ಕೋವಿಡ್ ಲಸಿಕೆಗಾಗಿ ಅಲೆದಾಡಿದ ಸಾರ್ವಜನಿಕರು
Team Udayavani, Apr 24, 2021, 6:34 PM IST
ರಾ. ರವಿಬಾಬು
ದಾವಣಗೆರೆ: ಕೋವಿಡ್ ಲಸಿಕೆಗಳಕೊರತೆಯಿಂದ ಸಾರ್ವಜನಿಕರು ಅಕ್ಷರಶಃಕಂಗಾಲಾಗಿದ್ದಾರೆ. ಜಿಲ್ಲಾ ಚಿಗಟೇಟರಿಆಸ್ಪತ್ರೆ ಒಳಗೊಂಡಂತೆ ಲಸಿಕಾ ಕೇಂದ್ರಗಳಲ್ಲಿಲಸಿಕೆ ಖಾಲಿಯಾದ ಪರಿಣಾಮ ಶುಕ್ರವಾರಲಸಿಕೆ ಹಾಕಿಸಿಕೊಳ್ಳಲಿಕ್ಕೆ ಬಂದಂತಹವರುನಿರಾಸೆಯಿಂದ ವಾಪಸ್ ಆಗಿದ್ದಾರೆ.
ಲಸಿಕೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆಅಲೆದಾಡುವಂತಾಗಿತ್ತು.ಜಿಲ್ಲೆಗೆ ಪ್ರಾರಂಭಿಕ ಹಂತದಲ್ಲಿ20-30 ಸಾವಿರ ಡೋಸ್ನಷ್ಟುಲಸಿಕೆ ನೀಡಲಾಗುತ್ತಿತ್ತು. ಆದರೆ,ಫಲಾನುಭವಿಗಳು, ಸಾರ್ವಜನಿಕರು ಲಸಿಕೆಬಗ್ಗೆ ಅಷ್ಟಾಗಿ ಆಸಕ್ತಿ ತೋರಿಸುತ್ತಿರಲಿಲ್ಲ.ಹಾಗಾಗಿ ಆರೋಗ್ಯ ಇಲಾಖೆ ಪ್ರತಿ ದಿನನಿಗದಿಪಡಿಸಿದ ಗುರಿಗಿಂತಲೂ ಕಡಿಮೆಪ್ರಮಾಣದ ಡೋಸ್ ಬಳಕೆ ಆಗುತ್ತಿತ್ತು.
ಕಳೆದ ವರ್ಷದಿಂದ ವಕ್ಕರಿಸಿರುವಮಹಾಮಾರಿ ಕೊರೊನಾ ವಿರುದ್ಧದಹೋರಾಟದಲ್ಲಿ ಮುಂಚೂಣಿಯಲ್ಲಿದ್ದಆರೋಗ್ಯ ಕಾರ್ಯಕರ್ತರು, ಫ್ರಂಟೈಲೈನ್ವರ್ಕರ್ಗಳಾಗಿ ಕೆಲಸ ಮಾಡುತ್ತಿದ್ದಕಂದಾಯ, ಪೊಲೀಸ್, ಸ್ಥಳೀಯಸಂಸ್ಥೆಯವರಿಗೆ ಪ್ರಾರಂಭಿಕ ಹಂತದಲ್ಲಿಲಸಿಕೆ ನೀಡಲಾಗುತ್ತಿತ್ತು.
