ವಾಹನಗಳಿಗೆ ಧಕ್ಕೆ ಆಗುತ್ತಿದ್ದರೂ ರಸ್ತೆ ದುರಸ್ತಿಯಾಗ್ತಿಲ್ಲ!


Team Udayavani, Jan 21, 2019, 7:44 AM IST

dvg-5.jpg

ಹರಿಹರ: ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಇನ್‌ ಮತ್ತು ಔಟ್‌ ರಸ್ತೆಗಳು ಸುಮಾರು 3 ಅಡಿ ಕೆಳಗೆ ಇರುವ ಹಳೆ ಪಿಬಿ ರಸ್ತೆಗೆ ಕೂಡುವ ಜಾಗದಲ್ಲಿ ಕಡಿದಾದ ಇಳಿಜಾರಾಗಿರುವ ಪರಿಣಾಮ ಬಸ್‌ಗಳು ಸೇರಿದಂತೆ ನಿತ್ಯ ಸಾವಿರಾರು ವಾಹನಗಳಿಗೆ ಧಕ್ಕೆ ಆಗುತ್ತಿದ್ದರೂ ಯಾರೂ ಕಾಳಜಿ ವಹಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ನಿಲ್ದಾಣದ ಒಳ ಬರುವ ಮತ್ತು ಹೊರ ಹೋಗುವ ಬಸ್‌ಗಳ ಹಿಂಭಾಗದ ಬಂಪರ್‌ ರಸ್ತೆಯ ಅಂಚಿಗೆ ತಾಗಿ ಬೆಂಡಾಗುವುದು, ಆಟೋ, ಕಾರ್‌ಗಳು ಕಡಿದಾದ ರಸ್ತೆ ಏರಲು, ಇಳಿಯಲು ಹರಸಾಹಸ ಪಡುವುದು, ದ್ವಿಚಕ್ರ ವಾಹನಗಳು ಬೀಳುವ ಘಟನೆಗಳು ನಿತ್ಯ ನಡೆಯುತ್ತಿದ್ದರೂ ಸಂಬಂಧಪಟ್ಟವರು ಕ್ರಮಕ್ಕೆ ಮುಂದಾಗಿಲ್ಲ. ಎರಡೂ ರಸ್ತೆಗಳು ಕೂಡುವ ಈ ಜಾಗದಲ್ಲಿ ಡ್ರೈನೇಜ್‌ ನಿರ್ಮಿಸಲೆಂದು ಸುಮಾರು 15 ಅಡಿಯಷ್ಟು ಸಿಮೆಂಟ್‌ ರಸ್ತೆ ಮಾಡದ ಕಾರಣ ವಾಹನಗಳು ಸಂಚರಿಸುವಾಗ ಧೂಳು ಏಳುತ್ತಿದ್ದು, ಸುತ್ತಮತ್ತಲ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದೆ.

ಸಮಸ್ಯೆ ಉಟಾಗಿದ್ದು ಹೇಗೆ: ಬಸ್‌ಸ್ಟ್ಯಾಂಡ್‌ ರಸ್ತೆಗಳನ್ನು ನಿರ್ಮಿಸುವಾಗ ಪಿ.ಬಿ. ರಸ್ತೆಯ ಮಟ್ಟವನ್ನು ಗಮನಿಸಿ ಸ್ವಲ್ಪ ದೂರದಿಂದ ಇಳಿಜಾರು ಮಾಡದೆ ತುದಿವರೆಗೆ ಒಂದೆ ಮಟ್ಟದಲ್ಲಿ ನಿರ್ಮಿಸಲಾಗಿದೆ. ನಂತರದಲ್ಲಿ ಹಳೆ ಪಿಬಿ ರಸ್ತೆ ನಿರ್ಮಿಸುವಾಗ ಮುಂಚೆ ಇದ್ದ ಡಾಂಬರು ಕಿತ್ತು, ಅದೆ ಮಟ್ಟದಲ್ಲಿ ಕಾಂಕ್ರೀಟೀಕರಣ ಮಾಡಿದ ಪರಿಣಾಮ ಎರಡೂ ರಸ್ತೆಗಳ ಎತ್ತರದಲ್ಲಿ ಅಂತರ ಉಂಟಾಗಿದೆ. ಸಾರಿಗೆ ಹಾಗೂ ಪಿಡಬ್ಲ್ಯೂಡಿ ಇಲಾಖೆಗಳ ನಡುವಿನ ಸಮನ್ವಯ ಕೊರತೆ ಸಮಸ್ಯೆಗೆ ಕಾರಣವಾಗಿದೆ.

