ಚಿತ್ರಮಂದಿರದ ಗಮ್ಮತ್ತು ಮರುಕಳಿಸೋದು ಡೌಟ್‌

ಚಿತ್ರ ಪ್ರದರ್ಶನಕ್ಕೆ ಅನುಮತಿ ದೊರೆತ ನಂತರವೂ ತಪ್ಪಿಲ್ಲ ಆತಂಕ, ಎಲ್ಲ ಚಿತ್ರಮಂದಿರಗಳೂ ತೆರೆಯೊದೇ ಅನುಮಾನ

Team Udayavani, Oct 12, 2020, 5:14 PM IST

ಚಿತ್ರಮಂದಿರದ ಗಮ್ಮತ್ತು ಮರುಕಳಿಸೋದು ಡೌಟ್‌

ಸಾಂದರ್ಭಿಕ ಚಿತ್ರ

ದಾವಣಗೆರೆ: ಕೇಂದ್ರ ಸರ್ಕಾರ ಅನ್‌ಲಾಕ್‌-5.0ದಲ್ಲಿ ಅ. 15 ರಿಂದ ಚಿತ್ರಮಂದಿರಗಳ ಪ್ರಾರಂಭಕ್ಕೆ ಅನುಮತಿಯನ್ನೇನೋ ನೀಡಿದೆ. ಆದರೆ ಪ್ರೇಕ್ಷಕ ವರ್ಗದ ಮನೋಭಾವ, ಮಾರ್ಗಸೂಚಿ ಪಾಲನೆ, ನಿರ್ವಹಣಾ ವೆಚ್ಚ ಮತ್ತಿತರ ಕಾರಣಗಳಿಂದ ಪೂರ್ಣ ಪ್ರಮಾಣದಲ್ಲಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಷ್ಟ ಸಾಧ್ಯ.

ಬೆಂಗಳೂರು ಹೊರತುಪಡಿಸಿದರೆ ಮಧ್ಯ ಕರ್ನಾಟಕ ಕೇಂದ್ರ ದಾವಣಗೆರೆ ಕನ್ನಡ ಚಿತ್ರರಂಗಕ್ಕೆ ಅತಿ ದೊಡ್ಡ ಕಲೆಕ್ಷನ್‌ ಪಾಯಿಂಟ್‌. ದಾವಣಗೆರೆಯಲ್ಲಿ ಚಿತ್ರ ಯಶಸ್ವಿ ಪ್ರದರ್ಶನ ಕಂಡಿತುಎಂದರೆ ಆ ಚಿತ್ರ ಗೆದ್ದಂತೆಯೇ ಎಂಬ ಮಾತುಗಳು ಕನ್ನಡ ಚಿತ್ರರಂಗದಲ್ಲಿದೆ. ಹೀಗೆ ಅತೀಹೆಚ್ಚುಪ್ರೇಕ್ಷಕರನ್ನು ಒಳಗೊಂಡ ದಾವಣಗೆರೆಯಲ್ಲೇ ಎಲ್ಲಾ ಚಿತ್ರಮಂದಿರಗಳು ಪುನರಾರಂಭ ಆಗುವ ಲಕ್ಷಣಸದ್ಯಕ್ಕೆ ಕಾಣುತ್ತಿಲ್ಲ.

ಕೋವಿಡ್ ವೈರಸ್‌ ಹರಡುವುದನ್ನು ತಡೆಯಲು  ಲಾಕ್‌ಡೌನ್‌ ಜಾರಿಗೊಳಿಸಿದ ಪರಿಣಾಮ ಅ.12ಕ್ಕೆಚಿತ್ರಮಂದಿರಗಳು ಬಂದ್‌ ಆಗಿ ಬರೋಬ್ಬರಿ 7 ತಿಂಗಳಾಗುತ್ತದೆ. ಚಿತ್ರಮಂದಿರಗಳು ಇಷ್ಟೊಂದು ಸುದೀರ್ಘ‌ ಅವಧಿ ಮುಚ್ಚಿದ ಉದಾಹರಣೆಯೇ ಇಲ್ಲ. ಈಗ ಕೇಂದ್ರ ಸರ್ಕಾರ ಬೆಳ್ಳಿ ಪರದೆಯ ಮೇಲೆ ಚಿತ್ರಗಳ ಪ್ರದರ್ಶನಕ್ಕೆ ಹಸಿರು ನಿಶಾನೆ ನೀಡಿದೆ. ಆದರೆ ಕೋವಿಡ್ ಅಬ್ಬರಿಸುತ್ತಿರುವ ಸಂದರ್ಭದಲ್ಲಿ ಪ್ರೇಕ್ಷಕರು ಹಿಂದಿನಂತೆ ನಿರ್ಭೀತಿಯಿಂದ ಚಿತ್ರಮಂದಿರಗಳಿಗೆ ಬರುತ್ತಾರಾ ಎಂಬ ಪ್ರಶ್ನೆ ಚಿತ್ರಮಂದಿರದ ಮಾಲೀಕರು, ಬಾಡಿಗೆದಾರರು, ವಿತರಕರನ್ನು ಕಾಡುತ್ತಿದೆ. ಅದಕ್ಕೆ ಉತ್ತರ ಕಷ್ಟ. ಕಾರಣ ಎಲ್ಲವೂ ಪ್ರೇಕ್ಷಕರ ನಿರ್ಧಾರವನ್ನು ಅವಲಂಬಿಸಿದೆ.