ಮುಂಚೂಣಿಕಾರ್ಯಕರ್ತರಿಂದಲೂ ಲಸಿಕೆಪಡೆದುಕೊಳ್ಳಲು ಅಂತಹ ಉತ್ಸಾಹ ಕಂಡುಬರದ ಕಾರಣ ನಿಗದಿತ ಗುರಿಗಿಂತಲೂಕಡಿಮೆ ಪ್ರಮಾಣದಲ್ಲಿ ಲಸಿಕೆ ಬಳಕೆಆಗುತ್ತಿತು.ಆರೋಗ್ಯ ಕಾರ್ಯಕರ್ತರಲ್ಲೇಕೆಲವರು ಲಸಿಕೆ ಪಡೆದುಕೊಳ್ಳಲಿಕ್ಕೆಹಿಂದೇಟು ಹಾಕಿದ ಉದಾಹರಣೆಗಳುಸಹ ಇವೆ. ಲಸಿಕಾಕರಣಕ್ಕೆ ಹೆಚ್ಚಿನಉತ್ತೇಜನ ನೀಡುವ ಉದ್ದೇಶದಿಂದ ಸ್ವತಃಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ,ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯಮಾತ್ರವಲ್ಲ ಪೂರ್ವ ವಲಯ ಪೊಲೀಸ್ಮಹಾ ನಿರೀಕ್ಷಕ ಎಸ್. ರವಿ ಇತರೆ ಹಿರಿಯಅಧಿಕಾರಿಗಳು ಲಸಿಕೆ ಪಡೆಯುವ ಮೂಲಕಇತರರೂ ಲಸಿಕೆ ಪಡೆದುಕೊಳ್ಳುವಂತೆಪ್ರೋತ್ಸಾಹ ತುಂಬುವ ಕೆಲಸ ಮಾಡಿದರು.
ಅಧಿಕಾರಿಗಳ ಜತೆಗೆ ಸಂಸದಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ.ರವೀಂದ್ರನಾಥ್, ಎಸ್.ವಿ. ರಾಮಚಂದ್ರಪ್ಪ,ಪ್ರೊ. ಎನ್. ಲಿಂಗಣ್ಣ, ಮೇಯರ್ ಎಸ್.ಟಿ.ವೀರೇಶ್, ದೂಡಾ ಅಧ್ಯಕ್ಷ ರಾಜನಹಳ್ಳಿಶಿವಕುಮಾರ್ ಇತರೆ ಜನಪ್ರತಿನಿಧಿಗಳುಮೇಲ್ಪಂಕ್ತಿಯಂತೆ ಲಸಿಕೆ ಪಡೆದುಕೊಳ್ಳುವಮೂಲಕ ಸಾರ್ವಜನಿಕರಲ್ಲಿ ಲಸಿಕೆ ಬಗ್ಗೆವಿಶ್ವಾಸ.
ನಂಬಿಕೆ ಮೂಡಿಸುವ ಕೆಲಸಪ್ರಾರಂಭಿಸಿದರು.ಕೊರೊನಾ ವಿರುದ್ಧದ ಹೋರಾಟದಲ್ಲಿಮುಂಚೂಣಿಯಲ್ಲಿದ್ದ ಆರೋಗ್ಯಕಾರ್ಯಕರ್ತರು, ಫ್ರಂಟೈಲೈನ್ ವರ್ಕರ್ನಂತರ ಮೊದಲ ಬಾರಿಗೆ 60 ವರ್ಷಮೇಲ್ಪಟ್ಟವರಿಗೆ ಲಸಿಕೆ ಪಡೆದುಕೊಳ್ಳುವಅವಕಾಶ ಕಲ್ಪಿಸಿದ ನಂತರವೂಲಸಿಕಾಕರಣ ನಿರೀಕ್ಷಿತ ಮಟ್ಟದ ವೇಗಪಡೆದುಕೊಳ್ಳಲಿಲ್ಲ.ಏ.1 ರಿಂದ 45 ವರ್ಷ ಮೇಲ್ಪಟ್ಟವರು,ಮಧುಮೇಹ, ರಕ್ತದೊತ್ತಡ ಒಳಗೊಂಡಂತೆಇತರೆ ಆರೋಗ್ಯ ಸಮಸ್ಯೆ ಹೊಂದಿದವರಿಗೂಲಸಿಕೆ ನೀಡುವ ಕಾರ್ಯಕ್ರಮಪ್ರಾರಂಭಿಸಿದ್ದು, ಏ.23 ಅಂತ್ಯಕ್ಕೆ4,17,428 ಅರ್ಹ ಫಲಾನುಭವಿಗಳಲ್ಲಿ1,77,893 ಜನರು ಮಾತ್ರ ಲಸಿಕೆಪಡೆದುಕೊಂಡಿದ್ದರು.
