ಕುಂದುವಾಡ ಕೆರೆ ಕಾಮಗಾರಿಯಲ್ಲೂ ಪರ್ಸಂಟೇಜ್ ದಂಧೆ
ನಾಲ್ಕು ವರ್ಷದಲ್ಲಿ ಬಿಜೆಪಿ ಒಂದಾದರೂ ಒಳ್ಳೆಯ ಕೆಲಸ ಮಾಡಿದ್ದರೆ ತೋರಿಸಲಿ
Team Udayavani, Apr 16, 2022, 11:32 AM IST
ದಾವಣಗೆರೆ: ಕುಂದುವಾಡ ಕೆರೆ ಕಾಮಗಾರಿ ಗಮನಿಸಿದರೆ ಇಲ್ಲಿಯೂ 40 ಪರ್ಸೆಂಟೇಜ್ ದಂಧೆ ತಪ್ಪಿಲ್ಲ ಎಂದು ಕಾಣುತ್ತಿದೆ ಎಂದು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ದೂರಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂದುವಾಡ ಕೆರೆ ಅವ್ಯವಸ್ಥೆ ನೋಡಿ ನಿಜಕ್ಕೂ ಬೇಸರವಾಯಿತು.15 ಕೋಟಿ ಅನುದಾನದಲ್ಲಿ ಕೇವಲ ಎರಡು ಗುಂಡಿ ಅಗೆದಿದ್ದಾರೆ. ಕೆರೆಯ ಅಗಲ ಹಾಗೂ ಆಳ ಹೆಚ್ಚಿಸಲು ಪ್ರಾಮುಖ್ಯತೆ ಕೊಡದೆ ವಾಕ್ಪಾಥ್ ಹೆಚ್ಚಿಸಿದ್ದಾರೆ ಅಷ್ಟೇ. ಸ್ಟೋರೇಜ್ ಕೆಪಾಸಿಟಿ ಹೆಚ್ಚಳ ಮಾಡಿಲ್ಲ. ಇದನ್ನೆಲ್ಲ ಗಮನಿಸಿದರೆ ಇಲ್ಲಿಯೂ 40 ಪರ್ಸೆಂಟೇಜ್ ದಂಧೆ ತಪ್ಪಿಲ್ಲ ಎಂದು ಕಾಣುತ್ತಿದೆ ಎಂದು ದೂರಿದರು.
ಈಗಾಗಲೇ ಬೇಸಿಗೆ ಆರಂಭವಾಗಿದೆ. ಆದರೆ, ಕುಡಿಯುವ ನೀರಿನ ಪ್ರಮುಖ ಮೂಲ ಕುಂದವಾಡ ಕೆರೆಯಲ್ಲಿ ಕಾಮಗಾರಿ ವಿಳಂಬದಿಂದಾಗಿ ಜನ ತೊಂದರೆ ಅನುಭವಿಸುವಂತಾಗಿದೆ. ನಿತ್ಯ ವಾಯುವಿಹಾರಕ್ಕೆ ಬರುವವರಿಗೂ ಅನಾನುಕೂಲ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿಯವರು ಎಲ್ಲ ಕೆಲಸ ನಾವೇ ಮಾಡಿದ್ದೇವೆ ಎಂದು ಬೊಬ್ಬೆಹೊಡೆಯುತ್ತಾರೆ. ಅವರು ಯಾವ ಕೆಲಸ ಮಾಡಿದ್ದಾರೆ ಎಂಬುದನ್ನು ಬರೆದಿಡಲಿ. ನಾವು ಮಾಡಿರುವಂತಹ ಕೆಲಸಗಳೊಂದಿಗೆ ಬರುತ್ತೇವೆ. ಸುಮ್ಮನೆ ಏನೋ ಮಾತನಾಡುವುದಲ್ಲ. ನಾಲ್ಕು ವರ್ಷದಲ್ಲಿ ಯಾವುದಾದರೂ ಒಂದು ಒಳ್ಳೆಯ ಹೆಸರು ತರುವ ಕೆಲಸ ಮಾಡಿದ್ದಾರಾ ತೋರಿಸಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಸರ್ಕಾರದ ಅವ ಧಿಯಲ್ಲಿನ ಕೆಲಸಗಳೇ ಇನ್ನೂ ಪೂರ್ಣಗೊಂಡಿಲ್ಲ. ನಮ್ಮ ಸರ್ಕಾರದಲ್ಲಿನ ಕೆಲಸಗಳನ್ನೇ ಪೂರ್ಣ ಮಾಡಲು ಆಗಿಲ್ಲ. ಜಲಸಿರಿ, ಯುಜಿಡಿ ಸಮಸ್ಯೆ, ಅಂಡರ್ ಗ್ರೌಂಡ್ ಕೇಬಲ್, ನೀರಿನ ಸಮಸ್ಯೆ ನೀಗಿಲ್ಲ. ರಸ್ತೆ ಹಾಳುಮಾಡುತ್ತಿದ್ದಾರೆ ಸ್ಮಾರ್ಟ್ ಸಿಟಿ ಕೆಲಸ ಎಂದು ಹಿಂದಿನ ಕಾಮಗಾರಿಗೆ ಬೋರ್ಡ್ ಹಾಕಿಸಿ ಕೆಲಸ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಈ ಹಿಂದೆ ದಾವಣಗೆರೆಯನ್ನು ನೋಡಿಹೋದವರು ನಮ್ಮೂರನ್ನು ಇದೇ ರೀತಿ ಅಭಿವೃದ್ಧಿ ಮಾಡಬೇಕು ಎನ್ನುತ್ತಿದ್ದರು. ಆದರೆ, ಇವಾಗ ದಾವಣಗೆರೆ ರಸ್ತೆ ಗುಂಡಿಗಳ ನಗರವಾಗಿದೆ. ನಮ್ಮ ಅ ಧಿಕಾರವಧಿಯಲ್ಲಿ ಎಲ್ಲಾ ಖಾತೆಗೂ ಸಮರ್ಪಕ ಅನುದಾನ ಹಂಚಿಕೆಮಾಡಿ ಕೆಲಸ ಮಾಡಲಾಗುತ್ತಿತ್ತು. ಬಿಜೆಪಿ ಸರ್ಕಾರ ಎಲ್ಲವನ್ನೂ ಹಾಳುಮಾಡಿದೆ. ಇಂದಿರಾ ಕ್ಯಾಂಟೀನ್ ಬಂದ್ ಮಾಡಲಾಗಿದೆ. ಅ ಧಿಕಾರಿಗಳ ಮೇಲೆ ನಿಯಂತ್ರಣವೇ ಇಲ್ಲ. ಚಾಟಿ ಹಿಡಿದವರೇ ಮೇಯಲು ಹೊರಟರೆ ಉಳಿದವರು ಯಾವ ದಾರಿ ಹಿಡಿಯಲು ಸಾಧ್ಯ ಎಂದು ಖಾರವಾಗಿ ಪ್ರಶ್ನಿಸಿದರು.
ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಜಿ.ಎಸ್. ಮಂಜುನಾಥ್ ಗಡಿಗುಡಾಳ್, ಸದಸ್ಯ ಎ. ನಾಗರಾಜ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ, ಗಣೇಶ್ ಹುಲ್ಲುಮನಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Panchamasali ಎಂಬ ಕಾರಣಕ್ಕೆ ಯತ್ನಾಳ್ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