ಮಹಾಮಾರಿ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಲಾಗುತ್ತದೆ. ಜನಸಂದಣಿ ತಪ್ಪಿಸಲು ಮುಂಗಡವಾಗಿ, ಆನ್‌ಲೈನ್‌ ಟಿಕೆಟ್‌ ವಿತರಣೆ ವ್ಯವಸ್ಥೆ ಮಾಡಬೇಕು ಎಂಬ ನಿಯಮಪಾಲನೆ ಕಷ್ಟ. ಸಮಯ ಕಳೆಯಲೆಂದೇಚಿತ್ರಮಂದಿರಕ್ಕೆ ಬರುವವರೂ ಇದ್ದಾರೆ. ಶೋ ಪ್ರಾರಂಭವಾದ ನಂತರವೂ ಚಿತ್ರಮಂದಿರಕ್ಕೆ ಬರುವವರನ್ನು ವಾಪಸ್‌ ಕಳುಹಿಸಲು ಆಗದು. ಅಂತಹ ಸಂದರ್ಭದಲ್ಲಿ ಏನು ಮಾಡಬೇಕು ಎಂಬ ಪ್ರಶ್ನೆ ಚಿತ್ರಮಂದಿರ ಮಾಲೀಕರಿಗೆ ಎದುರಾಗಿದೆ.

ಇದಲ್ಲದೆ ಚಿತ್ರಗಳನ್ನು ನೋಡಲು ಕನಿಷ್ಠವೆಂದರೂ 100-200, ತಮ್ಮ ನೆಚ್ಚಿನ ನಾಯಕ, ನಾಯಕಿಯ ಚಿತ್ರಗಳಿದ್ದರೆ 500, ದಿನಕ್ಕೆ ಸಾವಿರದಷ್ಟು ಪ್ರೇಕ್ಷಕರು ಬಂದಾಗ ಪ್ರತಿಯೊಬ್ಬರ ವಿಳಾಸ, ಮೊಬೈಲ್‌ ನಂಬರ್‌ ಒಳಗೊಂಡಂತೆ ಎಲ್ಲಾ ವಿವರ ದಾಖಲಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಯೂ ಚಿತ್ರಮಂದಿರದವರನ್ನು ಕಾಡುತ್ತಿದೆ.

ಚಿತ್ರಮಂದಿರದ ಸಾಮರ್ಥ್ಯದ ಶೇ.50 ರಷ್ಟು ಸೀಟುಗಳಿಗೆ ಮಾತ್ರ ಅವಕಾಶ ಮಾಡಿಕೊಡಬೇಕು ಎಂಬ ನಿಯಮ ವಿಧಿಸಲಾಗಿದೆ. ಈಗಾಗಲೇ ಪ್ರೇಕ್ಷಕರ ಕೊರತೆಯಿಂದ ಸಮಸ್ಯೆಯಲ್ಲಿರುವ ಚಿತ್ರಮಂದಿರಗಳಿಗೆ ಇದು ಇನ್ನಷ್ಟು ಸಮಸ್ಯೆ ಉಂಟು ಮಾಡಲಿದೆ. ಸಾಮಾನ್ಯ ಚಿತ್ರಗಳಬಿಡುಗಡೆಯಾದಾಗ ಅಷ್ಟೊಂದು ಸಮಸ್ಯೆ  ಆಗಲಾರದು. ದೊಡ್ಡ ದೊಡ್ಡ ನಟರ, ಭಾರೀ