ಒಟ್ಟಾರೆಯಾಗಿಶೇ.31 ಜನ ಫಲಾನುಭವಿಗಳು ಮಾತ್ರಲಸಿಕೆ ಪಡೆದುಕೊಂಡಿದ್ದಾರೆ.ಏತನ್ಮಧ್ಯೆ ಮಹಾನಗರ ಪಾಲಿಕೆಸದಸ್ಯರು, ಸ್ವಯಂ ಸೇವಾ ಸಂಸ್ಥೆಗಳುಕೆಲವಾರು ಕಡೆ ಲಸಿಕೆ ಶಿಬಿರ ನಡೆಸಿದನಂತರ ಲಸಿಕೆ ಪಡೆಯುವರ ಪ್ರಮಾಣಹೆಚ್ಚಾಗತೊಡಗಿತು.ಮಹಾಮಾರಿ ಕೊರೊನಾದ 2ನೇಅಲೆಯ ಅಬ್ಬರ ಜೋರಾಗುತ್ತಿದ್ದಂತೆಯೇಲಸಿಕೆ ಪಡೆದುಕೊಳ್ಳುವರ ಪ್ರಮಾಣವೂನಿರೀಕ್ಷೆಗೂ ಮೀರಿ ಹೆಚ್ಚಾಗತೊಡಗಿದೆ.ಪ್ರಾರಂಭಿಕ ಹಂತದಲ್ಲಿ ವಿರಳ ಸಂಖ್ಯೆಯಲ್ಲಿಕಂಡು ಬರುತ್ತಿದ್ದಂತಹ ದೃಶ್ಯ ಅಕ್ಷರಶಃಬದಲಾಗಿದೆ.ಜಿಲ್ಲಾಸ್ಪತ್ರೆ ಒಳಗೊಂಡಂತೆ ಲಸಿಕಾಕೇಂದ್ರಗಳ ಮುಂದೆ ಉದ್ದನೆಯ ಸರತಿಸಾಲು ಸಾಮಾನ್ಯ ಎನ್ನುವಂತಾಗಿದೆ.ಬೇಡಿಕೆ ಅನುಗುಣವಾಗಿ ಆದರೆ, ಈಗಲಸಿಕೆಯೇ ಇಲ್ಲದ ಕಾರಣ ಜನರುಅತ್ತಿಂದಿತ್ತ ಓಡಾಡುವಂತಾಗಿದೆ.
ಶುಕ್ರವಾರಕೆಲವಾರು ಫಲಾನುಭವಿಗಳು ಲಸಿಕೆಗಾಗಿಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದರೂಪ್ರಯೋಜನವಾಗಿಲ್ಲ. ಸಂಜೆ ವೇಳೆಗೆಲಸಿಕೆ ಬರುತ್ತದೆ ಎಂದು ಅಧಿಕಾರಿಗಳುತಿಳಿಸಿದ್ದರಿಂದ ಕೆಲವರು ವಾಪಸ್ತೆರಳಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಆರೋಗ್ಯಇಲಾಖೆ ಸಮರ್ಪಕ ಪ್ರಮಾಣದಲ್ಲಿ ಲಸಿಕೆಒದಗಿಸಬೇಕು ಎಂಬುದು ಸಾರ್ವಜನಿಕರಒತ್ತಾಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ
ಕರ್ತವ್ಯ ಲೋಪ: ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕ ರಿಯಾಜ್ ಅಹಮ್ಮದ್ ಅಮಾನತು
Election Campaign: ಮೋದಿಯವರಿಂದ ಮಹಿಳಾ ಶಕ್ತಿಗೆ ಮುನ್ನುಡಿ
Davanagere: ಬಿಜೆಪಿ ಅಸಮಾಧಾನ ತಣಿಸಿದ ಬಿಎಸ್ ವೈ; ರವೀಂದ್ರನಾಥ್ ಗೆ ಚುನಾವಣೆ ಹೊಣೆ
Gayatri Siddeshwar: ಮೋದಿ ಕೈ ಬಲಪಡಿಸಲು ಬಿಜೆಪಿ ಗೆಲ್ಲಿಸಿ; ಗಾಯತ್ರಿ
MUST WATCH
ಹೊಸ ಸೇರ್ಪಡೆ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ
Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