ಹೊಸ ಸೇತುವೆ ಮೇಲೆ ಪರೀಕ್ಷಾರ್ಥ ವಾಹನ ಸಂಚಾರ


Team Udayavani, Jul 20, 2018, 3:07 PM IST

dvg-2.jpg

ಹರಿಹರ: ಹರಿಹರ-ಕುಮಾರಪಟ್ಟಣಂ ಮಧ್ಯೆ ತುಂಗಭದ್ರಾ ನದಿಗೆ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿ ಕೊನೆ ಹಂತದಲ್ಲಿದ್ದು, ಹೊಸ ಸೇತುವೆ ಮೇಲೆ ಪರೀಕ್ಷಾರ್ಥ ವಾಹನ ಸಂಚಾರ ಆರಂಭಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಚರಿಸುವ ಸಾರಿಗೆ ಸಂಸ್ಥೆ ಬಸ್‌ಗಳು ಅಲ್ಲದೆ ಲಾರಿ ಮುಂತಾದ ಭಾರಿ ವಾಹನಗಳು ಕಳೆದೊಂದು ವಾರದಿಂದ ಸೇತುವೆ ಮೇಲೆ ಸಂಚಾರ ಆರಂಭಿಸಿದ್ದು, ಎಂಜಿನಿಯರ್‌ಗಳು ಸೇತುವೆ ಬಳಿ ಹಾಜರಿದ್ದು, ತಾಂತ್ರಿಕತೆಗಳನ್ನು ಪರಿಶೀಲಿಸುತ್ತಿದ್ದಾರೆ.

ಸೇತುವೆಯ ಆರಂಭ ಮತ್ತು ಕೊನೆಯಲ್ಲಿ ಏರಿಗಳ (ಅಬಾರ್ಡ್‌ಮೆಂಟ್‌) ನಿರ್ಮಾಣ ಸಹ ಮುಗಿದಿದ್ದು, ಸೇತುವೆಯಿಂದ ದರ್ಗಾದವರೆಗೆ 200 ಮೀ. ರಸ್ತೆಗೆ ಹಾಗೂ ಲಿಂಕ್‌ ರಸ್ತೆ ಡಾಂಬರೀಕರಣ ಮತ್ತು ಸೇತುವೆ ಇಕ್ಕೆಲಗಳಲ್ಲಿ ಸೈಡ್‌ ವಾಲ್‌ ನಿರ್ಮಾಣ ಬಾಕಿ ಇದ್ದು, ಇನ್ನೆರಡು ತಿಂಗಳಲ್ಲಿ ಸೇತುವೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಕೆಆರ್‌ ಡಿಸಿಎಲ್‌ ಎಇಇ ವಸಂತ್‌ ಪತ್ರಿಕೆಗೆ ತಿಳಿಸಿದ್ದಾರೆ.

ಆರ್ಥಿಕತೆಗೆ ಚೇತರಿಕೆ: ಹಳೆ ಸೇತುವೆ ಶಿಥಿಲಗೊಂಡು ಭಾರೀ ವಾಹನಗಳು ಬೈಪಾಸ್‌ ರಸ್ತೆ ಮೂಲಕ ಸಾಗುತ್ತಿದ್ದರಿಂದ ಹಿನ್ನೆಡೆ ಅನುಭವಿಸುತ್ತಿದ್ದ ಹರಿಹರದ ಆರ್ಥಿಕತೆ ನೂತನ ಸೇತುವೆಯಿಂದ ಚೇತರಿಸಿಕೊಳ್ಳಲಿದೆ. ಸಾರಿಗೆ ಸಂಸ್ಥೆ ಬಸ್‌ಗಳು ಸೇರಿದಂತೆ ಖಾಸಗೀ ವಾಹನಗಳು 7 ಕಿ.ಮೀ. ಸುತ್ತಿ ಬಳಸಿ ಸಂಚರಿಸುವುದು ತಪ್ಪಿ ಸಮಯ, ಇಂಧನ ಉಳಿತಾಯವಾಗಲಿದೆ. 