ಹೆದ್ದಾರಿ ನಿರ್ಮಿಸಿದ ನಂತರ ಇಲ್ಲಿ ಡ್ರೈನೇಜ್‌ ನಿರ್ಮಿಸಿಬೇಕಿದ್ದ ನಗರಸಭೆ ಹತ್ತಾರು ತಿಂಗಳಾದರೂ ಕಾಮಗಾರಿ ನಡೆಸಿಲ್ಲ. ಡ್ರೈನೇಜ್‌ ನಿರ್ಮಿಸಿದ ನಂತರ ಸುಮಾರು 15 ಅಡಿಗಳ ರಸ್ತೆಯನ್ನು ಇಳಿಜಾರು ಮಾಡಿದರೂ ಸಮಸ್ಯೆಯ ತೀವ್ರತೆ ಕಡಿಮೆಯಾಗಲಿದೆ. ಡ್ರೈನೇಜ್‌ ಕಾಮಗಾರಿ ಮಾಡುವಾಗ ಮತ್ತೆ ಸಿಮೆಂಟ್‌ ಕಿತ್ತುತ್ತಾರೆಂಬ ಕಾರಣಕ್ಕೆ ಲೋಕೋಪಯೋಗಿ ಇಲಾಖೆ ಅಲ್ಲಿ ಕಾಮಗಾರಿ ಮಾಡುತ್ತಿಲ್ಲ.

ಇಲ್ಲಿನ ನಿಲ್ದಾಣಕ್ಕೆ ನಿತ್ಯ 1500ಕ್ಕೂ ಅಧಿಕ ಬಸ್‌ಗಳು ಬಂದು ಹೋಗುತ್ತವೆ. ತಮ್ಮ ಬಸ್‌ಗಳಿಗೆ ಧಕ್ಕೆ ಆಗುವುದನ್ನು ತಡೆಯಲು ಸಾರಿಗೆ ಸಂಸ್ಥೆಯವರು ತಾತ್ಕಾಲಿಕವಾಗಿಯಾದರೂ ಡಾಂಬರೀಕರಣ ಮಾಡುವ ಬದಲು ಪಿಡಬ್ಲ್ಯೂಡಿ ಕಡೆಗೆ ಕೈ ಮಾಡಿ ತೋರಿಸುತ್ತಾರೆ. ಪಿಡಬ್ಲ್ಯೂಡಿಯವರು ನಗರಸಭೆಯತ್ತ ಬೆರಳು ತೋರಿಸುತಿದ್ದಾರೆ.

ನಗರಸಭೆಯವರು ಇನ್ನೂ ಅನುದಾನ ಬಂದಿಲ್ಲವೆಂದು ಗೊಣಗಾಡುತ್ತಿದ್ದಾರೆ. ಈ ಮೂರೂ ಇಲಾಖೆಯವರ ನಡುವೆ ಸಾರ್ವಜನಿಕರು ಬಸವಳಿದಿದ್ದಾರೆ. ಇನ್ನು ಜನಪ್ರತಿನಿಧಿಗಳಾದರೂ ಸಮಸ್ಯೆ ಪರಿಹರಿಸಲು ಮುಂದಾಗಲಿ ಎಂಬುದು ಜನರ ಆಗ್ರಹವಾಗಿದೆ. ನಿಗದಿತ ಮಟ್ಟದಲ್ಲಿ, ಅಳತೆಗೆ ತಕ್ಕಂತೆ ಹೆದ್ದಾರಿ ನಿರ್ಮಾಣ ಮಾಡಿದ್ದೇವೆ. ಆದರೆ ಡ್ರೈನೇಜ್‌ ಮಾಡಬೇಕಾದ ಜಾಗದಲ್ಲಿ ರಸ್ತೆಯನ್ನು ಮತ್ತೆ ಕೀತ್ತಲಾಗುತ್ತದೆ ಎಂದು ಇನ್‌, ಔಟ್‌ ಜಾಗದಲ್ಲಿ ಅಭಿವೃದ್ಧಿ ಕೈಗೊಂಡಿಲ್ಲ. ಕೆಎಸ್‌ ಆರ್‌ಟಿಸಿಯವರು ಅಳತೆಗೆ ತಕ್ಕಂತೆ ಚರಂಡಿಗೆ ಜಾಗ ಬಿಟ್ಟು ಡಕ್‌ ಸ್ಲ್ಯಾಬ್‌ ನಿರ್ಮಿಸಿಕೊಂಡರೆ ಸಮಸ್ಯೆ ಪರಿಹಾರವಾಗುತ್ತದೆ.
∙ಈಶ್ವರಪ್ಪ, ಎಇಇ, ಪಿಡಬ್ಲ್ಯೂಡಿ.

