನು ಟೆಂಡರ್ ಮುಖಾಂತರ ಪಡೆಯಲು ಪ್ರಕಟಣೆ ಹೊರಡಿಸಿದ್ದು. ಎಂಎಲ್ಸಿ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆ ಟೆಂಡರ್ ಹರಾಜು ಪ್ರಕ್ರಿಯೆ ತಡೆ ಹಿಡಿಯಲಾಗಿದೆ ಎಂದು ತಾಲೂಕು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಬಿ.ಜೆ ದೀಪಶ್ರೀ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2021-22 ನೇ ಸಾಲಿನ ಮೀನುಗಾರಿಕೆ ಪಸಲಿ ವರ್ಷದಿಂದ 2025-26 ನೇ ಸಾಲಿನವರೆಗೆ (ಒಟ್ಟು 5ವರ್ಷದ) ಅವಧಿಗೆ ತಾಲೂಕಿನ ಸಂಕಣ್ಣನ ಕೆರೆ, ಬೆಂಕಿಕೆರೆ ದೊಡ್ಡ ಕೆರೆ, ಹೆಬ್ಬಳಗೆರೆ ಕೆರೆ, ಮೆದುಗೊಂಡನಹಳ್ಳಿ ಕೆರೆ ಮೇಳನಾಯ್ಕನಕಟ್ಟೆಯ ಕುಂಬಾರಕಟ್ಟೆ ಕೆರೆ ಒಟ್ಟು 5 ಕೆರೆಗಳನ್ನು ಟೆಂಡರ್ ಕಂ ಹರಾಜು ಪ್ರಕ್ರಿಯೆಯನ್ನು ಡಿ.9 ರಂದು ನಡೆಸುವುದಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು ಸದ್ಯ ಎಂಎಲ್ಸಿ ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಅದನ್ನು ಹಿಂಪಡೆದಿದ್ದು ಚುನಾವಣೆ ನಂತರದಲ್ಲಿ ಬದಲಿ ದಿನಾಂಕವನ್ನು ನಿಗದಿ ಪಡಿಸಿ ಕೆರೆಗಳ ಹರಾಜು ಪ್ರಕ್ರಿಯೆಯನ್ನು ನಡೆಸಲಾಗುವುದು ಎಂದು ಪತ್ರಿಕೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Panchamasali ಎಂಬ ಕಾರಣಕ್ಕೆ ಯತ್ನಾಳ್ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