ಬಜೆಟ್‌ ಚಿತ್ರಗಳು ಬಿಡುಗಡೆಯಾದಾಗ ಬಹಳ ಸಮಸ್ಯೆ ಆಗುತ್ತದೆ. ಸರ್ಕಾರ ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡಿದ ನಂತರವೂ ಕೆಲವಾರು ಚಿತ್ರಗಳು ಮರು ಬಿಡುಗಡೆ ಆಗುವ ಅಂಶ ಕೂಡ ಅ.15 ರಿಂದಲೇ ಚಿತ್ರಮಂದಿರಗಳ ಪುನಾರಂಭಕ್ಕೆ ಲೆಕ್ಕಾಚಾರ ಹಾಕುವಂತೆ ಮಾಡಿದೆ. ಚಿತ್ರಮಂದಿರಗಳು ಪುನಾರಂಭಗೊಂಡರೂ ಹಿಂದಿನ ಗಮ್ಮತ್ತು ಕಾಣೋದು ಕಷ್ಟ.

ಸರ್ಕಾರ ಸ್ಯಾನಿಟೈಸರ್‌ ಒದಗಿಸಲಿ : ಚಿತ್ರಮಂದಿರಗಳ ಪ್ರಾರಂಭಕ್ಕೆ ಅನುಮತಿ ನೀಡಿರುವ ಸರ್ಕಾರ ವಿಧಿಸಿರುವ ಮಾರ್ಗಸೂಚಿಗಳ ಪಾಲನೆ ಮತ್ತು ನಿರ್ವಹಣೆ ಚಿತ್ರಮಂದಿರಗಳ ಮಾಲೀಕರಿಗೆ ಹೆಚ್ಚಿನ ಹೊರೆಯಾಗಲಿದೆ. ಪ್ರತಿ ಶೋ ನಂತರ ಸ್ಯಾನಿಟೈಸೇಷನ್‌ಗೆ ಕನಿಷ್ಠ 1 ಸಾವಿರ ರೂ. ಲೆಕ್ಕ ಹಾಕಿದರೂ ನಾಲ್ಕು ಪ್ರದರ್ಶನಕ್ಕೆ 4 ಸಾವಿರ ರೂ. ಆಗುತ್ತದೆ. ಅಂದರೆ ತಿಂಗಳಿಗೆ 1.20 ಲಕ್ಷ ರೂ. ವೆಚ್ಚ ಭರಿಸಬೇಕಾಗುತ್ತದೆ. ಈಗಿನ ಕಲೆಕ್ಷನ್‌ ನೋಡಿದರೆ ಮಾಲೀಕರು, ಬಾಡಿಗೆದಾರರಿಗೆ ಹೊರೆ ಆಗಿಯೇ ಆಗುತ್ತದೆ. ಹಾಗಾಗಿ ಸರ್ಕಾರ ಕಡಿಮೆ ದರದಲ್ಲಿ ಸ್ಯಾನಿಟೈಸರ್‌ ಒದಗಿಸುವ ವ್ಯವಸ್ಥೆಯನ್ನಾದರೂ ಮಾಡಬೇಕು ಎನ್ನುತ್ತಾರೆ ಗೀತಾಂಜಲಿ ಚಿತ್ರಮಂದಿರದ ಚಂದ್ರಶೇಖರ್‌.

ಬೇರೆ ಕೆಲಸದತ್ತ ನೌಕರರು :ಲಾಕ್‌ಡೌನ್‌ನಿಂದ ಚಿತ್ರಮಂದಿರಗಳಲ್ಲಿ ಕೆಲಸ ಮಾಡುತ್ತಿದ್ದಂತಹವರು ಜೀವನ ನಿರ್ವಹಣೆಗೆ ಬೇರೆ ಬೇರೆ ಕೆಲಸಗಳನ್ನುಅರಸಿ ಹೋಗಿದ್ದಾರೆ. ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿದ್ದಂತಹ ಕೆಲಸಗಾರರಿಗೆಸಂಘ- ಸಂಸ್ಥೆಗಳವರು, ಚಿತ್ರಮಂದಿರಗಳ ಮಾಲೀಕರು ಆಹಾರದ ಕಿಟ್‌ ಇತರೆ ನೆರವು ನೀಡಿದ್ದನ್ನು ಬಿಟ್ಟರೆ ನೆರವಿಗೆಬರಲೇಬೇಕಾದವರು ಬರಲೇ ಇಲ್ಲ ಎಂಬ ಕೊರಗು ಕೆಲಸಗಾರರದ್ದಾಗಿದೆ.

 

-ರಾ. ರವಿಬಾಬು

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.