ತನಿಖೆ ವೈಜ್ಞಾನಿಕ-ಖಚಿತ ಸಾಕ್ಷ್ಯಾಧಾರ ಹೊಂದಿರಲಿ
Team Udayavani, Nov 16, 2018, 5:04 PM IST
ದಾವಣಗೆರೆ: ಪ್ರತಿಯೊಂದು ಪ್ರಕರಣದ ತನಿಖೆ ಯಾಂತ್ರಿಕವಾಗಿರದೆ ಅತ್ಯಂತ ವೈಜ್ಞಾನಿಕ, ಖಚಿತ ಸಾಕ್ಷ್ಯಾಧಾರ ಹೊಂದಿರಬೇಕು ಎಂದು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎಸ್. ನಾಗಶ್ರೀ ಹೇಳಿದ್ದಾರೆ.
ಗುರುವಾರ, ಜಿಲ್ಲಾ ಪೊಲೀಸ್ ಸಭಾಂಗಣದಲ್ಲಿ ಪೂರ್ವ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟ ಉದ್ಘಾಟಿಸಿ, ಮಾತನಾಡಿದ ಅವರು, ಯಾವುದೇ ಪ್ರಕರಣ ತಾರ್ಕಿಕ ಅಂತ್ಯ ಕಾಣಲು ಪರಿಣಾಮಕಾರಿ ತನಿಖೆಯಲ್ಲಿ ಸಂಗ್ರಹಿಸುವ ಸಾಂದರ್ಭಿಕ ಸಾಕ್ಷಿ, ಆರೋಪವನ್ನು ಖಚಿತವಾಗಿ ರುಜುವಾತುಪಡಿಸುವ ದಾಖಲೆ, ಆಧಾರ ಅತ್ಯವಶ್ಯಕ. ಪ್ರಕರಣದ ತನಿಖೆ ಕೈಗೊಳ್ಳುವ ಅಧಿಕಾರಿಗಳು, ಸಿಬ್ಬಂದಿ ಈ ಎಲ್ಲ ಅಂಶಗಳ ಬಗ್ಗೆ ಗಮನ ನೀಡಬೇಕಿದೆ ಎಂದರು.
ಪೊಲೀಸರ ತನಿಖೆ, ವೈದ್ಯರು, ಪ್ರಾಯೋಗಿಕ ವಿಧಿ ವಿಜ್ಞಾನ ತಂತ್ರಜ್ಞರ ವರದಿ, ಸರ್ಕಾರಿ ಅಭಿಯೋಜಕರ ವಾದ ಮಂಡನೆ ಮತ್ತು ಖಚಿತ ಆಧಾರ, ದಾಖಲೆಗಳು ನ್ಯಾಯಾಲಯದಲ್ಲಿನ ವಿಚಾರಣಾ ಪ್ರಕರಣದ ತೀರ್ಪಿಗೆ ಅಗತ್ಯವಿರುವ ಪ್ರಮುಖ ಅಂಶಗಳು. ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ ತಕ್ಷಣಕ್ಕೆ ಪೊಲೀಸ್ ಇಲಾಖೆಯ ಕೆಲಸ ಮುಗಿಯುವುದಿಲ್ಲ.
ದೋಷಾರೋಪಣಾ ಪಟ್ಟಿಯಂತೆ ಆರೋಪ ಸಾಬೀತುಪಡಿಸುವ ಸಾಕ್ಷಿಗಳು ಅತೀ ಮುಖ್ಯ. ಅತೀ ಪ್ರಮುಖ ಸಾಕ್ಷಿಯಾಗುವ ಆಧಾರ, ವಸ್ತುಗಳ ಸಂರಕ್ಷಣೆಯೂ ವೈಜ್ಞಾನಿಕವಾಗಿರಬೇಕು. ಪೊಲೀಸ್ ಇಲಾಖಾ ತನಿಖಾಧಿಕಾರಿಗಳು ನ್ಯಾಯಾಲಯದಲ್ಲಿನ ಪ್ರಕರಣಗಳ ವಿಚಾರಣೆ, ಆಗುವ ತೀರ್ಪು ಬಗ್ಗೆ ಸದಾ ನಿಗಾ ವಹಿಸುತ್ತಿರಬೇಕು. ಒಂದೊಮ್ಮೆ ಆರೋಪಿ ಆರೋಪದಿಂದ ಮುಕ್ತವಾದಲ್ಲಿ ಯಾವ ನ್ಯೂನತೆ ಕಾರಣಕ್ಕೆ ಎಂಬುದರ ಬಗ್ಗೆಯೂ ಗಮನ ನೀಡಬೇಕು. ಮುಂದಿನ ಪ್ರಕರಣದ ತನಿಖೆಯಲ್ಲಿ ಆ ನ್ಯೂನತೆ ಸರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ವೈಯಕ್ತಿಕವಾಗಿ ಕರ್ನಾಟಕ ಪೊಲೀಸ್ ಇಲಾಖೆ ಬುದ್ಧಿವಂತಿಕೆ ಬಗ್ಗೆ ಮೆಚ್ಚುಗೆ ಇದೆ. ಕೆಲವಾರು ಪ್ರಕರಣಗಳನ್ನು ಭೇದಿಸುವಲ್ಲಿ
ರಾಜ್ಯದ ಪೊಲೀಸರು ಅತ್ಯುತ್ತಮ ಕಾರ್ಯ ನಿರ್ವಹಿಸುವ ಮೂಲಕ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಬೆಂಗಳೂರಿನ ಎಟಿಎಂವೊಂದರಲ್ಲಿ ಮಹಿಳೆ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಶೀಘ್ರವೇ ಬಂಧಿಸುತ್ತಾರೆ ಎಂಬ ವಿಶ್ವಾಸ ತಮಗೆ ಇತ್ತು. ಸ್ವಲ್ಪ ವಿಳಂಬವಾದರೂ ಆರೋಪಿಯನ್ನು ಬಂಧಿಸಿದ್ದು ಇಲಾಖೆ ಬಗ್ಗೆ ವಿಶ್ವಾಸ ಹೆಚ್ಚಿಸಿದೆ ಎಂದು ಹೇಳಿದರು.