ಹೆದ್ದಾರಿ ಅಭಿವೃದ್ಧಿಪಡಿಸುವಾಗ ರಸ್ತೆ ಮಟ್ಟ ಎತ್ತರಿಸಲಾಗುತ್ತದೆ ಎಂದು ನಿರೀಕ್ಷಿಸಿ ನಾವು ದೂರದಿಂದ ಇಳಿಜಾರು ಮಾಡಿರಲಿಲ್ಲ. ಆದರೆ ಹೆದ್ದಾರಿ ನಿರ್ಮಿಸುವವರು ಹಳೆ ಡಾಂಬರು ಕಿತ್ತು ಮುಂಚಿನ ಮಟ್ಟದಲ್ಲೇ ರಸ್ತೆ ನಿರ್ಮಿಸಿದ್ದು ಸಮಸ್ಯೆಗೆ ಕಾರಣವಾಗಿದೆ.
 .ಡಿಪೋ ಮ್ಯಾನೇಜರ್‌  

ಟಾಪ್ ನ್ಯೂಸ್

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!

ಸಿ.ಟಿ.ರವಿ

Vijayapura; ವಿಕಸಿತ ಭಾರತಕ್ಕೆ ವಿಶ್ವನಾಯಕ ಮೋದಿ ನಾಯಕತ್ವ ಅನಿವಾರ್ಯ: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

Davanagere: ನಾಮಪತ್ರ ಸಲ್ಲಿಸಿದ ಬಿಜೆಪಿ- ಕಾಂಗ್ರೆಸ್ ಅಭ್ಯರ್ಥಿಗಳು

Davanagere: ನಾಮಪತ್ರ ಸಲ್ಲಿಸಿದ ಬಿಜೆಪಿ- ಕಾಂಗ್ರೆಸ್ ಅಭ್ಯರ್ಥಿಗಳು

Lok Sabha Election: ಜಗಳೂರನ್ನು ಬರಪೀಡಿತ ಪಟ್ಟಿಯಿಂದ ಹೊರ ತರುವೆ: ಗಾಯತ್ರಿ ಸಿದ್ದೇಶ್ವರ

Lok Sabha Election: ಜಗಳೂರನ್ನು ಬರಪೀಡಿತ ಪಟ್ಟಿಯಿಂದ ಹೊರ ತರುವೆ: ಗಾಯತ್ರಿ ಸಿದ್ದೇಶ್ವರ

Davanagere; ಕಾಂಗ್ರೆಸ್ ಸಂಧಾನ ವಿಫಲ; ನಾಮಪತ್ರ ಹಿಂಪಡೆಯಲು ವಿನಯ್ ಕುಮಾರ್ ನಕಾರ

Davanagere; ಕಾಂಗ್ರೆಸ್ ಸಂಧಾನ ವಿಫಲ; ನಾಮಪತ್ರ ಹಿಂಪಡೆಯಲು ವಿನಯ್ ಕುಮಾರ್ ನಕಾರ

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

3-

ಕಾರ್ಯಕರ್ತರ ಸಭೆ; ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ಬೆಂಬಲ ನೀಡಿ ಗೆಲ್ಲಿಸುವಂತೆ ಮನವಿ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

2-

ಸಂಸದರ ವಿರುದ್ಧ ಸುದ್ದಿ ಹರಿಬಿಟ್ಟು,ಪೊಲೀಸ್ ಪ್ರಕರಣ ಎದುರಿಸಿದ್ದವರಿಂದ ಪಾಠ ಕಲಿಯಬೇಕಾಗಿಲ್ಲ

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.