ನೂತನ ಸೇತುವೆ ಮೇಲೆ ಸಂಚರಿಸುವ ವಾಹನ ಸವಾರರು ಹಾಗೂ ಪ್ರಯಾಣಿಕರು ಹೊಸತನ ಅನುಭವಿಸುತ್ತಿದ್ದಾರೆ. ಮೈದುಂಬಿ ಹರಿಯುವ ನದಿಯನ್ನು ಹೊಸ ಸೇತುವೆ ಮೇಲೆ ವೀಕ್ಷಣೆ ಮಾಡುತ್ತಿರುವ ನಗರದ ಜನತೆಯೂ ಸಂತಸ ಪಡುತ್ತಿದ್ದಾರೆ. 

ಹೊಸ ಸೇತುವೆಯ ವಿವರ: ಹಳೆ ಸೇತುವೆ 305 ಮೀ. ಉದ್ದವಿದ್ದರೆ ನೂತನ ಸೇತುವೆ ಒಟ್ಟು 295 ಮೀ.ಉದ್ದವಿದೆ. ಹಳೆ‌ ಸೇತುವೆ 5.25 ಮೀ. ಅಗಲವಿದ್ದರೆ, ನೂತನ ಸೇತುವೆ ಅದರ ಎರಡು ಪಟ್ಟು ಅಗಲವಾಗಿದೆ. ಹಳೆ ಸೇತುವೆಗೆ 18.4 ಮೀ. ಅಂತರದಲ್ಲಿ 14 ಕಮಾನುಗಳಿದ್ದರೆ, ಹೊಸ ಸೇತುವೆಗೆ 42 ಮೀ. ಅಂತರದಲ್ಲಿ 7 ಕಮಾನುಗಳಿವೆ. 

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬಿ.ಪಿ. ಹರೀಶ್‌ ಶಾಸಕರಾಗಿದ್ದಾಗ 2011-12ನೇ ವರ್ಷದ ರಾಜ್ಯ ಬಜೆಟ್‌ನಲ್ಲಿ ಸೇತುವೆ ಕಾಮಗಾರಿಗೆ 19.87 ಕೋಟಿ ರೂ. ಅನುದಾನ ನಿಗ ದಿ ಮಾಡಲಾಗಿತ್ತು. ಈಸ್ಟ್‌ ಕೋಸ್ಟ್‌ ಕನ್ಸ್‌ಟ್ರಕ್ಷನ್‌ ಆ್ಯಂಡ್‌ ಇಂಡಸ್ಟ್ರಿಯಲ್‌ ಕಂಪನಿಗೆ ಸೇತುವೆ ನಿರ್ಮಾಣ ಕಾಮಗಾರಿ ಗುತ್ತಿಗೆ ನೀಡಿ ರಾಜ್ಯ ರಸ್ತೆ ಅಭಿವೃದ್ಧಿ ನಿಗಮಕ್ಕೆ ಉಸ್ತುವಾರಿ ವಹಿಸಲಾಗಿತ್ತು. 2013ರ ಡಿಸೆಂಬರ್‌ ಒಳಗೆ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ ಗುತ್ತಿಗೆದಾರರ ಆರ್ಥಿಕ ಸಂಕಷ್ಟದಿಂದಾಗಿ 7 ವರ್ಷಗಳವರೆಗೆ ಮುಂದುವರೆಯಿತು.

 ಹಳೆ ಸೇತುವೆ ಇತಿಹಾಸ: ಸುಮಾರು ಒಂದೂವರೆ ಶತಮಾನದ ಹಿಂದೆ ಬ್ರಿಟಿಷರಿಂದ ನಿರ್ಮಿಸಲ್ಪಟ್ಟಿದ್ದ ಹಳೆ ಸೇತುವೆ ರಾಜ್ಯದ ಉತ್ತರ ಮತ್ತು ದಕ್ಷಿಣ ಭಾಗಗಳ ಮಹತ್ವದ ಸಂಪರ್ಕ ಕೊಂಡಿಯಾಗಿತ್ತು. ಅಂದಿನ ಉನ್ನತ ತಂತ್ರಜ್ಞಾನ ಬಳಸಿ ನಿರ್ಮಿಸಿದ್ದ 999 ಅಡಿ ಉದ್ದದ ಸೇತುವೆಯ 2 ಕಮಾನುಗಳು 1924 ರಲ್ಲಿ ಪ್ರವಾಹ, ನದಿ ನೀರಿನ ಸೆಳವಿಗೆ ತುತ್ತಾಗಿ ಕುಸಿದಿದ್ದವು. ಬ್ರಿಟಿಷ್‌ ಸರ್ಕಾರ ಅವುಗಳನ್ನು ಪುನರ್‌ನಿರ್ಮಿಸಿತ್ತು. 

