ಮುಹೂರ್ತಕ್ಕೆ ಮುನ್ನ ಮದುವೆಯಾಗಿ ಜನತಾ ಕರ್ಫ್ಯೂಗೆ ಬೆಂಬಲ
Team Udayavani, Mar 22, 2020, 9:33 PM IST
ದಾವಣಗೆರೆ: ಪ್ರಧಾನಿ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ವಿವಾಹ ಮುಹೂರ್ತಕ್ಕೆ ಮುನ್ನವೇ ಮದುವೆ ಆಗುವ ಮೂಲಕ ನೂತನ ವಧು-ವರರು, ಕುಟುಂಬದವರು ಬೆಂಬಲ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯ ಶೇಖರಪ್ಪ ನಗರ ಬಿ ಬ್ಲಾಕ್ ನಿವಾಸಿ ಜಿ. ಅಶೋಕ್ ಮತ್ತು ಅದೇ ಶೇಖರಪ್ಪ ನಗರದ ವಿ. ಪವಿತ್ರಾ (ಪವಿ) ಎನ್ನುವವರ ವಿವಾಹ ನಗರದ ಶ್ರೀಮತಿ ರಾಜನಹಳ್ಳಿ ಜಾನಾಬಾಯಿ ರಾಜನಹಳ್ಳಿ ಶ್ರೀನಿವಾಸ ಮೂರ್ತಿಯವರ ಧರ್ಮಶಾಲೆಯಲ್ಲಿ ನಿಗದಿಯಾಗಿತ್ತು.
ಭಾನುವಾರ ಬೆಳಗ್ಗೆ 10.30ಕ್ಕೆ ಮುಹೂರ್ತ ಇತ್ತು. ಮೋದಿ ಅವರು ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಬೆಂಬಲ ನೀಡಬೇಕು ಎಂಬ ಸದುದ್ದೇಶದಿಂದ ನಿಗದಿತ ಮುಹೂರ್ತಕ್ಕಿಂತಲೂ ಮುನ್ನವೇ ಇಬ್ಬರು ಮದುವೆಯಾಗುವ ಮೂಲಕ ಆದರ್ಶ ಮೆರೆದರು.
ಇಡೀ ದೇಶದ ಜನರಿಗೆ ಒಳ್ಳೆಯದಾಗಲಿ ಎಂದು ಮೋದಿ ಅವರು ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ. ನಾವು ಅದಕ್ಕಾಗಿ ಮುಹೂರ್ತಕ್ಕಿಂತ ಮೊದಲೇ ಮದುವೆ ಮಾಡಲು ನಿಶ್ಚಯಿಸಿ, ಅದರಂತೆ ಮದುವೆ ಮಾಡಿದ್ದೇವೆ. ಆ ಮೂಲಕ ಜನತಾ ಕರ್ಫ್ಯೂಗೆ ಬೆಂಬಲ ನೀಡಿದ್ದೇವೆ ಎಂದು ಅಶೋಕ್ ಸಹೋದರ ಮಣಿ ತಿಳಿಸಿದರು.
ಮೋದಿ ಅವರು ಜನರಿಗೆ ಒಳ್ಳೆಯದಾಗಲಿ ಎಂದು ಇವತ್ತು ಯಾರೂ ಮನೆಯಿಂದ ಹೊರ ಬರಬೇಡಿ ಎಂದು ಕೇಳಿಕೊಂಡಿದ್ದಾರೆ. ನಾವು ಅದಕ್ಕೆ ಸಪೋರ್ಟ್ ಮಾಡಬೇಕು ಎಂದು ಮುಹೂರ್ತಕ್ಕಿಂತಲೂ ಮೊದಲೇ ಮದುವೆ ಮಾಡಿದ್ದೇವೆ ಎಂದು ವರನ ತಂದೆ ಗಣೇಶಪ್ಪ ತಿಳಿಸಿದರು.
ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಧಾನಮಂತ್ರಿಯವರೇ ಕರೆ ನೀಡಿದ್ದಾರೆ. ಹಂಗಾಗಿ ನಮ್ಮ ಗೆಳೆಯನ ಮದುವೆಯನ್ನ ಬೇಗನೆ ಮಾಡಿದ್ದೇವೆ ಎಂದು ಗೆಳೆಯ ಶಿವಕುಮಾರ್ ತಿಳಿಸಿದರು.
ಅಶೋಕ್ ಮತ್ತು ಪವಿತ್ರ ವಿಜಯದ ಸಂಕೇತ ತೋರುವ ಮೂಲಕ ಕರ್ಫ್ಯೂಗೆ ಬೆಂಬಲ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
MUST WATCH
ಹೊಸ ಸೇರ್ಪಡೆ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
Udupi: ರಮಾಬಾಯಿ ಕೊಚ್ಚಿಕಾರ್ ಪೈ ನಿಧನ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