ಪೊಲೀಸ್ ಇಲಾಖೆ ಮತ್ತು ನ್ಯಾಯಾಲಯಗಳು ಸಹ ಸಾರ್ವಜನಿಕರ ವಿಶ್ವಾಸ ಉಳಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೈಗೊಳ್ಳುವಂತಹ ತನಿಖೆ ವೈಜ್ಞಾನಿಕವಾಗಿರಬೇಕು. ಪ್ರತಿ ಪ್ರಕರಣದ ತನಿಖೆ ನಂತರ ದೋಷಾರೋಪಣಾ ಪಟ್ಟಿ ಸಲ್ಲಿಸುವ ಮುನ್ನ ಕಾಯ್ದೆಗಳ ಬಗ್ಗೆ ಅಧ್ಯಯನ ಮಾಡಬೇಕು. ಸೂಕ್ತ ಕಾಯ್ದೆ, ಸೆಕ್ಷನ್ಗಳ ಆಧಾರದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸುವ ಜೊತೆಗೆ ಸಾಕ್ಷಿ, ಆಧಾರಗಳ ಬಗ್ಗೆಯೂ ಜಾಗ್ರತೆ ವಹಿಸಬೇಕು. ಫೋಕ್ಸೋ, ಡಿಎನ್ಎ… ಪ್ರಕರಣಗಳಲ್ಲಿ ನಿಗದಿತ ಕಾಲಾವಧಿಯಲ್ಲಿ ವರದಿ ಸಲ್ಲಿಸುವಂತಾಗಬೇಕು ಎಂದು ತಿಳಿಸಿದರು.
ಸಾಮಾಜಿಕ ಜೀವನ ಹಾಳು ಮಾಡುತ್ತಿರುವ ಸಾಮಾಜಿಕ ಜಾಲತಾಣಗಳ ಮೂಲಕ ಎಸಗುವ ಅಪರಾಧಗಳ ಪತ್ತೆಗೆ ಕಂಪ್ಯೂಟರ್, ಬ್ರೌಸಿಂಗ್ ಕಲಿಯುವತ್ತ ತನಿಖಾ ತಂಡದವರು ಗಮನ ನೀಡಬೇಕು. ಈಗಿನ ಸಾಮಾಜಿಕ, ವೈಜ್ಞಾನಿಕ ಬದಲಾವಣೆಯ ಪರಿಣಾಮ ಪೊಲೀಸ್ ಮತ್ತು ನ್ಯಾಯಾಂಗದ ಜವಾಬ್ದಾರಿಯೂ ಹೆಚ್ಚಾಗುತ್ತಿದೆ. ಬದಲಾಗುವ ಕಾಯ್ದೆ, ಕಾನೂನುಗಳ ತಿಳಿದುಕೊಳ್ಳಲು ಇಂತಹ ಕರ್ತವ್ಯ ಕೂಟ ಅತ್ಯವಶ್ಯಕ ಎಂದು ಪ್ರತಿಪಾದಿಸಿದರು.
ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಟಿ.ಜೆ. ಉದೇಶ್ ಮಾತನಾಡಿ, ತನಿಖೆ, ದೋಷಾರೋಪಣಾ ಪಟ್ಟಿಯಲ್ಲಿನ ನ್ಯೂನತೆಯ ಪರಿಣಾಮ ಶಿಕ್ಷೆ ಪ್ರಮಾಣ ಶೇ.3 ರಿಂದ 4ರಷ್ಟಿದೆ. ಪ್ರಕರಣದ ಬಗ್ಗೆ ಹೆಚ್ಚು ಚರ್ಚೆ ನಡೆಸಬೇಕು. ತನಿಖಾ ವಿಧಿ-ವಿಧಾನ ಪರಿಣಾಮಕಾರಿಯಾಗಿರಲು ಅಗತ್ಯ ವೃತ್ತಿಪರತೆಯ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಗ್ರಾಮಾಂತರ ಉಪ ವಿಭಾಗ ಉಪಾಧೀಕ್ಷಕ ಮಂಜುನಾಥ್ ಕೆ. ಗಂಗಲ್ ಪ್ರಾಸ್ತಾವಿಕ ಮಾತುಗಳಾಡಿದರು. ದೊಡ್ಡಬಾತಿಯ ಪ್ರಾಯೋಗಿಕ ವಿಧಿ ವಿಜ್ಞಾನ ಪ್ರಯೋಗಾಲಯದ ಉಪ ನಿರ್ದೇಶಕಿ ಡಾ| ಛಾಯಾಕುಮಾರಿ ಇತರರು ಇದ್ದರು. ನಗರ ಉಪಾಧೀಕ್ಷಕ ಎಸ್.ಎಂ. ನಾಗರಾಜ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Panchamasali ಎಂಬ ಕಾರಣಕ್ಕೆ ಯತ್ನಾಳ್ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
MUST WATCH
ಹೊಸ ಸೇರ್ಪಡೆ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ
Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