ಸ್ವಾತಂತ್ರ್ಯ ನಂತರದಲ್ಲಿ ವಾಹನಗಳ ಹೆಚ್ಚಳ, ಸೂಕ್ತ ನಿರ್ವಹಣೆ ಕೊರತೆಯಿಂದ ಶಿಥಿಲಗೊಂಡಿದ್ದ ಸೇತುವೆಯ ಮತ್ತೂಂದು ಕಮಾನು ಸಹ ಬಿರುಕು ಬಿಟ್ಟಿದ್ದರಿಂದ ಕಳೆದ 25 ವರ್ಷಗಳಿಂದ ಸೇತುವೆ ಮೇಲೆ ಭಾರೀ ವಾಹನ ಸಂಚಾರ ನಿಷೇಧಿಸಲಾಗಿತ್ತು. ಅಂದಿನಿಂದಲೂ ನೂತನ ಸೇತುವೆ ನಿರ್ಮಾಣಕ್ಕೆ ಈ ಭಾಗದ ಜನರು, ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ಹೇರುತ್ತಾ ಬಂದಿದ್ದು ಅದು ಈಗ
ಈಡೇರುತ್ತಿದೆ. 

ನಿತ್ಯ ಅಂದಾಜು 300 ಬಸ್‌ಗಳು ಹರಿಹರ-ರಾಣೆಬೆನ್ನೂರು ಮಧ್ಯೆ ಸಂಚರಿಸುತ್ತಿದ್ದು, ಅಪಾರ ಪ್ರಮಾಣದ ಇಂಧನ ಹಾಗೂ ಸಮಯದ ಉಳಿತಾಯವಾಗುವುದು ನಮಗೆ ಅತೀವ ಸಂತಸ ತಂದಿದೆ. ಪ್ರಯಾಣ ದರ ಇಳಿಕೆ ಬಗ್ಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ.  ಪರಮೇಶ್ವರಪ್ಪ, ಕೆಎಸ್‌ಆರ್‌ಟಿಸಿ ಡಿಪೊ ಮ್ಯಾನೇಜರ್‌, ಹರಿಹರ. 

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ

ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ

ಕರ್ತವ್ಯ ಲೋಪ: ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕ ರಿಯಾಜ್ ಅಹಮದ್ ಅಮಾನತು

ಕರ್ತವ್ಯ ಲೋಪ: ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕ ರಿಯಾಜ್ ಅಹಮ್ಮದ್ ಅಮಾನತು

1-dvg

Election Campaign: ಮೋದಿಯವರಿಂದ ಮಹಿಳಾ ಶಕ್ತಿಗೆ ಮುನ್ನುಡಿ

Davanagere: ಬಿಜೆಪಿ ಅಸಮಾಧಾನ ತಣಿಸಿದ ಬಿಎಸ್ ವೈ; ರವೀಂದ್ರನಾಥ್ ಗೆ ಚುನಾವಣೆ ಹೊಣೆ

Davanagere: ಬಿಜೆಪಿ ಅಸಮಾಧಾನ ತಣಿಸಿದ ಬಿಎಸ್ ವೈ; ರವೀಂದ್ರನಾಥ್ ಗೆ ಚುನಾವಣೆ ಹೊಣೆ

Gayatri Siddeshwar: ಮೋದಿ ಕೈ ಬಲಪಡಿಸಲು ಬಿಜೆಪಿ ಗೆಲ್ಲಿಸಿ; ಗಾಯತ್ರಿ

Gayatri Siddeshwar: ಮೋದಿ ಕೈ ಬಲಪಡಿಸಲು ಬಿಜೆಪಿ ಗೆಲ್ಲಿಸಿ; ಗಾಯತ್ರಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.