ಪಿಯುಗೆ ಬೇಕಿದೆ ಅಕಾಡೆಮಿಕ್‌ ಕೌನ್ಸಿಲ್‌


Team Udayavani, Dec 7, 2018, 3:04 PM IST

dvg-2.jpg

ದಾವಣಗೆರೆ: ಪಿಯು ಹಂತದಲ್ಲಿ ವಿಶ್ವವಿದ್ಯಾಲಯ ಮಾದರಿಯ ಅಕಾಡೆಮಿಕ್‌ ಕೌನ್ಸಿಲ್‌ ಪ್ರಾರಂಭಿಸಬೇಕು ಎಂದು ಶಿಕ್ಷಣ ತಜ್ಞ ಡಾ| ಗುರುರಾಜ ಕರ್ಜಗಿ ಅಭಿಪ್ರಾಯಪಟ್ಟಿದ್ದಾರೆ. ಗುರುವಾರ, ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಮತ್ತು ಪ್ರಾಚಾರ್ಯರ ಸಂಘ ಸಹಯೋಗದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಶೈಕ್ಷಣಿಕ ಕಾರ್ಯಾಗಾರ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು, ಪಿಯು ಹಂತದಲ್ಲಿ ಪಠ್ಯಪುಸ್ತಕ ರಚನೆ, ಕಾಲಾನುಕ್ರಮಕ್ಕೆ ತಕ್ಕಂತೆ ಬದಲಾವಣೆ ಇತರೆ ಪಠ್ಯ ಚಟುವಟಿಕೆಗೆ ಪೂರಕವಾಗಿ ವಿಶ್ವವಿದ್ಯಾಲಯ ಮಾದರಿಯಲ್ಲೇ ಅಕಾಡೆಮಿಕ್‌ ಕೌನ್ಸಿಲ್‌ ಪ್ರಾರಂಭಿಸುವುದು ಸೂಕ್ತ ಎಂದರು.
 
ಅಕಾಡೆಮಿಕ್‌ ಕೌನ್ಸಿಲ್‌ ಇಲ್ಲದೇ ಇರುವ ಕಾರಣಕ್ಕೆ ಕೊನೆಯ ಹಂತದಲ್ಲಿ ಪಠ್ಯಪುಸ್ತಕ ರಚನೆ ಇಲ್ಲವೇ ಬದಲಾವಣೆ ಮಾಡುವ ಒತ್ತಡ ಬರುತ್ತದೆ. ಸಮಯಾವಕಾಶ ಇಲ್ಲದೆ ಯಾವುದೋ ಒಂದು ಪಠ್ಯಪುಸ್ತಕ ಸಿದ್ಧಪಡಿಸಲಾಗುತ್ತದೆ. ಅದು ಅತೀ ಮುಖ್ಯ ಘಟ್ಟವಾದ ಪಿಯು ಹಂತದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಅಂತಹ ಎಲ್ಲ ಅಪಾಯ ತಪ್ಪಿಸುವ ನಿಟ್ಟಿನಲ್ಲಿ ಅಕಾಡೆಮಿಕ್‌ ಕೌನ್ಸಿಲ್‌ ಪ್ರಾರಂಭಿಸುವುದು ಒಳ್ಳೆಯದು. ತಮ್ಮ ಅನುಭವದಂತೆ 1971ರಿಂದಲೂ ಪಿಯು ಉಪನ್ಯಾಸಕರ ಅನೇಕ ಬೇಡಿಕೆ, ಸಮಸ್ಯೆ ಈ ಕ್ಷಣಕ್ಕೂ ಜೀವಂತವಾಗಿವೆ ಎಂದರು.

ಶಿಕ್ಷಣ ಪ್ರಸಾರ ಮತ್ತು ಜ್ಞಾನದ ಸೃಷ್ಟಿ ಶಿಕ್ಷಣ ಸಂಸ್ಥೆಗಳ ಪ್ರಮುಖ ಕಾರ್ಯ. ಶಿಕ್ಷಣ ಪ್ರಸಾರ ನಡೆಯುತ್ತಿದೆ. ಆದರೆ, ಜ್ಞಾನ ಸೃಷ್ಟಿಯನ್ನೇ ಮರೆತು ಹೋಗಿದ್ದೇವೆ. ಪಿಯು ಹಂತದಲ್ಲಿ ಸಿಬಿಎಸ್‌ಇ ಪದ್ಧತಿಯನ್ನೇನೋ ಅಳವಡಿಸಲಾಗಿದೆ. ಆದರೆ, ಅದು ಪಠ್ಯಪುಸ್ತಕದ ಮುಖಪುಟ ಬದಲಾವಣೆಯಂತೆ ಆಗಿದೆ. ಬದಲಾವಣೆಯಾದ ಪಠ್ಯಪುಸ್ತಕದ ಬೋಧನೆಗೆ ಅಗತ್ಯವಾಗಿ ತಾಲೂಕು ಹಂತದಲ್ಲಿ ಉಪನ್ಯಾಸಕರಿಗೆ ವಿಷಯವಾರು ತರಬೇತಿ ನೀಡಬೇಕು. ಹಿರಿಯ ಉಪನ್ಯಾಸಕರಿಗೆ ಸಹ ಹೊಸ ಬದಲಾವಣೆಗೆ ಅನುಗುಣವಾದ ಅಗತ್ಯ ತರಬೇತಿ ನೀಡಬೇಕು ಎಂದು ಹೇಳಿದರು.

ಡಿ.ವಿ. ಗುಂಡಪ್ಪನವರು ಹೇಳುವಂತೆ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಕಾಣುವಂತಹ ಧೈರ್ಯ ಶಿಕ್ಷಕರಿಗೆ ಇರಬೇಕು. ಜಗತ್ತಿನ ಅತೀ ಪರಮ ಪವಿತ್ರ ಹುದ್ದೆ ಯಾವುದಾದರೂ ವೃತ್ತಿ ಇದ್ದರೆ ಅದು ಶಿಕ್ಷಕ ವೃತ್ತಿ. ಸಾಧಾರಣ ವ್ಯಕ್ತಿಯಿಂದ ಹಿಡಿದು ರಾಷ್ಟ್ರಪತಿಗಳನ್ನು ನಿರ್ಮಾಣ ಮಾಡುವಂತಹ ಶಿಕ್ಷಕರು, ಉಪನ್ಯಾಸಕರು ಪ್ರತಿ ವಿದ್ಯಾರ್ಥಿಯ ಭವಿಷ್ಯ, ಜೀವನ ಪರಿವರ್ತನೆ ಮಾಡುವಂತ ಗುರುಗಳಾಗಬೇಕಿದೆ ಎಂದು ತಿಳಿಸಿದರು.

ಶಿಕ್ಷಕರು, ಉಪನ್ಯಾಸಕರು ಸಮಯಕ್ಕೆ ಸರಿಯಾಗಿ ತರಗತಿಗೆ ಹೋಗುವುದು, ಬೋಧನಾ ಸಿದ್ಧತೆ, ಪರಿಕರ ಕೊಂಡೊಯ್ಯುವುದು, ವಿದ್ಯಾರ್ಥಿಗಳಲ್ಲಿ ಆಸಕ್ತಿ ಬರುವಂತೆ ಪರಿಣಾಮಕಾರಿಯಾಗಿ ಬೋಧನೆ, ತರಗತಿ ಹೊರಗಡೆಯೂ ಒಳ್ಳೆಯ ನಡತೆ ಜತೆ ಅತ್ಯಂತ ಜವಾಬ್ದಾರಿಯಿಂದ ಮಾತನಾಡುವ ಮೂಲಕ ಶಿಕ್ಷಕರು, ಉಪನ್ಯಾಸಕರು ನಿಜ ಅರ್ಥದ ಗುರುಗಳಾಗಿ ಹೊರ ಹೊಮ್ಮಬೇಕು ಎಂದು ಆಶಿಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ್‌ ಮಾತನಾಡಿ, ಸಮಾಜದಲ್ಲಿ ಶಿಕ್ಷಕರ ವೃತ್ತಿಗೆ ಬಹಳ ಗೌರವ ಇದೆ. ಅತೀ ಮಹತ್ವದ ಶಿಕ್ಷಕ ವೃತ್ತಿಗೆ ಬೆಲೆ ಕಟ್ಟಲಿಕ್ಕೆ ಆಗುವುದೇ ಇಲ್ಲ. ದೊಡ್ಡ ಹುದ್ದೆಯಲ್ಲೇ ಇರಲಿ, ರಾಜಕಾರಣಿಗಳೇ ಆಗಿರಲಿ ಅವರೆಲ್ಲರೂ ಗುರುವಿನ ಬಳಿ ವಿದ್ಯೆ ಕಲಿತವರು. ಪ್ರತಿಯೊಬ್ಬ ಶಿಕ್ಷಕರು ಎಲ್ಲರನ್ನೂ ಸನ್ಮಾರ್ಗಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಮಾಡಬೇಕು ಎಂದರು.

ಪ್ರಾಸ್ತಾವಿಕ ನುಡಿಗಳಾಡಿದ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ರಾಜ್ಯ ಅಧ್ಯಕ್ಷ ತಿಮ್ಮಯ್ಯ ಪುರ್ಲೆ, ಪಿಯು ಉಪನ್ಯಾಸಕರ ವೇತನ ತಾರತಮ್ಯ ಇನ್ನೂ ಬಗೆಹರಿದಿಲ್ಲ. ಅರ್ಧ ಗೆದ್ದಿದ್ದೇವೆ. ಪಿಯು ಶಿಕ್ಷಣ ಇಲಾಖೆ ನಿರ್ದೇಶಕರಾಗಿ ಬರುವಂತಹ ಐಎಎಸ್‌ ಅಧಿಕಾರಿಗಳು
ತಮ್ಮದೇ ಛಾಪು ಮೂಡಿಸುವ ಪ್ರಯೋಗ ನಡೆಸುವ ಮೂಲಕ ಇಲಾಖೆಯನ್ನ ಅಧೋಗತಿಗೆ ತಂದಿದ್ದಾರೆ. ಕಾಲ್ಪನಿಕ ವೇತನ ಒಳಗೊಂಡಂತೆ ಇನ್ನೂ ಅನೇಕ ಬೇಡಿಕೆ ಈಡೇರಿಬೇಕಿದೆ ಎಂದು ತಿಳಿಸಿದರು.

ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಅಧ್ಯಕ್ಷ ಪ್ರೊ| ಪಾಲಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎಸ್‌.ಎ. ರವೀಂದ್ರನಾಥ್‌, ಮಾಡಾಳ್‌ ಕೆ. ವಿರುಪಾಕ್ಷಪ್ಪ, ಇಂದಿರಾ ರಾಮಚಂದ್ರಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಎಸ್‌. ಹಾಲೇಶಪ್ಪ, ಡಾ| ದಾದಾಪೀರ್‌
ನವಿಲೇಹಾಳ್‌, ಎ.ಎಚ್‌. ನಿಂಗೇಗೌಡ, ಎಸ್‌.ಆರ್‌. ವೆಂಕಟೇಶ್‌, ಎಂ. ಜಯ್ಯಣ್ಣ, ಲಕ್ಷ್ಮಣ್‌ ಇತರರು ಇದ್ದರು. ಪಿ. ನಾಗಪ್ಪ ಸ್ವಾಗತಿಸಿದರು. ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.

ಗುಣಮಟ್ಟ ಶಿಕ್ಷಣದ ಕೊರತೆ ಭಾರತದಲ್ಲಿ 400ಕ್ಕೂ ಹೆಚ್ಚು ವಿಶ್ವವಿದ್ಯಾಲಯ, 270 ವೈಜ್ಞಾನಿಕ ಸಂಶೋಧನಾ ಕೇಂದ್ರ, 1,200ರಷ್ಟು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳಿವೆ. ಆದರೂ, ಶಿಕ್ಷಣ ಕ್ಷೇತ್ರದಲ್ಲಿ ಹಿಂದೆ ಉಳಿದಿದ್ದೇವೆ. ಈಗಲೂ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿಲ್ಲ. ಭಾರತಕ್ಕಿಂತಲೂ ಅತೀ ಚಿಕ್ಕ, ಕಡಿಮೆ ಜನಸಂಖ್ಯೆ ಹೊಂದಿರುವ ಫಿನ್ ಲ್ಯಾಂಡ್  ಶಿಕ್ಷಣ ಕ್ಷೇತ್ರದಲ್ಲಿ ಜಗತ್ತಿಗೇ ಮಾದರಿಯಾಗಿದೆ. ಫಿನ್ ಲ್ಯಾಂಡ್ ಮಾದರಿಯದಲ್ಲೇ ಗುಣಮಟ್ಟದ ಶಿಕ್ಷಣ ನೀಡುವತ್ತ ಎಲ್ಲರೂ ಗಮನ ನೀಡಬೇಕಿದೆ. 
 ಜಿ.ಎಂ.ಸಿದ್ದೇಶ್ವರ್‌, ಸಂಸದ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ

ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ

ಕರ್ತವ್ಯ ಲೋಪ: ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕ ರಿಯಾಜ್ ಅಹಮದ್ ಅಮಾನತು

ಕರ್ತವ್ಯ ಲೋಪ: ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕ ರಿಯಾಜ್ ಅಹಮ್ಮದ್ ಅಮಾನತು

1-dvg

Election Campaign: ಮೋದಿಯವರಿಂದ ಮಹಿಳಾ ಶಕ್ತಿಗೆ ಮುನ್ನುಡಿ

Davanagere: ಬಿಜೆಪಿ ಅಸಮಾಧಾನ ತಣಿಸಿದ ಬಿಎಸ್ ವೈ; ರವೀಂದ್ರನಾಥ್ ಗೆ ಚುನಾವಣೆ ಹೊಣೆ

Davanagere: ಬಿಜೆಪಿ ಅಸಮಾಧಾನ ತಣಿಸಿದ ಬಿಎಸ್ ವೈ; ರವೀಂದ್ರನಾಥ್ ಗೆ ಚುನಾವಣೆ ಹೊಣೆ

Gayatri Siddeshwar: ಮೋದಿ ಕೈ ಬಲಪಡಿಸಲು ಬಿಜೆಪಿ ಗೆಲ್ಲಿಸಿ; ಗಾಯತ್ರಿ

Gayatri Siddeshwar: ಮೋದಿ ಕೈ ಬಲಪಡಿಸಲು ಬಿಜೆಪಿ ಗೆಲ್ಲಿಸಿ; ಗಾಯತ್ರಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.